<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	xmlns:georss="http://www.georss.org/georss" xmlns:geo="http://www.w3.org/2003/01/geo/wgs84_pos#" xmlns:media="http://search.yahoo.com/mrss/"
	>

<channel>
	<title>Athree Book Center</title>
	<atom:link href="http://athreebook.com/feed/" rel="self" type="application/rss+xml" />
	<link>http://athreebook.com</link>
	<description>Service center for wisdom</description>
	<lastBuildDate>Wed, 08 Sep 2010 01:31:32 +0000</lastBuildDate>
	<language>en</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
	<generator>http://wordpress.com/</generator>
<cloud domain='athreebook.com' port='80' path='/?rsscloud=notify' registerProcedure='' protocol='http-post' />
<image>
		<url>http://1.gravatar.com/blavatar/3498c2b8debaaf21a617f3948d9ece2a?s=96&#038;d=http://s2.wp.com/i/buttonw-com.png</url>
		<title>Athree Book Center</title>
		<link>http://athreebook.com</link>
	</image>
	<atom:link rel="search" type="application/opensearchdescription+xml" href="http://athreebook.com/osd.xml" title="Athree Book Center" />
	<atom:link rel='hub' href='http://athreebook.com/?pushpress=hub'/>
		<item>
		<title>ಬ್ಯಾಂಕ್ ಬ್ಯಾಂಕ್ ಭ್ಯಾಂಘ್!</title>
		<link>http://athreebook.com/2010/09/08/%e0%b2%ac%e0%b3%8d%e0%b2%af%e0%b2%be%e0%b2%82%e0%b2%95%e0%b3%8d-%e0%b2%ac%e0%b3%8d%e0%b2%af%e0%b2%be%e0%b2%82%e0%b2%95%e0%b3%8d-%e0%b2%ad%e0%b3%8d%e0%b2%af%e0%b2%be%e0%b2%82%e0%b2%98%e0%b3%8d/</link>
		<comments>http://athreebook.com/2010/09/08/%e0%b2%ac%e0%b3%8d%e0%b2%af%e0%b2%be%e0%b2%82%e0%b2%95%e0%b3%8d-%e0%b2%ac%e0%b3%8d%e0%b2%af%e0%b2%be%e0%b2%82%e0%b2%95%e0%b3%8d-%e0%b2%ad%e0%b3%8d%e0%b2%af%e0%b2%be%e0%b2%82%e0%b2%98%e0%b3%8d/#comments</comments>
		<pubDate>Wed, 08 Sep 2010 01:31:32 +0000</pubDate>
		<dc:creator>abhayaftii</dc:creator>
				<category><![CDATA[ಪುಸ್ತಕ ಲೋಕ]]></category>
		<category><![CDATA[ಹೀಗೆ ಒಂದಿಷ್ಟು]]></category>

		<guid isPermaLink="false">http://athreebook.com/?p=534</guid>
		<description><![CDATA[ಚಲಾವಣೆಗೆ ಬಂದ ಖೋಟಾನೋಟು! ತಿಂಗಳ ಹಿಂದೆ ಗೆಳೆಯ ಸುಂದರ ರಾವ್ ರಿಸರ್ವ್ ಬ್ಯಾಂಕ್ ಅಧಿಕೃತತೆ ಸಾರುವ ಪರಿಪತ್ರವೊಂದರ ಇ-ಪ್ರತಿಯನ್ನು (ಲಗತ್ತು) ನನ್ನ ಮಿಂಚಂಚೆ ವಿಳಾಸಕ್ಕೆ ನೂಕುತ್ತಾ ಎಚ್ಚರಿಸಿದ್ದರು. ಆ ಪತ್ರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬೀಐ) ಮಹೇಂದ್ರ ಕೊಟಕ್ ಬ್ಯಾಂಕಿನ ಯಾರದೋ ಪತ್ರವನ್ನು ಉದ್ದೇಶಿಸಿ ಕೊಟ್ಟ ಸ್ಪಷ್ಟೀಕರಣ. ಸಾರಾಂಶ &#8211; ಪಾಕಿಸ್ತಾನದ ಕೆಟ್ಟಬುದ್ಧಿಯಲ್ಲಿ ಅಸಂಖ್ಯ ಕಳ್ಳನೋಟುಗಳು &#8230; <a href="http://athreebook.com/2010/09/08/%e0%b2%ac%e0%b3%8d%e0%b2%af%e0%b2%be%e0%b2%82%e0%b2%95%e0%b3%8d-%e0%b2%ac%e0%b3%8d%e0%b2%af%e0%b2%be%e0%b2%82%e0%b2%95%e0%b3%8d-%e0%b2%ad%e0%b3%8d%e0%b2%af%e0%b2%be%e0%b2%82%e0%b2%98%e0%b3%8d/">Continue reading <span class="meta-nav">&#8594;</span></a><img alt="" border="0" src="http://stats.wordpress.com/b.gif?host=athreebook.com&amp;blog=3999388&amp;post=534&amp;subd=athree&amp;ref=&amp;feed=1" width="1" height="1" />]]></description>
			<content:encoded><![CDATA[<p><strong>ಚಲಾವಣೆಗೆ ಬಂದ ಖೋಟಾನೋಟು!</strong></p>
<p><a href="http://onluker.com/wp-content/uploads/2008/10/real-fake-indian-currency-2.jpg"><img class="alignleft" src="http://onluker.com/wp-content/uploads/2008/10/real-fake-indian-currency-2.jpg" alt="" width="342" height="318" /></a>ತಿಂಗಳ ಹಿಂದೆ ಗೆಳೆಯ ಸುಂದರ ರಾವ್ ರಿಸರ್ವ್ ಬ್ಯಾಂಕ್ ಅಧಿಕೃತತೆ ಸಾರುವ ಪರಿಪತ್ರವೊಂದರ ಇ-ಪ್ರತಿಯನ್ನು (ಲಗತ್ತು) ನನ್ನ ಮಿಂಚಂಚೆ ವಿಳಾಸಕ್ಕೆ ನೂಕುತ್ತಾ ಎಚ್ಚರಿಸಿದ್ದರು. ಆ ಪತ್ರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬೀಐ) ಮಹೇಂದ್ರ ಕೊಟಕ್ ಬ್ಯಾಂಕಿನ ಯಾರದೋ ಪತ್ರವನ್ನು ಉದ್ದೇಶಿಸಿ ಕೊಟ್ಟ ಸ್ಪಷ್ಟೀಕರಣ. ಸಾರಾಂಶ &#8211; ಪಾಕಿಸ್ತಾನದ ಕೆಟ್ಟಬುದ್ಧಿಯಲ್ಲಿ ಅಸಂಖ್ಯ ಕಳ್ಳನೋಟುಗಳು ಭಾರತದಲ್ಲಿ ಚಲಾವಣೆಗೆ ಬಂದಿವೆ. ಅದರಲ್ಲೂ ಮುಖ್ಯವಾಗಿ ಸಾವಿರರೂಪಾಯಿ ನೋಟುಗಳಲ್ಲಿ 2AQ ಮತ್ತು 8AC ಸೀರೀಸಿನ ಬಗ್ಗೆ &#8211; ಎಚ್ಚರೆಚ್ಚರ!<span id="more-534"></span>ಸಹಜವಾಗಿ ಅಂದು ನನ್ನಂಗಡಿಯಲ್ಲಿ ಸಂಗ್ರಹವಾದ ನೋಟುಗಳಲ್ಲಿ ಹುಡುಕಿದಾಗ ಒಂದು ‘ಸಂಶಯಿತ’ ಸಿಕ್ಕಿತು. ಆದರದು ಸೀರೀಸ್ ಸಂಖ್ಯೆ ಬಿಟ್ಟು ಉಳಿದಂತೆ ನನ್ನ ಪರೀಕ್ಷೆಗಳಲ್ಲಿ ಸಾಚಾ ಎಂದು ಉತ್ತೀರ್ಣಗೊಂಡು ‘ಇತರರೊಡನೆ’ ಎಂದಿನಂತೆ ಬ್ಯಾಂಕಿಗೆ ಹೋಯ್ತು. ಆದರೆ ಬ್ಯಾಂಕ್‌ನಲ್ಲಿ ಆಗಲೇ ‘ಕಳ್ಳಗೇಟ್’ ಹಾಕಿದ್ದರು. ನನಗೆ ಬಂದ ಪತ್ರದ ಪ್ರತಿಗಳೇ ಬ್ಯಾಂಕ್ ವಲಯದಲ್ಲೆಲ್ಲ ಸಂಚಲನ ಉಂಟು ಮಾಡಿಯಾಗಿತ್ತು. ನನ್ನ ಬ್ಯಾಂಕಿನ ಪ್ರಧಾನ ಕಛೇರಿಯೇ ಆ ಎರಡು ಸೀರೀಸಿನ ನೋಟುಗಳನ್ನು ತಿರಸ್ಕರಿಸಲು ಆದೇಶ ಹೊರಡಿಸಿತ್ತು!</p>
<p>“ಈ ನೋಟಿನ ಚಹರೆಗಳೆಲ್ಲಾ ಸಾಚಾ ಇದೆ. ಆದರೆ ಆದರೆ&#8230;” ಎಂದು ಶಾಖಾ ವರಿಷ್ಠ ತಡವರಿಸಿ “ನೋಟಿನಲ್ಲಿರುವ ಮುದ್ರಿತ ರುಜು ಮಾಡಿದಾತ ಈ ಶ್ರೇಣಿ ಹೊರಡುವಾಗ ಅಧಿಕಾರದಲ್ಲಿರಲಿಲ್ಲ” ಎಂಬ ವಿನೂತನ ಸತ್ಯ ಹೊರಗೆಡಹಿದರು. ಆ ವ್ಯಕ್ತಿ ಅಯೋಗ್ಯನಲ್ಲ, ಒಂದು ಕಾಲಘಟ್ಟದಲ್ಲಿ ರುಜುಮಾಡುವ ಅಧಿಕಾರಿಯಾಗಿದ್ದದ್ದೂ ಹೌದು. ಆದರೆ ಪಸ್ತುತ ನೋಟು ಜ್ಯಾರಿಗೊಳ್ಳುವ ಕಾಲಕ್ಕೆ ಅಧಿಕಾರಿಯಾಗಿರಲಿಲ್ಲ ಎನ್ನುವುದಷ್ಟೇ ನಮ್ಮ ಬ್ಯಾಂಕ್ ಶಾಖಾಧಿಕಾರಿಯ ಮಾತು! ಉಷ್, ನೋಟನ್ನು ಸವರಿ ನೋಡಿ, ಬೆಳ್ಳಿರೇಖೆ ನೋಡಿ, ಬೆಳಕಿಗೊಡ್ಡಿ ನೋಡಿ, ಅರೆ ಮಡಚಿ ಓರೆಯಲ್ಲಿ ನೋಡಿ, ಹಿಂದೊಂದು ಮುಂದೊಂದು ನೀರಕಲೆ ನೋಡಿ ಎನ್ನುವಲ್ಲಿಗೂ ಸಾಮಾನ್ಯನ ಜವಾಬ್ದಾರಿ ಮುಗಿಯಲಿಲ್ಲ; ಪ್ರತಿ ನೋಟು ರುಜು ಮಾಡಿದಾತನ (ರಿಸರ್ವ್ ಬ್ಯಾಂಕಿನ ಗವರ್ನರ್ ಅಥವಾ ಹಣಕಾಸು ವಿಭಾಗದ ಕಾರ್ಯದರ್ಶಿ) ಪ್ರವರವನ್ನೂ ಒರೆಗೆ ಹಚ್ಚಬೇಕು. ಈ ಕುರಿತು ರಿಸರ್ವ್ ಬ್ಯಾಂಕಿನ ಘೋಷಣೆ ಅಥವಾ ಪ್ರತಿ ಬ್ಯಾಂಕ್ ಸಾಮಾನ್ಯನಿಗೆ ಮಾಹಿತಿ ಮುಟ್ಟಿಸಿ ಎಚ್ಚರಿಸುವ ಕ್ರಮಗಳನ್ನೇನು ಮಾಡಿದೆ ಎಂದು ನಾನು ಪ್ರಶ್ನಿಸಿದೆ. “ಇಲ್ಲ, ಸ್ಥಳೀಯವಾಗಿ ನನಗೆ ಪ್ರಧಾನ ಕಛೇರಿಯ (ಸಾರ್ವಜನಿಕಕ್ಕೆ ಕೊಡಲಾಗದ ಗೌಪ್ಯ) ಆದೇಶವೊಂದೇ ಆಧಾರ. ವಾಸ್ತವದಲ್ಲಿ ನಾನು ಈ ನೋಟನ್ನು ನಿಮಗೆ ಮರಳಿಸುವುದಿದ್ದರೂ ಹರಿದೇ ಕೊಡಬೇಕು. ಹಾಗೆ ಮಾಡುತ್ತಿಲ್ಲ.” ಸಂಶಯಿತರೆಲ್ಲ ಅಪರಾಧಿಗಳಲ್ಲವಲ್ಲ ಎನ್ನುವ ನನ್ನ ವಾದಕ್ಕೆ ಮ್ಯಾನೇಜರರಿಂದ ಗೌರವವೇನೋ ಸಿಕ್ಕಿತು, ಆದರೆ ವಿಷಾದಪೂರ್ವಕವಾಗಿ ಸಂಶಯಿತ ನೋಟು ಮಾತ್ರ ನನಗೇ ವಾಪಾಸು ಬಂತು. ಸಾಲದ್ದಕ್ಕೆ “ನಿಮ್ಮ ಆಕ್ಷೇಪ, ಆರೋಪಗಳೇನಾದರೂ ಇದ್ದರೆ ದಯವಿಟ್ಟು ನಮ್ಮ ಶಾಖೆಯ ಉಲ್ಲೇಖ ಬೇಡ” ಮ್ಯಾನೇಜರರ ಪ್ರಾರ್ಥನೆ.</p>
<p>ಅಂತರ್ಜಾಲದಲ್ಲಿ ರಿಸರ್ವ್ ಬ್ಯಾಂಕಿನ ಪುಟಗಳನ್ನು ಜಾಲಾಡಿದರೂ ವಿಚಾರಿಸಲು ಯಾವುದೇ ಪರಿಣಾಮಕಾರಿ ಸಂಪರ್ಕಗಳು ಕಾಣಲಿಲ್ಲ. ಆಗ ಅದೃಷ್ಟವಶಾತ್ ನನಗೆ ನನ್ನ ಬ್ಯಾಂಕಿನ ವರಿಷ್ಠರ ಆತ್ಮೀಯ ಪರಿಚಯ ನೆನಪಿಗೆ ಬಂತು. ಕೂಡಲೇ ದೂರವಾಣಿಸಿದೆ. ಅವರು ನನ್ನ ಮಾತನ್ನು ಕಾಳಜಿಯಿಂದ ಕೇಳಿ, “ದಯವಿಟ್ಟು ಒಂದು ಮಿನಿಟು ಲೈನಿನಲ್ಲಿರಿ” ಎಂದು ಮರೆಯಲ್ಲಿಟ್ಟು, ಒಳ ಸಂಪರ್ಕದ ದೂರವಾಣಿಯಲ್ಲಿ ಸೂಕ್ತ ಸಹಾಯಕರಲ್ಲಿ ಜಿಜ್ಞಾಸೆ ನಡೆಸಿ, ಕೂಡಲೇ ಪರಿಹಾರ ಕೊಟ್ಟರು. “ಚಲಾವಣೆಯಲ್ಲಿರುವ ಆರ್ಬೀಐ ಪತ್ರ ಸ್ವಯಂ ಸ್ಪಷ್ಟವಿರುವಂತೆ ಆರ್ಬೀಐ ಆದೇಶ ಪತ್ರವಲ್ಲ. ಕೇವಲ ಒಂದು ಬ್ಯಾಂಕ್ ವಿಚಾರಿಸಿದ್ದಕ್ಕೆ ಕೊಟ್ಟ ಸಲಹೆ ಮಾತ್ರ. ಅದರ ಇ-ಪ್ರತಿಯನ್ನು ಆ ಬ್ಯಾಂಕ್‌ನ ಸಿಬ್ಬಂದಿಯೋರ್ವ ವೈಯಕ್ತಿಕ ನೆಲೆಯಲ್ಲಿ (ತನ್ನ ಯೂನಿಯನ್ನಿನ ಮಿತ್ರರ ಅವಗಾಹನೆಗೆಂದು) ಪ್ರಚಾರಕ್ಕೆ ಬಿಟ್ಟದ್ದು ಅನವಶ್ಯಕ ಉತ್ಸಾಹಿ ಅಧಿಕಾರಿಗಳಿಂದ ನಮ್ಮಲ್ಲೂ ಸೇರಿದಂತೆ ಕೆಲವು ಬ್ಯಾಂಕುಗಳಲ್ಲಿ ಆದೇಶವಾಗಿಯೇ ಹೊರಹೊಮ್ಮಿದೆ. ಕ್ಷಮಿಸಿ, ಈಗಾಗಲೇ ನಮ್ಮ ಅಕೌಂಟ್ಸ್ ವಿಭಾಗ ಯುಕ್ತ ಆದೇಶ ಹೊರಡಿಸಿದೆ. ನಿಮ್ಮದೂ ಸೇರಿದಂತೆ ಆ ಶ್ರೇಣಿಯ ಯಾವುದೇ (ಸಾಚಾ) ನೋಟುಗಳನ್ನು ಬ್ಯಾಂಕ್ ಹಿಂದಿನಂತೇ ಮನ್ನಿಸುತ್ತದೆ.” ಐದು ಮಿನಿಟು ಕಳೆದು ನನ್ನ ಶಾಖಾ ಮ್ಯಾನೇಜರ್ ನನಗೆ ದೂರವಾಣಿಸಿ, ಕ್ಷಮಾಕೋರಿಕೆಯೊಡನೆ ಆ ನೋಟನ್ನು ಮನ್ನಿಸಿದರು.</p>
<p><strong>ಕಾರ್ಡುಜ್ಜುವ ಯಂತ್ರ ಅಥವಾ ತೆನ್ನಾಲಿಯ ಸುಟ್ಟ ಮುಸುಡಿನ ಬೆಕ್ಕು (ಅಥವಾ ಮೂರ್ಖನಿಗೆ ಮೂರು ಕಡೆ)</strong></p>
<p><strong>೧. ಹಣ ನಿಮ್ಮದು, ಸ್ವಾಮ್ಯ ನಮ್ಮದು:</strong></p>
<p><strong> </strong><a href="http://www.thefinancialphysician.com/blog/wp-content/uploads/2009/10/citi_professional_card1.jpg"><img class="alignleft" src="http://www.thefinancialphysician.com/blog/wp-content/uploads/2009/10/citi_professional_card1.jpg" alt="" width="354" height="223" /></a>ಕ್ರೆಡಿಟ್ ಕಾರ್ಡ್ ಅಥವಾ ನಗದು ಇಲ್ಲದ ವ್ಯಾಪಾರ ಎನ್ನುವ ಕಲ್ಪನೆ ಇನ್ನೂ ನನ್ನ ತಲೆಹೊಕ್ಕದ ದಿನಗಳಲ್ಲೇ (ಸುಮಾರು ಹತ್ತಿಪ್ಪತ್ತು ವರ್ಷಗಳ ಹಿಂದೆ) ಅಂತಾರಾಷ್ಟ್ರೀಯ ಖ್ಯಾತಿಯ ಸಿಟಿ ಬ್ಯಾಂಕಿನ ಏಜಂಟ್ ಒಬ್ಬ ಬಂದು ಭೈರಿಗೆ ಹಾಕಿದ. “ನಮ್ಮ ಯಂತ್ರ ಒಂದನ್ನು ನಮ್ಮದೇ ವ್ಯವಸ್ಥೆಯಲ್ಲಿ ನಿಮ್ಮಂಗಡಿಯಲ್ಲಿಡುತ್ತೇವೆ. ಅದಕ್ಕೆ ತಿಂಗಳಾ ಇನ್ನೂರು ಮುನ್ನೂರರ ಸಣ್ಣ ಬಾಡಿಗೆಯೋ ಅಥವಾ ಅದರ ಮೂಲಕವಾದ ವ್ಯಾಪಾರದಲ್ಲಿ ಶೇಕಡಾ ಹತ್ತರ ದರದಲ್ಲಿ ಪಾಲೋ ಕೊಟ್ಟರೆ ಸಾಕು” ಎಂದ. ಆ ಬ್ಯಾಂಕ್ ತನ್ನೆಲ್ಲಾ ಶಾಖೆಗಳ ಮತ್ತು ಗಿರಾಕಿಗಳ ಮೂಲಕ ನನ್ನಂಗಡಿಗೆ ಪ್ರಚಾರ ಕೊಡುತ್ತದೆ. ಮತ್ತೇನು, ಎಲ್ಲೆಲ್ಲಿನ ಪುಸ್ತಕಾಸಕ್ತರು, ಮುಖ್ಯವಾಗಿ ವಿದೇಶೀ ಗಿರಾಕಿಗಳೆಲ್ಲಾ ನನ್ನಂಗಡಿಗೇ ಮುಕುರುತ್ತಾರೆ ಎನ್ನುವ ಬಹುವರ್ಣ ಚಿತ್ರ ಕೊಟ್ಟ. “ನೀವವರಿಗೆ ಶೇಕಡಾ ಹತ್ತೋ ಹದಿನೈದೋ ರಿಯಾಯ್ತೀ ಕೊಡಬೇಕು. ಎಷ್ಟೂಂತ ತಿಳಿಸಿ, ಅದನ್ನೂ ನಾವು ಪ್ರಚಾರದಲ್ಲಿ ಹೇಳಿರುತ್ತೇವೆ. ಆಮೇಲೆ ಎಲ್ಲಾ ವಿದೇಶೀ ಪ್ರವಾಸಿಗರೂ ದೇಶೀ ಸ್ಟಾರ್ ಪ್ರವಾಸಿಗರೂ ನಿಮ್ಮಲ್ಲಿಗೆ ಬರುತ್ತಾರೆ. . . .” ಇತ್ಯಾದಿ ಕೊರೆದದ್ದೇ ಕೊರೆದದ್ದು. ಎಲಾ ಇವ್ನಾ, ಬರಿಯ ಆ ಬ್ಯಾಂಕಿನ ಯಂತ್ರಕ್ಕೆ ಗೌರವವಲ್ಲ, ನನ್ನಲ್ಲಿ ಯಂತ್ರ ಬಳಸಿದ ಗಿರಾಕಿಗಳ ಮಟ್ಟದಲ್ಲೂ ನನಗೇ ಕತ್ತರಿ (Discount). ಯಾರಿಗೆ ಪುಸ್ತಕ ಮಾರಬೇಕು, ಹೇಗೆ ವ್ಯಾಪಾರ ಹೆಚ್ಚಿಸಿಕೊಳ್ಳಬೇಕು ಎಂಬುದನ್ನು ಸ್ವಂತ ಕಾಲಮೇಲೆ ನಿಲ್ಲಲಾಗದ, ಕೇವಲ ಕಮಿಶನ್ ಮೇಲೆ ಬದುಕಿದವನಿಂದ ಕೇಳಬೇಕೇ (ಉಪದೇಶ ಪಾಂಡಿತ್ಯಕ್ಕೆ ಸೋಲುವುದಿದ್ದರೆ ನಾನಾಗಲೇ ಹತ್ತು ಮಠಗಳಿಗೆ ನಾ ನಿನ್ನ ದಾಸನೋ ದಯಾ ಸಾಗರಾ ಎಂದು ಶರಣುಹೊಕ್ಕಿಯಾಗುತ್ತಿತ್ತು!) ಎಂಬ ಕೋಪ ಸಿಡಿದು, ನಾನವನಿಗೆ ಬಾಗಿಲು ತೋರಿಸಿದ್ದೆ.</p>
<p><a href="http://www.vermontfbla.com/wp-content/uploads/2010/07/credit-card.jpg"><img class="alignleft" src="http://www.vermontfbla.com/wp-content/uploads/2010/07/credit-card.jpg" alt="" width="320" height="286" /></a>ಅದಾಗಿ ಎಷ್ಟೋ ವರ್ಷಗಳ ಮೇಲೆ “Do you accept cards? Can I swipe the card?” ಎಂಬಿತ್ಯಾದಿ ಬೇಡಿಕೆಗಳು ಹೆಚ್ಚುತ್ತಾ ಇದ್ದ ದಿನಗಳಲ್ಲಿ ಎಚ್.ಡಿ.ಎಫ಼್.ಸಿ ಬ್ಯಾಂಕಿನ ಏಜಂಟನೊಬ್ಬ ನನಗೆ ತಗುಲಿಕೊಂಡ. ಇವನದು ಸರಳ ಸೂತ್ರ. “ಕಾರ್ಡು ಉಜ್ಜುವ ಯಂತ್ರ ನಮ್ಮದು. ನಮ್ಮ ಶಾಖೆಯಲ್ಲಿ ರೂ ಐದೋ ಹತ್ತೋ (ನನಗೀಗ ನೆನಪಿಲ್ಲ) ಸಾವಿರದ ಕನಿಷ್ಠ ಶಿಲ್ಕು ಇರುವಂತೆ ನೀವೊಂದು ಚಾಲ್ತಿ ಖಾತೆ ತೆರೆದಿರಬೇಕು. ಮತ್ತೆ ನೀವು ಕಾರ್ಡುಜ್ಜಿ ಪಡೆಯುವ ವ್ಯಾಪಾರದಲ್ಲಿ ಶೇಕಡಾ ಎರಡೂವರೆ ದರದಲ್ಲಿ ಕಮಿಶನ್ ವಜಾ ಮಾಡಿ ನಿಮ್ಮ ಖಾತೆಗೆ ಜಮಾ ಮಾಡುತ್ತೇವೆ.” ಕಾಲದ ಮಹಿಮೆಯನ್ನು ಸ್ವಲ್ಪವಾದರೂ ಮನ್ನಿಸುವ ಒಳ್ಳೆ ಬುದ್ಧಿಯಿಂದ ಒಪ್ಪಿದೆ. ಅವರ ಸ್ಥಳೀಯ ಶಾಖೆಯಲ್ಲಿ ಒಂದೇ ವಾರದಲ್ಲಿ ನನ್ನ ಚಾಲ್ತಿ ಖಾತೆಯೇನೋ ಶುರುವಾಯ್ತು. ಆದರೆ ಎರಡು ಮೂರು ನೆನಪಿನ ಕರೆಗಳ ಮೇಲಷ್ಟೇ ಅಂದರೆ ಸುಮಾರು ಮೂರು ತಿಂಗಳ ವಿಳಂಬದಲ್ಲಿ ಉಜ್ಜುವ ಯಂತ್ರ (card swiping machine ಅಥವಾ EDC machine) ನನ್ನ ಮೇಜನ್ನು ಅಲಂಕರಿಸಿತು. ಅಂಗಡಿಯಲ್ಲಿ ಎಲ್ಲರ ಗಮನ ಸೆಳೆಯುವಂತೆ ಬ್ಯಾಂಕಿನವರೇ ಧಾರಾಳ ಕೊಟ್ಟ ‘We accept cards’ ಅಂಟುಚೀಟಿ ಹಚ್ಚಿದ್ದಾಯ್ತು. ನನ್ನಲ್ಲಿ ಕಾರ್ಡು ಬಳಕೆ ಪರಿಚಯದ ದಿನಗಳಾದ್ದರಿಂದ ಏನೋ ಚಿಲ್ಲರೆ ವಹಿವಾಟು ಆಗುತ್ತಿತ್ತು.</p>
<p>ಸುಮಾರು ಮೂರು ತಿಂಗಳು ಕಳೆಯುತ್ತಿದ್ದಂತೆ ಬ್ಯಾಂಕಿನ ವಲಯ ಕಛೇರಿಯಿಂದ (ಬೆಂಗಳೂರು) ಒಂದು ಪ್ರೇಮ ಪತ್ರ ಬಂತು. ‘ಆರು ತಿಂಗಳ ಸರಾಸರಿಯಲ್ಲಿ ನಿಮ್ಮ ಮಾಸಿಕ ವಹಿವಾಟು ನಮ್ಮ ನಿರೀಕ್ಷೆಯ ಮಟ್ಟಕ್ಕೆ ಬಂದಿಲ್ಲ. ಹಾಗಾಗಿ ಮಾಸಿಕ ಬಾಡಿಗೆ ದರ ನಿಗದಿಸಿದ್ದೇವೆ, ಸಹಕರಿಸಿ.’ ನಾನು ಕೂಡಲೇ ಬೆಂಗಳೂರಿಗೆ ಉತ್ತರಿಸಿ ಯಥಾಪ್ರತಿಯನ್ನು ಮಂಗಳೂರು ಶಾಖೆಗೂ ರವಾನಿಸಿದೆ. ಸಾರಾಂಶ ‘೧. ಒಪ್ಪಂದದ ದಾಖಲೆಗಳಿಗೆ ಆರು ತಿಂಗಳಾಗಿರಬಹುದಾದರೂ ಯಂತ್ರ ಚಾಲನೆಗೆ ಬಂದು ಕೇವಲ ಮೂರೇ ತಿಂಗಳಾಗಿದೆ</p>
<p>೨. ನಿಮ್ಮ ಮಾಸಿಕ ವಹಿವಾಟಿನ ‘ನಿರೀಕ್ಷೆ’ಯನ್ನು ನನಗೆ ಮೊದಲು ತಿಳಿಸಿರಲಿಲ್ಲ ಮತ್ತು ಈಗಲೂ ತಿಳಿಸಿಲ್ಲ (ಸಾಲದು ಎಂದರೆ ಎಷ್ಟಾಗಬೇಕಿತ್ತು ಎಂದು ತಿಳಿಸಬೇಡವೇ?) ೩. ಮಾಸಿಕ ಬಾಡಿಗೆ ೨.೫% ಕಮಿಶನ್ನಿನ ಜೊತೆಗೋ ಅಥವಾ ಅದೊಂದೆಯೋ? ನಿಮ್ಮ ‘ನಿರೀಕ್ಷೆ’ ಎಷ್ಟಾದರೂ ಇರಲಿ, ನಾನು ಆ ಮಿತಿ ದಾಟಿದಂದು ಬಾಡಿಗೆ ರದ್ದುಪಡಿಸುತ್ತೀರೋ? ೪. ಇದು ಪರಸ್ಪರ ವಿಶ್ವಾಸದ ಮೇಲೆ ನಡೆಯುವ ವಹಿವಾಟು ಅಲ್ಲ ಎಂದಾದರೆ ನೀವು ನಿಮ್ಮ ಯಂತ್ರವನ್ನು ವಾಪಾಸು ತರಿಸಿಕೊಳ್ಳಬಹುದು.’ ಮೂರನೇ ದಿನವೇ ಯಂತ್ರ ಅಳವಡಿಸಿದ್ದ ಬ್ಯಾಂಕ್ ಪ್ರತಿನಿಧಿಯೇ ಬಂದು ಯಂತ್ರ ವಾಪಾಸೊಯ್ದ. ಒಂದು ಸ್ಪಷ್ಟೀಕರಣ, ಒಂದು ಸೌಜನ್ಯದ ಮಾತಿಗೂ ಬರಬಂದ ಎಚ್.ಡಿ.ಎಫ್.ಸಿ ಶಾಖೆಗೆ ನಾನು ಕೂಡಲೇ ಧಾವಿಸಿ ಪೂರ್ತಿ ಹಣ ತೆಗೆದು ಖಾತೆ ಮುಚ್ಚಿದೆ. ಅಲ್ಲೇ ತಾರಸಿ ಮೂಲೆಯಲ್ಲಿದ್ದ ಹಲ್ಲಿ ಮಾತ್ರ ಲೊಚಗುಟ್ಟಿತು.</p>
<p><strong>ಮಾತು ಕೃತಿಗಳ ನಡುವಣ ಕಂದರ!:</strong> <a href="http://www.stockmarkettipz.info/wp-content/uploads/2010/05/credit-card-image.jpg"><img class="alignleft" src="http://www.stockmarkettipz.info/wp-content/uploads/2010/05/credit-card-image.jpg" alt="" width="316" height="211" /></a></p>
<p>ಎಚ್ಡೀಎಫ಼್ಸೀ ಬ್ಯಾಂಕಿಗೆ ಅರ್ಜಿ ಕೊಟ್ಟು ಯಂತ್ರಕ್ಕೆ ಕಾಯುತ್ತಿದ್ದ ದಿನಗಳಲ್ಲೇ ಯು.ಟಿ.ಐ ಬ್ಯಾಂಕಿನ ಶಾಖಾಧಿಕಾರಿ ಮತ್ತು ಅಲ್ಲಿನ ಕಾರ್ಡುಜ್ಜುವ ಯಂತ್ರದ ವಿಸ್ತರಣಾಧಿಕಾರಿ ಅಂಗಡಿ ಅಂಗಡಿ ಸುತ್ತುತ್ತ ನನ್ನಲ್ಲಿಗೂ ಬಂದಿದ್ದರು. ಶೇಕಡಾ ೧.೫ ಯಲ್ಲಿ ತಾವು ಕೊಡುವುದಾಗಿ, ಶೂನ್ಯ ಶಿಲ್ಕಿನ (zero balance) ಚಾಲ್ತಿ ಖಾತೆ ತೆರೆದರೆ ಸಾಕೆಂದೂ ಹೇಳಿದರು. “ಎರಡು ತಿಂಗಳು ಮೊದಲು ಬರಬಾರದಿತ್ತೇ” ಎಂದು ರಾಗ ತೆಗೆದು ಅವರನ್ನು ಸಾಗಹಾಕಿದ್ದೆ. ಆದರೀಗ ಅನಿರೀಕ್ಷಿತವಾಗಿ ತಯಾರಿದ್ದೇನೆಂದು ನಾನು ಯುಟಿಐ ಶಾಖೆಗೆ ಹೋಗಿ ಒಪ್ಪಿಸಿಕೊಂಡೆ. ಮೂರು ಮೇಜು ಸುತ್ತಿಸಿ, ಚೀಟಿಯ ಮೇಲೆ ನನ್ನ ಹೆಸರು, ವಿಳಾಸವನ್ನಷ್ಟೇ ತೆಗೆದುಕೊಂಡು “ಸೂಕ್ತ ಅಧಿಕಾರಿಯನ್ನು ನಿಮ್ಮಲ್ಲಿಗೇ ಕಳಿಸುತ್ತೇವೆ” ಎಂದು ನನ್ನನ್ನು ಸಾಗಹಾಕಿದರು! ಎರಡು ವಾರಕ್ಕೂ ಮಿಕ್ಕು ಕಾದದ್ದೇ ಬಂತು, ಯುಟಿಐ ಪ್ರತಿನಿಧಿ ಬರಲೇ ಇಲ್ಲ. ಖಾಯಂ ಬರಲೇ ಇಲ್ಲ ಎಂದಲ್ಲ, ನಾಲ್ಕೋ ಐದೋ ತಿಂಗಳ ಮೇಲೊಂದು ದಿನ ಬಂದ.  ಆದರೆ ಆ ವೇಳೆಗೆ ಏನಾಗಿತ್ತೆಂದರೇ&#8230;</p>
<p>ಐಸಿಐಸಿಐ ಬ್ಯಾಂಕ್ ಪ್ರತಿನಿಧಿ ರಂಗ ಪ್ರವೇಶಿಸಿದ್ದ! ಈ ಬ್ಯಾಂಕಿನ ಸಹಜ ಸ್ತರ ಏನೋ ನನಗೆ ತಿಳಿಯಲೇ ಇಲ್ಲ. ಈ ಪ್ರತಿನಿಧಿಗೆ ನನ್ನಲ್ಲಿದ್ದ ಎಚ್.ಡಿ.ಎಫ್.ಸಿ ಕಟು ಅನುಭವ ಮೀರುವ ಅನಿವಾರ್ಯತೆ ಇತ್ತು. ನನ್ನ ಯೂಟಿಐ ಕನಸು ಸುಳ್ಳು ಮಾಡುವ ತುರ್ತೂ ಇತ್ತು. ಚೌಕಾಸಿಯಲ್ಲಿ (ಇದಕ್ಕೆ ಇಂಗ್ಲಿಶಿನಲ್ಲಿ ಸುಂದರ ಪದಪುಂಜ &#8211; competitive terms) ಯೂಟಿಐ ನಿಯಮಗಳನ್ನೇ ತಾನು ಕೊಡುವುದಾಗಿಯೂ ಅವರಿಗಿಂತ ಚುರುಕಾಗಿ ಸಂಪರ್ಕ ಕಲ್ಪಿಸುವುದಾಗಿಯೂ ಪ್ರಾಮಿಸಿದ (ಪ್ರಮಾಣ ಮತ್ತು  primiseಗಳ ಕಸಿಪದ)! ಒಂದೇ ವಾರದಲ್ಲಿ ನಾನು ಐಸಿಐಸಿಐನ ಘನ ಖಾತೇದಾರ (ಶಿಲ್ಕು ಸಾಂಕೇತಿಕ ಒಂದು ಸಾವಿರ ರೂಪಾಯಿ). ಸುಮಾರು ಎರಡು ದಶಕಗಳಿಗೂ ಮಿಕ್ಕು ಖಾಸಗಿ ಬ್ಯಾಂಕಿನ ಚಾಲ್ತಿ ಖಾತಾದಾರನಾದ ನನಗೆ ಸಂಸ್ಥೆಯ, ಮಾಲಿಕನ ಹೆಸರು ಮುದ್ರಣಗೊಂಡೇ ಬಂದ ಚೆಕ್ ಬುಕ್. ರಟ್ಟು ಮಾಸಿ, ಬೈಂಡು ಕಿತ್ತುಹೋದರೂ ಒಳಗೆ ಕಾಟು ಹೊಡೆದು, ಇಂಕಿನಚಿತ್ತು ಮೂಡಿ, ದಿನಕ್ಕೊಂದು ಕಾರಕೂನನ ಕೋಳಿಕಾಲಕ್ಕರದ ನಮೂದುಗಳು ತುಂಬಿದ ಪಾಸ್ ಪುಸ್ತಕ ನೋಡಿ ಬೇಸತ್ತವನಿಗೆ ಎಲ್ಲ ಗರಿಗರಿ ಕಂಪ್ಯೂಟರ್ ಕರಾಮತ್ತಿನ ಪಾಸ್ ಪುಸ್ತಕ. ನಾನು “ಜೈಹೋ” ಘೋಷಣೆ ಹಾಕುವುದಷ್ಟೇ ಬಾಕಿ; ಯಂತ್ರ ಬರಲಿಲ್ಲ. ಮುಂದೆ ‘ಒಂದೇ ವಾರದಲ್ಲಿ’ ಎಂದ ಮಾತಿಗೆ ಬ್ಯಾಂಕ್ ಸಿಬ್ಬಂದಿ ಕೊಟ್ಟ ಅರ್ಥ ವೈವಿಧ್ಯ ಶೇಣಿ ಗೋಪಾಲಕೃಷ್ಣ ಭಟ್ಟರನ್ನೂ ನಿಸ್ಸಂದೇಹವಾಗಿ ಸೋಲಿಸುತ್ತಿತ್ತು. ತಿಂಗಳು ಎರಡಾದರೂ ಯಂತ್ರ ಬರಲಿಲ್ಲ. ಬದಲು ಪ್ರತ್ಯಕ್ಷನಾದ ಇನ್ನೊಬ್ಬ ಮಾಯಗಾರ, ಬಾಬ್ ಕಾರ್ಡ್ಸ್ ಪ್ರತಿನಿಧಿ. ಆ ಪುಣ್ಯ ಕಥೆಗೂ ಮೊದಲು ಐಸಿಐಸಿಐ ಚುಟುಕದಲ್ಲಿ ಮುಗಿಸಿಬಿಡುತ್ತೇನೆ. ಸಾವಿರ ರೂಪಾಯಿಗೆ ಒಂದು ಸ್ವಪಾವತಿ ಚೆಕ್ ಜೊತೆಗೊಂದು ಖಾತೆ ಮುಚ್ಚಲು ಪತ್ರ ಹಿಡಿದುಕೊಂಡು ಹೋದೆ. ಮೊದಲು ಹಣ ತೆಗೆದೆ. ಅನಂತರ ಮ್ಯಾನೇಜರ್ ಎನ್ನುವವರನ್ನು (ಅವರ ಹೊಸ ನಮೂನೆಯ ವ್ಯವಸ್ಥೆಯಲ್ಲಿ ಸಂಸ್ಥೆಯ ವರಿಷ್ಠನೂ ಕನಿಷ್ಠನೂ ಬಯಲಲ್ಲೆ ಇದ್ದು, ಅವರಿವರನ್ನು ಕೇಳಿ ತಿಳಿದುಕೊಳ್ಳಬೇಕಾಯ್ತು) ಭೇಟಿಯಾಗಿ ಪತ್ರ, ಚೆಕ್ ಪುಸ್ತಕ ಕೊಟ್ಟು, ರಸೀದಿ ಪಡೆದು ಬಂದೆ. ಆ ಸಂಸ್ಥೆ ಎಷ್ಟು ದೊಡ್ಡದೆಂದರೆ, ತಿಂಗಳು ಒಂದೋ ಎರಡೋ ಕಳೆದ ಮೇಲೆ ನನ್ನ ಪತ್ರದ ಪರಿಣಾಮ ಸ್ವಲ್ಪ ಆಗಿರಬೇಕು. ಯಾರೋ ದೂರವಾಣಿಸಿ, “ನೀವು ಖಾತೆ ಮುಚ್ಚಿದ್ದು ಸರಿ. ಆದರೆ ಅದಕ್ಕೆ ಸೇವಾಶುಲ್ಕ ಕೊಟ್ಟಿಲ್ಲವಲ್ಲಾ.” ನಾನು ಸ್ವಲ್ಪ ಏರಿಸಿದ ಧ್ವನಿಯಲ್ಲೇ “ನಾನು ಒಂದೇ ವಾರದಲ್ಲಿ ನೀವು ಕೊಡುವ ಕಾರ್ಡುಜ್ಜುವ ಯಂತ್ರಕ್ಕಾಗಿ ಖಾತೇದಾರನಾದವ. ತಿಂಗಳು ಎರಡು ಕಳೆದರೂ ನಿಮ್ಮ ಯಂತ್ರ ಬರಲಿಲ್ಲ ಎನ್ನುವ ಕಾರಣ ಕೊಟ್ಟದ್ದು ಇನ್ನೊಮ್ಮೆ ಓದಿಕೊಳ್ಳಿ” ಎಂದು ಹೇಳಿ ಕುಕ್ಕಿದೆ. ಇನ್ನೂ ದೊಡ್ಡ ತಮಾಷೆ ಕೇಳಿ. ಏಳೆಂಟು ತಿಂಗಳು ಕಳೆದ ಮೇಲೆ (ವರ್ಷ ಎರಡು ಕಳೆದ ಮೇಲೂ ಮತ್ತೊಮ್ಮೆ) ಐಸಿಐಸಿಐನ ಕಾರ್ಡ್ ವಿಭಾಗದಿಂದ ದೂರವಾಣಿಯಲ್ಲಿ “ನಮ್ಮ ಕಾರ್ಡುಜ್ಜುವ ಯಂತ್ರ ಹೇಗಿದೆ” ಎಂಬ ವಿಚಾರಣೆ ಬಂದದ್ದಂತೂ ಬ್ಯಾಂಕಿನ ಕಾರ್ಯಕ್ಷಮತೆಗೆ ಹಿಡಿದ ನಿಮ್ನ ದರ್ಪಣ ಎನ್ನಲೇಬೇಕು!</p>
<p><strong>ಮೂರಕ್ಕೆ ಮುಕ್ತಾಯ ಅಥವಾ ಮೀಸೆ ಮಣ್ಣಾಯ್ತು:</strong> ಬ್ಯಾಂಕ್ ಆಫ್ ಬರೋಡಾ ರಾಷ್ಟ್ರೀಕೃತ ಬ್ಯಾಂಕ್. ಇದು ತನ್ನ ಕಾರ್ಡ್ ವಹಿವಾಟುಗಳನ್ನು ಸ್ವಾಯತ್ತಗೊಳಿಸಿ ಬಾಬ್ ಕಾರ್ಡ್ಸ್ ಎಂಬ ಸಹಸಂಸ್ಥೆಯನ್ನೇ ನಡೆಸುತ್ತಿದೆ. ಅದರ ಮಂಗಳೂರ ಸ್ಥಾನಿಕ ಪ್ರತಿನಿಧಿ (ಅಂದರೆ ಬೆಂಗಳೂರಿನ ಕಛೇರಿಯ ಮಂಗಳೂರು ಕಾರುಭಾರಿ) “ಯಂತ್ರ ಬೇಕೇ ಯಂತ್ರಾಆಆಆ” ಎಂದು ಅದೊಂದು ದಿನ ನನ್ನೆದುರು ಹಾಜರಾದ. ನಾನು ಎಚ್.ಡಿ.ಎಫ್.ಸಿಯ ವ್ಯಥೆ, ಯೂಟೀಐಯ ಭ್ರಮೆ, ಐಸಿಐಸಿಐ ಕಥೆ ಹೇಳಿದೆ. ಈತ ಹೆಚ್ಚು ನಂಬಿಕೆಗೆ ಅರ್ಹನಂತಿದ್ದ. ನಿಯಮಗಳು ಮತ್ತಷ್ಟು ಉದಾರ. ಖಾತೆಯ ಕ್ಯಾತೆಯೇ ಇಲ್ಲ. ಅರ್ಜಿಗೆ ರುಜು ಮಾಡಿ ವಾರದಲ್ಲಿ ಯಂತ್ರ ಹಾಜರ್. ಯಾವುದೇ ಅನ್ಯ ಶುಲ್ಕಗಳಿಲ್ಲದೆ ಕೇವಲ ಶೇಕಡಾ ಒಂದೂವರೆ (೧.೫%) ದರದ ಕಮಿಶನ್ ಹಿಡಿದು, ಪ್ರತಿ ದಿನದ ಕಾರ್ಡ್ ವಹಿವಾಟಿನ ಮೊತ್ತ ಮರು ದಿನದ ಕೊರಿಯರಿನಲ್ಲಿ ಡ್ರಾಫ್ಟ್ ಮೂಲಕ ಪಾವತಿ. ಖಾತ್ರಿಪಡಿಸಿಕೊಂಡೆ &#8211; ಡ್ರಾಫ್ಟ್ ಮತ್ತು ಕೊರಿಯರ್ ವೆಚ್ಚವೂ ಅವರದೇ. ಹೇಗೂ ಐಸಿಐಸಿಐ ಸಂಬಂಧ ಕುದುರಿರಲಿಲ್ಲ, ಮೊದಲೇ ಹೇಳಿದಂತೆ ಮುಚ್ಚಿ ಬಂದೆ. ಬಾಬ್ ಕಾರ್ಡ್ಸ್ ಜೊತೆಗೆ ಒಪ್ಪಂದಕ್ಕೆ ರುಜು ಮಾಡಿದೆ.</p>
<p>ವಾರವೇನು, ಮೂರೇ ದಿನದಲ್ಲಿ ಯಂತ್ರ ಬಂತು. ಸುಮಾರು ಒಂದು ತಿಂಗಳ ಕಾಲ, ಏನೇ ಚಿಲ್ಲರೆ ವಹಿವಾಟು ನಡೆದಿರಲಿ ಮರುದಿನ ಕೊರಿಯರಿನಲ್ಲಿ ಡ್ರಾಫ್ಟ್ ಕರಾರುವಾಕ್ಕಾಗಿ ಹಾಜರ್. ಅದೊಂದು ದಿನ ಆ ಪ್ರತಿನಿಧಿ ಬಂದವನು ಮೊದಲು ನನ್ನೆಲ್ಲಾ ಅನುಕೂಲಗಳನ್ನು ವಿಚಾರಿಸಿಕೊಂಡ. ಅನಂತರ ತಮಗೆ ಬೀಳುವ ಅನಾವಶ್ಯಕ ವೆಚ್ಚ ನಿವಾರಿಸಲು ಬ್ಯಾಂಕ್ ಆಫ್ ಬರೋಡಾದಲ್ಲಿ ಒಂದು ಚಾಲ್ತಿ ಖಾತೆ ತೆರೆಯಬಹುದೇ ಎಂದು ಮನವಿ ಮಾಡಿಕೊಂಡ. ನಾನು ಸಂತೋಷದಲ್ಲೇ ನಡೆಸಿಕೊಟ್ಟೆ, ಸಂಬಂಧ ಗಟ್ಟಿಯಾಯ್ತು. ಬ್ಯಾಂಕಿನಲ್ಲಿ ನಾನು ಎಂದೂ ಖಾತಾ ವಿವರ ತಿಳಿಸುವ ಪತ್ರ ಕೇಳಿ ಪಡೆಯಬಹುದಿತ್ತಾದರೂ ತಿಂಗಳಿಗೊಮ್ಮೆ ಎಂಬ ಶಿಸ್ತು ಬೆಳೆಸಿಕೊಂಡೆ. ಹಾಗೆ ಬಂದ ಪತ್ರವನ್ನು ಕೂಲಂಕಷವಾಗಿ ತನಿಖೆಗೂ ಒಳಪಡಿಸುತ್ತಿದ್ದೆ. ತೀರಾ ಅಪರೂಪಕ್ಕೆ ಒಂದೆರಡು ತಪ್ಪಾದದ್ದಿತ್ತು. ಆದರೆ ನಾನು (ಬ್ಯಾಂಕ್ ಮೂಲಕ) ಅದನ್ನು ತೋರಿಸಿಕೊಟ್ಟಾಗ ಒಂದೆರಡೇ ದಿನಗಳಲ್ಲಿ ಕಾರ್ಡ್ಸ್ ವಿಭಾಗ ಕ್ಷಮಾಪೂರ್ವಕವಾಗಿ ತಿದ್ದಿಕೊಂಡದ್ದೂ ಆಗಿತ್ತು. ಸುಮಾರು ಎಂಟು ತಿಂಗಳನಂತರ, ಎಲ್ಲರಿಗೂ ತಿಳಿದಂತೆ ಕೇಂದ್ರ ಸರಕಾರದ ವಿತ್ತ ಸಚಿವಾಲಯ ಬ್ಯಾಂಕ್ ಸೇವಾಶುಲ್ಕಗಳ ಮೇಲೊಂದು ಕರ ಹೇರಿತು. ಸಹಜವಾಗಿ ಬಾಬ್ ಕಾರ್ಡ್ಸ್ ಅದನ್ನು ಗಿರಾಕಿಗಳ ಮೇಲೆ ವರ್ಗಾಯಿಸುವ ಅನಿವಾರ್ಯತೆಯನ್ನು ಪತ್ರ ಮೂಲಕ ನಿವೇದಿಸಿಕೊಂಡಿತು. ಅದರಿಂದ ನನ್ನ ಶೇಕಡಾ ಒಂದೂವರೆಯ ದರ ಸುಮಾರು ಒಂದೂ ಮುಕ್ಕಾಲಕ್ಕೆ ಏರುವುದಿತ್ತು. ಅದನ್ನೂ ನಾನು ಸಹಜವಾಗಿಯೇ ಒಪ್ಪಿ ಅನುಮತಿ ಪತ್ರ ರುಜುಮಾಡಿಕೊಟ್ಟೆ. ಎಲ್ಲಾ ಸುಮಾರು ಎರಡು ವರ್ಷಕಾಲ ಮಧುರವಾಗಿಯೇ ನಡೆದಿತ್ತು. ಆದರೆ. . .</p>
<p>ಅದೊಂದು ತಿಂಗಳ ಖಾತಾ ವಿವರದಲ್ಲಿ ಸುಮಾರು ಒಂದು ಸಾವಿರದ ಆರ್ನೂರಾ ಐವತ್ನಾಲ್ಕು ರೂಪಾಯಿಯಷ್ಟು ಹೆಚ್ಚುವರಿ ಕಡಿತವಾಗಿತ್ತು. ಬ್ಯಾಂಕ್ ಮೂಲಕ ನನ್ನ ವಿಚಾರಣೆಗೆ ಪ್ರತಿಕ್ರಿಯೆ ಬರಲಿಲ್ಲ. ಆ ವೇಳೆಗೆ ಮಂಗಳೂರು ಸ್ಥಾನಿಕ ಪ್ರತಿನಿಧಿ ಹುದ್ದೆಯನ್ನೇ ಕಾರ್ಡ್ಸ್ ವಿಭಾಗ ವಜಾ ಮಾಡಿರುವುದೂ ನನಗೆ ತಿಳಿಯಿತು. ಹಿಂದೆಲ್ಲಾ ನನ್ನ ಮಿಂಚಂಚೆಗೆ ಸ್ಪಂದಿಸುತ್ತಿದ್ದ ಬೆಂಗಳೂರು ವಿಭಾಗ ಈಗ ಯಾಕೋ ಜಡವಾಗಿದೆ ಎಂದನ್ನಿಸಿತು. ವಿ(ದ್ಯುನ್ಮಾನ) ಅಂಚೆಯಾದ್ದರಿಂದ ವಿಳಂಬ, ಅನಿಶ್ಚಿತತೆ ಮತ್ತು ಪ್ರತ್ಯೇಕ ವೆಚ್ಚದ ಭಯವಿಲ್ಲದೆ ನಾನು ವಾರ, ಎಂಟು ದಿನಕ್ಕೊಮ್ಮಯಂತೆ ಮೂರು ನೆನಪಿನೋಲೆಗಳನ್ನು ಬರೆಯುತ್ತಾ ಹೋದೆ. ಪತ್ರದಿಂದ ಪತ್ರಕ್ಕೆ (ಸುಸಂಸ್ಕೃತ ಚೌಕಟ್ಟಿನೊಳಗೇ) ಭಾಷೆಯನ್ನು ಕಟುಗೊಳಿಸುತ್ತಾ ಹೋದೆ. ನಾಲ್ಕೋ ಐದನೆಯದೋ ಪತ್ರದ ವೇಳೆಗೆ ಬಾಬ್ ಕಾರ್ಡ್ಸ್, ಬೆಂಗಳೂರಿನಿಂದ ಒಂದು ಹೆಣ್ಣು ಧ್ವನಿ ದೂರವಾಣಿ ಕರೆ ಮಾಡಿತು. ಅದು ಸರಳವಾಗಿ ‘ನಮ್ಮ ಲೆಕ್ಕ ತಪ್ಪಿಲ್ಲ. ಅದು ಪರಿಷ್ಕೃತ ಕಮಿಶನ್ ದರದ ಪ್ರಕಾರ ನಿಮ್ಮ ಹಳೆಬಾಕಿ ವಸೂಲಿ’ ಎಂದಿತು. ನಾನು “ಹಾಗಾದ್ರೆ ಆ ದರ ಎಷ್ಟು? ನನಗೆ ಮೊದಲೇ ತಿಳುವಳಿಕೆ ನೀಡಿಲ್ಲ ಯಾಕೆ? ನನ್ನ ಪತ್ರ ಮತ್ತು ಮೂರು ನೆನಪಿನೋಲೆಗಳಷ್ಟು ದೀರ್ಘ ವಿಳಂಬ ಯಾಕೆ?” ಇತ್ಯಾದಿ ಪ್ರಶ್ನಾಪ್ರವಾಹಕ್ಕೆ ಆಕೆ ಕೊಚ್ಚಿ ಹೋದಳು. “ದಯವಿಟ್ಟು ನಿಮ್ಮ ದೂರಿನ ಮುದ್ರಿತ ಪ್ರತಿ ಕಳಿಸಿಕೊಡಿ” ಎಂದು ತಲೆ ಉಳಿಸಿಕೊಂಡಳು.</p>
<p>ಸರಿ, ಎಲ್ಲವನ್ನೂ ಕ್ರೋಢೀಕರಿಸಿ ಪತ್ರ ಬರೆದು, ಕೊರ್ಯರಿನಲ್ಲಿ ಕಳಿಸಿಕೊಟ್ಟೆ. ಬೆನ್ನಿಗೆ ಕಾಲಕಾಲಕ್ಕೆ ಎರಡು ವಿ-ಅಂಚೆಯ ನೆನಪಿನೋಲೆಯನ್ನೂ ಕಳಿಸಿದ ಮೇಲೆ ಒಂದು ದಾಖಲೆ ಎನ್ನಿಸಿಕೊಳ್ಳಲು ಯೋಗ್ಯವಾಗದ ಸ್ಥಿತಿಯ ಒಂದು ಪತ್ರ ಬಂತು. ಅದರಲ್ಲಿನ ಸಾರಾಂಶ &#8211; ನನ್ನಿಂದ ‘ಕನಿಷ್ಠ ಲಾಭದಾಯಕ ವಹಿವಾಟು’ (MPT = minimum profitable transaction) ಆಗುತ್ತಿಲ್ಲವಾದ್ದರಿಂದ ತಿಂಗಳ ಬಾಡಿಗೆ ವಿಧಿಸಿದ್ದಾರೆ. ಈ ಕ.ಲಾ.ವದ ಪ್ರಸ್ತಾಪವೇ ನನಗೆ ಹೊಸತು. ಇದರ ದರ ಎಷ್ಟು? ನನಗೆ ಮೊದಲೇ ತಿಳುವಳಿಕೆ ನೀಡಿಲ್ಲ ಯಾಕೆ? ನನ್ನ ಪತ್ರ ಮತ್ತು ಮೂರು ನೆನಪಿನೋಲೆಗಳಷ್ಟು ದೀರ್ಘ ವಿಳಂಬ ಯಾಕೆ? ಇತ್ಯಾದಿ ಮುದ್ರಿತ ಪತ್ರವನ್ನೂ ಜೊತೆಗೆ ವಿ-ಪ್ರತಿಯನ್ನೂ ಕೂಡಲೇ ರವಾನಿಸಿದೆ. ಅವರಿಂದ ವಿ-ಪತ್ರ ಮೂಲಕ ಅ-ಸ್ಪಷ್ಟನೆ ಬಂತು. ‘ಮಾಸಿಕ ಬಾಡಿಗೆ ಅಥವಾ ಏರಿದ ಕಮಿಶನ್ ದರದಲ್ಲಿ ಆಯ್ಕೆ ನಿಮ್ಮದು.’ ನಾನು ಉತ್ತರದಲ್ಲಿ, ಪ್ರಸ್ತುತ ಸಮಸ್ಯೆಯನ್ನು ಬಗೆಹರಿಸದೆ ಮುಂದಿನ ಯೋಜನೆಯನ್ನು ನನ್ನೆದುರು ಒಡ್ಡುವುದು ನ್ಯಾಯವಲ್ಲ. ನನಗೆ ತಿಳುವಳಿಕೆ ನೀಡದೆ ವಸೂಲು ಮಾಡಿದ್ದರಿಂದ ವಾಪಾಸು ಬರಬೇಕಾದ ರೂ ೧೬೫೪, ಅದಕ್ಕೆ ಇಷ್ಟು ಕಾಲದ ಸರಳ ಬಡ್ಡಿ, ಪತ್ರ ವ್ಯವಹಾರದ ಖರ್ಚು ಮತ್ತು ವ್ಯಾಪಾರ ನಷ್ಟಗಳಿಗೆ ಹಕ್ಕೊತ್ತಾಯ ಮಂಡಿಸಿದೆ. ಇಲ್ಲವಾದರೆ ಯಂತ್ರ ಮರಳಿಸಿ, ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದೂ ಸೇರಿಸಿದೆ. ಇದರ ಯಥಾ ಪ್ರತಿಯನ್ನು ಮುಂಬೈ ಪ್ರಧಾನ ಕಛೇರಿಗೂ ಕಳಿಸಿದೆ.</p>
<p>ಬಾಬ್ ಕಾರ್ಡ್ಸ್ ಪರವಾಗಿ ಯಂತ್ರ ಒದಗಿಸಿ, ನಿರ್ವಹಣೆ ಮಾಡುತ್ತಿದ್ದ ಏಜನ್ಸಿ (ಎಚ್.ಡಿ.ಎಫ಼್.ಸಿಗೂ ಇವರೇ!) ಒಮ್ಮೆಲೇ ಬಂದು ಯಂತ್ರ ಕಳಚಿಕೊಂಡು ಒಯ್ದರು. ಈ ವ್ಯಾಜ್ಯ ಸುರುವಾದಂದಿನಿಂದ ನಾನದರ ಬಳಕೆ ನಿಲ್ಲಿಸಿದ್ದೆ. ಆ ಯಂತ್ರದಿಂದ ನನಗೆ ಬೇರೇನೂ ಉಪಯೋಗವಿಲ್ಲದಿದ್ದರೂ ನನಗೆ ಬರಬೇಕಾದ ಮೊತ್ತಕ್ಕೆ ಅಡವಿಟ್ಟುಕೊಳ್ಳಬಹುದು ಎಂದು ಯೋಚಿಸಿದರೋ ಏನೋ! ಮತ್ತೆ, ಮತ್ತೆ ಮೌನ.</p>
<p>ಬ್ಯಾಂಕ್ ಬಳಕೆದಾರರ ಹಿತರಕ್ಷಣೆಗಾಗಿರುವ ಸಂಸ್ಥೆ &#8211; ಬ್ಯಾಂಕರ್ಸ್ ಓಂಬುಡ್ಸ್‌ಮನ್ ವಿಳಾಸ ಗೆಳೆಯ ಅಡ್ಡೂರು ಕೃಷ್ಣರಾವ್ ಮೂಲಕ ಪತ್ತೆ ಮಾಡಿ ಬರೆದೆ. ನನ್ನ ಹತಾಶೆಗೆ ಗಡಿಯಿಲ್ಲದಂತೆ ಓಂಬುಡ್ಸ್‌ಮನ್ನಿಂದ ಉತ್ತರ ತರಿಸಲು ಮತ್ತೆ ಕೆಲವು ನೆನಪಿನೋಲೆಗಳು ಹೋಗಬೇಕಾಯ್ತು. ಹಾಗೂ ಬಂದದ್ದೇನು? ಬೇಕೋ ಬೇಡವೋ ಎಂಬಂತೆ ಸಾದಾ ಅಂಚೆಯಲ್ಲಿ ಒಂದು ಚುಟುಕು &#8211; ಓಂಬುಡ್ಸ್‌ಮನ್ ಸಂವಿಧಾನದ (ಅದು ಎಲ್ಲಾ ಬ್ಯಾಂಕ್ ಬಳಕೆದಾರರೂ ತಿಳಿದಿರತಕ್ಕದ್ದು ಎಂಬ ಧ್ವನಿಯಿತ್ತು) ಯಾವುದೋ ಪರಿಚ್ಛೇದದ ಎಷ್ಟನೆಯದೋ ಕಲಮಿನಂತೆ ನನ್ನ ಮನವಿ ತಿರಸ್ಕೃತವಾಗಿತ್ತು! ನಾನು ಮತ್ತೆ ಕೆಲವು ಬ್ಯಾಂಕ್ ಮಿತ್ರರನ್ನು ಒಗಟು ಬಿಡಿಸಲು ಕೇಳಿಕೊಂಡೆ &#8211; ಅವರೆಲ್ಲ ಪ್ರಾಮಾಣಿಕವಾಗಿ ಅಸಹಾಯಕರು. ನಾನು ಮುಂದೇನು ಮಾಡಬೇಕೆಂಬ ಅರಿವೇ ಇಲ್ಲದೆ ಕುಳಿತಿದ್ದೆ. ಓಂಬುಡ್ಸ್‌ಮನ್ನಿನಿಂದ ಬಹಳ ನಿಧಾನವಾಗಿ ಇನ್ನೊಂದೇ ಸ್ವಲ್ಪ ಉದ್ದದ ಪತ್ರ ಬಂತು. ಸಾರಾಂಶ &#8211; ಪೂರ್ವ ನಿದರ್ಶನಗಳು ಇಲ್ಲದ ವ್ಯಾಜ್ಯವನ್ನು ಓಂಬುಡ್ಸ್‌ಮನ್ ತಿರಸ್ಕರಿಸಬಹುದು. ಸ್ವಾಯತ್ತ ಸಂಸ್ಥೆ ಬಾಬ್ ಕಾರ್ಡ್ಸ್ ಬ್ಯಾಂಕ್ ಪರಿಮಿತಿಯಲ್ಲಿ ಬರುವುದೂ ಇಲ್ಲ ಎನ್ನುವುದನ್ನು ನನಗಿನ್ಯಾರೋ ತಿಳಿಸಿದ ಮೇಲೆ (ಇದರ ನಿಜಾನಿಜಗಳನ್ನು ನಾನು ಶ್ರುತಪಡಿಸಿಕೊಂಡಿಲ್ಲ) ನನಗುಳಿದದ್ದು ಒಂದೇ ದಾರಿ &#8211; ನ್ಯಾಯಾಲಯ. ಆದರೆ ಇದಕ್ಕೆ ಬೇಕಾದ ಸಮಯ, ಹಣ (೧೬೫೪ಕ್ಕೂ ಎಷ್ಟೋ ಪಟ್ಟು ಮಿಗಿಲು) ಮತ್ತು ಎಲ್ಲಕ್ಕೂ ಮುಖ್ಯವಾಗಿ ತಾಳ್ಮೆ ನನಗಿಲ್ಲವಾದ್ದರಿಂದ ಕೈಚೆಲ್ಲಿದ್ದೇನೆ. ಜನತಾ ನ್ಯಾಯಾಲಯವೆಂದು ಬ್ಲಾಗಿಗೇರಿಸಿದ್ದೇನೆ. ಇಲ್ಲಿ ವೈಯಕ್ತಿಕವಾಗಿ ನನ್ನ ಅಹವಾಲಿಗೆ ತೀರ್ಮಾನ, ಪರಿಹಾರ ಕೇಳುತ್ತಿಲ್ಲ. ಅನ್ವಯಿಸಿಕೊಳ್ಳಬಲ್ಲರಿಗೆ ನನ್ನ ಸೋಲು ಯಶಸ್ಸಿನ ದಾರಿಯಲ್ಲಿ ‘ಪೂರ್ವ ನಿದರ್ಶನ’ವಾಗಿ ದಕ್ಕುವುದಿದ್ದರೆ ನಾನು ಧನ್ಯ; ಇದೂ ಒಂದು ಲೆಕ್ಕದಲ್ಲಿ ಸಾಮಾಜಿಕ ನ್ಯಾಯವೇ.</p>
<br />  <a rel="nofollow" href="http://feeds.wordpress.com/1.0/gocomments/athree.wordpress.com/534/"><img alt="" border="0" src="http://feeds.wordpress.com/1.0/comments/athree.wordpress.com/534/" /></a> <a rel="nofollow" href="http://feeds.wordpress.com/1.0/godelicious/athree.wordpress.com/534/"><img alt="" border="0" src="http://feeds.wordpress.com/1.0/delicious/athree.wordpress.com/534/" /></a> <a rel="nofollow" href="http://feeds.wordpress.com/1.0/gofacebook/athree.wordpress.com/534/"><img alt="" border="0" src="http://feeds.wordpress.com/1.0/facebook/athree.wordpress.com/534/" /></a> <a rel="nofollow" href="http://feeds.wordpress.com/1.0/gotwitter/athree.wordpress.com/534/"><img alt="" border="0" src="http://feeds.wordpress.com/1.0/twitter/athree.wordpress.com/534/" /></a> <a rel="nofollow" href="http://feeds.wordpress.com/1.0/gostumble/athree.wordpress.com/534/"><img alt="" border="0" src="http://feeds.wordpress.com/1.0/stumble/athree.wordpress.com/534/" /></a> <a rel="nofollow" href="http://feeds.wordpress.com/1.0/godigg/athree.wordpress.com/534/"><img alt="" border="0" src="http://feeds.wordpress.com/1.0/digg/athree.wordpress.com/534/" /></a> <a rel="nofollow" href="http://feeds.wordpress.com/1.0/goreddit/athree.wordpress.com/534/"><img alt="" border="0" src="http://feeds.wordpress.com/1.0/reddit/athree.wordpress.com/534/" /></a> <img alt="" border="0" src="http://stats.wordpress.com/b.gif?host=athreebook.com&amp;blog=3999388&amp;post=534&amp;subd=athree&amp;ref=&amp;feed=1" width="1" height="1" />]]></content:encoded>
			<wfw:commentRss>http://athreebook.com/2010/09/08/%e0%b2%ac%e0%b3%8d%e0%b2%af%e0%b2%be%e0%b2%82%e0%b2%95%e0%b3%8d-%e0%b2%ac%e0%b3%8d%e0%b2%af%e0%b2%be%e0%b2%82%e0%b2%95%e0%b3%8d-%e0%b2%ad%e0%b3%8d%e0%b2%af%e0%b2%be%e0%b2%82%e0%b2%98%e0%b3%8d/feed/</wfw:commentRss>
		<slash:comments>2</slash:comments>
	
		<media:content url="" medium="image">
			<media:title type="html">Abhaya</media:title>
		</media:content>

		<media:content url="http://onluker.com/wp-content/uploads/2008/10/real-fake-indian-currency-2.jpg" medium="image" />

		<media:content url="http://www.thefinancialphysician.com/blog/wp-content/uploads/2009/10/citi_professional_card1.jpg" medium="image" />

		<media:content url="http://www.vermontfbla.com/wp-content/uploads/2010/07/credit-card.jpg" medium="image" />

		<media:content url="http://www.stockmarkettipz.info/wp-content/uploads/2010/05/credit-card-image.jpg" medium="image" />
	</item>
		<item>
		<title>ಮಹಾಲಿಂಗರು ಕಂಡ ಸಂಜೀವರ ಸಾಹಸ</title>
		<link>http://athreebook.com/2010/08/30/30august2010/</link>
		<comments>http://athreebook.com/2010/08/30/30august2010/#comments</comments>
		<pubDate>Mon, 30 Aug 2010 02:02:11 +0000</pubDate>
		<dc:creator>abhayaftii</dc:creator>
				<category><![CDATA[ಯಕ್ಷಗಾನ]]></category>
		<category><![CDATA[ಹೀಗೆ ಒಂದಿಷ್ಟು]]></category>

		<guid isPermaLink="false">http://athreebook.com/?p=530</guid>
		<description><![CDATA[ಚಿಕ್ಕಾಸಿನ ಕೂಲಿಗೆ ಯಾರ್ಯಾರದೋ ಕಾರು ತೊಳೆಯುತ್ತಿದ್ದ ಹುಡುಗನಿಗೆ ಸಮೀಪದ ದೇವಾಲಯದ ವಠಾರದಿಂದ ‘ಯಕ್ಷ ಸಂಗೀತ’ಕೇಳಿದ್ದು, ಆಕರ್ಷಿತನಾದ್ದು ಆಶ್ಚರ್ಯವಲ್ಲ. ಹುಡುಗನ ಕುತೂಹಲ ಕಮರದಂತೆ ಕಲಿಸಿಕೊಟ್ಟ ಗುರು, ಕಿವಿಗೆ ಬಿದ್ದದ್ದು ಮನಸ್ಸು ದೇಹವನ್ನೇ ಏನು ಇಂದು ‘ಬೆಳೆದು ನಿಂತ ಹುಡುಗನ’ ಬದುಕನ್ನೇ ಆವರಿಸಿದ್ದು ಆಶ್ಚರ್ಯ. ಅಂಥವರು ರೂಢಿಯ ಜಾಡಿನಲ್ಲಿ ಮಾತಿನ ಗಾಡಿ ಹೊಡೆಯುವುದಾಗಲೀ ದೇಹದಂಡನೆಯಲ್ಲಿ ನಿರ್ವಂಚನೆಯ ಕಸುಬುಗಾರಿಕೆ ತೋರುವುದಾಗಲೀ &#8230; <a href="http://athreebook.com/2010/08/30/30august2010/">Continue reading <span class="meta-nav">&#8594;</span></a><img alt="" border="0" src="http://stats.wordpress.com/b.gif?host=athreebook.com&amp;blog=3999388&amp;post=530&amp;subd=athree&amp;ref=&amp;feed=1" width="1" height="1" />]]></description>
			<content:encoded><![CDATA[<p><a href="http://lh4.ggpht.com/_XLLsV3Btn2I/THsPJDhYeUI/AAAAAAAAFjA/_YZUT9DI3XI/s720/Mahalinga%20Sanjeeva%20%283%29.jpg"><img class="alignleft" src="http://lh4.ggpht.com/_XLLsV3Btn2I/THsPJDhYeUI/AAAAAAAAFjA/_YZUT9DI3XI/s720/Mahalinga%20Sanjeeva%20%283%29.jpg" alt="" width="343" height="229" /></a>ಚಿಕ್ಕಾಸಿನ ಕೂಲಿಗೆ ಯಾರ್ಯಾರದೋ ಕಾರು ತೊಳೆಯುತ್ತಿದ್ದ ಹುಡುಗನಿಗೆ ಸಮೀಪದ ದೇವಾಲಯದ ವಠಾರದಿಂದ ‘ಯಕ್ಷ ಸಂಗೀತ’ಕೇಳಿದ್ದು, ಆಕರ್ಷಿತನಾದ್ದು ಆಶ್ಚರ್ಯವಲ್ಲ. ಹುಡುಗನ ಕುತೂಹಲ ಕಮರದಂತೆ ಕಲಿಸಿಕೊಟ್ಟ ಗುರು, ಕಿವಿಗೆ ಬಿದ್ದದ್ದು ಮನಸ್ಸು ದೇಹವನ್ನೇ ಏನು ಇಂದು ‘ಬೆಳೆದು ನಿಂತ ಹುಡುಗನ’ ಬದುಕನ್ನೇ ಆವರಿಸಿದ್ದು ಆಶ್ಚರ್ಯ. ಅಂಥವರು ರೂಢಿಯ ಜಾಡಿನಲ್ಲಿ ಮಾತಿನ ಗಾಡಿ ಹೊಡೆಯುವುದಾಗಲೀ ದೇಹದಂಡನೆಯಲ್ಲಿ ನಿರ್ವಂಚನೆಯ ಕಸುಬುಗಾರಿಕೆ ತೋರುವುದಾಗಲೀ ಇದು ಮೊದಲಲ್ಲ. ಆದರೆ ಆ ಅಭಿವ್ಯಕ್ತಿಯ ಶಿಲ್ಪಕ್ಕೆ ಕುಂದು ಬಾರದಂತೆ ಮರೆತುಹೋದ ಕುಸುರಿಯನ್ನು ಹುಡುಕಿ ತಂದು ಸೇರಿಸಿ, ಇವರಂತೆ ಭೂರಿ ಸಮಾರಾಧನೆ ನಡೆಸಿದವರು ಹಿಂದಿಲ್ಲ (ಮುಂದೆ ಇರಲಾರದು!) ಬಾಲ್ಯದಲ್ಲಿ ಅಕ್ಷರಜ್ಞಾನ ಅರ್ಥಾತ್ ಕಲಿಕೆಯ ಔಪಚಾರಿಕ ದ್ವಾರವನ್ನು ಅಷ್ಟಾಗಿ ಹಾದುಹೋಗಲಾಗದವರೂ ಲೋಕ ಶಿಕ್ಷಣದಲ್ಲಿ, ಕಾಲಪ್ರವಾಹದ ಸವಕಳಿಯಲ್ಲಿ ಗುರುವಾಗಿ ಸಂಪನ್ಮೂಲ ವ್ಯಕ್ತಿಯಾಗಿ ತೋರುವುದು ವಿಶೇಷವಲ್ಲ. ಇಂದೂ ಹೊಟ್ಟೆಪಾಡು ಮುಖ್ಯವಾಗಿ ಯಕ್ಷಶಿಕ್ಷಣಕ್ಕೆ ಬಂದು, ಅಕ್ಷರಕ್ಕೆರವಾಗುವ ಎಳೆಜೀವಗಳಿಗೆ ಸಂಜೀವವಾಗುವ, ಯಕ್ಷಶಿಕ್ಷಣದೊಡನೆ ಔಪಚಾರಿಕ ವಿದ್ಯೆಯನ್ನೂ ಒದಗಿಸುವ ಮಹಾಗುರುತನ ಗುರುತರವಾದದ್ದು, ಸದ್ಯ ಭಾರತದ ಸಂದರ್ಭದಲ್ಲಿ ಹೀಗೊಂದು ಸಾಧನೆಯನ್ನು ಕಾಣಿಸುತ್ತಿರುವ ಎರಡನೆಯ ಸಂಸ್ಥೆ -  ಉಡುಪಿಯ ಎಂ.ಜಿ.ಎಂ ಕಾಲೇಜಿನಾಶ್ರಯದ ಯಕ್ಷಗಾನ ಕೇಂದ್ರ (ವರ್ತಮಾನದ ಸಮರ್ಥ ನಿರ್ದೇಶಕ ಪ್ರೊ| ಹೆರಂಜೆ ಕೃಷ್ಣ ಭಟ್). ಕೇಂದ್ರದ ಒಡನಾಡಿದ ವ್ಯಕ್ತಿಶಕ್ತಿಗಳು ಬಹುವರ್ಣಮಯ. ಅದರ ಹುಟ್ಟು ಆಕಸ್ಮಿಕವೇ ಆದರೂ ವಿಕಾಸದಲ್ಲಿ ಇಂದು ಮುಟ್ಟಿದೆ ಸ್ವರ್ಣಪಥ. ಅದರ ಇತಿಹಾಸಕ್ಕೆ ಕೂರುವ ದೂಳು ತೊಳೆಯುತ್ತ, ಕಿಲುಬು ಕಳೆಯುತ್ತ, ‘ಗುರು’ತು ಮರೆತರೂ ಗುರುತು ಉಳಿಯುವ ಕೆಲಸ ಮಾಡುತ್ತಿರುವವರೇ (‘ಕಾರು ತೊಳೆದ ಹುಡುಗ’) ಬನ್ನಂಜೆ ಸಂಜೀವ ಸುವರ್ಣ. ಕೌಟುಂಬಿಕ ಹಿನ್ನೆಲೆ, ಸಂಸ್ಕಾರ ಯಕ್ಷಗಾನ ಕೇಂದ್ರದ ಪ್ರಾಂಶುಪಾಲ ಸಂಜೀವರಿಗೆ ನೂಕು ಬಲ ಕೊಟ್ಟಿಲ್ಲ. ಸಾಮಾಜಿಕ ವರ್ಗ ವಿಭಜನೆಗಳು ಸುವರ್ಣರಿಗೆ ಇಂದಿಗೂ ಅನುಕೂಲವಾಗಿರುವುದು ಸಂಶಯಾಸ್ಪದವೇ (ಅವರು ಎಲ್ಲೂ ಹೇಳಿಕೊಳ್ಳರು.). ಆದರೆ ಬೆಸ್ತರವಳ ಮಗ ‘ವೇದ’ಗ್ರಹಣ ಮಾಡಿದಂತೆ, ಕಾಡಬೇಡ ಮಹಾಕವಿಯಾದಂತೆ ಯಕ್ಷಲೋಕದಲ್ಲಿಂದು ಅದ್ವಿತೀಯ (ನಿರ್ವಿವಾದಿತ) ಮಹಾಗುರುವೆಂದರೆ ಬನ್ನಂಜೆ ಸಂಜೀವ ಸುವರ್ಣ.</p>
<p><span id="more-530"></span><a href="http://lh4.ggpht.com/_XLLsV3Btn2I/THsPJcATSlI/AAAAAAAAFjE/cN0F0xQgAZY/s720/Mahalinga%20Sanjeeva%20%284%29.jpg"><img class="alignleft" src="http://lh4.ggpht.com/_XLLsV3Btn2I/THsPJcATSlI/AAAAAAAAFjE/cN0F0xQgAZY/s720/Mahalinga%20Sanjeeva%20%284%29.jpg" alt="" width="343" height="229" /></a>ಗೆಳೆಯ ಮಹಾಲಿಂಗ ಭಟ್ಟರು ಸಂತ ಅಲೋಶಿಯಸ್ ಸಂಜೆ ಕಾಲೇಜಿನ ಕನ್ನಡ ಅಧ್ಯಾಪಕ, ಕಾಸರಗೋಡುವಲಯದ ಸಣ್ಣ ಕತೆಗಳ ಬಗ್ಗೆ ಪ್ರಾಮಾಣಿಕ ಸಂಶೋಧನೆ ನಡೆಸಿದ ಪದವೀಧರ (ಲೋಕರೂಢಿಯಂತೆ ನಾನು ಅವರ ಹೆಸರಿನ ಮುಂದೆ ಡಾ| ಹಚ್ಚಬೇಕಿತ್ತು! ನನ್ನ ಲೆಕ್ಕಕ್ಕೆ ಗೆಳೆತನ ದೊಡ್ಡದು), ಹೊಸದಿಗಂತದಲ್ಲಿ ಸಂಗೀತದ ಇತಿಹಾಸ ಕುರಿತಂತೆ ವಿಶಿಷ್ಟ ಅಂಕಣವನ್ನೂ ನಡೆಸುವುದರೊಡನೆ ತನ್ನ ಪ್ರಜಾವಾಣಿಯ ಕರಾವಳಿ ವಲಯಕ್ಕಷ್ಟೇ ಸೀಮಿತ ಅಂಕಣದಲ್ಲಿ ಮೊನ್ನೆ ಈ ವಿಶ್ವವ್ಯಾಪೀ ಬನ್ನಂಜೆ  ಸಂಜೀವ ಸುವರ್ಣರ ಹೊಸ ಸಾಹಸವನ್ನು ಹಾಡಿಹೊಗಳಿದ್ದಾರೆ. (ಸಹಜವಾಗಿ ಮತ್ತೆ ನನ್ನ ಆಕ್ರೋಶವರ್ಧನೆಯಾಗಿದೆ. ಉಪಶಮನಕ್ಕೆ) ಅವರ ಅನುಮತಿ ಮತ್ತು ಪ್ರಜಾವಾಣಿಯ ಕೃಪೆಯೊಡನೆ ಅದನ್ನು ಮತ್ತೆ ನನ್ನ ಬ್ಲಾಗ್ ಮಿತಿಯಲ್ಲಾದರೂ ಪ್ರಚುರಿಸಲು ಹೆಮ್ಮೆ ಪಡುತ್ತೇನೆ. ಪ್ರಜಾವಾಣಿಯ ಸ್ಥಳಾವಕಾಶಕ್ಕೆ ಹೊಂದಿಕೊಳ್ಳುವಂತೆ ಗಿಡಿದ ಚಿತ್ರಗಳನ್ನು ಹೆಚ್ಚಿನ ಚಿತ್ರಗಳನ್ನು ನಿಮ್ಮ ಹೆಚ್ಚಿನ ಸಂತೋಷಕ್ಕಾಗಿ ಪ್ರತ್ಯೇಕ ಕೊಟ್ಟಿದ್ದೇನೆ. ಎಂದಿನಂತೆ ನಿಮ್ಮ ಬರಹದ ಮೆಚ್ಚುಗೆಗಳಿಗೆ ಕೆಳಗೆ ಅಂಕಣವಿದೆ. ಮಾತಿನ ಮೆಚ್ಚುಗೆಗೆ, ಹೆಚ್ಚಿನ ವಿವರಗಳಿಗೆ ಮತ್ತು  ಉತ್ಸಾಹವಿದ್ದರೆ ಪಾಲುಗೊಳ್ಳಲು ಸಂಜೀವರ ಚರವಾಣಿ: 9845843603, ವಿಳಾಸ: ಪ್ರಾಂಶುಪಾಲರು, ಯಕ್ಷಗಾನ ಕೇಂದ್ರ, ಎಂ.ಜಿ.ಎಂ ಕಾಲೇಜು, ಉಡುಪಿ ೫೭೬೧೦೨</p>
<p><a href="http://lh5.ggpht.com/_XLLsV3Btn2I/THsPIUhIJpI/AAAAAAAAFi8/j4jDFaGTnHc/Mahalinga%20Sanjeeva%20%282%29.jpg"><img class="aligncenter" src="http://lh5.ggpht.com/_XLLsV3Btn2I/THsPIUhIJpI/AAAAAAAAFi8/j4jDFaGTnHc/Mahalinga%20Sanjeeva%20%282%29.jpg" alt="" width="523" height="895" /></a></p>
<br />  <a rel="nofollow" href="http://feeds.wordpress.com/1.0/gocomments/athree.wordpress.com/530/"><img alt="" border="0" src="http://feeds.wordpress.com/1.0/comments/athree.wordpress.com/530/" /></a> <a rel="nofollow" href="http://feeds.wordpress.com/1.0/godelicious/athree.wordpress.com/530/"><img alt="" border="0" src="http://feeds.wordpress.com/1.0/delicious/athree.wordpress.com/530/" /></a> <a rel="nofollow" href="http://feeds.wordpress.com/1.0/gofacebook/athree.wordpress.com/530/"><img alt="" border="0" src="http://feeds.wordpress.com/1.0/facebook/athree.wordpress.com/530/" /></a> <a rel="nofollow" href="http://feeds.wordpress.com/1.0/gotwitter/athree.wordpress.com/530/"><img alt="" border="0" src="http://feeds.wordpress.com/1.0/twitter/athree.wordpress.com/530/" /></a> <a rel="nofollow" href="http://feeds.wordpress.com/1.0/gostumble/athree.wordpress.com/530/"><img alt="" border="0" src="http://feeds.wordpress.com/1.0/stumble/athree.wordpress.com/530/" /></a> <a rel="nofollow" href="http://feeds.wordpress.com/1.0/godigg/athree.wordpress.com/530/"><img alt="" border="0" src="http://feeds.wordpress.com/1.0/digg/athree.wordpress.com/530/" /></a> <a rel="nofollow" href="http://feeds.wordpress.com/1.0/goreddit/athree.wordpress.com/530/"><img alt="" border="0" src="http://feeds.wordpress.com/1.0/reddit/athree.wordpress.com/530/" /></a> <img alt="" border="0" src="http://stats.wordpress.com/b.gif?host=athreebook.com&amp;blog=3999388&amp;post=530&amp;subd=athree&amp;ref=&amp;feed=1" width="1" height="1" />]]></content:encoded>
			<wfw:commentRss>http://athreebook.com/2010/08/30/30august2010/feed/</wfw:commentRss>
		<slash:comments>12</slash:comments>
	
