ಚಿಕ್ಕಾಸಿನ ಕೂಲಿಗೆ ಯಾರ್ಯಾರದೋ ಕಾರು ತೊಳೆಯುತ್ತಿದ್ದ ಹುಡುಗನಿಗೆ ಸಮೀಪದ ದೇವಾಲಯದ ವಠಾರದಿಂದ ‘ಯಕ್ಷ ಸಂಗೀತ’ಕೇಳಿದ್ದು, ಆಕರ್ಷಿತನಾದ್ದು ಆಶ್ಚರ್ಯವಲ್ಲ. ಹುಡುಗನ ಕುತೂಹಲ ಕಮರದಂತೆ ಕಲಿಸಿಕೊಟ್ಟ ಗುರು, ಕಿವಿಗೆ ಬಿದ್ದದ್ದು ಮನಸ್ಸು ದೇಹವನ್ನೇ ಏನು ಇಂದು ‘ಬೆಳೆದು ನಿಂತ ಹುಡುಗನ’ ಬದುಕನ್ನೇ ಆವರಿಸಿದ್ದು ಆಶ್ಚರ್ಯ. ಅಂಥವರು ರೂಢಿಯ ಜಾಡಿನಲ್ಲಿ ಮಾತಿನ ಗಾಡಿ ಹೊಡೆಯುವುದಾಗಲೀ ದೇಹದಂಡನೆಯಲ್ಲಿ ನಿರ್ವಂಚನೆಯ ಕಸುಬುಗಾರಿಕೆ ತೋರುವುದಾಗಲೀ ಇದು ಮೊದಲಲ್ಲ. ಆದರೆ ಆ ಅಭಿವ್ಯಕ್ತಿಯ ಶಿಲ್ಪಕ್ಕೆ ಕುಂದು ಬಾರದಂತೆ ಮರೆತುಹೋದ ಕುಸುರಿಯನ್ನು ಹುಡುಕಿ ತಂದು ಸೇರಿಸಿ, ಇವರಂತೆ ಭೂರಿ ಸಮಾರಾಧನೆ ನಡೆಸಿದವರು ಹಿಂದಿಲ್ಲ (ಮುಂದೆ ಇರಲಾರದು!) ಬಾಲ್ಯದಲ್ಲಿ ಅಕ್ಷರಜ್ಞಾನ ಅರ್ಥಾತ್ ಕಲಿಕೆಯ ಔಪಚಾರಿಕ ದ್ವಾರವನ್ನು ಅಷ್ಟಾಗಿ ಹಾದುಹೋಗಲಾಗದವರೂ ಲೋಕ ಶಿಕ್ಷಣದಲ್ಲಿ, ಕಾಲಪ್ರವಾಹದ ಸವಕಳಿಯಲ್ಲಿ ಗುರುವಾಗಿ ಸಂಪನ್ಮೂಲ ವ್ಯಕ್ತಿಯಾಗಿ ತೋರುವುದು ವಿಶೇಷವಲ್ಲ. ಇಂದೂ ಹೊಟ್ಟೆಪಾಡು ಮುಖ್ಯವಾಗಿ ಯಕ್ಷಶಿಕ್ಷಣಕ್ಕೆ ಬಂದು, ಅಕ್ಷರಕ್ಕೆರವಾಗುವ ಎಳೆಜೀವಗಳಿಗೆ ಸಂಜೀವವಾಗುವ, ಯಕ್ಷಶಿಕ್ಷಣದೊಡನೆ ಔಪಚಾರಿಕ ವಿದ್ಯೆಯನ್ನೂ ಒದಗಿಸುವ ಮಹಾಗುರುತನ ಗುರುತರವಾದದ್ದು, ಸದ್ಯ ಭಾರತದ ಸಂದರ್ಭದಲ್ಲಿ ಹೀಗೊಂದು ಸಾಧನೆಯನ್ನು ಕಾಣಿಸುತ್ತಿರುವ ಎರಡನೆಯ ಸಂಸ್ಥೆ - ಉಡುಪಿಯ ಎಂ.ಜಿ.ಎಂ ಕಾಲೇಜಿನಾಶ್ರಯದ ಯಕ್ಷಗಾನ ಕೇಂದ್ರ (ವರ್ತಮಾನದ ಸಮರ್ಥ ನಿರ್ದೇಶಕ ಪ್ರೊ| ಹೆರಂಜೆ ಕೃಷ್ಣ ಭಟ್). ಕೇಂದ್ರದ ಒಡನಾಡಿದ ವ್ಯಕ್ತಿಶಕ್ತಿಗಳು ಬಹುವರ್ಣಮಯ. ಅದರ ಹುಟ್ಟು ಆಕಸ್ಮಿಕವೇ ಆದರೂ ವಿಕಾಸದಲ್ಲಿ ಇಂದು ಮುಟ್ಟಿದೆ ಸ್ವರ್ಣಪಥ. ಅದರ ಇತಿಹಾಸಕ್ಕೆ ಕೂರುವ ದೂಳು ತೊಳೆಯುತ್ತ, ಕಿಲುಬು ಕಳೆಯುತ್ತ, ‘ಗುರು’ತು ಮರೆತರೂ ಗುರುತು ಉಳಿಯುವ ಕೆಲಸ ಮಾಡುತ್ತಿರುವವರೇ (‘ಕಾರು ತೊಳೆದ ಹುಡುಗ’) ಬನ್ನಂಜೆ ಸಂಜೀವ ಸುವರ್ಣ. ಕೌಟುಂಬಿಕ ಹಿನ್ನೆಲೆ, ಸಂಸ್ಕಾರ ಯಕ್ಷಗಾನ ಕೇಂದ್ರದ ಪ್ರಾಂಶುಪಾಲ ಸಂಜೀವರಿಗೆ ನೂಕು ಬಲ ಕೊಟ್ಟಿಲ್ಲ. ಸಾಮಾಜಿಕ ವರ್ಗ ವಿಭಜನೆಗಳು ಸುವರ್ಣರಿಗೆ ಇಂದಿಗೂ ಅನುಕೂಲವಾಗಿರುವುದು ಸಂಶಯಾಸ್ಪದವೇ (ಅವರು ಎಲ್ಲೂ ಹೇಳಿಕೊಳ್ಳರು.). ಆದರೆ ಬೆಸ್ತರವಳ ಮಗ ‘ವೇದ’ಗ್ರಹಣ ಮಾಡಿದಂತೆ, ಕಾಡಬೇಡ ಮಹಾಕವಿಯಾದಂತೆ ಯಕ್ಷಲೋಕದಲ್ಲಿಂದು ಅದ್ವಿತೀಯ (ನಿರ್ವಿವಾದಿತ) ಮಹಾಗುರುವೆಂದರೆ ಬನ್ನಂಜೆ ಸಂಜೀವ ಸುವರ್ಣ.
-
ಇತ್ತೀಚಿನ ಪ್ರತಿಕ್ರಿಯೆಗಳು…
- Praveen on ಬ್ಯಾಂಕ್ ಬ್ಯಾಂಕ್ ಭ್ಯಾಂಘ್!
- ಎ ವಿ ಗೋವಿಂದ ರಾವ್ on ಬ್ಯಾಂಕ್ ಬ್ಯಾಂಕ್ ಭ್ಯಾಂಘ್!
- Bedre Manjunath on ಯಕ್ಷಗಾನ ವಿಮರ್ಶೆಗಾಗಿ ದಾಕ್ಷಿಣ್ಯಬಿಟ್ಟವರು
- ML Samaga on ಮಹಾಲಿಂಗರು ಕಂಡ ಸಂಜೀವರ ಸಾಹಸ
- ML Samaga on ಮಹಾಲಿಂಗರು ಕಂಡ ಸಂಜೀವರ ಸಾಹಸ
-
ಇತ್ತೀಚಿನ ಬರವಣಿಗೆಗಳು…
ದಿಕ್ಸೂಚಿ…
ಈ ಹಿಂದೆ…
Blogroll
-
ಭೇಟಿ ನೀಡಿದವರು
- 36,414 ಜನರು
-
ಇತ್ತೀಚಿನ ಬರಹಗಳು
- ಬ್ಯಾಂಕ್ ಬ್ಯಾಂಕ್ ಭ್ಯಾಂಘ್!
- ಮಹಾಲಿಂಗರು ಕಂಡ ಸಂಜೀವರ ಸಾಹಸ
- ನಾನ್ಯಾಕೆ ಚೀಲ ಕೊಡುತ್ತಿಲ್ಲ?
- ಅತ್ರಿ – ಪುಸ್ತಕ ಪ್ರಕಾಶನವನ್ನು ಮುಚ್ಚಿದೆ!
- ಏರಿದವನಿಳಿಯಲೇಬೇಕು
- ಆಕಾಶ ಪಾತಾಳಗಳ ನಡುವೆ
- ಸಂದುಗೊಂದಿನಲ್ಲಿ ಉನ್ನತ ಚಿಂತನ
- ರಂಗನಂಘ್ರಿಗೆ ಮಣಿದೂ…
- ಮಹಾಲಿಂಗ ಭಟ್ಟರ ಅಂಕಣದಿಂದ
- ಇಷ್ಟಸಿದ್ಧಿ ಹೋಮಂ ಕರಿಷ್ಯೇ
- ಹೂಡಿದೆವು ಶಿಬಿರ – ರಂಗನಾಥ ಸ್ತಂಭ ವಿಜಯ ಭಾಗ ಎರಡು
- ಯಕ್ಷಗಾನ ವಿಮರ್ಶೆಗಾಗಿ ದಾಕ್ಷಿಣ್ಯಬಿಟ್ಟವರು
- ಕಾಪಾಡಿ! ಬಲಕೊಡೀ!!
- ನಿಮ್ಮನ್ನೇ ಕಾದಿದೆ ಲಕ್ಷ ದ್ವೀಪ!
- ಮಿನಿಕಾಯ್, ಕವರಟ್ಟಿ
ಈವರೆಗಿನ ಬರಹಗಳು…
ವಿಭಾಗಗಳು
ಸಂಪರ್ಕಿಸಿರಿ
ATHREE BOOK CENTER 4 Sharavathi Building, Balmatta Mangalore 575001 Karnataka Ph: 0824-2425161 email: athreebook@gmail.com