		<media:content url="" medium="image">
			<media:title type="html">Abhaya</media:title>
		</media:content>

		<media:content url="http://lh4.ggpht.com/_XLLsV3Btn2I/THsPJDhYeUI/AAAAAAAAFjA/_YZUT9DI3XI/s720/Mahalinga%20Sanjeeva%20%283%29.jpg" medium="image" />

		<media:content url="http://lh4.ggpht.com/_XLLsV3Btn2I/THsPJcATSlI/AAAAAAAAFjE/cN0F0xQgAZY/s720/Mahalinga%20Sanjeeva%20%284%29.jpg" medium="image" />

		<media:content url="http://lh5.ggpht.com/_XLLsV3Btn2I/THsPIUhIJpI/AAAAAAAAFi8/j4jDFaGTnHc/Mahalinga%20Sanjeeva%20%282%29.jpg" medium="image" />
	</item>
		<item>
		<title>ನಾನ್ಯಾಕೆ ಚೀಲ ಕೊಡುತ್ತಿಲ್ಲ?</title>
		<link>http://athreebook.com/2010/08/23/23082010/</link>
		<comments>http://athreebook.com/2010/08/23/23082010/#comments</comments>
		<pubDate>Mon, 23 Aug 2010 16:21:52 +0000</pubDate>
		<dc:creator>abhayaftii</dc:creator>
				<category><![CDATA[ಪುಸ್ತಕ ಲೋಕ]]></category>
		<category><![CDATA[ಹೀಗೆ ಒಂದಿಷ್ಟು]]></category>

		<guid isPermaLink="false">http://athreebook.com/?p=524</guid>
		<description><![CDATA[‘ಕ್ಷಮಿಸಿ, ನಾವು ಚೀಲ ಕೊಡುವುದಿಲ್ಲ. ಪರಿಸರದ ಉಳಿವಿಗಾಗಿ ಪ್ಲ್ಯಾಸ್ಟಿಕ್ ಬೇಡ ಎನ್ನಿ. ಕಾಡಿನ ರಕ್ಷಣೆಗಾಗಿ ಕಾಗದ ಮಿತವಾಗಿ ಬಳಸಿ. ನಿಮ್ಮ ಪುಸ್ತಕಕ್ಕಾಗಿ ನೀವೇ ಚೀಲ ತನ್ನಿ!’ ಇದನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ, ದೊಡ್ಡ ಮತ್ತು ದಪ್ಪ ಅಕ್ಷರಗಳಲ್ಲಿ ಮುದ್ರಿಸಿ ನನ್ನ ಅಂಗಡಿಯ ಮೇಜಿನ ಮೇಲೆ ಹಲವು ವರ್ಷಗಳಿಂದ ಹಾಕಿಕೊಂಡೇ ಇದ್ದೇನೆ, ಆಚರಿಸುತ್ತಲೂ ಇದ್ದೇನೆ. ದುರ್ದಾನ &#8230; <a href="http://athreebook.com/2010/08/23/23082010/">Continue reading <span class="meta-nav">&#8594;</span></a><img alt="" border="0" src="http://stats.wordpress.com/b.gif?host=athreebook.com&amp;blog=3999388&amp;post=524&amp;subd=athree&amp;ref=&amp;feed=1" width="1" height="1" />]]></description>
			<content:encoded><![CDATA[<p style="text-align:left;"><a href="http://lh6.ggpht.com/_XLLsV3Btn2I/THKeUOVvD0I/AAAAAAAAFhw/D9KF7qFBEQg/s640/DSC00970.JPG"><img class="alignleft" src="http://lh6.ggpht.com/_XLLsV3Btn2I/THKeUOVvD0I/AAAAAAAAFhw/D9KF7qFBEQg/s640/DSC00970.JPG" alt="" width="346" height="259" /></a>‘ಕ್ಷಮಿಸಿ, ನಾವು ಚೀಲ ಕೊಡುವುದಿಲ್ಲ. ಪರಿಸರದ ಉಳಿವಿಗಾಗಿ ಪ್ಲ್ಯಾಸ್ಟಿಕ್ ಬೇಡ ಎನ್ನಿ. ಕಾಡಿನ ರಕ್ಷಣೆಗಾಗಿ ಕಾಗದ ಮಿತವಾಗಿ ಬಳಸಿ. ನಿಮ್ಮ ಪುಸ್ತಕಕ್ಕಾಗಿ ನೀವೇ ಚೀಲ ತನ್ನಿ!’ ಇದನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ, ದೊಡ್ಡ ಮತ್ತು ದಪ್ಪ ಅಕ್ಷರಗಳಲ್ಲಿ ಮುದ್ರಿಸಿ ನನ್ನ ಅಂಗಡಿಯ ಮೇಜಿನ ಮೇಲೆ ಹಲವು ವರ್ಷಗಳಿಂದ ಹಾಕಿಕೊಂಡೇ ಇದ್ದೇನೆ, ಆಚರಿಸುತ್ತಲೂ ಇದ್ದೇನೆ. ದುರ್ದಾನ ಪಡೆದವರಂತೆ ಮುಖಭಾವ, ಅವಹೇಳನಕಾರಿ ನಡೆ, ಖರೀದಿಸಿದ್ದನ್ನೇ ತಿರಸ್ಕರಿಸಿ ಹೋಗುವ ಕ್ರಮಗಳೂ ಇಲ್ಲದಿಲ್ಲ! ತಮ್ಮ ಪರಿಸರಪ್ರೇಮದ ಬಗ್ಗೆ ಕೊರೆದು, “ನನಗೆ ಬೇಡಾ ಆದರೇ&#8230;” ಎಂದು ಮತ್ತೆ ನನಗೆ ಏನೇನೂ ಹೊಸದಲ್ಲದ, ಸರಕಾರ ಪ್ಲ್ಯಾಸ್ಟಿಕ್ ಕುರಿತು ನಿಗದಿಪಡಿಸಿದ ಬಣ್ಣ ಮತ್ತು ದಪ್ಪದ ಬಗ್ಗೆ ವಿವರಣೆ (ಇದೂ ಪ್ರಕೃತಿಪರವೇನೂ ಅಲ್ಲ, ಸಮಾಜಕ್ಕೊಂದು ರಿಯಾಯ್ತಿ), ಮರುಬಳಕೆಗೆ ಪ್ರೇರಿಸುವ ದಪ್ಪದ ಮತ್ತು ಅಂದದ ಪ್ಲ್ಯಾಸ್ಟಿಕ್, ಬಯೋ ಡಿಗ್ರೇಡಬಲ್ ಪ್ಲ್ಯಾಸ್ಟಿಕ್, ಹತ್ತಿಯದೋ ಸೆಣಬಿನದೋ ಚೀಲಗಳು, ಹಳೆಂii ಪತ್ರಿಕೆಗಳನ್ನೇ ಸಾಕಷ್ಟು ಅಂಟು, ಬಲಯುತವಾದ ಹಿಡಿಕೆಗಳನ್ನೊದಗಿಸಿ ಮಾಡಿದ ‘ಪರಿಸರಪ್ರೇಮಿ’ ಚೀಲ ಇತ್ಯಾದಿ ನೂರೆಂಟು ಸಲಹೆ ಕೊಡುವ ಜನಗಳಿಗೆ (ನಮ್ಮೊಡನಿದ್ದೂ ನಮ್ಮಂತಾಗದವರು) ಕೊರತೆ (ಕೊರೆತ?) ಎಂದೂ ಆದದ್ದಿಲ್ಲ (ಮುಗಿದದ್ದಿಲ್ಲ!). ಅಂಗಡಿ ಮತ್ತು ಪರಿಸರಪ್ರೇಮವನ್ನು ಜಾಹೀರುಗೊಳಿಸುವ ಚೀಲಗಳನ್ನು “ಕ್ರಯಕ್ಕೇ ಕೊಡಿ” ಎಂದು ಸಜೆಸ್ಟುವವರಿಗೂ ಕೊರತೆಯಿಲ್ಲ. ಇವೆಲ್ಲ ನನಗೆ ತಿಳಿಯದ್ದೇನೂ ಅಲ್ಲ. ನಾನು ಕೇವಲ ನಕ್ಕು ಸುಮ್ಮನಿರುತ್ತೇನೆ.</p>
<p style="text-align:left;"><span id="more-524"></span>ಜಿಪುಣತನವೋ ಸೇವೆಯಲ್ಲಿ ಅಸೌಜನ್ಯವನ್ನೋ ಆರೋಪಿಸುವವರು ಈಗಲೂ ಇದ್ದಾರೆ (ಆದರೆ ಮೊದಲಿನಷ್ಟುಹೆಚ್ಚಲ್ಲ). ಅಂಥಲ್ಲಿ ತಡೆಯದೆ ನಾನು “ಪ್ಲ್ಯಾಸ್ಟಿಕ್ ಪ್ರಸಾರದ ಒಂದು ಮೂಲವನ್ನು ಕಡಿಮೆ ಮಾಡಿಕೊಳ್ಳುವಲ್ಲಿ ನಿಮ್ಮ ಪಾಲೇನು (ಬಳಕೆದಾರ ಸಮಾಜದ ಪಾಲುಗಾರಿಕೆ)” ಎಂದು ಒಮ್ಮೊಮ್ಮೆ ಕೇಳಿಬಿಡುವುದು ಅನೇಕರಿಗೆ ಉದ್ಧಟತನವೆಂದೇ ಅನಿಸುತ್ತದೆ. ಕೆಲವರು “ಎಲ್ಲ ಕೊಡ್ತಾರೆ, ನಿಮ್ಮದೊಂದು ಏನು ಮಹಾ” ಎಂಬ ಪ್ರಶ್ನೆಗೆ (ಹನಿಗೂಡಿದರೆ ಹಳ್ಳ &#8211; ಗಾದೆ. ಸವಲತ್ತುಗಳನ್ನು ಕೊಟ್ಟವರಿಗೆ ಹಿಂದೆ ತೆಗೆದುಕೊಳ್ಳುವ ಸ್ವಾತಂತ್ರ್ಯ ಎಂದು ಹರಣವಾಯ್ತು?), “ಇದೇ ನನ್ನ ಕೊನೆಯ ಭೇಟಿ” ಎಂದು ಕಾಲು ಝಾಡಿಸಿ ಹೋಗುವವರಿಗೆ (ಅವರೇ ಇನ್ನೊಮ್ಮೆ ಬಂದರೆ, ನಾನು ಜ್ಞಾಪಕವಿಟ್ಟು ಖಂಡಿತಾ ತಳ್ಳುವವನಲ್ಲ), “ದೊಡ್ಡದಾಗಿ ಹೊರಗೆ ಬೋರ್ಡು ಹಾಕಿ” ಎನ್ನುವವರಿಗೆ ನನ್ನದು ಮತ್ತೆ ಮೌನವೇ ಉತ್ತರ. ಇಲ್ಲದ್ದರ ಬಗ್ಗೆ ಬೋರ್ಡು ಬರೆಸಿದವರುಂಟೇ? ಮತ್ತೆ ಒಳಗೆ ಬಂದವರಿಗೆಲ್ಲಾ ಕಡ್ಡಾಯ ಪುಸ್ತಕ ಕೊಳ್ಳಬೇಕೆಂದು ನಾನು ಬಿಡಿ, ಯಾವ ಅಂಗಡೀಯಾತನೂ ಒತ್ತಾಯಿಸಲಾರ. ಹಾಗೆ ಬರೆಸಿ ಹಾಕಿದಾಗಲೂ ಜನ ಅರ್ಥೈಸಿಕೊಳ್ಳುವ ಪರಿಗೆ ನಾನು ಈಚೆಗೆ ಸ್ಕೂಲ್ ಬುಕ್ ಕಂಪನಿಯಲ್ಲಿ ಕಂಡದ್ದನ್ನು ಹೇಳಬೇಕು. ಅವರ ಪುಸ್ತಕ ವಿಭಾಗಕ್ಕೆ ಹವಾನಿಯಂತ್ರಣವನ್ನು ಜೋಡಿಸಿರುವುದರಿಂದ ಕನ್ನಡಿ ಬಾಗಿಲು ಮುಚ್ಚಿಕೊಂಡಿರುತ್ತದೆ. ಅದನ್ನು ನೂಕಿ ಒಳ ಬರುವ ಕೆಲವರು ಸಂಶಯಚಿತ್ತರಾಗಿ ಪಾದರಕ್ಷೆಗಳನ್ನು ಹೊರಬಿಟ್ಟು ಬರುತ್ತಿದ್ದರಂತೆ ಮತ್ತೆ ಕೆಲವರು ಅನಂತರ ಅವನ್ನು ಕಳೆದುಕೊಂಡು ದೂರಿದ್ದೂ ಇತ್ತಂತೆ. ಅವರೀಗ ಬಾಗಿಲ ಮೇಲೆ ದೊಡ್ಡದಾಗಿ ಬರೆಸಿದ್ದಾರೆ “ನಿಮ್ಮ ಪಾದರಕ್ಷೆಗಳನ್ನು ಬಿಡಬೇಡಿ, ಧರಿಸಿಕೊಂಡೇ ಬನ್ನಿ.”  ಈಗ ಚಪ್ಪಲಿ ಬಿಡುವವರ ಸಂಖ್ಯೆ ಹೆಚ್ಚಿದೆಯಂತೆ!</p>
<p style="text-align:left;"><a href="http://lh3.ggpht.com/_XLLsV3Btn2I/THKeUGkEEWI/AAAAAAAAFh0/FcKkQxQ6xg8/s640/DSC00971.JPG"><img class="alignleft" src="http://lh3.ggpht.com/_XLLsV3Btn2I/THKeUGkEEWI/AAAAAAAAFh0/FcKkQxQ6xg8/s640/DSC00971.JPG" alt="" width="341" height="255" /></a>ಆಧುನಿಕ ಸರ್ವಸರಕುಗಳ ಬೃಹತ್ ಮಳಿಗೆಗಳಂತೂ ಮುಟ್ಟಿದ್ದಕ್ಕೆ, ಬಿಟ್ಟದ್ದಕ್ಕೆ ಪ್ಲ್ಯಾಸ್ಟಿಕ್ ಲಕೋಟೆಗಳ ಭಾರೀ ಸುರುಳಿಗಳನ್ನೇ ಬಿಡಿಸಿ, ಹಿಡಿಸುತ್ತದೆ; ನಿರಾಕರಿಸಿದವರು ಗಮಾರರು! ಸ್ಪಾರ್, ಮೋರಿನ ನೌಕರಂತೂ ಹಾಗೇ ಸಾಮಾನುಗಳನ್ನು ಒಯ್ಯುವ ಉತ್ಸಾಹಿಗಳು, ತಮ್ಮದೇ ಚೀಲ ತಂದು ಬಳಸುವ ಗಿರಾಕಿಗಳನ್ನು ತಮ್ಮ ಸುಲಭ ಕಾರ್ಯನಿರ್ವಹಣೆಗೆ ತೊಂದರೆ ಮಾಡುವವರೂ ಎಂದೇ ಕಾಣುತ್ತಾರೆ.</p>
<p>ಒಳ್ಳೆಯ ಪುಸ್ತಕ ಕೇಳುವುದಕ್ಕಿಂತಲೂ ಮಿಗಿಲಾಗಿ ನಾನು ಕೊಡುವ ಪುಸ್ತಕವನ್ನು ಹೇಗೆ ಕೊಡುತ್ತೇನೆ, ಕೊಡಬೇಕು ಎಂಬುದನ್ನು ನಿರ್ಧರಿಸುವ ಬಾಹ್ಯ ಶಕ್ತಿಗಳು ಹೆಚ್ಚಿದಂತೆಲ್ಲ ನನ್ನ ಹಠ ಹೆಚ್ಚಿತು.  “ನಾನು ಬೈಕಿನಲ್ಲಿ ಬಂದೆ, ಪುಸ್ತಕವನ್ನು ಹಿಡಿದುಕೊಳ್ಳುವುದು ಹೇಗೆ”, “ನಾನು ಹೀಗೇ ಬಂದವ ಪುಸ್ತಕ ಕೊಂಡೆ, ಈಗ ಒಯ್ಯುವುದು ಹೇಗೆ” ಎಂದಿತ್ಯಾದಿ ಕೇಳುವವರಿಗೆ ಕೊರತೆಯಿಲ್ಲ. ಯಾವುದೇ ವಾಹನ ವಿನ್ಯಾಸದಲ್ಲೂ ವ್ಯಕ್ತಿ ಮತ್ತಾತನ ಕನಿಷ್ಠ ಆವಶ್ಯಕ ಸಾಮಗ್ರಿ ಸಾಗಿಸಲೊಂದು ವ್ಯವಸ್ಥೆ ಇದ್ದೇ ಇರುತ್ತದೆ. ಬೈಕುಗಳಲ್ಲಿನ ಟ್ಯಾಂಕಿನ-ಚೀಲ, ಕೆಲಬಲಗಳ ಸಂಚಿ (saddle bag), ಆಸನದ ಕೊನೆಯಲ್ಲಿ ಹೊರೆಗಾಗಿಯೇ  ಇರುವ ಕ್ಯಾರಿಯರ್ರು, ಲೋಹ/ ಫೈಬರ್ಗಳ ಬಹು ನಮೂನೆಯ, ವರ್ಣದ ಡಬ್ಬಿ, ತನ್ನದೇ ಬೆನ್ನಿಗೋ ಬಗಲಿಗೋ ನೇತಾಡಿಸಿಕೊಳ್ಳಬಹುದಾದ ಸಾವಿರಾರು ನಮೂನೆಯ ಚೀಲಗಳೆಲ್ಲ ಇಂಥವರ ಕಣ್ಣು ತಪ್ಪಿದ್ದಿರಬಹುದೇ? ಸ್ಕೂಟರ್ ಜಾತಿಯ ವಾಹನಗಳಲ್ಲಂತೂ ಮಿನಿ ಲಾರಿಯ ಹೊರೆಯನ್ನೇ ಹೇರಿ ನಿರುಮ್ಮಳವಾಗಿ ಸಾಗುವ ಸೌಕರ್ಯವಿರುವಾಗ ಒಂದೋ ನಾಲ್ಕೋ ಪುಸ್ತಕಕ್ಕೆ ಅವಕಾಶವಿಲ್ಲದೇ ಹೋಯ್ತೇ? ಅದು ಬಿಡಿ, ಇವರು ಹೇಗೆ ಬಂದರು, ಹೇಗೆ ಒಯ್ದರು ಎನ್ನುವುದನ್ನೇ ಮುಂದುವರಿಸಿದರೆ ಮತ್ತದನ್ನು ಏನು ಮಾಡಿದರು ಎನ್ನುವುದೆಲ್ಲ ‘ನನ್ನ (ವ್ಯಾಪಾರಿಯ) ಕಾಳಜಿ ಯಾಕಾಗಬೇಕು’ ಎಂದು ಮರುಪ್ರಶ್ನಿಸಿದರೆ ಬಲು ಕುರುಡು (Crudeನ ತದ್ಭವ) ಪೆಟ್ಟಾಗದೇ?</p>
<p style="text-align:left;"><a href="http://lh5.ggpht.com/_XLLsV3Btn2I/THKeUemRdpI/AAAAAAAAFh4/tAWI4cwYAZg/s640/DSC00972.JPG"><img class="alignleft" src="http://lh5.ggpht.com/_XLLsV3Btn2I/THKeUemRdpI/AAAAAAAAFh4/tAWI4cwYAZg/s640/DSC00972.JPG" alt="" width="344" height="258" /></a>ನಾನು ಅಂಗಡಿ ತೆರೆದ ಹೊಸತರಲ್ಲಿ (೧೯೭೫) ಹಳೆ ಪತ್ರಿಕೆಗಳಿಂದ ವಿವಿಧ ಗಾತ್ರದ ಲಕೋಟೆಗಳನ್ನು ಮಾಡಿ (ಗೃಹ ಕೈಗಾರಿಕೆಗಳು ಎನ್ನಿ), ಮುಕ್ತ ಮಾರುಕಟ್ಟೆಯಲ್ಲಿ ಒದಗಿಸುವ ವ್ಯವಸ್ಥೆ ಇತ್ತು, ಆಗ ನಾನು ವರ್ಷಕ್ಕೊಮ್ಮೆಯಾದರೂ ಎರಡು ಗಾತ್ರಗಳಲ್ಲಿ ಸಾವಿರಾರು ಲಕೋಟೆಗಳನ್ನು ಕೊಳ್ಳುವುದು ನಡೆದೇ ಇತ್ತು. ಆ ಪತ್ರಿಕೆಗಳ ಮಸಿ ಕೈ ಮತ್ತು ತೊಟ್ಟ ಬಟ್ಟೆಗಳಿಗೆ  ಹತ್ತುತ್ತಿತ್ತು. ಬೇಸಗೆಯ ದಿನಗಳಲ್ಲಿ ಬೆವರಿಗೆ ಮಳೆಯ ದಿನಗಳಲ್ಲಿ ನೀರಿಗೆ ಲಕೋಟೆ ಪಿಸಿದು ‘ಪುಸ್ತಕಗಳು ಬೆತ್ತಲೆಯಾಗುತ್ತಿದ್ದದ್ದು’ (ತಮಾಷೆ ಅಲ್ಲ ಸ್ವಾಮಿ, ಹಲವರಿಗೆ ‘ಪುಸ್ತಕವನ್ನು ಹೀಗೇ ಹಿಡಿದುಕೊಂಡು ಹೋಗುವುದೇ’ ಪ್ರಾಮಾಣಿಕವಾಗಿ ಸಂಕೋಚದ ಸಂಗತಿ, ಬಗೆಹರಿಯದ ಪ್ರಶ್ನೆ!) ನನ್ನನ್ನು ಮತ್ತೆ ಮೊದಲು ಹೇಳಿದ ಪರಿಸ್ಥಿತಿಗೇ ತಳ್ಳುತ್ತಿತ್ತು. ಜಿಪುಣತನ ಮತ್ತು ಸೇವೆಯಲ್ಲಿ ಅಸೌಜನ್ಯದ ಆರೋಪ ಪಟ್ಟಿ&#8230;  “ನನಗೆ ಬೇಡಾ ಆದರೇ&#8230;” ಗಳು, ವಾಸ್ತವವಾಗಿ ಎಲ್ಲಾ ಯುಗಕ್ಕೂ ಪಲ್ಲವಿಯಾಗುವಂತೆ ನಾನು ಕೇಳಲು ತೊಡಗಿದ್ದೇ ಅಂದು. Possiblity (ಸಾಧ್ಯತೆ) + facility (ಸೌಕರ್ಯ, ಅನುಕೂಲಗಳು) ಅಥವಾ ability (ಸಾಮರ್ಥ್ಯ) = feasibility (ಸಂಭವನೀಯ? ಕಾರ್ಯಸಾಧ್ಯ?) ಎಂದೇ ಉದ್ಭವಿಸಿರಬಹುದಾದ ಶಬ್ದಕ್ಕೆ ಅರ್ಥ ನನ್ನ ಕೆಲಸದಲ್ಲಿ ಹುಡುಕುತ್ತಿದ್ದೆ. ನನ್ನ ಪೂರೈಕೆದಾರತನಕ್ಕೆ ಗಡಿರೇಖೆಯನ್ನು ಸಾರ್ವಜನಿಕ ಆವಶ್ಯಕತೆ ಮತ್ತು ನನ್ನ ಆರ್ಥಿಕತೆಗಳ ಸಮತೋಲನದಲ್ಲಷ್ಟೇ ಕಂಡುಕೊಂಡಿದ್ದೆ. ಆ ಸಮಯದಲ್ಲಿ ನನಗೆ ಬಿಲ್ಲು ಪುಸ್ತಕಗಳನ್ನೆಲ್ಲ ಮುದ್ರಿಸಿ ಕೊಡುತ್ತಿದ್ದ ಸಲ್ಲಕ್ ಪ್ರಿಂಟರ್ಸಿನ ಮಾಲಿಕ, ವಿಚಾರವಂತ ಲೇಖಕ, ಹಿರಿಯ ಗೆಳೆಯ ವೇಗಸ್ (ಈಚೆಗೆ ಇನ್ನಿಲ್ಲವಾದರು) ಕೊಟ್ಟ ಸಲಹೆ ಅಪ್ಯಾಯಮಾನವಾಯ್ತು. ಸಗಟಿನಲ್ಲಿ ನಾಲ್ಕೈದು ಪೈಸೆಗೊಂದು ಬರುತ್ತಿದ್ದ ದುರ್ಬಲ, ಕೊಳಕು, ಜಾಹೀರಾತುರಹಿತ ಕಾಗದದ ಲಕೋಟೆಗಳಿಗಿಂತ ಎರಡು ಮೂರು ಪೈಸೆ ಕಡಿಮೆಗೇ ದಕ್ಕುತ್ತಿದ್ದ ತೆಳು, ಅಚ್ಚಬಿಳುಪಿನ ಮೇಲೆ ನನಗೆ ಬೇಕಾದಂತೆ ‘ಅತ್ರಿ’ ಸಾರುವ, ದೀರ್ಘ ಬಾಳ್ತನವಿರುವ ಪ್ಲ್ಯಾಸ್ಟಿಕ್ ಲಕೋಟೆಗಳನ್ನು ಒಮ್ಮೆಗೆ ಅಪ್ಪಿಕೊಂಡೆ (ನಿಖರ ಬೆಲೆಗಳಲ್ಲಿ ನಾನು ತಪ್ಪಿರಬಹುದು).</p>
<p><a href="http://lh3.ggpht.com/_XLLsV3Btn2I/THKeUaVTJUI/AAAAAAAAFh8/d9jBsMnJrv0/s640/DSC00973.JPG"><img class="alignleft" src="http://lh3.ggpht.com/_XLLsV3Btn2I/THKeUaVTJUI/AAAAAAAAFh8/d9jBsMnJrv0/s640/DSC00973.JPG" alt="" width="344" height="259" /></a> ಸುಲಭದಲ್ಲಿ ಹರಿಯದ, ಪುಸ್ತಕಕ್ಕೆ ನೀರು, ಬೆವರುಗಳ ರಕ್ಷಣೆ ಕೊಡುವುದರೊಡನೆ ಹಗುರವಾಗಿಯೂ ಇರುವ ಪ್ಲ್ಯಾಸ್ಟಿಕ್ ಚೀಲಗಳು ಬಂದು ಗಿರಾಕಿಗಳ ಪಲ್ಲವಿ ಬದಲಿಂದು ತಿಳಿದಿರಾ? ಇಲ್ಲ &#8211; ಅಸಹನೆ, ಗೊಣಗುವಿಕೆ, ಜಗಳಕಾಯುವುದು ಎಷ್ಟೋ ಬಾರಿ ವ್ಯಕ್ತಿಗಳ ಮನಃಸ್ಥಿತಿಯೇ ಹೊರತು ಒದಗುವ ಸೌಕರ್ಯಗಳ ಕೊರತೆಯಲ್ಲ. ಬನಿಯನ್ ಬ್ಯಾಗ್, ಗಿಫ್ಟ್ ಪ್ಯಾಕಿಂಕ್, ಅದೂ ಸಣ್ಣ ಮಕ್ಕಳ ಬರ್ತ್ ಡೇ ಪಾರ್ಟಿ ಅಂದರಂತೂ ಅತಿಥಿಗಳಾಗಿ ಬರುವ ಎಲ್ಲ ಪುಟಾಣಿಗಳಿಗೂ ಕೊಡುವ ಸಂಕಟಕ್ಕೆ, ಚಿಲ್ಲರೆ ಚಿಲ್ಲರೆ ಪುಸ್ತಕಗಳಿಗೂ ಸೆಪ್-ಸೆಪ್ರೇಟ್ ಕನಿಷ್ಠ ಕಲರ್ ಪೇಪರ್ ರ‍್ಯಾಪಿಂಗ್ ಎನ್ನುವುದೆಲ್ಲಾ ಹಕ್ಕೊತ್ತಾಯಗಳೇ! ಭರ್ಜರಿ ಯೂನಿಫಾರ್ಮ್-ಮಕ್ಕಳ ಶಾಲೆಯಲ್ಲಿ ಹತ್ತೋ ನೂರೋ ಮಂದಿಯನ್ನು ಪುರಸ್ಕಾರ ಯೋಗ್ಯರೆಂದು ಆರಿಸುತ್ತಾರೆ. ಆದರೆ “ನಮ್ಮ ಬಜೆಟ್ಟು (ಚೀಪಾಗಬೇಕು) ಹತ್ತು ರೂಪಾಯಿಯ ರತ್ನ ಕೋಶ, ಹದಿನೈದು ರೂಪಾಯಿಯ ಜನರಲ್ ನಾಲೆಜ್, ಇಪ್ಪತ್ತು ರೂಪಾಯಿಯ ಪಾಕೆಟ್ ಕೋಶಗಳು.” ಈ ಯೂನಿಫಾರ್ಮ್ ಬಹುಮಾನಗಳನ್ನು ಆಯ್ದುಕೊಳ್ಳುವ ಚೀಟರುಗಳು (ಇವರು ಟೀಚರುಗಳಿರಬಹುದೇ?) ಎಲ್ಲದರ ಬೆಲೆ ನಮೂದನ್ನು ಅಳಿಸಿ, ಫಸ್ಟೂ ಸೆಕೆಂಡೂ ಥರ್ಡೂಂತ ಕನಿಷ್ಠ ಮೂರು ವರ್ಣದ ಲಕ್ಕೋಟೆಗಳಿಗೆ (ಉಚಿತವಾಗಿ) ಹಕ್ಕೊತ್ತಾಯ ಮಂಡಿಸುವುದನ್ನೂ ಸಾಕಷ್ಟು ಕಂಡಿದ್ದೇನೆ. ಮುದ್ರಿತ ಪುಟಗಳನ್ನು ಒಟ್ಟು ಹಿಡಿದಿಟ್ಟುಕೊಳ್ಳಲು, ರಕ್ಷಿಸಿಕೊಡಲು, ಪುಸ್ತಕದ ಭಾಗವಾಗಿಯೇ ಮುದ್ರಣಗೊಂಡು, ಬಂಧದಲ್ಲಿ ಒಂದಾಗಿ ಬರುವ ಗಟ್ಟಿ, ಸುಂದರ ಹೊದಿಕೆ ಇಂದು ಅರ್ಥವನ್ನೇ ಕಳೆದುಕೊಂಡಿರುವುದು ಈ ಯೂನಿಫಾರ್ಮ್‌ಗಳಿಂದ; ಬ್ರಹ್ಮಾಸ್ತ್ರದ ಕಟ್ಟಿನ ಮೇಲೆ ಬಡಕಲು ಹಗ್ಗ ಬಿಗಿಯುವ ಮೂರ್ಖಮತಿಗಳಿಂದ. ಈಚೆಗೆ ನಮ್ಮ ವಸುಧೇಂದ್ರ ತಮ್ಮ ಪುಸ್ತಕ &#8211; ನಮ್ಮಮ್ಮ ಎಂದರೆ ನನಗಿಷ್ಟ, ಇದರ ಸಂಗ್ರಾಹಕ ಪ್ರತಿಯನ್ನು ಪ್ರಕಟಿಸಿದರು. ಈ ರೀತಿಯಲ್ಲಿ ವಿದೇಶೀ ಪ್ರಕಟಣೆಗಳು ಬಹಳ ಮೊದಲೇ ಬರುತ್ತಿತ್ತು. ಈಚೆಗೆ ಭಾರತೀಯ ಇಂಗ್ಲಿಶ್ ಪ್ರಕಾಶಕರಂತೂ ಪುಸ್ತಕದ ಹೊದಿಕೆಗೆ ಲ್ಯಾಮಿನೇಶನ್ (ಪ್ಲ್ಯಾಸ್ಟಿಕ್ ಹಾಳೆ ಅಂಟಿಸುವುದು) ಇದ್ದರೂ ಸಾಲದೆಂಬಂತೆ ಪ್ರತಿ ಪುಸ್ತಕವನ್ನೂ ಬಿಗಿ ಪ್ಲ್ಯಾಸ್ಟಿಕ್ ಕವರಿನಲ್ಲಿ ತುಂಬಿ ಸೀಲು ಮಾಡಿಯೇ ಕಳಿಸುತ್ತಾರೆ. ಕೆಲವು ಸಂಪುಟಗಳ ಒಂದು ಕಟ್ಟು ಇದ್ದರಂತೂ ಗಟ್ಟಿ ರಟ್ಟಿನ ಡಬ್ಬಿಯಲ್ಲಿ ಒಟ್ಟು ತುಂಬಿ ಕೊಡುವುದೂ ಸಾಕಷ್ಟು ಹಿಂದಿನಿಂದ ಚಾಲ್ತಿಯಲ್ಲಿದೆ. ಕನ್ನಡ ವಾಲ್ಮೀಕಿ ರಾಮಾಯಣದ ಎರಡು ಸಂಪುಟಗಳನ್ನು ೧೯೭೨ಕ್ಕೂ ಹಿಂದೆಯೇ ಡಿವಿಕೆ ಮೂರ್ತಿಯವರು ಅಂದವಾಗಿ ಮುದ್ರಿಸಿ, ಬಿಗುವಾಗಿ ಹಿಡಿದಿಟ್ಟುಕೊಳ್ಳುವ ರಟ್ಟಿನ ಡಬ್ಬಿಯಲ್ಲಿ ಕೊಡಲು ಸುರು ಮಾಡಿದ್ದು ಈಗಲೂ (ನಾಲ್ಕನೇ ಮರುಮುದ್ರಣದಲ್ಲೂ) ಮುಂದುವರಿದಿದೆ. ಆದರೆ ಅತಿ ಬುದ್ಧಿಯವರು ಹೊದಿಕೆಯ ಮೇಲಿನ ಈ ಹೊದಿಕೆಗೂ ಒಂದು ಪ್ಯಾಕಿಂಗ್, ಒಂದು ಪ್ಲ್ಯಾಸ್ಟಿಕ್ ಕ್ಯಾರೀ ಬ್ಯಾಗ್ ಕೇಳುವಾಗ ನನಗಂತೂ ಮೈ ಉರಿದೇ ಹೋಗುತ್ತದೆ!</p>
<p style="text-align:left;"><a href="http://lh4.ggpht.com/_XLLsV3Btn2I/THKeUm9PLqI/AAAAAAAAFiA/WMSqQpZS6p4/s640/DSC00974.JPG"><img class="alignleft" src="http://lh4.ggpht.com/_XLLsV3Btn2I/THKeUm9PLqI/AAAAAAAAFiA/WMSqQpZS6p4/s640/DSC00974.JPG" alt="" width="344" height="258" /></a>ಮಿಜಾರು ಸದಾನಂದ ಪೈ &#8211; (ನಗರದ ಹಿರಿಯ ಉದ್ಯಮಿ, ಚಿಂತಕ, ಕೆನರಾ ವಿದ್ಯಾ ಸಂಸ್ಥೆಗಳ ಸದಸ್ಯ, ಎಲ್ಲಕ್ಕೂ ಮಿಗಿಲಾಗಿ) ಭಾರೀ ಪುಸ್ತಕ ಪ್ರೇಮಿ, ಸ್ಟೇಪ್ಲರ್ ಪಿನ್ನು ಬಳಸುವುದನ್ನು ವಿರೋಧಿಸುತ್ತಿದ್ದರು! “ಲಕೋಟೆಗೆ ಅಂಟು ಬಳಸಿ, ಹಗ್ಗದಲ್ಲಿ ಕಟ್ಟಿ, ಕೊನೆಗೆ ಹಾಗೇ ಬಿಡಿ ಆದರೆ ಪಿನ್ನು ಮಾತ್ರ ಕೂಡದು” ಅವರ ವಾದ. ಎರಡಕ್ಕೂ ಮಿಕ್ಕ ಹಾಳೆಗಳನ್ನು ಒಟ್ಟು ಹಿಡಿಯುವ ಗುಂಡುಸೂಜಿಯ ಜಾಗದಲ್ಲಿ ಈ ಪಿನ್ನು ಕಂಡರಂತೂ ಮರುಬಳಕೆಯನ್ನು ನಿರಾಕರಿಸುವ ವ್ಯವಸ್ಥೆಯ ವಿರುದ್ಧ ಅವರು ಕೆಂಡಾಮಂಡಲವಾಗುತ್ತಿದ್ದರು. ಕಾಗದದ ಲಕ್ಕೋಟೆಯಿರಲಿ, ಪ್ಲ್ಯಾಸ್ಟಿಕ್ಕಿನದ್ದೇ ಬರಲಿ “ಇದಕ್ಕೊಂದು ಪಿನ್ನು ಹೊಡೀರೀ” ಎನ್ನುವವರಿಗೆ ಕೊರತೆಯಿಲ್ಲ. ಮಾಲ್, ದೊಡ್ಡ ಬಝಾರ್‌ಗಳಲ್ಲಂತೂ ಪುಟ್ಟ ಹೆಬ್ಬೆರಳು ಗಾತ್ರದಿಂದ ಮಾರುದ್ದದವರೆಗಿನ ತರಹೇವಾರಿ ಸ್ಟೇಪ್ಲರುಗಳಲ್ಲಿ ಪಿನ್ನು ಒಂದೇನು ಡಜನ್ನ್ ಒತ್ತುವ ಧಾರಾಳಿಗಳಿದ್ದಾರೆ. ಯಾವುದೇ ಕೊರಿಯರ್ ಕವರ್ ಗಮನಿಸಿ, ಕನಿಷ್ಠ ಮೂರು ಪಿನ್ನು ಹೊಡೆದಿರುತ್ತಾರೆ. ಉದಾಸೀನದಲ್ಲೋ ಕೆಲಸದ ಒತ್ತಡದಲ್ಲೋ ಅವನ್ನು ಕ್ರಮವಾಗಿ ಬಿಡಿಸಲು ತಪ್ಪಿ ಉಗುರು ಸಂದಿನಲ್ಲಿ ಗಾಯ ಮಾಡಿಕೊಳ್ಳುವುದು, ಬಂದ ಸಾಮಾನ್ಯ ಪತ್ರವಿರಲಿ ಎಷ್ಟೋ ಬಾರಿ ಅಮೂಲ್ಯ ದಾಖಲೆ, ಬ್ಯಾಂಕ್ ಡ್ರಾಫ್ಟ್ ಅಂಥವುಗಳನ್ನೇ ಹರಿದುಕೊಳ್ಳುವುದು ನಡೆದೇ ಇರುತ್ತದೆ. ಅವೆಲ್ಲವನ್ನು ಅವಗಣಿಸಿಯೂ ಕೇವಲ ಕಳಚಿ ಎಸೆಯುವ (ಎಲ್ಲಿಗೆ, ಎಷ್ಟು ಎಂದು ಬಹುಶಃ ಯಾರೂ ಲೆಕ್ಕ ಇಟ್ಟದ್ದಿಲ್ಲ) ಪಿನ್ನು ಪಿನ್ನುಗಳ ಲೆಕ್ಕ ತೆಗೆದರೆ ಎಷ್ಟೊಂದು ಪುನಃ ಸೃಷ್ಟಿ ಸಾಧ್ಯವಿಲ್ಲದ ಲೋಹಸಂಪತ್ತು ವ್ಯರ್ಥವಾಗುತ್ತಿದೆ ಎಂದು ಭಯವಾಗುತ್ತದೆ. ಸುಮ್ಮನೆ ನಗಾಡಬೇಡಿ, ಗಮನವಿಟ್ಟು ನೋಡಿ. ನಿಮ್ಮಲ್ಲಿರುವ ಸ್ಟೇಪ್ಲರ್ ಪಿನ್ನು ಪ್ಯಾಕೇಟ್ ಉತ್ತಮ ದರ್ಜೆ ಹಾಗೂ ಕಡಿಮೆ ಬೆಲೆಯದೇ ಆಗಿದ್ದರೆ ಅದು ಮೇಡಿನ್ ಜಪಾನ್! ಕರ್ನಾಟಕ ರಾಜ್ಯದಷ್ಟೂ ಭೂಭಾಗವಿಲ್ಲದ ಆದರೆ ಜಗತ್ತಿನ ಮುಂಚೂಣಿಯ ರಾಷ್ಟ್ರಗಳಲ್ಲಿ ಒಂದಾದ ಜಪಾನ್ ಇದನ್ನು ದಾನಕ್ಕೆ ಕೊಟ್ಟದ್ದಲ್ಲ ಎನ್ನುವುದನ್ನು ಮನಸ್ಸಿಗೆ ತಂದುಕೊಳ್ಳಿ. ಮನೆ, ಅಂಗಡಿಗಳಲ್ಲಿ ಬಿಡಿ, ರಾಜ್ಯ ದೇಶಗಳಲ್ಲಿ ಸಗಟಾಗಿ ವಾರ್ಷಿಕ ಸ್ಟೇಪ್ಲರ್ ಪಿನ್ನಿನ ಲೆಕ್ಕ (ಜಾಣ ಜಾಲಿಗರು ತೆಗೆದು ಹೇಳಬಹುದೋ ಏನೋ) ತೆಗೆದರೆ ಖಂಡಿತವಾಗಿ ನಾವು ಅರಿವಿಲ್ಲದೇ ಮಾಡುತ್ತಿರುವ ಪ್ರಾಕೃತಿಕ ಸಂಪತ್ತಿನ ಅವಹೇಳನ ಅಗಾಧವಿರುತ್ತದೆ. (ಇನ್ನೂ ಮುಂದುವರಿದು ಯೋಚಿಸಿದ್ದೇ ಆದರೆ ನಮ್ಮದೇ ಕುದುರೆಮುಖ ವಲಯದಲ್ಲೋ ಬಳ್ಳಾರಿಯಲ್ಲೋ ನಾವೇ ಕಾಡು ತಿಂದು, ಪರಿಸರಕ್ಕೆ ಹೂಳು, ಮಣ್ಣು ತುಂಬಿ, ಒಕ್ಕಿ ಕಳಿಸಿದ ಖನಿಜವೇ ಪರಿಷ್ಕಾರಗೊಂಡು ಮರಳಿ ಮಣ್ಣಿಗೆ ಸೇರಲು ಬಂದದ್ದೂ ಇರಬಹುದು!) ಈ ಕ್ಷುದ್ರಕ್ಕೆ ಹೋಲಿಸಿದರೆ ಎಷ್ಟೋ ಮೇಲಿನ ಪ್ಲ್ಯಾಸ್ಟಿಕ್ ಪ್ಯಾಕಿಂಗ್ ಅದಿನ್ನೆಷ್ಟು ಪರಿಸರ ಕೆಡಿಸುತ್ತಿದೆ ಎಂದು ಯೋಚಿಸುವ ವಿವೇಚನೆ ಇಂದು ಬೆಳೆಯಬೇಡವೇ?</p>
<p>ಕೆಲವು ವರ್ಷಗಳ ಹಿಂದೆ, ನನ್ನಜ್ಜನ ಮನೆಯ ಬಳಿಯಲ್ಲಿ ಬ್ರೆಡ್ ಕಾರ್ಖಾನೆಯೊಂದು ಎಸೆದ ಹಳೇ ಬ್ರೆಡ್ಡಿನ ಪರಿಮಳದಿಂದ ಆಕರ್ಶಿತವಾಗಿ ನಾಲ್ಕು ಹಸುಗಳು ಬಲಿಯಾದವು. ಮರಣೋತ್ತರ ಪರೀಕ್ಷೆಯಲ್ಲಿ ಎಲ್ಲಕ್ಕೂ ಹೊಟ್ಟೆಯಲ್ಲಿ ಗಡ್ಡೆ ಕಟ್ಟಿದ ಬ್ರೆಡ್ ಸುತ್ತಿದ್ದ ಪ್ಲ್ಯಾಸ್ಟಿಕ್ ಕಾರಣವೆಂದು ತಿಳಿದು ಬಂತು. ಮುಂಬೈಯಲ್ಲಿ ಮೇಘಸ್ಫೋಟವಾದದ್ದು ನಿಜ. ಆದರೆ ಅಂದು ಅಷ್ಟೂ ನೀರಿನ ಸಹಜ ಓಟಕ್ಕೆ ಭಂಗ ತಂದು ಸಾಮಾಜಿಕ ಅತಂತ್ರ ಮೂಡಿಸಿದ್ದು ಚರಂಡಿ ಚರಂಡಿಯಲ್ಲಿ ಕಟ್ಟಿದ ‘ನಾವೇ ಎಸೆದ’ ಪ್ಲ್ಯಾಸ್ಟಿಕ್! ಅವೆಲ್ಲಾ ಪ್ರಕಟವಾಗುವ ಕಾಲಕ್ಕೆ ನನಗೆ ಅಂಗಡಿಯಲ್ಲಿ ಒಟ್ಟಾರೆ ಔಪಚಾರಿಕ ‘ಪ್ಯಾಕಿಂಗ್’ ಬಗ್ಗೆಯೇ ಹೇವರಿಕೆ ಬಂದಿತ್ತು. ನಾನೇ ಮಾಡಿಸಿದ್ದ ಎರಡು ಗಾತ್ರದ ಪ್ಲ್ಯಾಸ್ಟಿಕ್ ಲಕೋಟೆಗಳೇನೋ ಮತ್ತೂ ಕೆಲವು ತಿಂಗಳು ವಿತರಣೆಗೆ ಬರುತ್ತಿದ್ದರೂ ಎಲ್ಲರೂ ಮಲಗಿರಲು ಧಿಗ್ಗನೆದ್ದ ಬುದ್ಧನಂತಲ್ಲದಿದ್ದರೂ ಘೋಷಿಸಿಬಿಟ್ಟೆ “ನಾನು ಚೀಲ ಕೊಡುವುದಿಲ್ಲ. Sorry, No Packing.” ಉಳಿದಷ್ಟೂ ಲಕೋಟೆಗಳನ್ನು ಉತ್ಪಾದಕರಿಗೇ ಮರಳಿಸಲು (ರಿಯಾಯ್ತೀ ದರದಲ್ಲಿ, ಕೊನೆಗೆ ಉಚಿತವಾಗಿಯೂ!) ಪ್ರಯತ್ನಿಸಿ ಸೋತೆ. ಕೊನೆಗೆ ಗುಜರಿಯವನಿಗೆ ತೂಕಕ್ಕೆ ಕೊಟ್ಟು ಮುಗಿಸಿದೆ. ಎಲ್ಲ ವಿವರಿಸಿ ಆ ಕಾಲಕ್ಕೇ ಉದಯವಾಣಿಯಲ್ಲಿ ನಾನೊಂದು ಲೇಖನವನ್ನೂ ಬರೆದೆ. (ಈ ಸಲ ಬ್ಲಾಗಿಗೆ ಅದನ್ನು ಉದ್ಧರಿಸಿ, ಕಾಲಕ್ಕೆ ತಕ್ಕಂತೆ ಪರಿಷ್ಕರಿಸಿ, ವಿಸ್ತರಿಸಬೇಕೆಂದೇ ಹೊರಟವನಿಗೆ ಹಳೇ ಕತ್ತರಿಕೆ ಸಿಕ್ಕದೇ ಹೋಯ್ತು)</p>
<p style="text-align:left;">ಓದುವ ಪುಸ್ತಕಕ್ಕೆ ಕರ ಭಾರವಿಲ್ಲ, ಚೀಲಕ್ಕಿದೆ. ಚೀಲದ ಸೌಲಭ್ಯವೋ ಪರಿಸರ ಪ್ರೀತಿಯ ಪ್ರಸಾರದ ನೆಪದಲ್ಲೋ ಎಂದೂ ವಾಣಿಜ್ಯ ಕರ ಕೊಡದ ನಾನು ಅದರಲ್ಲಿ ಸಿಕ್ಕಿಕೊಳ್ಳಲು ಸಿದ್ಧನಿಲ್ಲ. ಅದೇ ಸಾರ್ವಜನಿಕರು ಅಯಾಚಿತವಾಗಿ ಅನ್ಯ ಮೂಲಗಳಿಂದ ಸಂಗ್ರಹವಾದ ಚೀಲಗಳನ್ನು ಮರುಬಳಸಲು ಇಲ್ಲೊಂದು ಅವಕಾಶವಿದೆ ಎಂದು ಉತ್ತೇಜಿತರಾಗುವುದು ಮೊದಮೊದಲು ಇರಲೇ ಇಲ್ಲ. ಆದರೆ ಈಚಿನ ದಿನಗಳಲ್ಲಿ ಮಾತ್ರ ಜಾಗೃತಿ ಹೆಚ್ಚಿದೆ. ಶಾನಾಡಿ ಅಜಿತ್ ಕುಮಾರ್ ಹೆಗ್ಡೆಯವರು ಮಂಗಳೂರು ಮಹಾನರಕ ಪಾಲಿಕೆಂii ಕಮಿಶನರ್ ಆಗಿದ್ದ ವೇಳೆಯಲ್ಲಂತೂ (ಸ್ವರ್ಗ ಮಾಡುವ ಕ್ರಮದಲ್ಲಿ) ನನ್ನಿಂದ ಯಾವ ಸೂಚನೆಯೂ ಇಲ್ಲದೆ ತಮ್ಮ ಪ್ಲ್ಯಾಸ್ಟಿಕ್ ನಿಯಂತ್ರಣ ಸಭೆಗಳಲ್ಲಿ ಆದರ್ಶಕ್ಕೆ ನನ್ನ ಅಂಗಡಿಯನ್ನು ಹೆಸರಿಸಿ, ಪರೋಕ್ಷ ಸಮ್ಮಾನವನ್ನೇ ಮಾಡಿದ್ದನ್ನು ಕೃತಜ್ಞತೆಯಿಂದ ಸ್ಮರಿಸಲೇ ಬೇಕು. ನಾನು ಬಿಲ್ಲು ಮಾಡುತ್ತಿರುವಾಗಲೇ ತಾವು ಮಡಿಚಿ ತಂದ ಪ್ಲ್ಯಾಸ್ಟಿಕ್ ಚೀಲಗಳನ್ನು ಬಿಡಿಸಿ ಒಡ್ಡುವವರು ಸಾರ್ವಜನಿಕರಲ್ಲಿ ಹೆಚ್ಚಿದ ಪ್ರಜ್ಞಾವಂತಿಕೆಗೆ ಸಾಕ್ಷಿಗಳು. ಇನ್ನೂ ಕೆಲವರು ಬಟ್ಟೆಯ, ಹೆಚ್ಚಿನ ಭದ್ರತೆಯ ಚೀಲಗಳನ್ನು ತರುವುದಲ್ಲದೆ, “ನಿಮ್ಮ ಪ್ರೇರಣೆಯಲ್ಲಿ&#8230;” ಎಂದು ಹೇಳುವ ಮಾತುಗಳು ನನಗೆ ಧನ್ಯತೆಯಿಂದ ಎದೆದುಂಬುವ ಕ್ಷಣಗಳು!</p>
<p style="text-align:left;">‘ಅಭಯಾರಣ್ಯ’ ಮಾಡಿದ ಹೊಸತರಲ್ಲಿ ಕೇವಲ ಒಂದೆಕ್ರೆ ಜಾಗವಾದರೂ ಹಲವು ವಾರಾಂತ್ಯಗಳನ್ನು ಅಲ್ಲಿನ ನೆಲದಿಂದ ಗುಟ್ಕಾ ಚೀಟಿ, ತೊಟ್ಟೆ, ಒಡಕು ಬಾಲ್ದಿಯೋ ಡಬ್ಬಿಗಳದೋ ಚೂರು ಹೆಕ್ಕುವ ಕೆಲಸ ಮಾಡಿದ್ದೇವೆ. ‘ಅಶೋಕವನ’ದ ಪರಿಸರ ಇಷ್ಟು ಕೆಟ್ಟು ಹೋಗಿಲ್ಲ. ಆದರೂ ಕುಕ್ಕೇ ಸುಬ್ಬನನ್ನು ನೋಡಲು ಹೋಗಿ ಬರುವ ಭಕ್ತರು ಕ್ವಚಿತ್ತಾಗಿ ‘ವನವಿಹಾರಕ್ಕೆ’ ನುಗ್ಗಿ ಎಸೆದ ಬಿರ್ಯಾಣಿ ಪಾರ್ಸೆಲ್ಲಿನ ತೊಟ್ಟೆ, ಟೈಗರ್ ಬಿಸ್ಕತ್ತಿನ ಪಾಲಿಪ್ಯಾಕ್, ಅಂತಾರಾಷ್ಟ್ರೀಯ ಮಟ್ಟದ ಪರಿಶುದ್ಧ ಮಿನರಲ್ ವಾಟರ್ರೋ ಶಕ್ತಿಪೇಯಗಳನ್ನೋ ದುಡ್ಡೆಸೆದವರಿಗೆ ಕೊಟ್ಟು ಉಳಿದ ಶತಾಯುಷ್ಯವನ್ನು ಕಳೆಯಲು ಬಿದ್ದ ಪರ್ಲ್‌ಪೆಟ್ ಬಾಟಲುಗಳೋ ನಮಗೆ ಹೆಕ್ಕಲು ಧಾರಾಳ ಸಿಕ್ಕುತ್ತಲೇ ಇರುತ್ತವೆ! ಅಲ್ಲಿನ ನಮ್ಮ ಅಸಂಖ್ಯ ಪ್ರಕೃತಿ ಶೋಧದ ಚಾರಣಗಳಲ್ಲಿ ಜೊತೆಗೊಡುವ ಸ್ಥಳಿಯ ಮಾರ್ಗದರ್ಶಿಗಳಿಗೆ ನಾವು ಆಹಾರ ಸೇವಿಸಿದ ಮೇಲೆ ತೊಟ್ಟೇ ಬಾಟಲು ಎಸೆಯುವುದಿರಲಿ, ಯಾರೋ ಯಾವಾಗಲೋ ಎಸೆದದ್ದು ಕಂಡರೂ ಹೆಕ್ಕಿ ತರುವುದು ಭಾರೀ ತಮಾಷೆ. ಇಷ್ಟುದ್ದಕ್ಕೆ ತೂಕಡಿಸದೆ ಓದಿದ ನಿಮಗೂ ಹಾಗನ್ನಿಸುತ್ತದೆಯೇ? ನಿಮ್ಮನುಭವ ಕೋಶ ಸೂರೆಗೊಳ್ಳಲು ಕೆಳಗೆ ಪ್ರತಿಕ್ರಿಯಾ ಅಂಕಣ ತೆರೆದಿಟ್ಟಿದ್ದೇನೆ &#8211; ಜಾಗ್ರತೆ! ಹತ್ತೆಣಿಸುವುದರೊಳಗೆ ತುಂಬಲು ಸುರು ಮಾಡಬೇಕು ರೆಡೇ, ಒನ್, ಟೂ, ಥ್ರೀ&#8230;</p>
<br />  <a rel="nofollow" href="http://feeds.wordpress.com/1.0/gocomments/athree.wordpress.com/524/"><img alt="" border="0" src="http://feeds.wordpress.com/1.0/comments/athree.wordpress.com/524/" /></a> <a rel="nofollow" href="http://feeds.wordpress.com/1.0/godelicious/athree.wordpress.com/524/"><img alt="" border="0" src="http://feeds.wordpress.com/1.0/delicious/athree.wordpress.com/524/" /></a> <a rel="nofollow" href="http://feeds.wordpress.com/1.0/gofacebook/athree.wordpress.com/524/"><img alt="" border="0" src="http://feeds.wordpress.com/1.0/facebook/athree.wordpress.com/524/" /></a> <a rel="nofollow" href="http://feeds.wordpress.com/1.0/gotwitter/athree.wordpress.com/524/"><img alt="" border="0" src="http://feeds.wordpress.com/1.0/twitter/athree.wordpress.com/524/" /></a> <a rel="nofollow" href="http://feeds.wordpress.com/1.0/gostumble/athree.wordpress.com/524/"><img alt="" border="0" src="http://feeds.wordpress.com/1.0/stumble/athree.wordpress.com/524/" /></a> <a rel="nofollow" href="http://feeds.wordpress.com/1.0/godigg/athree.wordpress.com/524/"><img alt="" border="0" src="http://feeds.wordpress.com/1.0/digg/athree.wordpress.com/524/" /></a> <a rel="nofollow" href="http://feeds.wordpress.com/1.0/goreddit/athree.wordpress.com/524/"><img alt="" border="0" src="http://feeds.wordpress.com/1.0/reddit/athree.wordpress.com/524/" /></a> <img alt="" border="0" src="http://stats.wordpress.com/b.gif?host=athreebook.com&amp;blog=3999388&amp;post=524&amp;subd=athree&amp;ref=&amp;feed=1" width="1" height="1" />]]></content:encoded>
			<wfw:commentRss>http://athreebook.com/2010/08/23/23082010/feed/</wfw:commentRss>
		<slash:comments>20</slash:comments>
	
		<media:content url="" medium="image">
			<media:title type="html">Abhaya</media:title>
		</media:content>

		<media:content url="http://lh6.ggpht.com/_XLLsV3Btn2I/THKeUOVvD0I/AAAAAAAAFhw/D9KF7qFBEQg/s640/DSC00970.JPG" medium="image" />

		<media:content url="http://lh3.ggpht.com/_XLLsV3Btn2I/THKeUGkEEWI/AAAAAAAAFh0/FcKkQxQ6xg8/s640/DSC00971.JPG" medium="image" />

		<media:content url="http://lh5.ggpht.com/_XLLsV3Btn2I/THKeUemRdpI/AAAAAAAAFh4/tAWI4cwYAZg/s640/DSC00972.JPG" medium="image" />

		<media:content url="http://lh3.ggpht.com/_XLLsV3Btn2I/THKeUaVTJUI/AAAAAAAAFh8/d9jBsMnJrv0/s640/DSC00973.JPG" medium="image" />

		<media:content url="http://lh4.ggpht.com/_XLLsV3Btn2I/THKeUm9PLqI/AAAAAAAAFiA/WMSqQpZS6p4/s640/DSC00974.JPG" medium="image" />
	</item>
		<item>
		<title>ಅತ್ರಿ &#8211; ಪುಸ್ತಕ ಪ್ರಕಾಶನವನ್ನು ಮುಚ್ಚಿದೆ!</title>
		<link>http://athreebook.com/2010/08/08/08august2010/</link>
		<comments>http://athreebook.com/2010/08/08/08august2010/#comments</comments>
		<pubDate>Sun, 08 Aug 2010 17:05:46 +0000</pubDate>
		<dc:creator>abhayaftii</dc:creator>
				<category><![CDATA[ಪುಸ್ತಕ ಲೋಕ]]></category>
		<category><![CDATA[ಹೀಗೆ ಒಂದಿಷ್ಟು]]></category>

		<guid isPermaLink="false">http://athreebook.com/?p=520</guid>
		<description><![CDATA[ಸಾಮಾಜಿಕ ಋಣಸಂದಾಯ: ೧೯೭೫ರಲ್ಲಿ ನಾನು ಸ್ವತಂತ್ರವಾಗಿ ಪುಸ್ತಕ ಬಿಡಿ ಮಾರಾಟಗಾರನಾಗಿ ಮಂಗಳೂರಿನಲ್ಲಿ ತೊಡಗಿಕೊಳ್ಳುವಾಗಲೇ ಎರಡು ವರ್ಷಗಳಲ್ಲಿ ಆರ್ಥಿಕವಾಗಿ ಸ್ವತಂತ್ರನಾಗಿ, ಪ್ರಕಾಶನದಲ್ಲೂ ಸ್ವಲ್ಪ ತೊಡಗಿಕೊಳ್ಳಬೇಕೆಂದು ಅಂದಾಜಿಸಿದ್ದೆ. ಆದರೆ ವಾಸ್ತವ ನನ್ನ ಮೊದಲ ಪ್ರಕಟಣೆಗೆ ಸುಮಾರು ಹದಿನೈದು ವರ್ಷಗಳ ಅಂತರವನ್ನೇ ವಿಧಿಸಿತು (ನೋಡೋಣು ಬಾರಾ ನಕ್ಷತ್ರ &#8211; ಜಿಟಿನಾ-೧೯೯೦). ಹಣ ಹೂಡಿಕೆ ಮತ್ತು ಪುಸ್ತಕಗಳ ವಿತರಣೆ ಎರಡನ್ನುಳಿದು ಇತರೆಲ್ಲ &#8230; <a href="http://athreebook.com/2010/08/08/08august2010/">Continue reading <span class="meta-nav">&#8594;</span></a><img alt="" border="0" src="http://stats.wordpress.com/b.gif?host=athreebook.com&amp;blog=3999388&amp;post=520&amp;subd=athree&amp;ref=&amp;feed=1" width="1" height="1" />]]></description>
			<content:encoded><![CDATA[<p><strong><a href="http://lh6.ggpht.com/_XLLsV3Btn2I/TF7ijBPLoUI/AAAAAAAAFg8/nFqk6HK-Z2E/s512/pumahO.jpg"><img class="alignleft" src="http://lh6.ggpht.com/_XLLsV3Btn2I/TF7ijBPLoUI/AAAAAAAAFg8/nFqk6HK-Z2E/s512/pumahO.jpg" alt="" width="343" height="518" /></a>ಸಾಮಾಜಿಕ ಋಣಸಂದಾಯ: </strong>೧೯೭೫ರಲ್ಲಿ ನಾನು ಸ್ವತಂತ್ರವಾಗಿ ಪುಸ್ತಕ ಬಿಡಿ ಮಾರಾಟಗಾರನಾಗಿ ಮಂಗಳೂರಿನಲ್ಲಿ ತೊಡಗಿಕೊಳ್ಳುವಾಗಲೇ ಎರಡು ವರ್ಷಗಳಲ್ಲಿ ಆರ್ಥಿಕವಾಗಿ ಸ್ವತಂತ್ರನಾಗಿ, ಪ್ರಕಾಶನದಲ್ಲೂ ಸ್ವಲ್ಪ ತೊಡಗಿಕೊಳ್ಳಬೇಕೆಂದು ಅಂದಾಜಿಸಿದ್ದೆ. ಆದರೆ ವಾಸ್ತವ ನನ್ನ ಮೊದಲ ಪ್ರಕಟಣೆಗೆ ಸುಮಾರು ಹದಿನೈದು ವರ್ಷಗಳ ಅಂತರವನ್ನೇ ವಿಧಿಸಿತು (ನೋಡೋಣು ಬಾರಾ ನಕ್ಷತ್ರ &#8211; ಜಿಟಿನಾ-೧೯೯೦). ಹಣ ಹೂಡಿಕೆ ಮತ್ತು ಪುಸ್ತಕಗಳ ವಿತರಣೆ ಎರಡನ್ನುಳಿದು ಇತರೆಲ್ಲ ಜವಾಬ್ದಾರಿಗಳನ್ನು ಮತ್ತು ಬಹುತೇಕ ಬರವಣಿಗೆಗಳನ್ನೂ ಕೊಟ್ಟ ನನ್ನ ತಂದೆ &#8211; ಜಿಟಿ ನಾರಾಯಣ ರಾವ್, ನನ್ನ ಪ್ರಕಾಶನದ ಅಘೋಷಿತ ಬಹುಮುಖ್ಯ ಪಾಲುದಾರ. ಅವರು ತಮ್ಮ ಬರಹಗಳಿಗೆ (ಗೌರವಧನ), ಮುದ್ರಣ ಕಾರ್ಯದ ಸಂಪೂರ್ಣ ನಿರ್ವಹಣೆಗೆ (ಓಡಾಟ, ಅಂಚೆವೆಚ್ಚ ಇತ್ಯಾದಿ) ಚಿಕ್ಕಾಸು ತೆಗೆದುಕೊಳ್ಳುತ್ತಿರಲಿಲ್ಲ. ಅವರ ಆದರ್ಶದ ಮಾತುಗಳನ್ನೇ ನಾನು ಹೆಚ್ಚು ಕಡಿಮೆ ಪುನರುಚ್ಚರಿಸುತ್ತ “ಪುಸ್ತಕಗಳ ಬಿಡಿ ಮಾರಾಟವೇ ನನ್ನ ಪ್ರಧಾನ ವೃತ್ತಿ. ಪ್ರಕಾಶನವೇನಿದ್ದರೂ ನನ್ನ ಮತ್ತು ಮುಖ್ಯವಾಗಿ ತಂದೆಯ ಒಲವಿನ ಬರಹಗಳನ್ನು (ಅದರಲ್ಲೂ ಜನಪ್ರಿಯ ವಿಜ್ಞಾನ ಸಾಹಿತ್ಯ), ಕೇವಲ ಸಾಮಾಜಿಕ ಋಣ ಸಂದಾಯದ ನೆಲೆಯಲ್ಲಿ ಮಾಡುತ್ತೇನೆ. ಓದುಗ ಪ್ರಕಾಶನದ ಪರಮ ಲಕ್ಷ್ಯ. ಕಾಗದ, ಮುದ್ರಣಗಳಲ್ಲಿ ಆವಶ್ಯಕತೆಯನ್ನಷ್ಟೇ ನೋಡಿ ಬಳಸಿದರೂ ಸರಳ ಸೌಂದರ್ಯಕ್ಕೆ ಕೊರತೆ ಮಾಡುತ್ತಿಲ್ಲ” ಎಂದೇ ಘೋಷಿಸಿಕೊಂಡೆ.<br />
<span id="more-520"></span>ಡಿವಿಕೆ ಮೂರ್ತಿ ಐನ್ಸ್ಟೈನ್ ಜನ್ಮ ಶತಾಬ್ದಿಯನ್ನು ಮುಂಗಂಡು, ನನ್ನ ತಂದೆಗೆ ಒತ್ತಡ ಹೇರಿ, ಅವರು ಬರೆದ ಮೇಲೆ ಪ್ರಕಟಿಸಿದ ಪುಸ್ತಕ ಐನ್ಸ್ಟೈನ್ ಬಾಳಿದರಿಲ್ಲಿ (ಇಂದು ನಾಲ್ಕನೇ ಪರಿಷ್ಕೃತ ಮುದ್ರಣ, ನನ್ನದೇ ಪ್ರಕಟಣೆಯಲ್ಲಿ ಲಭ್ಯ). ಡಿವಿಕೆ ಹೀಗೆ ಒಬ್ಬಿಬ್ಬರನ್ನಲ್ಲ, ಒಂದೆರಡು ವಿಷಯಗಳಲ್ಲೂ ಅಲ್ಲ &#8211; ಸದಾ ಸಮರ್ಥ ವ್ಯಕ್ತಿಗಳನ್ನು ಹಿಡಿಯುತ್ತಲೇ ವೈವಿಧ್ಯಮಯ ಪುಸ್ತಕಗಳನ್ನು ಪ್ರಕಟಿಸುತ್ತಲೇ ಇದ್ದದ್ದು ನನಗೆ ಎಂದೂ ಮರೆಯದ ಆದರ್ಶವಾಗಿ ಕಾಣುತ್ತಿತ್ತು. ಅದನ್ನು ನನ್ನದೇ ಪ್ರಕಾಶನದಲ್ಲಿ ಅನುಸರಿಸುವಲ್ಲಿ ನನಗೆ ವಿದ್ವತ್ ಬಂಡವಾಳ ಮತ್ತು ಸಂಪರ್ಕಗಳು ಏನೇನೂ ಸಾಲದಿತ್ತು. ಅಲ್ಲೆಲ್ಲಾ ನನಗೆ ನನ್ನ ತಂದೆ ನೂರಾನೆ ಬಲ. ಪಾವೆಂ ಆಚಾರ್ಯರು ಕಸ್ತೂರಿಯ ತಿಂಗಳು ತಿಂಗಳು ಪುಟ ತುಂಬುವ ಸಾಹಸದಲ್ಲಿ ಬರೆದು ಮೂಲೆ ಸೇರಿಸಿದ್ದ ಪದಾರ್ಥ ಚಿಂತಾಮಣಿಯನ್ನು ಮೊದಲು ಪುಸ್ತಕ ರೂಪದಲ್ಲಿ ‘ನಾನು’ ಪ್ರಕಟಿಸಿದೆ. ತಮ್ಮ ವಿದ್ವತ್ತಿಗೆ ತಕ್ಕಷ್ಟು ಬರವಣಿಗೆಗಿಳಿಯದ ಜೆ. ಆರ್ ಲಕ್ಷ್ಮಣರಾಯರಿಂದ ಬರೆಯಿಸಿ, ಬೈಜಿಕ ವಿದ್ಯುತ್ ಪ್ರಕಟಿಸಿದ ಖ್ಯಾತಿಯೂ ‘ಅತ್ರಿ’ಗೆ ದಕ್ಕಿತು. ಮುರಳೀಧರರಾಯರ ಉದ್ಗ್ರಂಥ ‘ನೃತ್ಯಲೋಕ’ದ್ದಂತೂ ಭಾರೀ ಕಥೆ. ತಂದೆಯ ವಿಶ್ವಕೋಶ ಯೋಜನೆಗೆ ಹೊರಗಿನ ಚಿತ್ರಕಾರನ ಮಟ್ಟದಲ್ಲಷ್ಟೇ ಒದಗಿದವರು ಮುರಳೀಧರರಾಯರು. ತಂದೆಯ ವಿಭಿನ್ನ ಆಸಕ್ತಿಗಳ ಬಲದಲ್ಲಿ ಅವರೊಬ್ಬ ನಾಟ್ಯಾಚಾರ್ಯನೂ ಹೌದೆಂದು ತಿಳಿದದ್ದು, ಅವರ ತರಗತಿ ನಡೆಸುವ ಅನುಕೂಲಕ್ಕೆ ನಮ್ಮ ಮೈಸೂರು ಮನೆಯ ಶೆಡ್ ಉಚಿತವಾಗಿ ಒದಗಿದ್ದು, ಲೋಕಾಭಿರಾಮ ಮಾತಿನಲ್ಲಿ ಅವರ ವಿದ್ವತ್ತು ಪುಸ್ತಕ ರೂಪಕ್ಕೆ ಇಳಿಯುವಂತಾದದ್ದು, ‘ನೃತ್ಯಲೋಕ’ದ ಪ್ರಕಟಣಪೂರ್ವ ಸಂಚಲನ ಮತ್ತು ಮುರಳೀಧರರಾಯರ ಸಮ್ಮಾನದೊಡನೆ ಅದು ಅತ್ರಿ ಪ್ರಕಾಶನದಲ್ಲೇ ಅರಳಿದ್ದು ಬಹುದೊಡ್ಡ ಭಾವಲಹರಿ. ಹೀಗೇ ‘ನನ್ನಲ್ಲಿ’ ಬೆಳಕು ಕಂಡ ಇನ್ನೊಂದು ಮಹಾಕೃತಿ ಸ.ಜ ನಾಗಲೋಟಿಮಠರ ಬಿಚ್ಚಿದ ಜೋಳಿಗೆ. ಕುರಿತು ಯೋಚಿಸಿದರೆ ಅತ್ರಿ ಪ್ರಕಾಶನದ ಒಂದೊಂದು ಪ್ರಕಟಣೆಯ ಹಿಂದೆಯೂ ತಂದೆಯ ನೀತಿಯುಕ್ತ ಪ್ರೀತಿಯ ಸಾಧನೆ ಎದ್ದು ತೋರುತ್ತದೆ.</p>
<p>ವೃತ್ತಿಪರ ಪ್ರಕಾಶನದಲ್ಲಿ ಅನಿವಾರ್ಯವಾದ ಬೆಲೆ ನಿಷ್ಕರ್ಷೆಯ ಅಂಶಗಳು ನನ್ನನ್ನು ಬಾಧಿಸಲಿಲ್ಲ. ಬೆಲೆ ನಿರ್ಧಾರದಲ್ಲಿ ಮುದ್ರಣ ವೆಚ್ಚ ಮತ್ತು ವೃತ್ತಿಪರ ಪುಸ್ತಕ ಮಾರಾಟಗಾರರಿಗೆ ಕೊಡಬೇಕಾದ ವ್ಯಾಪಾರೀ ವಟ್ಟಾ (ನ್ಯಾಯವಾದ ಮೂರನೇ ಒಂದು) ಮಾತ್ರ ನನ್ನ ಗಮನದಲ್ಲಿರುತ್ತಿತ್ತು. ಅನ್ಯ ಲೇಖಕರಿದ್ದರೆ ಗೌರವಧನದ ಮೊತ್ತ ಸೇರಿಕೊಳ್ಳುತ್ತಿತ್ತು (ನನ್ನ ಹರಕೆಗೆ ಇತರರು ಕುರಿಗಳಾಗಬಾರದು). ಪ್ರಕಾಶಕನಾಗಿ ನನಗೆ ಲಾಭಾಂಶ ಬಿಡಿ, ಸಮಯ ಸಂದಂತೆ ತೊಡಗಿಸಿದ ಹಣಕ್ಕೆ ಸರಳ ಬಡ್ಡಿಯೂ ದಕ್ಕದಷ್ಟು ಕಡಿಮೆ ಬೆಲೆ ಇಡುತ್ತಿದ್ದೆ. (ನನ್ನದೇ ಅಂಗಡಿಯಲ್ಲಿ ಬಿಡಿಯಾಗಿ ಮಾರಿಹೋದದ್ದಷ್ಟೇ ನನಗೆ ಆದಾಯ ತರುತ್ತಿತ್ತು) ಸಹಜವಾಗಿ ಕೊಳ್ಳುಗನಿಗೆ ನಮ್ಮ ಪ್ರಕಟಣೆಗಳು ಕಡಿಮೆ ಬೆಲೆಯಲ್ಲಿ ದೊರಕುತ್ತಿವೆ. ನನ್ನ ಈ ‘ವ್ರತ’ಕ್ಕೆ ಅನ್ಯ ಮೂಲಗಳಿಂದ ಅನುದಾನ, ಸಹಾಯಧನವನ್ನು ಸ್ವೀಕರಿಸದಿರುವುದೂ ನನ್ನ ಅಚಲ ನಿರ್ಧಾರಗಳಲ್ಲಿ ಒಂದು. ಮತ್ತೆ ಹಣ ಹಾಕಿ ಅವಸರದಲ್ಲಿ ಹಣ ತೆಗೆಯುವ ಯಾವುದೇ ಒಳದಾರಿಗಳನ್ನು ಅಂದರೆ &#8211; ಸಗಟು ಖರೀದಿ, ಗ್ರಂಥಾಲಯ ಖರೀದಿ, ಪಠ್ಯ ಮಾಡಿಸುವುದು, ಮೇಳಗಳಲ್ಲಿ ಭಾಗವಹಿಸುವುದು, ದರಕಡಿತದ ಮಾರಾಟ ಇತ್ಯಾದಿ ಪುಸ್ತಕವನ್ನು ಕೇವಲ ಒಂದು ಮಾಲು ಮಾಡುವ ಪ್ರಯತ್ನವನ್ನು ನಾನು ಘೋಷಿಸಿಯೇ ತಿರಸ್ಕರಿಸುತ್ತ ಬಂದಿದ್ದೇನೆ.</p>
<p><a href="http://lh6.ggpht.com/_XLLsV3Btn2I/TF7ijc0-ZgI/AAAAAAAAFhA/neJm7B40WrM/s512/s%20temper.jpg"><img class="alignleft" src="http://lh6.ggpht.com/_XLLsV3Btn2I/TF7ijc0-ZgI/AAAAAAAAFhA/neJm7B40WrM/s512/s%20temper.jpg" alt="" width="344" height="523" /></a>ಶೇಕಡಾ ಐವತ್ತೋ ಅರುವತ್ತೋ ರಿಯಾಯ್ತಿ ದರದಲ್ಲಿ ದಳ್ಳಾಳಿಗಳಿಗೆ ತಮ್ಮ ಪ್ರಕಟಣೆಗಳನ್ನು ದಾಟಿಸಿ, ಅವರ ಮೂಲಕ ಸಗಟು ಖರೀದಿ ದಕ್ಕಿಸಿಕೊಳ್ಳುವ, ಪರೋಕ್ಷವಾಗಿ ತಾವು ಶುದ್ಧಾತ್ಮರಾಗಿ ಉಳಿಯುವವರು ಅನೇಕರಿದ್ದಾರೆ. ನಾನು ಇದನ್ನೂ ನಿರಾಕರಿಸಿದ್ದೇನೆ. ನೆಲಮನೆ ದೇವೇಗೌಡರೆಂದೇ ಖ್ಯಾತರಾದವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ನನ್ನ ತಂದೆಯ ಮೇಲಿನ ಗೌರವದಿಂದ ‘ಸುಬ್ರಹ್ಮಣ್ಯನ್ ಚಂದ್ರಶೇಖರ್’ ಪುಸ್ತಕದ ಸಣ್ಣ ಸಗಟು ಖರೀದಿ ನಡೆಸಿದ ಪ್ರಸಂಗವನ್ನು ನಾನೀಗಾಗಲೇ ‘ಪುಸ್ತಕ ಮಾರಾಟ ಹೋರಾಟ’ದಲ್ಲಿ ಬರೆದಿದ್ದೇನೆ. ಕಾಲೇಜಿನ ನನ್ನ ಐದು ವರ್ಷಗಳ ಸಹಪಾಠಿ, ಆತ್ಮೀಯ ಗೆಳೆಯನೊಬ್ಬ (ಎಂ.ಕೆ. ಶಂಕರಲಿಂಗೇ ಗೌಡ) ವೃತ್ತಿಜೀವನದ ಆಕಸ್ಮಿಕದಲ್ಲಿ ಸರಕಾರದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕನಾದ. ಆ ಕಾಲಕ್ಕೆ ನನ್ನ ಮೋಟರ್ ಸೈಕಲ್ ಸಾಹಸ ಯಾನಗಳ ಸಂಕಲನ &#8211; ‘ಚಕ್ರವರ್ತಿಗಳು’, ನನ್ನ ಯಾವ ಪ್ರಯತ್ನಗಳೂ ಇಲ್ಲದೆ ಆತನ ಗಮನಕ್ಕೆ ಬಂತು. ಆತ ಪುಸ್ತಕವನ್ನು ತನ್ನ ಇಲಾಖೆಯ ಎಲ್ಲಾ ಶಾಖೆಗಳಿಗೆ ವಿತರಿಸುವ ಉತ್ಸಾಹದಲ್ಲಿ ಎರಡು ಸಾವಿರ ಪ್ರತಿಗಳವರೆಗೆ ಖರೀದಿಸಲು ಮುಂದಾದ. ಪ್ರವಾಸೋದ್ಯಮ ಇಲಾಖೆಗೆ ಅದರ ಉಪಯುಕ್ತತೆ ಸಹಜವಾಗಿ ಒದಗುತ್ತಿತ್ತಾದರೂ ಲೋಕದ ಕಣ್ಣಿಗೆ ನಮ್ಮ ಸ್ನೇಹಾಚಾರವೂ ಕಾಣುತ್ತಿತ್ತಲ್ಲ; ನಾನು ಚಕ್ರವರ್ತಿ ಮಾರಲಿಲ್ಲ. ನನ್ನೀ ನಿಲುವುಗಳಿಗೆ ಪೂರಕವಾಗುವ ಎರಡೇ ಆಖ್ಯಾಯಿಕೆಗಳನ್ನು ಇಲ್ಲಿ ಸ್ವಲ್ಪ ವಿವರದಲ್ಲಿ ಹೇಳುವುದು ಅಪ್ರಸ್ತುತವಾಗದು ಎಂದು ಭಾವಿಸುತ್ತೇನೆ.</p>
<p><strong>ಪುಸ್ತಕ ಒಂದು ಮಾಲು:</strong> ನನ್ನ ಪ್ರಕಟಣೆಗಳಲ್ಲಿ ಮೂರು ಇಂಗ್ಲಿಶ್ ಪುಸ್ತಗಳಿವೆ. ಎಲ್ಲ ತಂದೆಯದೇ ಬರವಣಿಗೆ. ೧. Scientific Temper (viii +110 pages, Rs 15), ೨. With the great minds (viii+88 pages, Rs. 30), ೩. Crossing the dateline (viii+ 144 pages, Rs. 40). ತಂದೆ ವೈಜ್ಞಾನಿಕ ಚಿಂತನೆಯ ಕುರಿತು ಎಲ್ಲಂದರಲ್ಲಿ ಮಾತಾಡಿದ್ದಾರೆ, ದಣಿವರಿಯದೇ ದಾಕ್ಷಿಣ್ಯಕ್ಕೆ ಬಲಿ ಬೀಳದೇ ಲೇಖನಗಳನ್ನೂ ಬರೆದಿದ್ದಾರೆ. ಜಾತಕ ಭವಿಷ್ಯ, ಭವಿಷ್ಯ ವಾಚನದಂಥ ಕನ್ನಡ ಕಿರು ಪುಸ್ತಕಗಳು ನೇರವಾಗಿ ಉಳಿದ ಪುಸ್ತಕಗಳಲ್ಲಿ ಧಾರಾಳವಾಗಿ ಆ ಚಿಂತನೆಯನ್ನು ವಿಸ್ತರಿಸಿದ್ದಾರೆ. ಆ ಕಾಲಕ್ಕೆ ಅವರ ಹಿರಿಯ ಮಿತ್ರ ಬಿ.ವಿ ಕಕ್ಕಿಲ್ಲಾಯರು ಕೊಟ್ಟ ಪ್ರೇರಣೆಯಲ್ಲಿ ವಿಸ್ತೃತವಾಗಿ ‘ವೈಜ್ಞಾನಿಕ ಮನೋಧರ್ಮ’ ಎಂಬ ಪುಸ್ತಕವನ್ನೇ ಬರೆದದ್ದು, ನವಕರ್ನಾಟಕ ಪಬ್ಲಿಕೇಶನ್ಸ್ ಪ್ರಕಟಿಸಿದ್ದು (೧೯೯೦), ಅಸಂಖ್ಯ ಮರುಮುದ್ರಣ ಮಾಡಿ (೨೦೦೭ ಏಳನೇ ಪರಿಷ್ಕೃತ ಮುದ್ರಣ) ಈಗಲೂ ಮಾರುತ್ತಿರುವುದು ನಿಮಗೆ ತಿಳಿದೇ ಇದೆ. ಆಗ ಅಜ್ಞಾತದಿಂದ ಎದ್ದ ಪ್ರಭಾನಂದ ಅತ್ತಾವರ ಎನ್ನುವ ತಂದೆಯ ಹಳೇ ಶಿಷ್ಯ, ತಂದೆಯನ್ನು ವೈಜ್ಞಾನಿಕ ಮನೋಧರ್ಮದ ಇಂಗ್ಲಿಶ್ ಆವೃತ್ತಿಗೆ ನಕ್ಷತ್ರಿಕನಂತೆ ಕಾಡಿದರು. ಅದಕ್ಕೊಲಿದು ತಂದೆ ೧೯೯೭ರಲ್ಲಿ ಸ್ವತಂತ್ರವಾಗಿ ಇಂಗ್ಲಿಶ್ನಲ್ಲಿ ಬರೆದು, ನನ್ನ ಪ್ರಕಟಣೆಗಳಲ್ಲಿ ಪ್ರಥಮವಾಗಿ ಬಂದ ಇಂಗ್ಲಿಶ್ ಪುಸ್ತಕ ಈ Scientific temper. ಇದನ್ನು ಅತೀವ ಸಂಭ್ರಮದಲ್ಲಿ, ಅಕ್ಷರಶಃ ತಲೆಯ ಮೇಲೆ ಹೊತ್ತು, ದಾರಿಯಲ್ಲಿ ಸಿಕ್ಕ ಅರೆಪರಿಚಿತರಿಗೆ, ಪರಿಚಿತರ ಮನೆಮನೆಗೆ ನುಗ್ಗಿ ಮಾರಿ, ಎಷ್ಟೋ ಬಾರಿ ಉಚಿತವಾಗಿ ಕೊಟ್ಟು ಓದಿಸಿದ ಖ್ಯಾತಿಯೂ ಪ್ರಭಾನಂದರಿಗೇ ಸಲ್ಲುತ್ತದೆ.</p>
<p><a href="http://lh4.ggpht.com/_XLLsV3Btn2I/TF7ijAQF2aI/AAAAAAAAFg4/hFefwXyhkgg/s512/prakashana%20muccu%20001.jpg"><img class="alignleft" src="http://lh4.ggpht.com/_XLLsV3Btn2I/TF7ijAQF2aI/AAAAAAAAFg4/hFefwXyhkgg/s512/prakashana%20muccu%20001.jpg" alt="" width="343" height="540" /></a>With the great minds &#8211; ಇದು ತಂದೆ ಬರೆದ ಐದು ಮಹಾಮೇಧಾವಿಗಳ ಸಾಧನೆ ಪ್ರಧಾನವಾದ ಜೀವನ ಚರಿತ್ರೆ. ತಂದೆಯ (ಒಂದು) ಪ್ರೀತಿ ಮತ್ತು ವೃತ್ತಿ ಸಮನ್ವಯಗೊಂಡದ್ದು ಗಣಿತ ವಿಜ್ಞಾನದಲ್ಲಿ. ಸಹಜವಾಗಿ ತಂದೆ ಶ್ರೀನಿವಾಸ ರಾಮಾನುಜನ್ ಬಗ್ಗೆ ಬಹಳಷ್ಟು ಅಧ್ಯಯನ ನಡೆಸಿ ೧೯೮೮ರಲ್ಲೇ ಸಾಕಷ್ಟು ದೊಡ್ಡದೇ ಪುಸ್ತಕ ಪ್ರಕಟಿಸಿದ್ದರು. (ಇಂದು ಅದು ‘ರಾಮಾನುಜನ್ ಬಾಳಿದರಿಲ್ಲಿ’ ಎಂಬ ಹೆಸರಿನಲ್ಲಿ ಪರಿಷ್ಕೃತ ನಾಲ್ಕನೇ ಆವೃತ್ತಿಯಲ್ಲಿ ಲಭ್ಯ) ಆದರೂ ಅದರ ಸೂಕ್ಷ್ಮವನ್ನು ಪ್ರಸ್ತುತ ಇಂಗ್ಲಿಶ್ ಸಂಕಲನಕ್ಕೆ ತರುವಲ್ಲಿ ಅವರು ಸ್ವಲ್ಪ ಸಂಕೋಚಪಟ್ಟಂತಿದೆ. ತನಗೆ ಅನಿವಾರ್ಯವಾಗಿ ಶ್ರೀನಿವಾಸ ರಾಮಾನುಜನ್ ಅವರೊಡನೆ ಮುಖಾಮುಖಿ ಸಾಧ್ಯವಾಗದ್ದಕ್ಕೋ ಏನೋ (ರಾಮಾನುಜನ್ ದೇಹಾಂತ್ಯ ೧೯೨೦. ನನ್ನ ತಂದೆಯ ದೇಹಧಾರಣೆ ೧೯೨೬) ‘ಸುಬ್ರಹ್ಮಣ್ಯನ್ ಚಂದ್ರಶೇಖರ್ ಕಂಡಂತೆ’ ಎಂಬ ಆತ್ಮೀಯ ಮತ್ತು ಸ್ವತಂತ್ರ ಚಿತ್ರಣವನ್ನೇ ಇಲ್ಲಿ ಕೊಟ್ಟಿದ್ದಾರೆ. ಇನ್ನುಳಿದ ನಾಲ್ಕೂ ಜನರನ್ನು ತಂದೆ ತನ್ನ ಆಪ್ತ ಸಂಬಂಧದ ನೆಲೆಯಲ್ಲೇ ಲೇಖಿಸಿದ್ದಾರೆ. ತಂದೆ ಸಿ.ವಿ ರಾಮನ್ನರನ್ನು ಮೊದಲು ಭಂಡತನದಿಂದ ಸಂದರ್ಶಿಸಲು ಹೋಗಿ ಉಚ್ಚಾಟಿಸಿ ಕೊಂಡದ್ದು, ಅನಂತರ ಯೋಗ್ಯತೆ ಗಳಿಸಿ ಅವರನ್ನು ಸಂದರ್ಶಿಸಿದ್ದು ಈಗ ಇತಿಹಾಸ. ಅದು ಮೊದಲು ದೀರ್ಘ ಲೇಖನವಾಗಿ ಅನಂತರ ಪುಸ್ತಕ ರೂಪದಲ್ಲಿ ಬಂದದ್ದು, ಸದ್ಯ ಕನ್ನಡಿಗರಿಗೆ ‘ವಿಜ್ಞಾನ ಸಪ್ತರ್ಷಿಗಳು’ ಸಂಕಲನದಲ್ಲಿ ಲಭ್ಯವಿದೆ. ಅದರ ಇಂಗ್ಲಿಶ್ ಅವತರಣಿಕೆಯೂ ಇಲ್ಲಿದೆ (ಗಮನಿಸಿ, ಇದು ಅನುವಾದವಲ್ಲ). ನೊಬೆಲ್ ಪುರಸ್ಕೃತ ಸುಬ್ರಹ್ಮಣ್ಯನ್ ಚಂದ್ರಶೇಖರ್ ತನ್ನ ಜೀವಿತ ಕಾಲದಲ್ಲಿ ಸಾಮಾನ್ಯರಿಗೆ ಎಲ್ಲ ರೀತಿಯಲ್ಲೂ ಅಲಭ್ಯರಾಗಿದ್ದರು. ಆದರೆ ಅದು ಗರ್ವದಿಂದಲ್ಲ, ನಿರಂತರ ಅಧ್ಯಯನ ಮತ್ತು ಅದಕ್ಕಡ್ಡಿಯಾಗುವ ಪ್ರಚಾರದಿಂದ ದೂರವಿರುವ ತಂತ್ರ ಅಷ್ಟೇ. ಶಿಕಾಗೋದ ದೂರದಲ್ಲಿದ್ದ ಅವರನ್ನು ಒಲಿಸಿಕೊಂಡು ತಂದೆ ಬರೆದ ‘ಸುಬ್ರಹ್ಮಣ್ಯನ್ ಚಂದ್ರಶೇಖರ್’ (ವೈಜ್ಞಾನಿಕ ಜೀವನ ವೃತ್ತಾಂತ) ಕನ್ನಡ ಪುಸ್ತಕ ಲೋಕದಲ್ಲೇ ಅನನ್ಯ. ಇದನ್ನು ರಾಮನ್ಸ್ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರ ಮಾತುಗಳಲ್ಲಿ ನೋಡಿ: When no other Indian language had thought of bringing out a book on Chandrashekhar, you have done it in Kannada. ಅದರ ಸಾರ ಸಂಗ್ರಹವನ್ನು ತಂದೆಯೇ ಇಂಗ್ಲಿಶ್ನಲ್ಲಿ ಪರಿಭಾವಿಸಿ ಕೊಟ್ಟದ್ದೂ ಇಲ್ಲಿದೆ. ಈ ಸಂಕಲನಕ್ಕೆ ಗೌರವ ತಂದ ಮತ್ತಿಬ್ಬರು ಕಲಾಮೇರುಗಳು &#8211; ಕೊಳಲ ಮಾಂತ್ರಿಕ ಬಿಎನ್ ಸುರೇಶ್ ಮತ್ತು ನಾಟ್ಯ ಸರಸ್ವತಿ ಕೆ. ಮುರಳೀಧರ ರಾವ್.</p>
<p><a href="http://lh4.ggpht.com/_XLLsV3Btn2I/TF7ii01qHZI/AAAAAAAAFgw/ipNu7rJ8Ksg/s512/crossing.jpg"><img class="alignleft" src="http://lh4.ggpht.com/_XLLsV3Btn2I/TF7ii01qHZI/AAAAAAAAFgw/ipNu7rJ8Ksg/s512/crossing.jpg" alt="" width="342" height="525" /></a>Crossing the dateline &#8211; ಈಗಾಗಲೇ ಹೇಳಿದಂತೆ ತಂದೆ ಸುಬ್ರಹ್ಮಣ್ಯನ್ ಚಂದ್ರಶೇಖರ್ ಬಗ್ಗೆ ಪುಸ್ತಕ ಬರೆದು ಪ್ರಕಟಿಸಿದ ಮೇಲೆ ಅದನ್ನು ಖುದ್ದು ಚಂದ್ರಶೇಖರರಿಗೆ ಕೊಡುವ ಉತ್ಸಾಹದಲ್ಲಿ (ತಾಯಿಯ ಜೊತೆಗೇ) ಅಮೆರಿಕಾ ಯಾತ್ರೆ ಕೈಗೊಂಡರು. (ಲಘು ಲಹರಿಯಲ್ಲಿ ತಂದೆ ಸದಾ ಹೇಳುತ್ತಿದ್ದ ಮಾತು &#8211; ದೇವರು ಮತ್ತು ಪ್ರವಾಸ ನನ್ನ ವೈರಿಗಳು! ಅದು ಅವರ ಪ್ರಥಮ ಮತ್ತು ಏಕೈಕ ವಿದೇಶಗಮನವೂ ಹೌದು) ಅಮೆರಿಕಾದ ಪ್ರಜೆಗಳೇ ಆಗಿರುವ ನನ್ನ ತಮ್ಮ ಆನಂದವರ್ಧನನ ಕುಟುಂಬದ ಒತ್ತಾಯ, ಆಕರ್ಷಣೆ, ಒಡನಾಟ ಮತ್ತು ಓಡಾಟದ ಸ್ವಾರಸ್ಯಕರ ಕಥನದೊಡನೆ, ಅಲ್ಲಿ ಚಂದ್ರಶೇಖರರನ್ನು ಭೇಟಿಯಾಗಿ ಪುಸ್ತಕ ಕೊಟ್ಟದ್ದಲ್ಲದೆ, ಎರಡು ದಿನ ನಡೆಸಿದ ಅನೌಪಚಾರಿಕ ಮತ್ತು ಅಪೂರ್ವ (ಮತ್ತು ಅಂತಿಮ ಎಂದೂ ಹೇಳುವಂತಾದ್ದು ಕೇವಲ ಕಾಕತಾಲೀಯ. ಅದಾಗಿ ಕೆಲವೇ ದಿನಗಳಲ್ಲಿ ಚಂದ್ರಶೇಖರ್ ದೇಹಾಂತ್ಯವಾಯ್ತು) ವಿವರಗಳೆಲ್ಲ ‘ಸಪ್ತಸಾಗರದಾಚೆಯೆಲ್ಲೋ’ ಪುಸ್ತಕದಲ್ಲಿ ದಾಖಲಾಗಿದೆ. ಆ ಪುಸ್ತಕದ ತಯಾರಿಯ ಜೊತೆಜೊತೆಗೆ, ತಂದೆಯ ಹಳೆಯ ವಿದ್ಯಾರ್ಥಿ, ಪ್ರಸ್ತುತ ಮೈಸೂರಿನ ಇಂಗ್ಲಿಶ್ ಪತ್ರಿಕೆ ಸ್ಟಾರ್ ಆಫ್ ಮೈಸೂರ್ ಇದರ ಸಂಪಾದಕ ಕೆಬಿ ಗಣಪತಿ ಅವರ ಒತ್ತಾಯದ ಮೇರೆಗೆ ಅದನ್ನೇ ಇಂಗ್ಲಿಶಿನಲ್ಲಿ ಧಾರಾವಾಹಿಸಿದರು. ಹಾಗೆಂದು Crsossing the dateline  ಅನುವಾದವಲ್ಲ, ಭಾಷೆಯ ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡೇ ಮೂಡಿದ ಸ್ವತಂತ್ರ ಕೃತಿ.</p>
<blockquote><p>[ತಂದೆ ತನ್ನನ್ನೆಂದೂ ‘ಅನುವಾದಿಸಿಕೊಳ್ಳಲು’ ಅವಕಾಶ ಕೊಡಲಿಲ್ಲ! ಪೈಗಳ ಆಹ್ವಾನದ ಮೇರೆಗೆ ತರಂಗದ ಪ್ರಥಮ ಸಂಚಿಕೆಗೆ ಇವರು ಕನ್ನಡದಲ್ಲೇ ಬರೆದಿದ್ದ ಲೇಖನವನ್ನು ಸಂತೋಷ ಕುಮಾರ ಗುಲ್ವಾಡಿ ‘ಸಾಮಾನ್ಯರಿಗಾಗಿ ಸರಳಗೊಳಿಸುತ್ತೇನೆ’ ಎಂದಾಗ ತಿರಸ್ಕರಿಸಿ, ವಾಪಾಸು ತರಿಸಿಕೊಂಡಿದ್ದರು. ಖ್ಯಾತ ಭಾಷಾಶಾಸ್ತ್ರಜ್ಞ ಡಿ.ಎನ್ ಶಂಕರ ಭಟ್ಟರು ತಮ್ಮ ವಾದಕ್ಕೆ ತಂದೆಯ ಶೈಲಿಯನ್ನು ತಿದ್ದಲು ಹೊರಟಾಗ ಸಾಕಷ್ಟು ಚರ್ಚೆ ನಡೆಸಿದ್ದರು. ಕೊನೆಯಲ್ಲಿ, ಸರಳತೆಯೆಂಬ ಕಲಗಚ್ಚನ್ನು ತನ್ನಿಂದ ನಿರೀಕ್ಷಿಸದಿರಿ. ತನ್ನದೇನಿದ್ದರೂ ಕುಂಕುಮಕೇಸರೀ ಮಿಶ್ರಿತ ಕೆನೆಹಾಲು ಎಂದೇ ಮುಗಿಸಿದ್ದರು. ಛಲ ಬಿಡದ ಭಟ್ಟರು ತನ್ನ ‘ಕನ್ನಡ ಬರಹವನ್ನು ಸರಿಪಡಿಸೋಣ’ ಪುಸ್ತಕದಲ್ಲಿ ಚರ್ಚೆಯ ವಿವರಗಳನ್ನು ಬಿಟ್ಟು, ತನ್ನ ವಾದಕ್ಕೆ ಪೂರಕವಾಗಿ ತಂದೆಯ ವಾಕ್ಯಗಳನ್ನು ಉದ್ಧರಿಸಿಕೊಂಡರು. ತಂದೆ ನಿರುಮ್ಮಳವಾಗಿ ನಕ್ಕು “ನೋಡಿ ಸ್ವಾಮೀ ನಾನಿರುವುದೇ ಹೀಗೆ. He is entitled to his opinion” ಎಂದುಬಿಟ್ಟಿದ್ದರು. ತಂದೆಯ ವಿಚಾರ ಬಂದಾಗ ಭಾವುಕನಾಗಿ ದಾರಿ ತಪ್ಪಿದೇಂತನ್ನಿಸಿತೇ - ಕ್ಷಮಿಸಿ.]</p></blockquote>
<p>ದಿಲ್ಲಿಯ ಖ್ಯಾತ ಪ್ರಕಾಶಕ ಮತ್ತು ವಿತರಕನೊಬ್ಬ ನನ್ನ ಈ ಮೂರೂ ಇಂಗ್ಲಿಶ್ ಪ್ರಕಟಣೆಗಳನ್ನು ನೋಡಿ ಆಕರ್ಷಿತನಾದ. ಇವುಗಳ ಕುರಿತು ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಂ ಅವರ ಮೆಚ್ಚುಗೆಯ ಮಾತುಗಳೂ ಆತನಿಗೆ ಹೆಚ್ಚಿನ ಪ್ರೇರಣೆ ಕೊಟ್ಟವು. ಆತ ಅವನ್ನು ಅಖಿಲ ಭಾರತ ಮಾರುಕಟ್ಟೆಗೇರಿಸಲು ಅಪೂರ್ವ ಖರೀದಿ ಯೋಜನೆ ಮುಂದಿಟ್ಟ. “ಮೂರೂ ಪುಸ್ತಕಗಳನ್ನು ಕೂಡಲೇ ತಲಾ ಎರಡು ಸಾವಿರ ಪ್ರತಿಗಳ ಸಂಖ್ಯೆಯಲ್ಲಿ, ಶೇಕಡಾ ಒಂದೂ ರಿಯಾಯ್ತಿ ಬಯಸದೇ ಈಗಿನ ಮುದ್ರಿತ ಬೆಲೆಯಲ್ಲೇ ನಗದು ಕೊಟ್ಟು ಕೊಳ್ಳುತ್ತೇನೆ. ಆದರೆ ಎರಡೇ ನಿಬಂಧನೆ. ೧. ಸರಳ ಮುಖಪುಟಗಳನ್ನು ನನ್ನದೇ ವೆಚ್ಚದಲ್ಲಿ ಬದಲಿಸುತ್ತೇನೆ. ೨. ಸಹಜವಾಗಿ ನನ್ನದೇ ಮುದ್ರಿತ ಬೆಲೆ ನಮೂದಿಸುತ್ತೇನೆ.” ಮುಂದುವರಿದು ಪರೋಕ್ಷವಾಗಿ ನನ್ನ ಪ್ರಕಾಶನದ ಧೋರಣೆಯನ್ನೆ ಗೇಲಿಮಾಡುವಂತೆ “ಯಾವುದೇ ವ್ಯಾಪಾರಿ ಈ ಗಾತ್ರದ ಪುಸ್ತಕವನ್ನು ದಾಸ್ತಾನಿಟ್ಟು ಮಾರುವಲ್ಲಿ ಕೇವಲ ರೂ ಐದೋ ಹತ್ತೋ ಗಳಿಸುವುದನ್ನು ತಿರಸ್ಕರಿಸುತ್ತಾನೆ. ಅದೇ ಸ್ಥಾನದಲ್ಲಿ ಮೂವತ್ತೋ ನಲ್ವತ್ತೋ ಬರುವುದಿದ್ದರೆ ಖಂಡಿತಾ ಐದೋ ಹತ್ತೋ ಪ್ರತಿಗಳಿಗೆ ಅವಕಾಶ ಕೊಡುತ್ತಾನೆ! ಇಂದು ಇಂಗ್ಲಿಷ್ ವೈಚಾರಿಕ ಪುಸ್ತಕಗಳಲ್ಲಿ ಪುಟಕ್ಕೆ ರೂ ಒಂದರಂತೆ ದರವಿದ್ದರೆ ಗಿರಾಕಿ ಗೊಣಗುವುದಿಲ್ಲ ಎನ್ನುವುದನ್ನು ಗಮನಿಸಿದರೆ ನಿಮ್ಮ ಹದಿನೈದು ರೂಪಾಯಿ ಬೆಲೆಯ Scientific temperಗೆ ನಾನು ನಿಗದಿಸುವ ಕನಿಷ್ಠ ಬೆಲೆ ನೂರು ರೂಪಾಯಿ” ಎಂದೇ ಆತ ಮುಗಿಸಿದ. ಆದರೆ ಅಂತಿಮವಾಗಿ ಕೊಳ್ಳುಗರ ಕಿಸೆಗೆ ಎಂಬತ್ತೈದು ರೂಪಾಯಿ ಹೆಚ್ಚುವರಿ ಹೊರೆಯಾಗಲು ನಾನು (ತಂದೆಯೂ ಸೇರಿದಂತೆ ಹೇಳುವುದಾದರೆ ನಾವು) ಒಪ್ಪಲಿಲ್ಲ!</p>
<p>ಜಾತಿ ಕೆಡುವ ಭಯಕ್ಕೆ ಜನಿವಾರ ಕಳಚಿಟ್ಟು ಬನ್ನಿ! ಕನ್ನಡದ ಬಲು ಪ್ರಚುರಿತ ಪುಸ್ತಕ ಮಳಿಗೆ (‘ಬಪುಮ’ ಎಂದಿಟ್ಟುಕೊಳ್ಳಿ) ಒಂದರೊಡನೆಯೂ ಇಂಥದ್ದೇ ಇನ್ನೊಂದು ಅನುಭವ ಕೇಳಿ. ಆಗ ಸಗಟು ಖರೀದಿಯ ಯಾವುದೋ ಒಂದು ಮುಖದಲ್ಲಿ ನನ್ನ ತಂದೆಯ ಅಭಿಮಾನೀ ಶಿಷ್ಯರೊಬ್ಬರು ಅಧಿಕಾರಿಯಾಗಿದ್ದರು. ಅವರು ಜಿಟಿನಾ ಕೃತಿಯನ್ನು ಎಷ್ಟೂ ಕೊಳ್ಳುತ್ತಾರೆಂಬ ವಿಶ್ವಾಸ ಬಪುಮಕ್ಕೆ ಬಂತು. ನನಗೆ ಅದರ ಯಜಮಾನರ ದೂರವಾಣಿ, “ಸ್ವಾಮೀ ನಮಗೆ ನಿಮ್ಮ ‘ನೋಡೋಣ ಬಾರಾ ನಕ್ಷತ್ರ’ ಸ್ವಲ್ಪ ಪ್ರತಿಗಳು ಬೇಕಿತ್ತು, ಹೇಗೆ ಕೊಡ್ತೀರಿ?” ನಾನು ಎಂದಿನ ಮೂರನೇ ಒಂದು ರಿಯಾಯ್ತಿ ಮಾತಾಡಿದೆ. ಬಪುಮ ಕೂಡಲೇ  “ಇಲ್ಲ ಇಲ್ಲ. ಅದಾಗುವುದಿಲ್ಲ ನೀವು ಕನಿಷ್ಠ ೫೦% ಕೊಡಬೇಕು. ನಾವು ಎಂಟು ಹತ್ತು ಕೇಳ್ತಿಲ್ಲ, ಇನ್ನೂರು ಮುನ್ನೂರು ಪ್ರತಿ ನಗದು ಕೊಟ್ಟು ಕೊಳ್ತೇವೆ” ಎಂದರು. ನಾನು ವಾಸ್ತವವನ್ನು ಬಿಡಿಸಿಡುತ್ತಾ “ಸದ್ಯ ಕೊಡುತ್ತೇನೆಂದರೂ ನನ್ನಲ್ಲಿರುವುದು ನೂರೇ ಪ್ರತಿ. ಮತ್ತೆ ಅದನ್ನು ಯಾವ ಕಾರಣಕ್ಕೂ ಹೆಚ್ಚಿನ ರಿಯಾಯ್ತಿ ದರದಲ್ಲಿ ಕೊಡುವ ಯೋಚನೆ ನನಗಿಲ್ಲ.” ಬಿಟ್ಟೆನೆಂದರೂ ಬಿಡದೀ ಮಾಯೆ ಎಂಬಂತೆ ಬಪುಮ “ತಿಂಗಳೊಳಗೆ ಮರುಮುದ್ರಿಸಿ ಕೊಡಿ, ಬೆಲೆ ನಮ್ಮ ೫೦%ಗೆ ಸರಿ ಹೊಂದುವಂತೆ ಹೆಚ್ಚೇ ಇಡಿ” ಎಂದರು. ನಾನೊಪ್ಪಲಿಲ್ಲ. ಪ್ರತಿ ಸಂಖ್ಯೆಯನ್ನು ಸಾವಿರದ ಮೇಲಕ್ಕೂ ಏರಿಸಿ ಆಮಿಷ ಒಡ್ಡಿದರು, ನಮ್ಮ ಪ್ರಕಾಶನ ತತ್ತ್ವದ ಉಲ್ಲಂಘನೆಯಾಗುವುದೆಂಬ ಭಯವಿದ್ದರೆ ತಮ್ಮದೇ ಹೆಸರಿನಲ್ಲಿ ಒಂದು ಮುದ್ರಣಕ್ಕೆ ಅವಕಾಶ ಕೊಟ್ಟರೂ ಸಾಕೆಂದು ಒತ್ತಾಯವನ್ನೂ ಹೇರಿದರು. ನಾನು ಯಾವುದಕ್ಕೂ ಜಗ್ಗಲಿಲ್ಲ!</p>
<p><strong>ಸೋಲಿನ ಆಟ: </strong>ನನ್ನ ಪ್ರಕಟಣೆಗಳ ಸಂಪರ್ಕಕ್ಕೆ ಬಂದ ಸಣ್ಣ ಸಂಖ್ಯೆಯ ಪುಸ್ತಕ ಪ್ರೇಮಿಗಳಲ್ಲಿ ‘ಅತ್ರಿ ಪ್ರಕಟಣೆ ಎಂದರೆ ಗಟ್ಟಿ ಸಾಹಿತ್ಯ ಮತ್ತು ಸುಲಭ ಬೆಲೆಯದ್ದು’ ಎಂಬ ಉದ್ಗಾರವೇನೋ ತೆಗೆಯುತ್ತಿದ್ದರು. ಆದರೆ ಇಂದು ಪುಸ್ತಕೋದ್ಯಮ ಬೆಳೆದ ಕ್ರಮದಲ್ಲಿ ನಾನ್ಯಾಕೋ ಸೋಲಿನ ಆಟ ಆಡುತ್ತಿದ್ದೇನೆ ಎಂಬ ಭಾವವೂ ನನ್ನೊಳಗೆ ಬೆಳೆಯುತ್ತಲೇ ಬಂತು. ನಾನು ಬಿಡಿ ಪುಸ್ತಕ ವ್ಯಾಪಾರಿಯಾಗಿ ಮಂಗಳೂರು ಪರಿಸರದಲ್ಲಿ, ನನ್ನ ತಾಕತ್ತಿನಲ್ಲಿ ಮಾರಿಹೋಗಬಹುದಾದ್ದೆಲ್ಲವನ್ನು ಎಲ್ಲಿಂದಲೂ ನಗದು ಕೊಟ್ಟು ಕೊಂಡು, ಪ್ರದರ್ಶಿಸಿ, ಮಾರುವಲ್ಲಿ ನಿರಂತರ ತೊಡಗಿದ್ದೇನೆ. ಇದಕ್ಕೆ ಕರ್ನಾಟಕದ ಯಾವ ಮೂಲೆಯ ಪ್ರಕಾಶನವನ್ನೂ ನಾನು ಬಳಸದೇ ಬಿಟ್ಟಿಲ್ಲ. ಆದರೆ ರಾಜ್ಯದ ಇತರ ಪುಸ್ತಕ ಮಳಿಗೆಗಳು (ತೀರಾ ಕೆಲವರನ್ನು ಬಿಟ್ಟು), ಸ್ವತಂತ್ರ ಬಿಡಿ-ಮಾರಾಟದ ಮಳಿಗೆಯೂ ಇರುವ  ಅನ್ಯ ಪ್ರಕಾಶಕರು (ನನ್ನ ಪೂರೈಕೆದಾರರು) ನನ್ನ ಪ್ರಕಟಣೆಗಳ ಬಗ್ಗೆ ನನ್ನದೇ ಧೋರಣೆ ತಾಳಲಿಲ್ಲ. ಕೆಲವರು ಸ್ಥಳೀಯವಾಗಿ ಅನಿವಾರ್ಯತೆ ಬಂದಾಗ ಆ ಒಂದೊಂದು ಶೀರ್ಷಿಕೆಯನ್ನು, ಬೇಡಿಕೆ ಇರುವಷ್ಟೇ ತರಿಸಿಕೊಂಡರು. ಓರ್ವ ಖ್ಯಾತಿವೆತ್ತ ಪ್ರಕಾಶಕ/ ಮಾರಾಟಗಾರರಂತೂ ಎಂದೋ ತರಿಸಿಕೊಂಡ ನನ್ನ ಕೆಲವೇ ಪುಸ್ತಕಗಳನ್ನು, ಅವರಂಗಡಿಯ ಅವ್ಯವಸ್ಥೆಗೆ ಬಣ್ಣ ಕಳೆದು ಮುಕ್ಕಾದ ಸ್ಥಿತಿಯಲ್ಲಿ, ‘ಕ್ಷಮಿಸಿ, ಮಾರಾಟವಾಗೋಲ್ಲ’ ಎಂಬ ಪುಟ್ಟ ಷರಾ ಸಹಿತ ಮರಳಿಸಿ, ನಿರ್ಲಜ್ಜವಾಗಿ ಅವರ ಪುಸ್ತಕಗಳ ಬಿಲ್ಲಿನ ಜೊತೆ ಹಣ ಕೇಳಿಕೊಂಡಿದ್ದರು! ಅವರು ಕಳಿಸುವ ಮೊದಲು ನನ್ನನ್ನು ವಿಚಾರಿಸುವ ಸೌಜನ್ಯವನ್ನೂ ತೋರಲಿಲ್ಲ. (ನಾನು ಮಾರಿ ಇಲ್ಲವೇ ಮರಳಿಸಿ ಕರಾರಿನಲ್ಲಿ ಅವನ್ನು ಕೊಟ್ಟದ್ದಲ್ಲ. ಮತ್ತವರು ತಮ್ಮ ಪ್ರಕಟಣೆಗಳ ಬಗ್ಗೆ ಬಿಲ್ಲಿನಲ್ಲಿ ಸ್ಪಷ್ಟವಾಗಿ ಘೋಷಿಸಿಕೊಂಡಿದ್ದಾರೆ &#8211; ಒಮ್ಮೆ ಮಾರಾಟವಾದ ಪುಸ್ತಗಳನ್ನು ಹಿಂದೆ ಪಡೆಯುವುದಿಲ್ಲ!).  ‘ನೀ ನನಗಿದ್ದರೆ ನಾ ನಿನಗೆ’ ಎಂಬ ಬಾಲಪಾಠದಲ್ಲಿ ಬರುವ ಕತ್ತೆಯ ವಿವೇಚನೆಯೂ ಬಹುತೇಕ ಪುಸ್ತಕೋದ್ಯಮಿಗಳಿಗಿಲ್ಲ.</p>
<p><a href="http://lh5.ggpht.com/_XLLsV3Btn2I/TF7iqaDhSLI/AAAAAAAAFhE/bZnEeKyNWIQ/s512/saptasa.jpg"><img class="alignleft" src="http://lh5.ggpht.com/_XLLsV3Btn2I/TF7iqaDhSLI/AAAAAAAAFhE/bZnEeKyNWIQ/s512/saptasa.jpg" alt="" width="343" height="532" /></a>ಜನಪರ ಎಂದು ಹೇಳಿಕೊಳ್ಳುವ ಸರಕಾರಗಳು (ಪಕ್ಷಾತೀತವಾಗಿ) ಮತ, ಭಾಷೆ, ನೆಲ, ಜಲವೆಂದು ಜನರ ಭಾವನೆಗಳಲ್ಲಿ ಆಡುತ್ತಲೇ ಇರುತ್ತವೆ. ಎಲ್ಲದರ ಬಗ್ಗೆ ಟೀಕಾಸ್ತ್ರ ಎಸೆಯುವುದು ಇಲ್ಲಿ ಹೆಚ್ಚಾಗಬಹುದು. ಆದರೆ ಕನ್ನಡದ ಘೋಷಣೆ ಮಾಡುತ್ತಾ ಇಂಗ್ಲಿಷ್ ಮಾಧ್ಯಮದ ಹುಚ್ಚುಚ್ಚು ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿವೆ ಎನ್ನುವುದನ್ನಂತೂ ಸಾವಿರನೇ ಬಾರಿ ಪುನರುಚ್ಚರಿಸದಿರಲಾರೆ. ಶಿಕ್ಷಣ, ಸಂಸ್ಕೃತಿಗಳ ಪೂರಕಾಂಗವಾಗಿ ಸಹಜ ವಿಕಸನದಲ್ಲಿದ್ದ ಕನ್ನಡ ಪುಸ್ತಕೋದ್ಯಮವಂತೂ ವನಮಹೋತ್ಸವದ ಸಂಭ್ರಮದಲ್ಲಿ ತಾವೇ ನೆಟ್ಟ ಸಸಿಯನ್ನು ತೊತ್ತಳ ತುಳಿಯುವ ಉಡಾಫೆಯಲ್ಲಿ ನರಳುತ್ತಿದೆ. ಕನ್ನಡದ ಓದನ್ನು ಬಯಸುವ ಯುವ ಪೀಳಿಗೆಯೇ ಬರುತ್ತಿಲ್ಲ. ಪ್ರೇರಣೆ ನೀಡಬೇಕಾದ ಮನೆ, ಶಾಲೆ ಮತ್ತು ಪರಿಸರಗಳು ಯೋಜನೆಯಿಲ್ಲದೆ ಅಭಿವೃದ್ಧಿಯ ಶಾಪಕ್ಕೊಳಗಾಗಿರುವ ನಮ್ಮ ದಾರಿಗಳಂತೇ ಆಗಿದೆ. ಇಂಥಲ್ಲಿ ನನ್ನ ಪ್ರಕಟಣೆಗಳು ಯಾವುದೇ ಪಾಠಪಟ್ಟಿಯನ್ನು ನೇರ ಮುಟ್ಟುವುದಿಲ್ಲ. ಕೇವಲ ರೋಚಕ ಓದಿಗೆ ಅಥವಾ ವಿಚಾರಹೀನ ಭಾವುಕತೆಗೆ ಅವಕಾಶ ಇವುಗಳಲ್ಲಿಲ್ಲ. ಪ್ರಾಥಮಿಕದಿಂದ ಸ್ನಾತಕೋತ್ತರದವರೆಗಿರುವ ಸಾವಿರಾರು (ಲಕ್ಷಾಂತರವೂ ಇರಬಹುದು) ಸಂಸ್ಥೆಗಳ ಕೇವಲ ಪ್ರಾತಿನಿಧಿಕ ಖರೀದಿಗೊಳಗಾಗಲೂ ಇವಕ್ಕೆ ಜನಪ್ರಿಯತೆಯ ಮುಖವಾಡವಿಲ್ಲ. ಮುದ್ರಣ ಪ್ರಾವೀಣ್ಯ ಮೆರೆಯುವ ಮತ್ತು ಹೊಸ ಓದು, ಬೆಸ್ಟ್ ಆಫ್, ಸಮಗ್ರ, ಅಂಕಣ ಸಂಕಲನ ಇತ್ಯಾದಿ ಚರ್ವಿತಚರ್ವಣಗಳ ಅಡ್ಡೆಯಲ್ಲಿ ನನ್ನ ಪ್ರಕಟಣೆಗಳು ಎದ್ದು ಕಾಣುವುದು ಸಾಧ್ಯವೇ ಇಲ್ಲ! ಎತ್ತಿ ಆಡಬಹುದಾದ ಮಾಧ್ಯಮದ ಅಂಕಣಗಳು, ಅಂಕಣಕಾರರು ನನ್ನ ಲೆಕ್ಕಕ್ಕೆ ತುಂಬಾ ಕಡಿಮೆ ದಕ್ಕಿದ್ದನ್ನು ಅದೃಷ್ಟದ ತಲೆಗೆ ಕಟ್ಟಲು ನನ್ನ ಮನ ಒಪ್ಪದು. ಇದಕ್ಕೆ ಪೂರಕವಾಗಿ ಒಂದೆರಡು ಉದಾಹರಣೆಗಳು.</p>
<p><strong>ಬೆನ್ನೆಲುಬಿಲ್ಲದ ಪತ್ರಿಕೋದ್ಯಮ: </strong>ಮುದ್ರಣ ಮಾಧ್ಯಮಗಳಲ್ಲಿ ಪ್ರಕಟಿತ ಪುಸ್ತಕಗಳ ಪಟ್ಟಿಯಾಗಲೀ (ಸಾದರ ಸ್ವೀಕಾರ ಎನ್ನಿ), ಕನಿಷ್ಠ ಹಾಗೆ ಬಂದವುಗಳ ಶಿಸ್ತುಬದ್ಧ ಪರಿಚಯವೋ ವಿಮರ್ಶೆಯೋ ಒಂದು ತತ್ತ್ವವಾಗಿ ಎಂದೂ ಬಂದದ್ದಿಲ್ಲ. ಮೊದಮೊದಲು ನಾನು ಎಲ್ಲಾ ಪತ್ರಿಕೆಗಳಿಗೂ ತಲಾ ಎರಡು ಪ್ರತಿಗಳನ್ನು ‘ವಿಮರ್ಶೆಯ ಕೃಪೆಗಾಗಿ’ ಎಂದು ಷರಾ ಹಚ್ಚಿಯೇ ಕಳಿಸುತ್ತಿದ್ದೆ. ಎಷ್ಟೋ ಪುಸ್ತಕಗಳಿಗೆ ವಿಮರ್ಶೆಯಿರಲಿ, ‘ಸ್ವೀಕಾರ’ ಪಟ್ಟಿಯಲ್ಲೂ ಅವಕಾಶ ಸಿಗದಿದ್ದುದು ಒಂದು ಕಥೆ. ಮತ್ತೆಷ್ಟೋ ಬಾರಿ ವಿಮರ್ಶಕನ ಅಸಾಮರ್ಥ್ಯ ಕೃತಿಯ ಕೊರತೆಯಾಗಿಬಿಡುತ್ತಿತ್ತು. ‘ರಾಮಾನುಜನ್ ಬಾಳಿದರಿಲಿ’ ಕೃತಿಪರೀಕ್ಷಕನೊಬ್ಬ ಗಣಿತೀಯ ವಿವರಣೆಗಳನ್ನು ಕಬ್ಬಿಣದ ಕಡಲೆ ಎಂದ. ಕಪ್ಪುಕುಳಿ, ಕಪ್ಪು ರಂಧ್ರಗಳು ಯಾಕೇ ಬ್ಲ್ಯಾಕ್ ಹೋಲೇ ಇದ್ದರೇನು ಎನ್ನುವವರು ‘ಕೃಷ್ಣವಿವರ’ ಎಂಬ ಪದವನ್ನು ತಂದೆ ಬಳಸಿದಾಗಲಂತೂ (ಗಮನಿಸಿ, ಇದನ್ನು ಠಂಕಿಸಿದ್ದು ತಂದೆ ಅಲ್ಲ, ಖ್ಯಾತ ಖಭೌತ ವಿಜ್ಞಾನಿ ಜಯಂತ್ ನಾರಳೀಕರ್) ‘ಸಂಸ್ಕ್ರುತ ಭೋ ಇಷ್ಟ’ ಎಂದು ಗೇಲಿ ಮಾಡಿದರು. ಎಲ್ಲ ಮಕ್ಕಳಿಗೂ ಒಂದೇ ಅಳತೆಯ ಚಡ್ಡಿ ಹೊಲಿಯುವುದಲ್ಲ ಎನ್ನುತ್ತಿದ್ದರು ತಂದೆ. ಗಡ್ಡ ಹೆರೆಸಲು ಬ್ಲೇಡು, ಗೆಲ್ಲು ಕಡಿಯಲು ಕತ್ತಿ, ಮರದ ಬುಡಕ್ಕಾದರೆ ಕೊಡಲಿಯೇ ಸರಿ ಎಂದೂ ವಿವರಿಸಿದ್ದುಂಟು. ಪರ್ಯಾಯ ಪದಗಳ ವಿಪುಲತೆಯಲ್ಲಿ ವಿಜ್ಞಾನದ ಭಾಷೆಯನ್ನು ಸರಳಗೊಳಿಸಿದ್ದೇವೆ ಎನ್ನುವುದು ಅಪಕಲ್ಪನೆ, ಗೊಂದಲಕ್ಕೆ ದಾರಿ. ಇದು ಒಂದು ಕ್ಷಣದ, ಶಬ್ದದ, ವಾಕ್ಯದ ಅಗತ್ಯವಲ್ಲ, ಒಂದು ಪರಂಪರೆಯ ಒಂದು ಜೀವಮಾನದ ಚಿಂತನೆಯ ಫಲ. ಮೆಟ್ಟಲಿನಲ್ಲಿ ಎಡವಿದವರನ್ನು ಉಪಚರಿಸಿ, ಸೌಧದ ಸೌಂದರ್ಯದತ್ತ ಸೆಳೆಯಲು ತಂದೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರು. ಅಡ್ಡಕಸಬಿಗೆ ಇಟ್ಟಿಗೆಯ ಮೇಲೆ ಇಟ್ಟಿಗೆಯಿಟ್ಟರೆ ಗೋಡೆ. ಪರಿಣತ ಮೇಸ್ತ್ರಿಗೆ ನೆಲದ ಹದ, ಅಡಿಪಾಯದ ದೃಢತೆಯೂ ಕಾಡುತ್ತದೆ. ಮುಂದುವರಿದು ಸಾಲಿಗೆ ಹಗ್ಗ, ಪ್ರತಿ ಕಲ್ಲಿಗೂ ಮಟ್ಟಗೋಲು, ತೂಕದ ಗುಂಡು, ಜಲಮಟ್ಟವೂ ಬಳಕೆಯಾದರಷ್ಟೇ ಶಿಲ್ಪ (ಇಲ್ಲವಾದರೆ ಬಳಕೆದಾರನ ಗೋರಿ!). ತಂದೆ ಇದು ತನ್ನದು, ಸರ್ವಪ್ರಥಮ ಸಾಧನೆ ಎಂಬಿತ್ಯಾದಿ ಹಮ್ಮು ಎಂದೂ ತೋರಿದ್ದಿಲ್ಲ. ಭಾಷೆಯನ್ನು ವಿಜ್ಞಾನಕ್ಕೆ ದುಡಿಸುವಲ್ಲಿ ಅವರಿಗೆ ಇಂಗ್ಲಿಷಿನಲ್ಲಿ ಅಸಿಮೋವ್ ಗ್ಯಾಮೋವ್‌ಗಳು ಆದರ್ಶ. ಕನ್ನಡಕ್ಕೆ (ತಾನಲ್ಲ) ಆರ್.ಎಲ್ ನರಸಿಂಹಯ್ಯ, ಸಿ.ಎನ್ ಶ್ರೀನಿವಾಸ ಅಯ್ಯಂಗಾರ್ ಹಾಕಿಕೊಟ್ಟಿದ್ದಾರೆ ದಾರಿ ಎಂದು ಪ್ರಚುರಿಸುತ್ತಿದ್ದದ್ದು ಜಾಣ ಕಿವುಡಿನ ಮೇಲೆ ಬೀಳುತ್ತಿತ್ತು. ದುರಂತವೆಂದರೆ ನಮ್ಮ ಬಹುತೇಕ ಪತ್ರಿಕಾ ವಿಮರ್ಶಕರು ಕೇವಲ ಸಾಹಿತ್ಯ ವಿದ್ಯಾರ್ಥಿಗಳು! ಪತ್ರಿಕಾ ಬ್ರಹ್ಮರುಗಳ ಇಸ್ಪೀಟ್ ಆಟದಲ್ಲಿ ಜೋಕರುಗಳಿಗೇ ಪ್ರಾಧಾನ್ಯ. ವಿವಿಧ ಶಿಸ್ತುಗಳಿಗೆ ಸಮರ್ಥರನ್ನು ಆಯ್ದು, ಬಳಸುವುದು ಅವರಿಗೆ ಅನಾವಶ್ಯಕ ವೈಭವ! ಮೊನ್ನೆ ಸಿಕ್ಕ ಗೆಳೆಯ ಪಿ.ಮಹಮ್ಮದ್ (ಪ್ರಜಾವಾಣಿ ಬಳಗದ ವ್ಯಂಗ್ಯಚಿತ್ರಕಾರ) ಹೇಳಿದ ಮಾತು &#8211; ದಿನಕ್ಕೆ ನಾಲ್ಕೋ ಎಂಟೋ ಗೀಟು ಹಾಕುವ ನರೇಂದ್ರ (ಇನ್ನೋರ್ವ ಹಿರಿಯ ವ್ಯಂಗ್ಯಚಿತ್ರಕಾರ) ಉಳಿದ ಹೊತ್ತಿನಲ್ಲಿ ಕಛೇರಿಯ ದೂಳು ಯಾಕೆ ಹೊಡೆಯಬಾರದು ಎಂದು ಶ್ಯಾಮರಾಯರ ಮನಸ್ಸು ತರ್ಕಿಸುತ್ತಿತ್ತು!</p>
<p><strong>ಬದ್ಧತೆಯಿಲ್ಲದ ಬುದ್ಧಿಗಳು: </strong>ತಂದೆಯ ಬರಹಗಳಿಗೆ ನನ್ನ ವಕಾಲತ್ತೇನೂ ಬೇಕಿಲ್ಲ. ನನ್ನದೇ ಒಂದು ಪುಸ್ತಕವನ್ನು ಮೊದಲು ವಿಚಾರಪರವಾದ್ದೊಂದು ಮತ್ತೆರಡು ತೋರಿಕೆಯ ‘ಬುದ್ಧಿ’ಗಳು ಸ್ವೀಕರಿಸಿದ ಪರಿಯನ್ನು ನಾನು ಹೇಳಲೇಬೇಕು.</p>
<p>೧೯೯೯ರಲ್ಲಿ ನನ್ನ ‘ಪುಸ್ತಕ ಮಾರಾಟ ಹೋರಾಟ’ (ಪುಮಾಹೋ ಎನ್ನಿ) ಪ್ರಕಟವಾಯ್ತು. ಆ ಹೊಸತರಲ್ಲೇ ಅನ್ಯ ಕಾರ್ಯನಿಮಿತ್ತ ಉಡುಪಿಗೆ ಹೋದವನು ಕೇವಲ ವೈಯಕ್ತಿಕ ಗೌರವದಲ್ಲಿ ಕುಶಿ ಹರಿದಾಸ ಭಟ್ಟರಿಗೆ ಒಂದು ಪ್ರತಿ ಕೊಟ್ಟು ಬಂದೆ. ಆ ರಾತ್ರಿಯಿಂದ ತೊಡಗಿ ಎರಡೋ ಮೂರೋ ದಿನದವರೆಗೆ ನನಗೆ ಬಿಟ್ಟು ಬಿಟ್ಟು ಕುಶಿಯವರಿಂದ ದೂರವಾಣಿ. ಅವರ ದಣಿವರಿಯದ ಕೆಲಸಗಳ ನಡುವೆ ನನ್ನ ಪುಸ್ತಕದ ಓದಿನ ವಿವಿಧ ಹಂತಗಳ ಸಂತೋಷ ಹಂಚಿಕೊಳ್ಳುತ್ತಲೇ ಹೋದರು. ಹತ್ತೇ ದಿನದಂತರದೊಳಗೆ (ತಮ್ಮ ಮೊಮ್ಮಗಳಿಂದಲೇ ಚಿತ್ರ ಬರೆಸಿ, ಸೇರಿಸಿ) ತಮ್ಮ ಖ್ಯಾತ ಲೋಕಾಭಿರಾಮ ಅಂಕಣದಲ್ಲಿ ಪುಮಾಹೋವನ್ನು ಕಣಕಣಾ ಹಿಂಜಿ ನನಗೆ ಪ್ರಶಂಸಾ ಮಾಲಿಕೆ ತೊಡಿಸಿಬಿಟ್ಟಿದ್ದರು. ಎಲ್ಲಾ ಪುಸ್ತಕ ಪ್ರೇಮಿಗಳ, ಉದ್ಯಮಿಗಳ, ಸರಕಾರದ ಕಣ್ತೆರೆಸುವ ಕೆಲಸವನ್ನು ಗಟ್ಟಿಯಾಗಿ ಮಾಡಿದ್ದರು.</p>
<p>ಹೀಗೇ ಮೈಸೂರಿನ ನನ್ನ ಮುದ್ರಕರಲ್ಲಿಗೆ ಹೋಗಿದ್ದ ಹಾಮಾ ನಾಯಕರು ವಾಸ್ತವದಲ್ಲಿ ಪುಸ್ತಕ ಮಾರಾಟ ಹೋರಾಟದ ಮೊದಲ ಪ್ರತಿಯ ಗೌರವವನ್ನು ದಕ್ಕಿಸಿಕೊಂಡಿದ್ದರು. ಅದನ್ನು ನೋಡಿ (ಖಂಡಿತವಾಗಿ ಪೂರ್ಣ ಓದಿ ಅಲ್ಲ) ಅವರು ಸುಧಾ ವಾರಪತ್ರಿಕೆಯ ಅಂಕಣದಲ್ಲಿ ಬರೆದ ಲೇಖನ ತೀರಾ ನಿರಾಶಾದಾಯಕವಾಗಿತ್ತು. ಅವರು ಆರೋಪ ಹೊರಿಸಿದ್ದರೆ ನಾನು ಉತ್ತರಿಸಬಹುದಿತ್ತು. ಜೀವಮಾನದುದ್ದಕ್ಕೂ ಸಾರ್ವಜನಿಕ ವ್ಯವಸ್ಥೆಯ ಭಾಗವಾಗಿಯೇ ನಿಂತ ಅವರ ಅಪಾರ ಅನುಭವದ ಬೆಳಕಿನಲ್ಲಿ ಖಂಡಿತವಾಗಿಯೂ ಭಿನ್ನಾಭಿಪ್ರಾಯವನ್ನು ದಾಖಲಿಸುವ ಅವಕಾಶವಿತ್ತು. ಇಲ್ಲ, ಜಾಣತನ ಮೆರೆದರು. ೧೫೮ ಪುಟ ಮತ್ತು ೧೭ ಮುಖ್ಯ ಶೀರ್ಷಿಕೆಗಳ ಪುಸ್ತಕದಲ್ಲಿ ಮುನ್ನುಡಿ ಒಂದು ಚೂರು, ಮತ್ತೆ ೨೦ ಪುಟಗಳಲ್ಲಿದ್ದ, ಒಂದು ಶೀರ್ಷಿಕೆಯಡಿಯಲ್ಲಿದ್ದ ಪುಸ್ತಕೋದ್ಯಮದ ರಸಪ್ರಸಂಗಗಳನ್ನು ಸ್ವಲ್ಪ ನೋಡಿ, ಒಂದು ಘಟನೆಯನ್ನಂತೂ ಹಾಗೇ ಉದ್ಧರಿಸಿ ವಾರದ ಪುಟ ತುಂಬಿಕೊಂಡಿದ್ದರು. ಇಂದಿಗೂ ಹಾಮನಾ ಬರಹಗಳ ಅಭಿಮಾನಿಗಳು ಎಷ್ಟೋ ಜನ ಪುಮಾಹೋ ಅಂದರೆ ಪುಸ್ತಕೋದ್ಯಮದ ಹಾಸ್ಯ ಬರಹಗಳ ಸಂಕಲನವೆಂದೇ ತಿಳಿದಿದ್ದಾರೆ!</p>
<p>ನಾನು ಅದುವರೆಗೆ ಲಂಕೇಶರನ್ನು ಭೇಟಿಯಾದವನಲ್ಲ. ಅನ್ಯ ಕಾರ್ಯಾರ್ಥ ಬೆಂಗಳೂರಿಸಿದವನು, ತುಂಬು ವಿಶ್ವಾಸದಿಂದ ಪುಮಾಹೋದ ಪ್ರತಿ ಹಿಡಿದುಕೊಂಡು ಅವರ ಕಛೇರಿಗೆ ಹೋದೆ. ಶೂದ್ರ ಶ್ರೀನಿವಾಸರಿಗೆ ನಿತ್ಯದ ಸಭೆ ಕೊಟ್ಟಂತಿದ್ದ ಲಂಕೇಶರೆದುರು ನಾನು ಸ್ವಪರಿಚಯ ಹೇಳಿಕೊಂಡು, ಪುಸ್ತಕ ಕೊಡುವುದರಲ್ಲಿದ್ದೆ. “ಓ, ಮಂಗ್ಳೂರಾ! ಪತ್ರಿಕೇ ಇಡ್ತೀರೇನ್ರೀ?” “ಇಲ್ಲ ಸಾರ್. ನನ್ನದು  ಪುಸ್ತಕ ಮಾತ್ರ. . . .” “ಪತ್ರಿಕೆ ಇಡ್ರೀ. ನಿಮ್ಮ ಬಸ್ ಸ್ಟ್ಯಾಂಡ್ ಬೋಳಿ ಮಗ ಏನು ಸುಖವಿಲ್ಲಾ.” ಕುಸಿದ ಧೃತಿಯಲ್ಲೇ ನಾನು ಪುಸ್ತಕ ತೋರಿಸಿದೆ, ಕೊಟ್ಟೆ. ಪುಟ ಬಿಡಿಸುವ ಸೌಜನ್ಯವನ್ನೂ ತೋರದೆ, ಪಕ್ಕಕ್ಕಿಟ್ಟು, ಸಹಾಯಕನನ್ನು ಕರೆದು ತನ್ನ ಅದೇ ಬಂದ ಹೊಸ ಪುಸ್ತಕ &#8211; ‘ಅಕ್ಕ’ ಕೊಟ್ಟು, ‘ಲೆಕ್ಕ ಚುಕ್ತಾ’ ಮಾಡಿದವರಂತೆ ಮುಖಭಾವ ಮಾಡಿದರು. ನಾನು ಎದ್ದು ಬಂದೆ. ಮುಂದೆಂದೋ ಯೋಗಪ್ಪ ಎನ್ನುವವರು ಕಾಟಾಚಾರಕ್ಕೆ ಪುಸ್ತಕದ ಕುರಿತು ಒಂದಷ್ಟು ಪತ್ರಿಕೆಯಲ್ಲಿ ಗೀಚಿದರು.</p>
<p>ಅನ್ಯರ ಸ್ನೇಹ ಸರಿ, ಔದಾರ್ಯದಲ್ಲಿ ಬದುಕುವುದು ನನಗೆ ಎಂದೂ ಹಿಡಿಸಿಲ್ಲ. ವಿವಿಧ ಕೇಂದ್ರಗಳಲ್ಲಿ ನನ್ನದೇ ವಿತರಣಾ ಜಾಲ ಬೆಳೆಸುವ (big business) ಅರ್ಥಾತ್ ನನ್ನ ವೈಯಕ್ತಿಕತೆಯನ್ನು ಅಡವಿಟ್ಟು ಅಂಗಡಿಯನ್ನು ಬೆಳೆಸುವ ಹುಚ್ಚು ನನಗೆ ಎಂದೂ ಬಂದದ್ದಿಲ್ಲ. ಅತ್ರಿ ಅಂಗಡಿಗೆ (ನನ್ನ ಕಾಲಾನಂತರ) “ಮುಂದೇನು” ಎಂದು ಕೇಳುವವರಿಗೆ ನಾನು ಲಘುವಾಗಿಯೇ ಆದರೆ ವಾಸ್ತವವನ್ನು ಹೇಳುತ್ತೇನೆ. “ನನ್ನಜ್ಜ ಕೃಷಿಕ. ಅಪ್ಪ ಅಧ್ಯಾಪಕ. ನಾನು ಎರಡೂ ಬಿಟ್ಟ ವ್ಯಾಪಾರಿ. ಮಗ ಮೂರೂ ಬಿಟ್ಟಾಗ (ಸಿನಿಮಾ ನಿರ್ದೇಶಕ) ನನ್ನನಂತರ ಅತ್ರಿ ಮುಚ್ಚಿದರೆ ನನಗೆ ಆಶ್ಚರ್ಯವೂ ಇಲ್ಲ, ದುಃಖ ಖಂಡಿತಾ ಇಲ್ಲ”. ಹಾಗಿರುವಾಗ ಇಪ್ಪತ್ತೇ ವರ್ಷ ಪ್ರಾಯದ ಪ್ರಕಾಶನದ ಬಗ್ಗೆ ಯಾಕೆ ಮೋಹ! ಅಶೋಕ, ಆನಂದ, ಅನಂತಗಳ (ನಾವು ಮೂವರು ಸೋದರರು) ಆದ್ಯಕ್ಷರ ತ್ರಯಗಳ ಸೂಚನೆಯಾಗಿ ಬಂದದ್ದು ಅತ್ರಿ (ಇಂಗ್ಲಿಶಿನಲ್ಲಿ A-three). ಇದರ ಹೃಸ್ವ ರೂಪ ಇಂಗ್ಲಿಶಿನಲ್ಲಿ ಜ್ಞಾನಪ್ರಪಂಚದ ವ್ಯಾಪಕತ್ವ ಸೂಚಿಸುವಂತೆ (ABC) Book Centre ಸೇರಿಸಿದ್ದೆ. ಅತ್ರಿಯಿಂದ ದತ್ತವಾದದ್ದು ಎಂಬರ್ಥದಲ್ಲಿ ಪ್ರಕಾಶನವನ್ನು ನಾನು ಮೊದಲು ‘ದತ್ತಾತ್ರೇಯ’ ಎಂದೇ ತೊಡಗಿದ್ದೆ. ಸಾಂಸ್ಥಿಕ ರೂಪದಲ್ಲಿ ಅತ್ರಿಯಿಂದ ಏನೂ ಭಿನ್ನವಲ್ಲದ ಪ್ರಕಾಶನಕ್ಕೆ ಹೆಸರಿನ ಬೇಧದಿಂದ ಸರಕಾರೀ ನೋಂದಾವಣೆ ಇತ್ಯಾದಿ ಅನಾವಶ್ಯ ಆಡಳಿತ ವೆಚ್ಚಗಳು ಏರುತ್ತವೆ ಎಂದು ಕಂಡಾಗ ಅತ್ರಿಗೇ ಮರಳಿದ್ದ ಪ್ರಕಾಶವನ್ನು ಈಗ ಮುಚ್ಚಿದ್ದೇನೆ. ಲೋಕೋಪಯೋಗಿಯಾಗಬಹುದಾದ ನನ್ನನುಭವದ ಹಂಚಿಕೆಗಷ್ಟೇ ನಾನು ಲೇಖನಗಳನ್ನು ಬರೆದದ್ದುಂಟು, ತೀರಾ ಕಡಿಮೆ ಸಂಖ್ಯೆಯಲ್ಲಿ ಪುಸ್ತಕವಾಗಿ ಸಂಕಲಿಸಿದ್ದೂ ಆಗಿದೆ. ಉಳಿದವಕ್ಕೆ ಈಗ ಈ ಅಂತರ್ಜಾಲದ ಪುಟಗಳು ದಕ್ಕಿ ಅಪಾರ ಸ್ವಾತಂತ್ರ್ಯವನ್ನೂ ಸಂತೋಷವನ್ನೂ ಕಾಣುತ್ತಿರುವಾಗ ‘ಚಿಂತೆಯಾತಕೋ ಮನುಜಾ ಪುಸ್ತಕೋದ್ಯಮದ ಭ್ರಾಂತಿಯಾತಕೋ’ ಎಂದು ಪ್ರಕಾಶನವನ್ನು ಮುಚ್ಚಿದ್ದೇನೆ. ಅಭಿನವ ಪ್ರಕಾಶನದ ಅತ್ಯುತ್ಸಾಹೀ ಗೆಳೆಯ ರವಿ ಕುಮಾರ್ ಹಿಂದೆಂದೋ “ನಿಮ್ಮ ಒಂದು ಪುಸ್ತಕವನ್ನಾದರೂ ನನಗೆ ಪ್ರಕಟಿಸಲು ಕೊಡಿ” ಎಂದದ್ದು ನೆನಪಿನಲ್ಲಿತ್ತು. ಹಾಗಾಗಿ ನಾನಿಲ್ಲಿ ಅಂಡಮಾನ್ ಪ್ರವಾಸ ಕಥನ ನಡೆಸಿದ್ದಂತೆ ರವಿಗೆ ‘ಇದು ಬೇಕೇ’ ಎಂದು ಸೂಚನೆ ಕೊಟ್ಟಿದ್ದೆ. ಅವರು ತುಂಬು ಮನಸ್ಸಿನಿಂದ ‘ಹೂಂ’ ಎಂದದ್ದಕ್ಕೆ ಈಗ ಲಕ್ಷದ್ವೀಪ ಕಥನವನ್ನೂಸೇರಿಸಿ ಕೊಟ್ಟಿದ್ದೇನೆ. ಕಾಲದ ಹಕ್ಕೊತ್ತಾಯಗಳು ಬಂದರೆ, ನನಗೆ ಒಪ್ಪಿಗೆಯಾದರೆ (ನನ್ನದೂ ಇನ್ನಷ್ಟು ಬರಹಗಳು ಸೇರಿದಂತೆ) ತಂದೆಯವರ ಎಲ್ಲಾ ಕೃತಿಗಳು ಅನ್ಯ ಪ್ರಕಾಶನಗಳಲ್ಲಿ ಹೊಸ ರೂಪಗಳಲ್ಲಿ ಬಂದಾವು.</p>
<p>ನಾ ನಡೆದಷ್ಟು ದಾರಿ ಚೆನ್ನಾಗಿತ್ತು (ಇಲ್ಲವಾದರೆ ಖಂಡಿತವಾಗಿ ಯಾಕೆ) ಎಂಬ ನಿಮ್ಮ ಮಾತು ಕೇಳಲು ಕಾತರನಾಗಿದ್ದೇನೆ.</p>
<br />  <a rel="nofollow" href="http://feeds.wordpress.com/1.0/gocomments/athree.wordpress.com/520/"><img alt="" border="0" src="http://feeds.wordpress.com/1.0/comments/athree.wordpress.com/520/" /></a> <a rel="nofollow" href="http://feeds.wordpress.com/1.0/godelicious/athree.wordpress.com/520/"><img alt="" border="0" src="http://feeds.wordpress.com/1.0/delicious/athree.wordpress.com/520/" /></a> <a rel="nofollow" href="http://feeds.wordpress.com/1.0/gofacebook/athree.wordpress.com/520/"><img alt="" border="0" src="http://feeds.wordpress.com/1.0/facebook/athree.wordpress.com/520/" /></a> <a rel="nofollow" href="http://feeds.wordpress.com/1.0/gotwitter/athree.wordpress.com/520/"><img alt="" border="0" src="http://feeds.wordpress.com/1.0/twitter/athree.wordpress.com/520/" /></a> <a rel="nofollow" href="http://feeds.wordpress.com/1.0/gostumble/athree.wordpress.com/520/"><img alt="" border="0" src="http://feeds.wordpress.com/1.0/stumble/athree.wordpress.com/520/" /></a> <a rel="nofollow" href="http://feeds.wordpress.com/1.0/godigg/athree.wordpress.com/520/"><img alt="" border="0" src="http://feeds.wordpress.com/1.0/digg/athree.wordpress.com/520/" /></a> <a rel="nofollow" href="http://feeds.wordpress.com/1.0/goreddit/athree.wordpress.com/520/"><img alt="" border="0" src="http://feeds.wordpress.com/1.0/reddit/athree.wordpress.com/520/" /></a> <img alt="" border="0" src="http://stats.wordpress.com/b.gif?host=athreebook.com&amp;blog=3999388&amp;post=520&amp;subd=athree&amp;ref=&amp;feed=1" width="1" height="1" />]]></content:encoded>
			<wfw:commentRss>http://athreebook.com/2010/08/08/08august2010/feed/</wfw:commentRss>
		<slash:comments>43</slash:comments>
	
		<media:content url="" medium="image">
			<media:title type="html">Abhaya</media:title>
		</media:content>

		<media:content url="http://lh6.ggpht.com/_XLLsV3Btn2I/TF7ijBPLoUI/AAAAAAAAFg8/nFqk6HK-Z2E/s512/pumahO.jpg" medium="image" />

		<media:content url="http://lh6.ggpht.com/_XLLsV3Btn2I/TF7ijc0-ZgI/AAAAAAAAFhA/neJm7B40WrM/s512/s%20temper.jpg" medium="image" />

		<media:content url="http://lh4.ggpht.com/_XLLsV3Btn2I/TF7ijAQF2aI/AAAAAAAAFg4/hFefwXyhkgg/s512/prakashana%20muccu%20001.jpg" medium="image" />

		<media:content url="http://lh4.ggpht.com/_XLLsV3Btn2I/TF7ii01qHZI/AAAAAAAAFgw/ipNu7rJ8Ksg/s512/crossing.jpg" medium="image" />

		<media:content url="http://lh5.ggpht.com/_XLLsV3Btn2I/TF7iqaDhSLI/AAAAAAAAFhE/bZnEeKyNWIQ/s512/saptasa.jpg" medium="image" />
	</item>
		<item>
		<title>ಏರಿದವನಿಳಿಯಲೇಬೇಕು</title>
		<link>http://athreebook.com/2010/07/26/26july2010/</link>
		<comments>http://athreebook.com/2010/07/26/26july2010/#comments</comments>
		<pubDate>Mon, 26 Jul 2010 17:58:37 +0000</pubDate>
		<dc:creator>abhayaftii</dc:creator>
				<category><![CDATA[ಪ್ರವಾಸ ಕಥನ]]></category>
		<category><![CDATA[ರಂಗನಾಥ ಸ್ಥಂಬ]]></category>
		<category><![CDATA[ವನ್ಯಲೋಕ]]></category>

		<guid isPermaLink="false">http://athreebook.com/?p=514</guid>
		<description><![CDATA[ರಂಗನಾಥ ವಿಜಯ ಭಾಗ ಏಳು ಮಾನವ ಚಂದ್ರನ ಮೇಲಿಟ್ಟ ಮೊದಲ ಹೆಜ್ಜೆ ಮನುಕುಲಕ್ಕೆ ಏನೇ ಇರಲಿ, ಆರ್ಮ್ ಸ್ಟ್ರಾಂಗ್ ಎನ್ನುವ ವ್ಯಕ್ತಿಗೆ ಅದು ಮರಳುವಲ್ಲಿ ಅಷ್ಟಷ್ಟು ಒಜ್ಜೆಯೇ ಎಂಬುದನ್ನು ಯಾರೂ ಮರೆಯುವಂತಿಲ್ಲ. ನಮ್ಮ ಸ್ಥಿತಿಯೂ ಅದಕ್ಕೇನೂ ಕಡಿಮೆಯದ್ದಲ್ಲ. ‘ಗಗನಗಾಮಿತನ’ ದೊಡ್ಡ ಅನುಭವದ ಒಂದು ತುಣುಕು ಮಾತ್ರ. ಅದರ ಪೂರ್ಣತೆಗಾಗಿ ನಾವು ಬೇಗನೆ ಸ್ಮರಿಸಿಕೊಂಡೆವು &#8211; ಏರಿದವನಿಳಿಯಲೇಬೇಕು. &#8230; <a href="http://athreebook.com/2010/07/26/26july2010/">Continue reading <span class="meta-nav">&#8594;</span></a><img alt="" border="0" src="http://stats.wordpress.com/b.gif?host=athreebook.com&amp;blog=3999388&amp;post=514&amp;subd=athree&amp;ref=&amp;feed=1" width="1" height="1" />]]></description>
			<content:encoded><![CDATA[<p><strong>ರಂಗನಾಥ ವಿಜಯ ಭಾಗ ಏಳು<br />
</strong><br />
<a href="http://lh4.ggpht.com/_XLLsV3Btn2I/TE3LADIqZpI/AAAAAAAAFfs/dDY5zNs028s/s720/4.jpg"><img class="alignleft" src="http://lh4.ggpht.com/_XLLsV3Btn2I/TE3LADIqZpI/AAAAAAAAFfs/dDY5zNs028s/s720/4.jpg" alt="" width="344" height="225" /></a>ಮಾನವ ಚಂದ್ರನ ಮೇಲಿಟ್ಟ ಮೊದಲ ಹೆಜ್ಜೆ ಮನುಕುಲಕ್ಕೆ ಏನೇ ಇರಲಿ, ಆರ್ಮ್ ಸ್ಟ್ರಾಂಗ್ ಎನ್ನುವ ವ್ಯಕ್ತಿಗೆ ಅದು ಮರಳುವಲ್ಲಿ ಅಷ್ಟಷ್ಟು ಒಜ್ಜೆಯೇ ಎಂಬುದನ್ನು ಯಾರೂ ಮರೆಯುವಂತಿಲ್ಲ. ನಮ್ಮ ಸ್ಥಿತಿಯೂ ಅದಕ್ಕೇನೂ ಕಡಿಮೆಯದ್ದಲ್ಲ. ‘ಗಗನಗಾಮಿತನ’ ದೊಡ್ಡ ಅನುಭವದ ಒಂದು ತುಣುಕು ಮಾತ್ರ. ಅದರ ಪೂರ್ಣತೆಗಾಗಿ ನಾವು ಬೇಗನೆ ಸ್ಮರಿಸಿಕೊಂಡೆವು &#8211; ಏರಿದವನಿಳಿಯಲೇಬೇಕು. ಹಾಂ, ಆದರೆ ಹೇಳಿದಷ್ಟು ಸುಲಭವಲ್ಲ ಬಂಡೆ ಇಳಿಯುವುದು. ಕಡಿದಾದ ಏರಿನಲ್ಲಿ ನಡೆಯನ್ನು ನಿರ್ದೇಶಿಸಲು ನಮ್ಮ ನೇರ ದೃಷ್ಟಿಯೊಡನೆ ಕೈಕಾಲುಗಳನ್ನು ತೊಡಗಿಸುತ್ತೇವೆ. ಹಾಗೇ ಇಳಿದರಾಯ್ತು ಎನ್ನುವಂತಿಲ್ಲ. ನಾವು ಹಲ್ಲಿ ಉಡಗಳಂತೆ ತಲೆಕೆಳಗಾಗಿ ಇಳಿಯುವ ಭಾಗ್ಯ ಪಡೆದಿಲ್ಲವಲ್ಲಾ! ಮತ್ತೆ ಕಾಲಿಗೇ ದೃಷ್ಟಿ ಸಂಯೋಜಿಸಿದರಾಯ್ತು ಎನ್ನಲು ನಾವು ಏಡಿಗಳಂತೆ ಚಾಚು ನೇತ್ರರೂ ಅಲ್ಲ. ಸೀದಾ ನಡೆದಿಳಿಯಲಾಗದ ಜಾರಿನಲ್ಲೆಲ್ಲಾ ನಾವು ಮೊದಲು ಪ್ರಪಾತಕ್ಕೆ ಬೆನ್ನು ಹಾಕಿ, ಕೈಗಳನ್ನು ಭದ್ರ ಹಿಡಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಅನಂತರ ಪ್ರತಿ ಹೆಜ್ಜೆಯಲ್ಲಿ ಇಳಿದಿಕ್ಕು ಸ್ಪಷ್ಟಪಡಿಸಿಕೊಳ್ಳುತ್ತಿರಬೇಕು. ಮತ್ತೆ ಏಣಿ ಇಳಿಯುವವನಂತೆ ಒಂದೊಂದೇ ಹೆಜ್ಜೆ ಕೆಳಬಿಟ್ಟು ‘ಮೆಟ್ಟಿಲು’ ದಕ್ಕುವವರೆಗೆ ಸಣ್ಣದಾಗಿ ಪರದಾಡಬೇಕು. ಮೇಲೆ ಹತ್ತುವಾಗ ಕೊಳ್ಳ ನಿರುಕಿಸುವ ಭಯದಿಂದ ವಿನಾಯ್ತಿ ಪಡೆದವರಿಗೆ ಇಲ್ಲಿ ಚಳಿ ಕೂರುವುದು ಖಾತ್ರಿ. ನೈಜ ಶಿಲಾರೋಹಣದಲ್ಲಿ ಹತ್ತಿದೆಲ್ಲಾ ಶಿಲಾಮುಖಗಳು ಇಳಿಯಲು ಹಾಗೇ ದಕ್ಕುತ್ತವೆ ಎಂದಿಲ್ಲ. ಹಾಗಾಗಿ ಕಡಿದಾದ ಶಿಲಾರೋಹಣದಲ್ಲಿ ‘ನೈಜ’ ಮತ್ತು ‘ಕೃತಕ’ ಎಂಬೆರಡು ಪಾಠ ಇದ್ದರೆ ಶುದ್ಧ ಶಿಲಾವರೋಹಣದಲ್ಲಿ ಹಗ್ಗಗಳನ್ನು ಬಳಸಿ ಮಾಡುವ ಕೃತಕ &#8211; ರ್ಯಾಪೆಲಿಂಗ್ (rapelling) ತಂತ್ರ ಒಂದೇ.</p>
<p><span id="more-514"></span>“ಮೀಟುಗೋಲು, ಸನ್ನೆ ಮತ್ತು ನಿಲ್ಲಲು ಒಂದು ಜಾಗವಿದ್ದರೆ ಭೂಮಿಯನ್ನೂ ಜರುಗಿಸಿಯೇನು” ಎಂದ ಆರ್ಕಿಮಿಡೀಸ್ ಹೇಳಿಕೆಯನ್ನು ನಾನು, “ಇಳಿಯುವ ಆಳದ ಕೊನೆ ಮುಟ್ಟುವ ಹಗ್ಗವಿದ್ದರೆ ನಾನೂ ಅತಳ, ವಿತಳ, ಪಾತಾಳಕ್ಕೂ ಇಳಿದೇನು” ಎಂದು ಮರುಜಪಿಸಬಲ್ಲೆ! ರ್ಯಾಪೆಲಿಂಗ್ ಸಲಕರಣೆಗಳು ಮತ್ತು ಅದರ ಬಳಕೆಯ ಮೂಲ ಜ್ಞಾನ ಇದ್ದರೆ ಸಾಕು. ವಾಸ್ತವದಲ್ಲಿ ಒಂದೇ ಕೊರಗು, ನಿಜ ಸವಾಲಿನೆದುರು ರ್ಯಾಪೆಲಿಂಗಿನಲ್ಲಿ ಉಳಿಸಿದ ಶ್ರಮಕ್ಕೆ ಸಲಕರಣೆಯನ್ನು ತ್ಯಜಿಸುವ ದಂಡ ಕೊಡಬೇಕಾಗುತ್ತದೆ. ತರಬೇತಿ, ಪ್ರದರ್ಶನಗಳಲ್ಲಿ ಯಾವುದೇ ಸಲಕರಣೆಯನ್ನು ಹಿಂದುಳಿಸುವ ಪ್ರಮೇಯವಿರುವುದಿಲ್ಲ. ಆದರೆ ರಂಗನಾಥ ಸ್ತಂಭದಂಥ ಸವಾಲಿನಲ್ಲಿ ನಮಗದು ಸಾಧ್ಯವಿರಲಿಲ್ಲ. ಮೊದಲನೆಯದಾಗಿ ನಮ್ಮ ಬಳಿ ಇದ್ದ ಹಗ್ಗದ ಉದ್ದ ಕೇವಲ ಇನ್ನೂರಡಿ. ಮತ್ತದನ್ನು ಒಮ್ಮೆ ಕೃತಕ ಶಿಲಾವರೋಹಣಕ್ಕೆ ಬಳಸಿದ್ದೇ ಆದರೆ ಕಳಚಿ ತರುವ ಅನುಕೂಲವಿಲ್ಲದೆ ಉಳಿದ ಆಳವನ್ನು ಇಳಿಯುವುದೂ ದುಸ್ತರವಾಗಲಿತ್ತು. ಘನ ಪರ್ವತಾರೋಹಣ ಯಾತ್ರೆಗಳಲ್ಲಿ (ಉದಾಹರಣೆಗೆ ಭಾರೀ ಪ್ರಾಯೋಜಕರ ಬಲದಲ್ಲಿ ನಡೆಯುವ ಎವರೆಸ್ಟ್ ಆರೋಹಣ) ಸಾವಿರಾರು ಮೀಟರ್ ಹಗ್ಗಗಳನ್ನು ಅಲ್ಲಲ್ಲೇ ಖಾಯಂ ಬಿಟ್ಟೇ ಬರುತ್ತಾರೆ. ಎಲ್ಲಕ್ಕೂ ಮುಖ್ಯವಾಗಿ ಅಂದಿಗೆ ಸುಮಾರು ಇಪ್ಪತ್ತು ವರ್ಷಗಳಷ್ಟು ಹಳೆಯದಾಗಿದ್ದರೂ (ಮೂಲ ಬೆಲೆ ಸುಮಾರು ರೂ ಮುನ್ನೂರು) ನಮ್ಮ ಹಗ್ಗವನ್ನು ಬಿಟ್ಟು ಬರುವ ಆರ್ಥಿಕ ಧಾರಾಳತನ ನಮ್ಮದಲ್ಲ. ಮತ್ತೆ ಇವೆಲ್ಲಾ ವಿರಾಮ ಸಮಯದ ವಾದವಿಸ್ತಾರಗಳು ಮಾತ್ರ. ಬನ್ನಿ, ವಾಸ್ತವದಲ್ಲೇನಾಯ್ತೂಂತ ನೋಡೋಣ.</p>
<p><a href="http://lh6.ggpht.com/_XLLsV3Btn2I/TE3K_h_WBNI/AAAAAAAAFfk/qTOKhPTDNRw/s800/3.jpg"><img class="alignleft" src="http://lh6.ggpht.com/_XLLsV3Btn2I/TE3K_h_WBNI/AAAAAAAAFfk/qTOKhPTDNRw/s800/3.jpg" alt="" width="346" height="218" /></a>ಇಳಿಯೋಣದಲ್ಲಿ ನಾನು ಕೊನೆಯಾಳು. ಹೆಚ್ಚು ಯೋಚನೆ ಮಾಡದೇ ಕೇವಲ ಹಗ್ಗದ ರಕ್ಷಣೆಯೊಡನೆ, ಸ್ವಂತ ತಾಕತ್ತಿನಲ್ಲಿ ನಾಲ್ವರು ಇಳಿಯತೊಡಗಿದರು. ಜಾಡು, ದಿಕ್ಕು ಮಾತ್ರವೇಕೆ ಪ್ರತಿ ಹಿಡಿಕೆ, ಸ್ಥಳದ ದೌರ್ಬಲ್ಯಗಳ ಅರಿವು ಎಲ್ಲರಿಗೂ ಸ್ಪಷ್ಟವಿತ್ತು. ಆದರೂ ಪದಕುಸಿಯೆ (ಇಲ್ಲಿ ಮಂಕುತಿಮ್ಮನನ್ನು ನಂಬಬೇಡಿ, ನೆಲ ತುಂಬಾ ಆಳ್ದಲ್ಲಿದೆ!) ರಜ್ಜುರಕ್ಷಣೆ ಇಹುದು ಎಂಬ ಭಾವ ಅವರದು. ಪ್ರತಿ ಕಠಿಣ ಹಂತದಲ್ಲಿ ನಾನು ಅವರನ್ನು ಇಳಿಸಿದ ಮೇಲೆ, ಹೆಚ್ಚಿನ ಅನುಭವದ ಬಲದಲ್ಲಿ, ಹೆಚ್ಚು ಎಚ್ಚರದಿಂದ ಇಳಿಯುವುದು ಅನಿವಾರ್ಯವಿತ್ತು. ಉದ್ದಕ್ಕೂ ನಾವು ಹತ್ತುವಾಗ ಅನುಸರಿಸಿದ ‘ಹೆಚ್ಚಿನ ಅನಾಹುತ’ ತಪ್ಪಿಸುವ ಕ್ರಮವನ್ನು ಮಾತ್ರ ಉಳಿಸಿಕೊಂಡಿದ್ದೆವು. ಮುಂದಿಳಿದ ನಾಲ್ವರಲ್ಲಿ ಸಮರ್ಥನೊಬ್ಬ ನನಗೂ ಹಗ್ಗದ ರಕ್ಷಣೆ ಕೊಡುತ್ತಲೇ ಇದ್ದ. ಆದರೆ ಇದನ್ನು ಒಂದು ತೀವ್ರ ಇಳಿತದ ಮುಖದಲ್ಲಿ ಅನುಸರಿಸಲು ನನಗೇ ಧೈರ್ಯ ಸಾಲಲಿಲ್ಲ. ಬದಲಿಗೆ ನಾನಿದ್ದಲ್ಲಿಯೇ ಇದ್ದ ದೃಢ ಬಂಡೆಯೊಂದಕ್ಕೆ ಹಗ್ಗವನ್ನು ಸುತ್ತು ಹಾಕಿ ಎರಡೂ ತುದಿಗಳನ್ನು ಆ ಹಂತದ ಕೆಳಗಿನ ತಾಣಕ್ಕೆ ಮುಟ್ಟುವಂತೆ ನೋಡಿಕೊಂಡೆ. ಆ ಬಂಡೆ ಮೈಯಲ್ಲಿ ಹಗ್ಗ ಸಲೀಸಾಗಿ ಜಾರುವುದನ್ನು ಖಾತ್ರಿ ಮಾಡಿಕೊಂಡ ಮೇಲೆ ಎರಡೂ ಎಳೆಗಳನ್ನು ಒಟ್ಟಿಗೆ ಹಿಡಿದುಕೊಂಡು ಬಾವಿಗೆ ಇಳಿಯುವವರಂತೆ ಇಳಿದೆ. ಅನಂತರ ಒಂದೇ ಎಳೆಯನ್ನು ಎಳೆದು ಹಗ್ಗವನ್ನೂ ಪಾರುಗಾಣಿಸಿಕೊಂಡೆ. ರಕ್ಷಣೆ ಆಯ್ತು, ಹಗ್ಗದ ತ್ಯಾಗ ಇಲ್ಲ. ಆದರೆ ಇದು ತತ್ವತಃ ಸರಿಯಾದ ಕ್ರಮ ಅಲ್ಲ. ಇಲ್ಲಿ ಆಧಾರ (ಕಾಡುಬಂಡೆ), ಬಳಕೆಯ ಸ್ಥಿತಿಗಳು ಪ್ರಯೋಗಶಾಲೆಯ ಹದದಲ್ಲಿಲ್ಲ. ಬಂಡೆಯ ಒರಟು ಮೈಗೆ ಉಜ್ಜಿ ಹಗ್ಗ ಹರಿದುಹೋಗಬಹುದು, ಸಂದಿನಲ್ಲಿ ಸಿಕ್ಕಿಕೊಂಡು ಸತಾಯಿಸಬಹುದು. ಎಲ್ಲಕ್ಕೂ ಅಪಾಯಕರವಾಗಿ ಹಗ್ಗದ ತುಯ್ತಕ್ಕೆ ಬಂಡೆಯೇ ಕಳಚಿಕೊಂಡು ನಮ್ಮ ಮೇಲೆ ಕವುಚಬಹುದು! ಆದರೂ ಸ್ತಂಭ ಪೂರ್ತಿ ಇಳಿದು ಮುಗಿಯುವುದರೊಳಗೆ ಮತ್ತೆರಡು ಬಾರಿ ನಾನಿದನ್ನು ಬಳಸಿದ್ದು ಅದೃಶ್ಟವಶಾತ್ ನಮ್ಮ ಲಾಭಕ್ಕೇ ಒದಗಿತು.</p>
<p>ದೇವಕಿ ಬರೆಯುತ್ತಾಳೆ, “ಜೊನಾಸ್‌ಗೆ ಸುಸ್ತು. ರಂಗನಾಥನ ಮಂಡೆಯ ಹೇನುಗಳು (ಹೀಗೆ ಹೇಳಿದ ಅಪರಾಧಿ ನಾನಲ್ಲ, ದೇವು) ಕಣ್ಮರೆಯಾದ ಮೇಲೆ ನಾನು ಮತ್ತು ಉಪಾಧ್ಯ ‘ರಕ್ಕಸ ಕಕ್ಕಸ್’ನತ್ತ ನಿಧಾನಕ್ಕೆ ಹೆಜ್ಜೆ ಹಾಕಿದೆವು. ಹುಲ್ಲು ನಮ್ಮ ತಲೆಗಿಂತ ಒಂದಡಿ ಎತ್ತರವೇ ಇತ್ತು. ಪರಸ್ಪರ ಹತ್ತಡಿ ಮೀರಿ ದೂರಾದರೆ ಪರಸ್ಪರ ಕಾಣದಾಗುವ ಸ್ಥಿತಿ. ನೆಲದಲ್ಲೂ ಹುಲ್ಲುಗುತ್ತಿಗಳ ದಟ್ಟಣೆಯಲ್ಲಿ ಏನಿದ್ದರೂ ಗೊತ್ತಾಗುತ್ತಿರಲಿಲ್ಲ. ಒಮ್ಮೆ ನಾನು ಗಮನಿಸದೇ ನೆಲದಲ್ಲಿದ್ದ ಹಕ್ಕಿಯೊಂದು ಪುರ್ರನೆದ್ದಾಗ ನನ್ನ ಜೀವವೇ ಹಾರಿಹೋಗಿತ್ತು. ಯಾವ ಗೂಡು ಹಾಳಾಯ್ತೋ ಎಷ್ಟು ಪುಟ್ಟ ಜೀವಗಳು ನನ್ನ ಕಾಲಡಿಗೆ ಸಿಕ್ಕಿ ನಷ್ಟವಾಯ್ತೋ ಎಂಬುದೆಲ್ಲಾ ವಿರಾಮದಲ್ಲಿ ಕುಳಿತವರ ಗೀಳು ಮಾತ್ರ. ಹಕ್ಕಿಯೋ ಪಾತರಗಿತ್ತಿಯೋ ನಾನು ಹಾತೊರೆಯಲಿಲ್ಲ. ಹಾವು ಹಂದಿಯನ್ನಂತೂ ನಮ್ಮಲ್ಲಿ ಯಾರೂ ಬಯಸುವಂತಿರಲಿಲ್ಲ. ಹುಲ್ಲಿನಗುತ್ತಿಗಳು ಪರೋಕ್ಷವಾಗಿ ಕೊರಕಲಿಲ್ಲದ ದೃಢ ನೆಲದ ಭರವಸೆ ಎಂದು ನಂಬಿ ಮುಂದುವರಿದೆವು. ಶಿಬಿರ ಸ್ಥಾನದ ಬಾಣೆ ಹಗುರಾಗಿ ಇಳಿದು ಅಷ್ಟೇ ಸುಲಭದಲ್ಲಿ ಮುಂದಿನ ದಿಬ್ಬ ಏರಿದಂತೆ ಕಾಣುತ್ತಿತ್ತು. ಆದರೆ ನಡೆದಂತೆ ದಾರಿ ಉದ್ದಕ್ಕೆ ಬೆಳೆದಂತೇ ಅನ್ನಿಸಿತು. ಒಂದೆರಡು ಕಡೆ ಹಿಂದೆಂದೋ ಕಾಟಿಗಳು ಸೆಗಣಿ ಹಾಕಿ, ಉರುಡಿ ಆಗಿದ್ದ ತಟ್ಟುಗಳು ಕಾಣಿಸಿದವು. ಒಂದೆರಡು ಕಡೆಯಂತೂ ಒತ್ತಿನಲ್ಲೇ ಹಸಿ ಸೆಗಣಿಯೂ ಕಾಣಿಸಿ ನನ್ನನ್ನು ದಿಗಿಲುಗೊಳಿಸಿತು. ನಾವಿಬ್ಬರೇ ಬರಬಾರದಿತ್ತೋ ಎಂಬ ಸಂಶಯ ಉಪಾಧ್ಯರಲ್ಲಿ ತೋಡಿಕೊಂಡೆ. ಅವರು ನಿರುಮ್ಮಳವಾಗಿ ‘ಕಾಟಿ ಎಂತ ಮಾಡ್ತಿಲ್ಲೆ. ನಮ್ಮನ್ ಕೇಂಡ್ರೇ ಓಡ್ತೆ’ ಎಂದು ಮುಗಿಸಿಬಿಟ್ಟರು!</p>
<p><a href="http://lh5.ggpht.com/_XLLsV3Btn2I/TE3K_UlyaSI/AAAAAAAAFfg/KYPT2pm4R9A/2.jpg"><img class="alignleft" src="http://lh5.ggpht.com/_XLLsV3Btn2I/TE3K_UlyaSI/AAAAAAAAFfg/KYPT2pm4R9A/2.jpg" alt="" width="342" height="231" /></a>ಆ ಅ-ಮುಖ್ಯ ಕಣಿವೆಯಲ್ಲಿ ನೆಲ್ಲಿಗಿಡ ಎನ್ನುವಷ್ಟೇ ಗಾತ್ರದ ಅಸಂಖ್ಯ ಮರಗಳಿದ್ದವು. ಬಹುಶಃ ಆಳವಿಲ್ಲದ ಮಣ್ಣು, ಧಾರಾಳ ಒದಗದ ನೀರು, ಶೀತ ಬಿಸಿಗಳ ಅತಿಯಲ್ಲಿ ಒಂಥರಾ ಬೊನ್ಸಾಯತನ ಅಥವಾ ಕುಬ್ಜತೆ ಅವಕ್ಕೆಲ್ಲ ಬಂದಂತಿತ್ತು. ಅಂಕುಡೊಂಕಿನ ಸುಕ್ಕು ತೊಗಟೆಯ ಗಿಡ್ಡಗಿಡ್ಡ ಮರಗಳಲ್ಲಿ ಒಂದೇ ಒಂದು ಎಲೆಯಿಲ್ಲ, ಕೊಂಬೆ ಇಲ್ಲ! ಮತ್ತೆ ಹೇಗೆ ಗುರುತಿಸಿದೀ ಎಂದು ಅವಸರದ ಪ್ರಶ್ನೆ ಕೇಳಬೇಡಿ.  ಕೊಂಬೆಗಳೇನೋ ಇದ್ದವು ಆದರೆ ಎಲ್ಲಾ ಮುತ್ತಿನ ದಂಡೆಗಳಂತೆ ಒಳ್ಳೆ ಗಾತ್ರದ ನೆಲ್ಲಿಕಾಯಿ ಹೊತ್ತಿದ್ದವು. ನೆಲ್ಲಿಯ ಹುಳಿ ಚಪ್ಪರಿಸಿ, ನೀರ ಸವಿ ಅನುಭವಿಸಿ ಮೊದಲ ದಿಬ್ಬವನ್ನು ಏರಿದೆವು. ಅದರ ಮಂಡೆಯನ್ನು ಹಾಯ್ದು, ಉತ್ತರ ಇಳಿಜಾರು ಕೇವಲ ಇಣುಕಿದೆವು; ಇಳಿಯುವುದು ನಮ್ಮ ಮಿತಿಯಲ್ಲಿರಲಿಲ್ಲ. ಹಿಂಜರಿದು ಒಂದು ಬಂಡೆಯ ಮೇಲೆ ವಿಶ್ರಾಂತಿಸುತ್ತಾ ಅಶೋಕ್ ಮಾತುಗಳನ್ನು ನೆನಪಿಸಿಕೊಂಡೆ. . .”</p>
<p>ಹಿಂದಿನ ದಿನ ಶಿಬಿರಾಗ್ನಿಗೆ ಉದುರು ಕಟ್ಟಿಗೆ ಸಂಗ್ರಹಿಸ ಹೋದವರು ನೆಲ್ಲಿ ಸಮೃದ್ಧಿಯ ವರದಿ ಕೊಟ್ಟಿದ್ದರು. ಅವರು ಸಹಜವಾಗಿ “ಎಷ್ಟೊಂದು ನೆಲ್ಲಿ, ಕೇಳುವವರಿಲ್ಲ ಇಲ್ಲಿ, ವ್ಯರ್ಥವಾಗುತ್ತಿದೆ ಚೆಲ್ಲಿ” ಎಂದು ಶಿಶುಪ್ರಾಸ ಮಾಡಿದಾಗ ನಮ್ಮಲ್ಲಿ ಇನ್ನೇನು ಉಪ್ಪಿನಕಾಯಿ ಕಾರ್ಖಾನೆ ಚಾಲೂ ಆಗುವುದಿತ್ತು. ಕೇಶವೃದ್ಧಿ, ಧಾತುಪುಷ್ಟಿ, ಆಮಹಾರೀ ಮುಂತಾದ ಗುಣಸಹಸ್ರದ ಹಾಡಿಗೆ  ನನ್ನದು ಅಪಸ್ವರದ ತಾರ. ಪ್ರಕೃತಿಯನ್ನು ಕೇವಲ ಮನುಷ್ಯನ ಉಪಯುಕ್ತತೆಯ ಮಾನದಂಡದಲ್ಲಿ ಅಳೆಯಬಾರದು. ಇಲ್ಲಿನ ಪ್ರತಿಕೂಲ ಸನ್ನಿವೇಶದಲ್ಲಿ ಬೀಜವಿಕ್ಕಿ, ಮೊಳಕೆ ಒಡೆಸಿ, ಮಣ್ಣುನೀರು ಒದಗಿಸಿ, ಗಾಳಿಯ ಹೊಡೆತ, ಮಳೆಯ ಅಬ್ಬರಗಳನ್ನೆಲ್ಲ ಮೀರಿ ಬದುಕು ರೂಢಿಸಿ, ಫಲಿಸಿದ ಪ್ರಕೃತಿ ಕಾಯಿಗಳನ್ನು ‘ವ್ಯರ್ಥ’ಗೊಳಿಸಿತೆನ್ನುವುದು ನಮ್ಮ ನಾಗರಿಕತೆಯ ಹುಸಿತನ. ಉದುರಿದ ಒಳ್ಳೆ ಕಾಯಿಗಳಲ್ಲಿ ನಾಲ್ಕನ್ನು ನಮ್ಮ ನಾಲಗೆ ಚಪಲಕ್ಕೆ ಬಾಯಿಗಿಕ್ಕಿದ್ದು ಬಿಟ್ಟರೆ ಹೆಚ್ಚಿನದ್ದನ್ನು ಯಾರೂ ಸಂಗ್ರಹಿಸಲಿಲ್ಲ. ಅದಂತಿರಲಿ, ದೇವಕಿಯ ಲಹರಿಯಲ್ಲಿ ಮುಂದೇನಾಯ್ತು ನೋಡೋಣ.</p>
<p>“ಉಪಾಧ್ಯರ ಸಾವಿರದ ಎರಡನೇ ಪ್ರಯೋಗವಾದ ಒಕ್ಕಣ್ಣಿನ ದೂರದರ್ಶಕವನ್ನು (ಸಾವಿರದ ಒಂದನೆಯದ್ದು ಆಗಲೇ ದೇವು ಹೇಳಿದಂತೆ, ಅವರ ಗುಡಾರ) ಕೇಳಿಕೊಂಡು ಕಣ್ಣು ಕೀಲಿಸಿದೆ. ಅದೇ ಆಗ ಸ್ತಂಭದ ಹಿಂದಿನಿಂದ ಎದುರು ಮೈಗೆ ಬರುತ್ತಿದ್ದ ನಮ್ಮ ತಂಡದವರು ಬಂಡೆಯಂಚಿನಲ್ಲಿ ತಲೆಕೆಳಗಾಗಿ ನೇತಾಡುತ್ತಿದ್ದಾರೆ! ಎದೆ ಝಲ್ಲೆಂದಿತು. ದರ್ಶಕ ಬಿಟ್ಟು, ಎರಡೂ ಕಣ್ಣು ಹೊಸೆದು ನೋಡಿದೆ. ಇಲ್ಲ, ಎಲ್ಲರೂ ಸರಿಯಾಗಿಯೇ ಇಳಿಯುತ್ತಿದ್ದಾರೆ. ತಲೆಕೆಳಗಾದ ದೃಶ್ಯ ದೂರದರ್ಶಕದ ಕೊಡುಗೆ! ಮೊದಲೇ ಹೇಳಿದಂತೆ ಇದು ಉಪಾಧ್ಯರ ರಚನೆ. ಅವರು ಭಾರ ಕಡಿಮೆ ಮಾಡಲು, ಮೊದಲು ಒಂದೇ ಕಣ್ಣಿನಲ್ಲಿ ನೋಡಿದರೆ ಸಾಕೆಂದು ಪೀವೀಸಿ ಕೊಳವೆ ಒಂದೇ ಬಳಸಿದರು. ಮಸೂರದ ಬಲ ಹೊಂದಾಣಿಕೆ ಮಾಡಿ ಮಾರುದ್ದವನ್ನೂ ಎಂಟಿಂಚಿಗೆ ಇಳಿಸಿದರು. ಮತ್ತೂ ಸಾಲದೆನ್ನಿಸಿದಾಗ ದೃಶ್ಯವನ್ನು ನೇರ ಮಾಡುವ ಮಸೂರವನ್ನೇ ಕಳಚಿಹಾಕಿದ್ದರ ಫಲ! ವಿವರಣೆ ಎಲ್ಲಾ ಸರಿ. ಆದರೆ ನನಗೆ ಮತ್ತೆ ಬರಿಗಣ್ಣಿನಲ್ಲೂ ಇಳಿಯುವವರನ್ನು ನೋಡುವುದು ಬೇಡ ಎನ್ನುವಷ್ಟು ಭಯ ಕುಳಿತುಬಿಟ್ಟಿತು. ಉಪಾಧ್ಯರು ಆ ದಿಕ್ಕಿನ ಒಂದೆರಡು ಫೋಟೋ ಕ್ಲಿಕ್ಕಿಸಿಕೊಂಡ ಮೇಲೆ ನಿಧಾನಕ್ಕೆ ಶಿಬಿರಸ್ಥಾನಕ್ಕೆ ಮರಳಿದೆವು.”<br />
<strong><br />
<a href="http://lh5.ggpht.com/_XLLsV3Btn2I/TBrMmz3HDdI/AAAAAAAAFVE/caW7qgiTE5A/s720/2.jpg"><img class="alignleft" src="http://lh5.ggpht.com/_XLLsV3Btn2I/TBrMmz3HDdI/AAAAAAAAFVE/caW7qgiTE5A/s720/2.jpg" alt="" width="346" height="239" /></a>ವಂದನಾರ್ಪಣೆ:</strong> ದೇವು ಮತ್ತು ಗಣಪತಿ ಭಟ್ಟರಿಗೆ ಈಗ ಸಾಧನಾ ಸಂಭ್ರಮ, ವಂದನಾರ್ಪಣೆ ಮಾಡುವಲ್ಲಿ ಸ್ಪರ್ಧೆ! ರಂಗನಾಥನ ಮಂಡೆಗಿಂತ ಒಂದಡಿ ಮೇಲೇ ಇತ್ತು ಸಂತೋಷದಿಂದ ಬೀಗಿದ ಇವರ ಮಂಡೆ. ಇವರ ಧನ್ಯತೆಯ ಮನೋಭಾವ ಇನ್ನೂ ಇಳಿದು ಮುಗಿಯದ ಬಂಡೆಯ ಇಳಿಜಾರಿನ ಅನಿವಾರ್ಯತೆಗಿಂತ ತುಸು ಹೆಚ್ಚೇ ಇವರನ್ನು ಬಾಗಿಸಿತ್ತು! ಆಕಸ್ಮಿಕಗಳ ಸರಣಿಯಲ್ಲದಿದ್ದರೆ ತಾವು ಇದನ್ನೇರುವುದಿರಲಿ, ಊಹಿಸುವುದೂ ಅಸಾಧ್ಯ ಎಂದು ಆತ್ಮನಿರೀಕ್ಷೆಗೆ ತೊಡಗಿಬಿಟ್ಟರು. ಅದೃಷ್ಟವಶಾತ್ ಉಳಿದವರಿಗೆ ಇಂಥಾ ಆರಂಭಿಕರ ಶ್ಯಾಳೆಗಳು ಕಾಡದಿದ್ದುದರಿಂದ ಒಟ್ಟು ತಂಡ ಬಚಾವ್. ಇಲ್ಲವಾದರೆ ಬಹುಮತದ ಹುಯ್ಲಿನಲ್ಲಿ ತೋರಣ, ಹಾರ, ಬ್ಯಾಂಡು, ಬಜಂತ್ರಿ, ಟ್ಯಾಬ್ಲೋ, ಮೆರವಣಿಗೆ ಮುಂತಾದ ಅನಾಗರಿಕ ಅನಿಷ್ಠಗಳು ವಕ್ಕರಿಸಿ ಕಾಡು ನಾಚುತ್ತಿತ್ತೋ ಏನೋ! ಈ ಗೊಂದಲದಲ್ಲಿ ‘ತಂಡದ ಕೊನೆಯ ಸದಸ್ಯ ಕಡೆಯ ಹೆಜ್ಜೆ ಇಡುವವರೆಗೂ ಯಶಸ್ಸು ನಮ್ಮದಲ್ಲ’ ಎನ್ನುವ ತುಂಬಾ ಮುಖ್ಯದ ಭಾವ ಸ್ವಲ್ಪ ಮಸುಕಿ ಹೋಗಿತ್ತು. ಸತ್ಯದ ಅರಿವು ದೇವುಗೆ ಮೂಡಿದ್ದನ್ನು ಅವರ ಮಾತಿನಲ್ಲೇ ಕೇಳಿ. “ಭಟ್ಟರು, ಪ್ರಸನ್ನ ಮತ್ತು ಅಭಯ ಆಗಲೇ ಬಂಡೆ ಬಿಟ್ಟು, ಕಾಡು ಸೇರಿದ್ದರು. ಕೊನೆಯ ಕಡಿದಾದ ಬಂಡೆ ಮುಖದಿಂದ ನಿಧಾನಕ್ಕೆ ಬಲಕ್ಕೆ ಸರಿಯುತ್ತಾ ಇಳಿಯುವ ಬದಲು ಸಂತೋಷಾತಿರೇಕದಲ್ಲಿ ನಾನು ಜಿಗಿದುಬಿಟ್ಟೆ. ಬೆನ್ನುಬಿದ್ದ ಅಸಡ್ಡಾಳ ಚೀಲ ನನ್ನ ನಿಯಂತ್ರಣವನ್ನು ತಪ್ಪಿಸಿ ದೂಡಿತು. ಪಾದ ಕಲ್ಲಿಗೆ ತೊಡರಿ, ಮುಗ್ಗರಿಸಿ ಇನ್ನೇನು ಎಡದ ಆಳಕ್ಕೆ ಬಿದ್ದು, ಗೊತ್ತಿದ್ದೂ ಪರಿಹಾರ ಕೊಡದ ರಾಜಾ ವಿಕ್ರಮನ ತಲೆ ಬೇತಾಳನ ಪೆಟ್ಟಿಗೆ ಚಪ್ಪಾಚೂರಾದಂತೆ ನನ್ನದೂ ಹೋಳಾಗಲಿತ್ತು. ಅದೃಷ್ಟವಶಾತ್ ಕೊಳ್ಳದಾಳದಿಂದೆದ್ದ ಮರದ ಕೊಂಬೆಯೊಂದು ಒದಗಿ, ಗಬಕ್ಕನೆ ತಬ್ಬಿ ಬಚಾವಾದೆ.”</p>
<p>ಬಂಡೆ ಬಿಟ್ಟು ನೆಲ ಮುಟ್ಟಿದ್ದೇ ದೇವು, “ಒಂದು ಕ್ಷಣ ಕಾಲು ಚಾಚಿ ಕುಳಿತು ಸುಧಾರಿಸಿಕೊಂಡೆ. ಮತ್ತೆ ಎಲ್ಲ ಒಟ್ಟಾಗಿ ಶಿಬಿರಸ್ಥಾನದತ್ತ ನುಗ್ಗಲಾರಂಭಿಸಿದೆವು. ಮೊದಲು ಬೆಳಿಗ್ಗೆ ನಮ್ಮಲ್ಲೇ ಹಿಂದುಳಿದವರು ಹೋದ ದಾರಿಯೆಂದು ಅನುಸರಿಸಿದ್ದು ತಪ್ಪಾಗಿ, ಹಿಂದೆ ಬರಬೇಕಾಯ್ತು. ಮತ್ತೆ ಏರು ದಿಕ್ಕನ್ನಷ್ಟು ಗಟ್ಟಿ ಮಾಡಿಕೊಂಡು ಕುರುಡು ಹಂದಿಗಳಂತೆ ನುಗ್ಗಿದೆವು. ಯಾಕಾದರೂ ಬೇಕಿತ್ತೋ ಎಂಬಂತೆ ಮುಳ್ಳಬಲ್ಲೆ, ಕಳ್ಳಿಹಿಂಡು, ಬಿದಿರಮೆಳೆಯೊಳಗೆ ಸಿಕ್ಕು, ಮೈಯೆಲ್ಲಾ ಗೀರುಗಾಯ ಮಾಡಿಕೊಂಡು ಹೇಗೋ ಬಯಲಾದೆವು. ಸುಸ್ತು, ಹೊಟ್ಟೆತಾಳ ಪ್ರತಿಯೊಬ್ಬರ ನೀರಸ ನಡಿಗೆಯಲ್ಲಿ ಎದ್ದು ತೋರುತ್ತಿತ್ತು. ಆದರೂ ಹಿಂದುಳಿದವರ, ಅದಕ್ಕೂ ಮಿಗಿಲಾಗಿ ಅಯಾಚಿತವಾಗಿ ಒದಗಿದ ಹತ್ತೆಂಟು ಪ್ರೇಕ್ಷಕರ ಎದುರು ಅದೆಲ್ಲಾ ಪ್ರಕಟಿಸಬಾರದೆಂಬ ಹಮ್ಮೂ ಸಲ್ಪ ಇತ್ತು. ಪ್ರಸನ್ನ ಮಾತ್ರ ಇದಕ್ಕಪವಾದ, ದೇವು ಮಾತುಗಳಲ್ಲಿ ಕೇಳಿ. “ಪ್ರಸನ್ನ ಮಾತ್ರ ಸುಟಿದೇಹಿ. ಅಡ್ಡಿಗಳನ್ನೆಲ್ಲ ಕುಪ್ಪಳಿಸಿ, ಹರಿದುಕೊಂಡು ನಮಗಿಂತ ಹತ್ತು ಮಿನಿಟು ಮೊದಲೇ ತಲಪಿದ್ದು ಶಿಬಿರಸ್ಥಾನ ಮಾತ್ರ ಅಲ್ಲ, ಉಪಾಧ್ಯರ ಅವಲಕ್ಕಿ ಬಾಣಲೆ!” ಮಧ್ಯಾಹ್ನದ ಊಟ, ಸಂಜೆಯ ತಿಂಡಿ ಎರಡಕ್ಕೂ ಇರಲೀಂತನ್ನುವ ಹಾಗೆ ಉಪಾಧ್ಯರು ಇದ್ದೆಲ್ಲಾ ಸುವಸ್ತುಗಳನ್ನು ಹಾಕಿ ಒಗ್ಗರಿಸಿಟ್ಟ ಅವಲಕ್ಕಿ. ಅಂದು ಅದರ ರುಚಿ ನೋಡದವನ ಜನ್ಮವೇ ಅನ್ಲಕ್ಕಿ.</p>
<p><a href="http://lh5.ggpht.com/_XLLsV3Btn2I/TBrMnNAWEjI/AAAAAAAAFVM/IgcotkWnpPI/s512/4.jpg"><img class="alignleft" src="http://lh5.ggpht.com/_XLLsV3Btn2I/TBrMnNAWEjI/AAAAAAAAFVM/IgcotkWnpPI/s512/4.jpg" alt="" width="345" height="507" /></a>ಶಿಬಿರಸ್ಥಾನದ ನಮ್ಮೆಲ್ಲಾ ಸಾವಯವ ಉಳಿಕೆಪಳಿಕೆಗಳನ್ನು ಬೆಂಕಿಗೆ ಹಾಕಿ, ಬೆಂಕಿಯ ಉಳಿಕೆಗಳಿಗೆ ನೀರು ಹಾಕಿ, ಸ್ಥಳ ಗುಡಿಸಿಟ್ಟೆವು. ಕುಪ್ಪಿ, ಪ್ಲ್ಯಾಸ್ಟಿಕ್ಕಾದಿ ನಿರುಪಯುಕ್ತಗಳನ್ನು ವ್ರತನಿಷ್ಠೆಯಲ್ಲಿ ನಮ್ಮ ಚೀಲಗಳೊಳಗೆ ಸೇರಿಸಿ ಮರಳಿ ನಾಗರಿಕತೆಗೆ ಮುಟ್ಟಿಸುವ ಜವಾಬ್ದಾರಿ ಉಳಿಸಿಕೊಂಡೆವು. ಹಿಂದಿರುಗುವಾಗ ದಾರಿ ತಪ್ಪಬಾರದೆಂದು ಬರುವಾಗಲೆ ದಾರಿಯಲ್ಲಿ ನಮ್ಮದೇ ಗುರುತುಗಳನ್ನು ಹಾಕಿದ್ದೆವು. ಆದರೆ ಬಂದಿದ್ದ ಪ್ರೇಕ್ಷಕವರ್ಗ ಅಭಿಮಾನೀ ಬಳಗವಾಗಿ, ದಾರಿ ತೋರುವುದಿರಲಿ ನಮ್ಮ ಹೊರೆಗಳನ್ನೂ ಉಚಿತವಾಗಿ ಸಾಗಿಸಿಕೊಡಲು ಮುಂದಾಗಿದ್ದರು.</p>
<p>ಇಷ್ಟುದ್ದಕ್ಕೂ ಜೊತೆಗೊಟ್ಟ ಆನಂದನ ತಂಡದ ‘ವಿಜಯೋತ್ಸವ’ ಕಡಿಮೆ ಸಂಭ್ರಮದ್ದೇನೂ ಆಗಿರಲಿಲ್ಲ. ಆದರೆ ಅವರ ‘ಬುದು’ವಂತಿಕೆ ಒದಗಿಸಿದ ಹೆಚ್ಚಿನ ಸಾಹಸವನ್ನು ಇಲ್ಲಿ ದಾಖಲಿಸದಿರಲಾರೆ. ಅದನ್ನು ಅವನ ಮಾತಿನಲ್ಲೇ ಹೇಳುವುದಾದರೆ, “ಸಾಯಂಕಾಲವೇ ನಾವು ಡೇರೆ ಕಿತ್ತು ಹೊರಟೆವು. ನಾವು ಶಿಖರದಿಂದ ತಂದ ಮೃತ್ತಿಕಾಪ್ರಸಾದದಿಂದ ಆನಂದ ತುಂದಿಲರಾದ ಆ ಮುಗ್ದ ಹಳ್ಳಿಗರು ಅಕ್ಷರಶಃ ಉತ್ಸವಯಾತ್ರೆಯನ್ನೇ ಹೊರಡಿಸಿಬಿಟ್ಟರು. ಗದ್ದಲದಲ್ಲಿ ಮಾರ್ಗದರ್ಶಿಗಳೂ ಸೇರಿದಂತೆ ನಮ್ಮವರೂ ಮುಂದೆ ಹೋಗಿಬಿಟ್ಟರು. ಕೊನೆಗೆ ಹೊರಟ ನಾನು ಮತ್ತು ನರಸಿಂಹಪ್ರಸಾದ್ ದಾರಿ ತಪ್ಪಿ ಆ ಕಾಡಿನಲ್ಲಿ ಕಳೆದುಹೋಗುತ್ತಿದ್ದೆವು. ಇನ್ನೇನು ಕತ್ತಲ ಮುಸುಕಿನೊಳಗೆ ಪೂರ್ಣ ಮುಳೂಗಿಹೋಗುತ್ತೇವೆ ಎನ್ನುವಾಗ ಅದೃಷ್ಟವಶಾತ್ ಸಿಕ್ಕ ಹಳ್ಳಿಗರು, ಸೌದೆ ಸಂಗ್ರಹಿಸಲು ಬಂದು ಮರಳುತ್ತಿದ್ದವರ ಕೃಪೆಯಲ್ಲಿ ಕಿಲ್ಮೆಲ್ ಪೋರ್ಟ್ ಟೀ ಎಸ್ಟೇಟ್ ಸೇರಿಕೊಂಡೆವು!”</p>
<p>ಹೆಚ್ಚುಕಡಿಮೆ ಒಂದೂವರೆ ದಿನ ನಮ್ಮನ್ನೇ ಕಾದಿದ್ದ ಸುಮೋ ಏರುವಾಗ ಅಂದೂ ಪೂರ್ಣ ಕತ್ತಲಾಗಿತ್ತು. ಮೈಸೂರ ದಾರಿಯುದ್ದಕ್ಕೆ ಹೊರಗಿನ ದೃಶ್ಯಗಳು ಮರೆಯಾಗಿದ್ದರೂ ನಮ್ಮ ಕಣ್ಣ ಮುಂದೆ ರಂಗನಾಥ ಸ್ತಂಭ, ಪಿಲ್ಲರ್ಮಲೈ ದೃಶ್ಯಗಳು ಪೂರ್ಣ ಬೆಳಗಿಕೊಂಡೇ ಇತ್ತು. ವಾತಾರಾವಣನ ಚಳಿಕಾಟ ಇದ್ದರೂ ಬೆಚ್ಚಗಿನ ಅನುಭವದ ಗೂಡಿನೊಳಗೆ ಮುದುರಿದ ಉಪಾಧ್ಯರು ಭೀಷ್ಮ ಪ್ರತಿಜ್ಞೆಯನ್ನೇ ಮಾಡಿದರು, “ಇನ್ನ್ ಮನಿ ಬಪ್ಪವರೆಗೂ ನಾ ಏಳ್ತಿಲ್ಲೆ.”</p>
<p><a href="http://lh5.ggpht.com/_XLLsV3Btn2I/TE3K_5VgMMI/AAAAAAAAFfo/AP_Y692_170/s720/ranga%20map.jpg"><img class="alignnone" src="http://lh5.ggpht.com/_XLLsV3Btn2I/TE3K_5VgMMI/AAAAAAAAFfo/AP_Y692_170/s720/ranga%20map.jpg" alt="" width="527" height="373" /></a></p>
<p><strong> </strong><strong>ನೀತಿ ಪಾಠ:</strong> ಸಾಧಕರ ಮುಂದೆ ಹತ್ತೆಂಟು ಮೈಕ್ ತೂರಿ, ಸಂಬದ್ಧಾಬದ್ಧ ಅಭಿಪ್ರಾಯ ಸಂಗ್ರಹಿಸುವ ಪತ್ರಕರ್ತರ ಜಾಡಿನಲ್ಲಿ ‘ಬತ್ತಿಹೋಯ್ತೇ ಉಪಾಧ್ಯರ ತಿಳಿವಿನ ಹಸಿವು?’ ಮುಂದೊಂದು ದಿನ ಹೀಗೇ ಅವರು ನನ್ನಂಗಡಿಗೆ ಬಂದಾಗ ಕೆಣಕಿದೆ. ಇಲ್ಲ, ಅವರ ಸಾವಿರದ ಮೂರನೇ ಕಲಾಪವೇ ರಂಗನಾಥಸ್ತಂಭ ವಿಜಯವಂತೆ! ದೇವು ತನ್ನ ಆಕಾಶವಾಣಿ ವೃತ್ತಿ ಜಾಣ್ಮೆಯ ಕುಣಿಕೆ ಒಡ್ಡಿದರು. ನಾನೋ ಶಬ್ದಮಿತಿ, ಸಮಯಮಿತಿಗಳ ಕಟ್ಟುಹರಿದು ಮೇಯುವ ಜಾತಿ, ಕುತ್ತಿಗೆ ಕುಸುಕಿ ಬಚಾವಾದೆ. ಗಣಪತಿ ಭಟ್ಟರು ದೇವುಗೆ ಸಿಕ್ಕಿಬಿದ್ದು, ಆಕಾಶವಾಣಿಯಲ್ಲಿ ರಂಗನಾಥ ಸ್ತಂಭಕ್ಕೆ ವೀರಾವೇಶದ ‘ಲಗ್ಗೆ’ ಹಾಕಿದರು.  ನಾನು ಉದಯವಾಣಿಗೆ ಅನುಭವ ಕಥನದ ಧಾರಾವಾಹಿ ಮಾಡುವ ಕಾಲದಲ್ಲಿ ದೇವು ಕಾಲೆಳೆದೆ. ಅವರು ತಮ್ಮ ಟಿಪ್ಪಣಿಗಳ ಸರಣಿಯನ್ನು ಮುಗಿಸುತ್ತಾ “ಹಿಂದೊಮ್ಮೆ ಹಾದಿತಪ್ಪಿದ ವಿಮಾನ ಸ್ತಂಭಕ್ಕೆ ಘಟ್ಟಿಸಿತ್ತಂತೆ. ವಿಮಾನ ಪುಡಿಯಾದರೂ ದೈತ್ಯ ವಿಚಲಿತನಾಗಲಿಲ್ಲ. ಅಂಥವನು ಕ್ಷುದ್ರಾತಿಕ್ಷುದ್ರ  ನಮ್ಮನ್ನು ಒಪ್ಪಿಸಿಕೊಂಡ ಪರಿ ಮರೆಯುವಂಥದ್ದಲ್ಲ.” ಬೆಟ್ಟಕಾಡು ಸುತ್ತುವ ತನ್ನ ಧಾವಂತದಲ್ಲಿ “ಇನ್ನು ಪ್ರಾಕೃತಿಕ ಸವಾಲುಗಳೇ ಉಳಿದಿಲ್ಲ ಎಂಬ ನನ್ನ ದಾರ್ಷ್ಟ್ಯಕ್ಕೆ  ರಂಗನಾಥ ಸ್ತಂಭದ ಮೇಲೆ ನೇಣಾಯ್ತು” ಎಂದೇ ದೇವು ಬರಹ ಮುಗಿಸಿ ಕೊಟ್ಟರು! ಕೊನೆಗುಳಿಯುವುದು ಆನಂದ. “ವೀರಾವೇಶದಲ್ಲಿ ಮೈಸೂರಿಗೆ ಮರಳಿ, ಮನೆಯ ಮೆಟ್ಟಿಲಲ್ಲಿ ಕುಳಿತು, ಬೂಟು ಮತ್ತು ನಾಲ್ಕು ದಿನದಿಂದ ಬದಲಿಸದೇ ನಾರುತ್ತಿದ್ದ ಕಾಲುಚೀಲವನ್ನು ಬಿಚ್ಚಿ ಬಿಸಾಡಿ ಒಳಗೆ ನುಗ್ಗುತ್ತಿದ್ದಂತೆ, ಕಾಲು ಜಾರಿ, ಹೊಸ್ತಿಲು ಒದ್ದು ಕಿರಿಬೆಟ್ಟು ಮುರಿದುಕೊಂಡೆ. ರಂಗನಾಥ ಸ್ತಂಭ ಜಯಿಸಿದರೂ ಎಡಗಾಲು ಮುಂದಾಗಿ ಹೊಸ್ತಿಲು ದಾಟಬಾರದು ಪುರಂದರ ವಿಠಲಾ!”</p>
<p><strong>(ಮುಗಿಯಿತು)</strong></p>
<blockquote><p>[ನನ್ನ ಜಲಾನಯನ ಪ್ರದೇಶದಲ್ಲಿ ಸಾಕಷ್ಟು ಮಳೆಬೀಳುತ್ತಿರುವುದನ್ನು (ದಿನಕ್ಕೆ ಸರಾಸರಿ ನೂರು ಮಂದಿ ಭೇಟಿಕೊಡುತ್ತಿದ್ದೀರಿ - ನಾ ಧನ್ಯ) ರಂಗನಾಥವಿಜಯದ ಕಳೆದಾರು ಕಂತಿನ ಉದ್ದಕ್ಕೂ ಗಮನಿಸಿದ್ದೇನೆ. ನಿಮ್ಮ ಲಿಂಗನಮಕ್ಕಿ, ಕೆಯಾರೆಸ್ಸುಗಳ ಸ್ಪಂದನವಾಹಿನಿಯ ದ್ವಾರವನ್ನು ಈಗಲಾದರೂ ದೊಡ್ಡದಾಗಿ ತೆರೆದು ನನ್ನ ಹೆಚ್ಚಿನ ಕೃಷಿಗೆ ಹರಿಸುವಿರಾಗಿ ನಂಬಿದ್ದೇನೆ.]</p></blockquote>
<br />  <a rel="nofollow" href="http://feeds.wordpress.com/1.0/gocomments/athree.wordpress.com/514/"><img alt="" border="0" src="http://feeds.wordpress.com/1.0/comments/athree.wordpress.com/514/" /></a> <a rel="nofollow" href="http://feeds.wordpress.com/1.0/godelicious/athree.wordpress.com/514/"><img alt="" border="0" src="http://feeds.wordpress.com/1.0/delicious/athree.wordpress.com/514/" /></a> <a rel="nofollow" href="http://feeds.wordpress.com/1.0/gofacebook/athree.wordpress.com/514/"><img alt="" border="0" src="http://feeds.wordpress.com/1.0/facebook/athree.wordpress.com/514/" /></a> <a rel="nofollow" href="http://feeds.wordpress.com/1.0/gotwitter/athree.wordpress.com/514/"><img alt="" border="0" src="http://feeds.wordpress.com/1.0/twitter/athree.wordpress.com/514/" /></a> <a rel="nofollow" href="http://feeds.wordpress.com/1.0/gostumble/athree.wordpress.com/514/"><img alt="" border="0" src="http://feeds.wordpress.com/1.0/stumble/athree.wordpress.com/514/" /></a> <a rel="nofollow" href="http://feeds.wordpress.com/1.0/godigg/athree.wordpress.com/514/"><img alt="" border="0" src="http://feeds.wordpress.com/1.0/digg/athree.wordpress.com/514/" /></a> <a rel="nofollow" href="http://feeds.wordpress.com/1.0/goreddit/athree.wordpress.com/514/"><img alt="" border="0" src="http://feeds.wordpress.com/1.0/reddit/athree.wordpress.com/514/" /></a> <img alt="" border="0" src="http://stats.wordpress.com/b.gif?host=athreebook.com&amp;blog=3999388&amp;post=514&amp;subd=athree&amp;ref=&amp;feed=1" width="1" height="1" />]]></content:encoded>
			<wfw:commentRss>http://athreebook.com/2010/07/26/26july2010/feed/</wfw:commentRss>
		<slash:comments>11</slash:comments>
	
		<media:content url="" medium="image">
			<media:title type="html">Abhaya</media:title>
		</media:content>

		<media:content url="http://lh4.ggpht.com/_XLLsV3Btn2I/TE3LADIqZpI/AAAAAAAAFfs/dDY5zNs028s/s720/4.jpg" medium="image" />

		<media:content url="http://lh6.ggpht.com/_XLLsV3Btn2I/TE3K_h_WBNI/AAAAAAAAFfk/qTOKhPTDNRw/s800/3.jpg" medium="image" />

		<media:content url="http://lh5.ggpht.com/_XLLsV3Btn2I/TE3K_UlyaSI/AAAAAAAAFfg/KYPT2pm4R9A/2.jpg" medium="image" />

		<media:content url="http://lh5.ggpht.com/_XLLsV3Btn2I/TBrMmz3HDdI/AAAAAAAAFVE/caW7qgiTE5A/s720/2.jpg" medium="image" />

		<media:content url="http://lh5.ggpht.com/_XLLsV3Btn2I/TBrMnNAWEjI/AAAAAAAAFVM/IgcotkWnpPI/s512/4.jpg" medium="image" />

		<media:content url="http://lh5.ggpht.com/_XLLsV3Btn2I/TE3K_5VgMMI/AAAAAAAAFfo/AP_Y692_170/s720/ranga%20map.jpg" medium="image" />
	</item>
		<item>
		<title>ಆಕಾಶ ಪಾತಾಳಗಳ ನಡುವೆ</title>
		<link>http://athreebook.com/2010/07/21/21july2010-2/</link>
		<comments>http://athreebook.com/2010/07/21/21july2010-2/#comments</comments>
		<pubDate>Wed, 21 Jul 2010 09:52:41 +0000</pubDate>
		<dc:creator>abhayaftii</dc:creator>
				<category><![CDATA[ಪ್ರವಾಸ ಕಥನ]]></category>
		<category><![CDATA[ರಂಗನಾಥ ಸ್ಥಂಬ]]></category>
		<category><![CDATA[ವನ್ಯಲೋಕ]]></category>

		<guid isPermaLink="false">http://athreebook.com/?p=502</guid>
		<description><![CDATA[ರಂಗನಾಥ ವಿಜಯ ಭಾಗ ಆರು [ಕಳೆದ ಕಂತಿನ ಕೊನೆಯಲ್ಲಿ ಇಷ್ಟು ಹತ್ತಿರವಾದರೂ ಅಷ್ಟು ದೂರ (ತದ್ದೂರೇ ತದಂತಿಕೇ ಎಂದೇನೋ ಅಂತಾರಲ್ಲಾ ಹಾಗೆ) ಎನ್ನುವ ಭಾವದೊಡನೆ ರಂಗನಾಥ ಸ್ತಂಭ ಎಂಬ ದೈತ್ಯನ ಭುಜದಂಚಿನಲ್ಲಿ ನಿಲ್ಲಿಸಿದ್ದೆ. ‘ಬೊಬ್ಬೆ ವಿನಿಮಯದಲ್ಲಿ ನಮ್ಮ ನಿರಾಶೆಯನ್ನು ಹುಗಿದಿಟ್ಟರೂ ಸವೆದ ಜಾಡನ್ನು ಮರಳಿ ಸವೆಸಲು ತಿರುಗಿದೆವು’ ಎಂದೇ ಮುಗಿಸಿದ್ದೆ. ಓ ಅದು ನಾವು ತಿರುಗಿದ್ದಲ್ಲ &#8230; <a href="http://athreebook.com/2010/07/21/21july2010-2/">Continue reading <span class="meta-nav">&#8594;</span></a><img alt="" border="0" src="http://stats.wordpress.com/b.gif?host=athreebook.com&amp;blog=3999388&amp;post=502&amp;subd=athree&amp;ref=&amp;feed=1" width="1" height="1" />]]></description>
			<content:encoded><![CDATA[<blockquote><p><strong>ರಂಗನಾಥ ವಿಜಯ ಭಾಗ ಆರು</strong><br />
[ಕಳೆದ ಕಂತಿನ ಕೊನೆಯಲ್ಲಿ ಇಷ್ಟು ಹತ್ತಿರವಾದರೂ ಅಷ್ಟು ದೂರ (ತದ್ದೂರೇ ತದಂತಿಕೇ ಎಂದೇನೋ ಅಂತಾರಲ್ಲಾ ಹಾಗೆ) ಎನ್ನುವ ಭಾವದೊಡನೆ ರಂಗನಾಥ ಸ್ತಂಭ ಎಂಬ ದೈತ್ಯನ ಭುಜದಂಚಿನಲ್ಲಿ ನಿಲ್ಲಿಸಿದ್ದೆ. ‘ಬೊಬ್ಬೆ ವಿನಿಮಯದಲ್ಲಿ ನಮ್ಮ ನಿರಾಶೆಯನ್ನು ಹುಗಿದಿಟ್ಟರೂ ಸವೆದ ಜಾಡನ್ನು ಮರಳಿ ಸವೆಸಲು ತಿರುಗಿದೆವು’ ಎಂದೇ ಮುಗಿಸಿದ್ದೆ. ಓ ಅದು ನಾವು ತಿರುಗಿದ್ದಲ್ಲ ಮಾರ್ರೇ ನಮ್ಮ ಕತ್ತು ಮಾತ್ರ ತಿರುಗಿದ್ದಪ್ಪಾ! ಬನ್ನಿ ಬನ್ನಿ ಮುಂದ್ ಹೋಪಾ...]</p></blockquote>
<p><a href="http://lh5.ggpht.com/_XLLsV3Btn2I/TEbAHrJ0WPI/AAAAAAAAFd4/4paB3OeU2Aw/s512/ranganna%20001.jpg"><img class="alignleft" src="http://lh5.ggpht.com/_XLLsV3Btn2I/TEbAHrJ0WPI/AAAAAAAAFd4/4paB3OeU2Aw/s512/ranganna%20001.jpg" alt="" width="345" height="487" /></a>ರಂಗನಾಥ ಸ್ತಂಭದ ಉತ್ತರಮೈ ಕೆಳಗಿನಿಂದ ಮುಂಚಾಚಿಕೆಯಂತೇ ಇದ್ದರೂ ಮೇಲಿನಂಶ ನಮ್ಮಲ್ಲಿ ನವಚೇತನವನ್ನೇ ತುಂಬಿತು. ಉತ್ತಮ ಮಹಲುಗಳ ಹಿತ್ತಲ ಕುಪ್ಪೆಯಂತೆ ಇಲ್ಲಿ ಪುಡಿ ಬಂಡೆಗಳ ಒಟ್ಟಣೆ, ಹುಲ್ಲು, ಮುಳ್ಳು, ಬಳ್ಳಿಯೂ ಸಾಕಷ್ಟು ಕುದುರಿತ್ತು. ನಾವೋ ಚಿಂದಿ ಆಯುವವರು. ಆದರೂ ಒಂದು ಹೊತ್ತಿನ ದಿವ್ಯಕ್ಕಾಗಿ ‘ಕುಪ್ಪೆ’ ಕಂಡ ಸಂಭ್ರಮದಲ್ಲಿ ಆತುರ ತೋರದ ಸಂಯಮಿಗಳು. ಸುಮಾರು ಐವತ್ತಡಿ ಅಂತರದವರೆಗೆ ಸಣ್ಣ ಡುಬ್ಬದಂತೇ ಕಂಡರೂ ಅಭದ್ರ ರಚನೆಯಂತಿತ್ತು. ಆಚೆಗೆ ಅನತಿ ದೂರದಲ್ಲಿ ಶಿಖರವೇ ಕಾಣಿಸುತ್ತಿತ್ತು. ಇನ್ನಷ್ಟು ಉತ್ತರ ಮೈಗೆ ಸರಿದು ಅನ್ಯ ಸಾಧ್ಯತೆಗಳನ್ನು ಹುಡುಕಲು ಸಮಯವಿರಲಿಲ್ಲ. ಹಾಗಾಗಿ ಸ್ವಲ್ಪ ಅಪಾಯಕಾರಿಯೇ ಆದರೂ ಸರಿ ಎಂದು ಶಿಖರ ಸಾಧನೆಗೆ ಹೊಸ ಕೆಚ್ಚು ಮೂಡಿಸಿಕೊಂಡೆವು.</p>
<p><span id="more-502"></span>ಹಿಂದೆಂದೋ ಸಿಡಿಲಿನ ಬಹು ಹೊಡೆತ ತಿಂದು ಸೀಳುಸೀಳಾಗಿದ್ದ ಬಂಡೆ ಎದೆಗಳ ಮೇಲೆ ಮೊದಲ ಇಪ್ಪತ್ತು ಅಡಿಗಳು. ಬಂಡೆ ಕಳಚಿ ಬಂದರೂ ಆಧಾರಕ್ಕೆ ಮುಷ್ಠಿಮಾಡಿ ಹಿಡಿಯುವ ಹುಲ್ಲು ಕಿತ್ತು ಕೈಗೆ ಬಂದರೂ ನೇರ ಎಂಟನೂರಡಿ ಆಳಕ್ಕೆ ಸಂದುಹೋಗುವ ಚಿತ್ರ ಎಲ್ಲರಿಗಿಂತಲೂ ಹೆಚ್ಚು ಮುಂದಾಳಾಗಿ ಹೋಗುವ ನನಗಿತ್ತು. ಸಹಜವಾಗಿ ಅಲ್ಲಿ ಪ್ರತಿ ಹೆಜ್ಜೆ, ಪ್ರತಿ ಹಿಡಿಕೆಯಲ್ಲಿ ನಾನು ಪೂರ್ತಿ ಇರಲಿಲ್ಲ. ‘ಅರೆ! ಇದೇನು, ಎಲೆಯ ಮೇಲಿದ್ದೂ ಎಲೆಗಂಟದ ನೀರಹನಿಯಂತೆ&#8230; ಎಂಬರ್ಥದ ಅಧ್ಯಾತ್ಮಿಕ ಮಾತುಗಳು’ ಎಂದು ಹುಬ್ಬೇರಿಸಬೇಡಿ. ಹೆದರಬೇಡಿ, ಗೀತಾಪ್ರವಚನ ಚಟವೇನೂ ಇಲ್ಲ. ಆಕಸ್ಮಿಕ ಸಂಭವಿಸಿದರೆ ಯಾವ ಕ್ಷಣದಲ್ಲೂ ಇನ್ನೊಂದು ಹಿಡಿಕೆ ಬಾಚಿಕೊಳ್ಳುವ, ನಿಂತ ನೆಲೆಗೊಂದು ಬದಲಿ ದಕ್ಕಿಸಿಕೊಳ್ಳಲು ಸಜ್ಜಾಗಿದ್ದೆ ಎಂದಷ್ಟೇ ಅರ್ಥ. ಬಿದ್ದರೆ ಪಾತಾಳ, ಗೆದ್ದರೆ ಆಕಾಶ. ನನ್ನ ರಕ್ಷಣಾ ಹಗ್ಗವನ್ನು ದೇವು ಕೆಳಗಿನೊಂದು ಭದ್ರ ನೆಲೆಯಲ್ಲಿ ಕುಳಿತು ನಿಯಂತ್ರಿಸುತ್ತಿದ್ದಂತೆ ಏರಿದೆ (ರೇಖಾಚಿತ್ರ ನೋಡಿ). ನನ್ನಿಂದ ಏನೂ ತಪ್ಪಾಗಲಿಲ್ಲ. ಇಲ್ಲವೇ ಇಲ್ಲ ಎನ್ನಲಾಗದಂತೆ ಹಗ್ಗದ ಚಲನೆಗೆ ಸಿಕ್ಕು ಸಣ್ಣ ಎರಡು ಮೂರು ಕಲ್ಲ ಚೂರುಗಳು ನಿರಪಾಯಕರವಾಗಿ ಉರುಳಿಹೋದವು. ಮತ್ತೆ ನಾನು ಭದ್ರ ನೆಲೆ ಹಿಡಿದು ಕುಳಿತು ಒಬ್ಬೊಬ್ಬರನ್ನೇ ಬಲು ಎಚ್ಚರದಿಂದ ನನ್ನೆತ್ತರಕೆ ಏರಿಸಿಕೊಳ್ಳತೊಡಗಿದೆ.</p>
<p>ಪ್ರಾಯದಲ್ಲಿ ಭಟ್ಟರು ನಮ್ಮ ತಂಡದ ಹಿರಿಯರು. ಸಾಹಸಾನುಭವದಲ್ಲಿ, ಮುಖ್ಯವಾಗಿ ಶಿಲಾರೋಹಣದಲ್ಲಿ ಎಲ್ಲರಿಗಿಂತ ಕಿರಿಯರು. ಆದರೆ ಒಳ್ಳೆಯ ಗಾಳಿಗೆ ಸದಾ ಮುಕ್ತವಾಗಿರುವ ಅವರ ಮನೋಭಾವ ಇಂಥಾ ಒಂದು ಪ್ರಪಾತದಂಚಿಗೆ ತಂದೀತೆಂದು ಊಹಿಸಿಯೇ ಇರಲಿಲ್ಲ. ಅವರ ಮಾತಿನಲ್ಲೇ ಕೇಳಿ. “ಎಡಗಾಲು ಈ ಗುಂಡಿಗೆ, ಬಲಗಾಲು ಹಗುರಕ್ಕೆ ಅಲುಗಾಡುವ ಮೇಲಿನ ತುಣುಕಿಗೆ. ಎಡಗೈ ಹಿಡಿದ ಗರಿಕೆ ಜುಟ್ಟೇನೋ ಗಟ್ಟಿಯಿತ್ತು ಆದರೆ ಬಲಗೈಗೆ ಅಲುಗುವ ಬಂಡೆಯಾಚಿನ ಒಣ ತುಂಬೆ ಕಡ್ಡಿ ಕಿತ್ತು ಬರುವಂತಿದೆ.  ದಡಬಡಾಯಿಸಿ ರಕ್ಷಣಾಹಗ್ಗವನ್ನೇ ಹಿಡಿದೆ, ಬಾಗಿದ ಮೊಣಕಾಲು ಬಂಡೆಗೆ ಕೊಟ್ಟು ತುದಿಗಾಲ ಹಿಡಿತ ತಪ್ಪಿ ಹೋ. . .” ಎನ್ನುವುದರೊಳಗೆ ಕೆಳಗಿನಿಂದ ಸೂಚನೆ ಕೊಡುತ್ತಿದ್ದವರ “ಬಿಲೇ ಟೈಟ್” ಕೂಗು ಕೆಲವರನ್ನಾದರೂ ತಲ್ಲಣಿಸುವಂತೆ ಮೊಳಗಿತು. ಮೊದಲೇ ಹೇಳಿದಂತೆ ಆ ಜಾಗದಲ್ಲಿ ಎಲ್ಲರ ನಿರ್ವಹಣೆ ಜವಾಬ್ದಾರಿ ನಾನೇ ಹೊತ್ತಿದ್ದೆ. ಭಟ್ಟರು ಒಮ್ಮೆ ಒಂದೆರಡಲ್ಲ ನಾಲ್ಕೂ ಆಧಾರ ತಪ್ಪಿಸಿಕೊಂಡಿದ್ದರು. ಆದರೆ ಆತಂಕಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟವಾದಾಗ ಉಳಿದವರಿಗೆ ಹೆಚ್ಚು ವಿಶ್ವಾಸ ತುಂಬಿತು. ಆದರೂ ಅಭಯನಿಗೆ ಅಪ್ಪ ಸ್ವಲ್ಪ ಉಡಾಫಿ ಎಂಬ ಸಂಶಯ. ನನಗೋ ‘ಮಗ ವೃಥಾ ನಿಧಾನಿ’ ಎಂಬ ಸಿಡುಕು. ಮೂರನೆಯವ ದೇವುಗಿದು ಕಂಡದ್ದು ಹೀಗೆ. “ವರ್ಧನರು ಮಗನಿಗೆ ಉದಾರವಾಗಿ ದಾಟಿಸುತ್ತಿದ್ದ ಸಲಹೆಗಳು, ಹುರಿದುಂಬಿಸುವ ಮಾತುಗಳು ಅವನಿಗೆ ಛೇಡನೆಯಂತೆ ಕೇಳಿ ಆತ ಮಕ್ಕಳಾಟಿಕೆಯಲ್ಲಿ ಉರಿದುಬೀಳುತ್ತಿದ್ದದ್ದು ನನಗಂತೂ ಉಲ್ಲಾಸ ಕೊಡುತ್ತಿತ್ತು.”</p>
<p>ಮುಂದೆ ಸ್ವಲ್ಪ ಒಳಮೈಯಲ್ಲಿ ಹತ್ತಿಪ್ಪತ್ತಡಿ ವಿರಾಮದ ಏರು. ಹುಲ್ಲು, ಮುಳ್ಳಬಲ್ಲೆಗಳನ್ನು ನಿವಾರಿಸಿಕೊಂಡು ನಾವು ಈಗ ತಲಪಿದ ಹಂತ ನಮ್ಮ ತಿರುಪೇರಿನ ಕೊನೆಯಲ್ಲಿ ಎದುರಾದ ಗೋಡೆಯಂಥಾ ಬಂಡೆಯ ನೆತ್ತಿ. ಆ ಆಳದಿಂದೆದ್ದ ಕಲ್ಲಿನ ಸೀಳು ಇಲ್ಲಿ ಒಳಮೈಗೆ ತಿರುಗುವಾಗ ಮೇಲ್ಮೈಯಲ್ಲಿ ಒಂದು ದೊಡ್ಡ ಕಲ್ಲ ಹೋಳನ್ನೇ ಪ್ರತ್ಯೇಕಿಸಿಟ್ಟಿತ್ತು. ಶಿಖರ ಸಾಧನೆಗೆ ನಮಗೆ ಅದನ್ನೇರುವುದು ಅನಿವಾರ್ಯವಿತ್ತು. ಸುಮಾರು ಮೂವತ್ತಡಿ ಎತ್ತರದ ಮುಖ್ಯ ಬಂಡೆ ಮತ್ತು ಆ ಹೋಳಿನ ನಡುವೆ ಎರಡು ಜನ ಭುಜಕ್ಕೆ ಭುಜ ತಾಗಿಸಿ ನಿಲ್ಲುವಷ್ಟು ಅಗಲದ ಸಂದು ಇತ್ತು. ಇಂಥಾ ಪ್ರಾಕೃತಿಕ ಕೊರಕಲನ್ನು ಹಿಂದಿನ ಕುಶಲ ಪರ್ವತಾರೋಹಿಗಳು ಕಾರ್ಖಾನೆಗಳ ಹೊಗೆ ಚಿಮಣಿಗೆ ಹೋಲಿಸಿ ಹಾಗೇ ಹೆಸರಿಸಿದ್ದಾರೆ. ಕಾರ್ಖಾನೆಯ ದುರಸ್ತಿಯ ಕಾಲಗಳಲ್ಲಿ ನೂರಾರು ಅಡಿ ಎತ್ತರವೂ ಇರಬಹುದಾದ ಚಿಮಣಿ ಶುದ್ಧಿ ಬಹುಮುಖ್ಯ ಕೆಲಸವೇ ಸರಿ. ಆಗ ಅಲ್ಲಿ ಸ್ಫುರಿಸಿರಬಹುದಾದ ತಂತ್ರ &#8211; ಚಿಮಣಿ ಹತ್ತುವಿಕೆ, ರೂಪಸಾಮ್ಯದ ಪ್ರಾಕೃತಿಕ ಕೊರಕಲುಗಳಲ್ಲೂ ಬಳಕೆಗೆ ಬಂದಂತಿವೆ. ನೀವು ಹರಿಕಥೆ ದಾಸಯ್ಯನೆಂದು ನನ್ನನ್ನು ತಮಾಶೆ ಮಾಡಿದರೂ ಸರಿ, ಚಿಮಣಿ ಏರಿಕೆ ಅಥವಾ chimney climbing ಗೆ ಪೀಠಿಕೆಯಾಗಿ ನಾನೊಂದು ಉಪಕಥೆ ಹೇಳಲೇಬೇಕು. (ಭಕ್ತ ಜನವೇ ಒಕ್ಕೊರಲಿನಲ್ಲಿ ಹೇಳಿ ರಂಗನಾಥಸ್ತಂಭಕ್ಕೇ ಜಯ್!)</p>
<p>ಕೊಡಂಜೆಗೊಂದು ಕೋಡಗ ಜಾಡು! ಚಿಮಣಿ ತಂತ್ರಾಭ್ಯಾಸಕ್ಕೆ ನಮ್ಮ ವಲಯದ ಪ್ರಶಸ್ತ ಸ್ಥಳ ಮೂಡಬಿದ್ರೆಯ ಸಮೀಪದ ಕೊಡಂಜೆಕಲ್ಲು. ರಂಗನಾಥ ಏರೋಣಕ್ಕೂ ಎರಡು ವಾರ ಮುನ್ನ ನಾವು ಅಲ್ಲಿಗೆ ಹೋದದ್ದನ್ನು ನಾನು ಮೊದಲೇ ಹೇಳಿದ್ದೇನೆ. ಇಲ್ಲಿ ಅದನ್ನು ಸ್ವಲ್ಪ ಹೆಚ್ಚಿನ ವಿವರಗಳಲ್ಲಿ ನೋಡೋಣ.</p>
<p><a href="http://lh6.ggpht.com/_XLLsV3Btn2I/TEbAHqtRY3I/AAAAAAAAFd0/2PSz3ZVYeIE/s720/ranganna%20001_1.jpg"><img class="alignleft" src="http://lh6.ggpht.com/_XLLsV3Btn2I/TEbAHqtRY3I/AAAAAAAAFd0/2PSz3ZVYeIE/s720/ranganna%20001_1.jpg" alt="" width="344" height="225" /></a>ಕೊಡಂಜೆಯಲ್ಲಿ ಮುಖ್ಯವಾಗಿ ಎರಡು ಭಾರೀ ಬಂಡೆ ಕೊದಿಗಳಿವೆ. ಶತಮಾನದ ಹಿಂದಿನ ಕಡಲಯಾನಿಗಳು ಮಂಗಳೂರು ಬಂದರ ಗುರುತಿಸಲು ಬಳಸುತ್ತಿದ್ದ ಪ್ರಮುಖ ಭೂ ನಿಶಾನಿಯ ಪಟ್ಟಿಯಲ್ಲಿ ಇದು ಕತ್ತೆಕಿವಿ (Ass’s ears) ಎಂದೇ ಪ್ರಸಿದ್ಧ. ಮೂದಬಿದ್ರೆಯಿಂದ ನಾರಾವಿಗೆ ಹೋಗುವ ದಾರಿಯ ಬದಿಯಿಂದ ತೊಡಗುವಾಗ ಎದುರು ಸಿಗುವ, ಭಾರೀ ಬಂಡೆಗಳ ಒಟ್ಟಣೆಯಂತೆ ತೋರುವ, ಹೆಚ್ಚು ಎತ್ತರದ ಕೊಡಿ ನಿಮಿರಿದ ಕಿವಿ ಎನ್ನಬಹುದು. ಅದರ ಉತ್ತರಕ್ಕೆ ಗುಮ್ಮಟದಂತಿರುವುದು ಮೊಂಡುಗಿವಿ. ನಿಮಿರುಗಿವಿಯ ಪೂರ್ವ ತಪ್ಪಲಿನಲ್ಲೊಂದು ಗುಹಾಶ್ರಮವಿದೆ. ಸಹಜವಾಗಿ ಕೊಡಂಜೆಗೆ ಹೆಚ್ಚು ಭೇಟಿಕೊಡುವವರು ಆಶ್ರಮದ ಭಕ್ತರು. ಅವರು ಸ್ವಯಂ ಸೇವೆಯಲ್ಲಿ ಮಾಡಿಕೊಂಡ ಕಾಲುದಾರಿ ಮತ್ತು ಕಚ್ಚಾ ಮೆಟ್ಟಿಲ ಸಾಲು ಹಿಡಿದು, ದಕ್ಷಿಣದ ದಿಬ್ಬವನ್ನುತ್ತರಿಸಿ ಮುಖ್ಯ ಬಂಡೆಗಳೆರಡಕ್ಕೂ ದೂರದ ‘ನಮಸ್ಕಾರ’ ಹಾಕಿಬಿಡುತ್ತಾರೆ. ಸ್ವಲ್ಪ ಹೆಚ್ಚಿನ ಉಮೇದಿನವರು ಹಾಗೇ ಗುಹಾಶ್ರಮದ ನೆತ್ತಿ ಹಾಯ್ದು, ಕುರುಚಲು ಕಾಡಿನೊಳಗಣ ಸವಕಲು ಜಾಡು ಹಿಡಿದು ಕತ್ತೆನೆತ್ತಿ (ಎರಡು ಬಂಡೆಗಳ ನಡುವಣ ತಟ್ಟು) ಮುಟ್ಟುವುದಿದೆ. ಮತ್ತೂ ಚಟಬಿಡದವರು, ಸಹಜ ಶಿಲಾರೋಹಿಗಳು ಆ ಒಳಮೈಯಿಂದ ನಿಮಿರುಗಿವಿಯನ್ನು ಏರುವುದಿದೆ. ಮೊಂಡುಗಿವಿ ಪ್ರಯತ್ನಿಸಿದವರು ಬಹಳ ಕಡಿಮೆ.</p>
<p><strong>ಚಿಮಿಣಿ ಕ್ಲೈಂಬಿಂಗ್ ವಿವರಣೆಗೆ ಡಿಸ್ಕವರಿ ಚ್ಯಾನಲ್ಲಿನವರ <a href="http://videos.howstuffworks.com/discovery/30404-man-vs-wild-chimney-climbing-video.htm" target="_blank">ವಿವರಣಾತ್ಮಕ ವೀಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ.</a></strong></p>
<p>ಒಲವು, ತರಬೇತಿಗಳೆರಡೂ ಮೇಳೈಸಿದ ನಾನು ೧೯೭೭ರ ಸುಮಾರಿಗೆ ಬೇರೊಂದೇ ಜಾಡು &#8211; ನಿಮಿರುಗಿವಿಗೆ ಚಿಮಣಿಸರಣಿ, ಕಂಡುಕೊಂಡಿದ್ದೆ. ಆಶ್ರಮ ದಾರಿಯಲ್ಲಿ ದಿಬ್ಬ ಏರಿದ ಕೂಡಲೇ ಉತ್ತರಕ್ಕೆ ತಿರುಗಿ ನೇರ ನಿಮಿರುಗಿವಿಯ ಬುಡಕ್ಕೆ ನುಗ್ಗಬೇಕು. ಆಲಿಬಾಬನ ಸೂಸಮ್ಮ ತನ್ನ ರಹಸ್ಯ ದ್ವಾರ ತೆರೆದಂತೆ ಭಾರೀ ಬಂಡೆಗುಂಡುಗಳ ನಡುವೆ ಮೊದಲೊಂದು ಸಪುರ ಓಣಿ. ಸುಮಾರು ಆರೇಳಡಿ ಅಗಲದ ಓಣಿ ಒಳಸರಿದಂತೆ ಕಿರಿದಾಗುತ್ತ ಒಂದು ಕತ್ತಲ ಗುಹೆಯೇ ಆಗಿಬಿಡುತ್ತದೆ. ಗುಹಾದ್ವಾರದಲ್ಲಿ ‘ಸುಗ್ರೀವಕಲ್ಲು’ &#8211; ಭಾರೀ ಬಂಡೆ ತುಂಡು. (ನಿಮಗೆ ರಾಮಾಯಣ ಗೊತ್ತುಂಟಲ್ವೋ? ಅದರಲ್ಲಿ ಮಾಯಾವಿ ರಕ್ಕಸ ಕಿಷ್ಕಿಂದೆ ಕಾಡಿದ್ದು ನೆನಪಿಸಿಕೊಳ್ಳಿ. ವಾಲಿ ಸುಗ್ರೀವರು ಆತನ ಬೆನ್ನಟ್ಟಿದರು. ನನ್ನ ರಾಮಾಯಣದ ಮಾಯಾವಿ ಸೀದಾ ಬಂದು ಸೇರಿದ್ದು ಈ ಕೊಡಂಜೆ ಗುಹೆ. ಮತ್ತೆ ವಾಲಿ ಒಳಗೆ ನುಗ್ಗಿ ದಿನಗಟ್ಟಳೆ ಕಾಳಗ ಕೊಟ್ಟದ್ದು, ದಿಕ್ಕೇಡಿ ದ್ವಾರಪಾಲಕ ಸುಗ್ರೀವ ಕದಮುಚ್ಚಿ ಕಿಷಿಂದೆಗೆ ಮರಳಿದ್ದು, ವಿಜಯೀ ವಾಲಿ ಹೊರಬರಲು ಕದಮುಚ್ಚಿದ ಬಂಡೆಯನ್ನು ಒದ್ದು ಕಳೆದದ್ದು ಎಲ್ಲಾ ನಿಮಗೆ ನಾನ್ಯಾಕೆ ಹೇಳಲಿ. ಆ ಅದೇ ಬಂಡೆ ಈ ಸುಗ್ರೀವಕಲ್ಲು!) ಅಲ್ಲಿ ಆ ಬಂಡೆ ಓಣಿಯ ಎರಡೂ ಮೈ ಸಮೀಪಿಸಿ ಸುಮಾರು ಮೂವತ್ತಡಿ ಎತ್ತರಕ್ಕೆ ಸುಂದರ ‘ಚಿಮಣಿ’ ಉಂಟಾಗಿದೆ. ಇದು ಆರೋಹಿಗಳಿಗೆ ಕಾಣುವಷ್ಟು ಸರಳವಾಗಿ ಇಲ್ಲ. ಆದರೆ ತೊಡಗಿದ ಎಂಥವರಿಗೂ ಏರಿಕೆಯ ಶಕ್ತಿ ಮತ್ತು ಮಿತಿಗಳನ್ನು ಗಟ್ಟಿಯಾಗಿ ಕಲಿಸಿಬಿಡುತ್ತದೆ! ಒಟ್ಟಾರೆ ಕೊಡಂಜೆಯ ಹೆಚ್ಚಿನ ಕಥನಕ್ಕೆ ಮುಂದೊಂದು ದಿನ ಸ್ವತಂತ್ರ ಲೇಖನವೇ ಬರಲಿದೆ. ಅಲ್ಲಿವರೆಗೆ, ಭಕ್ತ ಜನವೇ ಒಕ್ಕೊರಲಿನಲ್ಲಿ ಹೇಳಿ ರಂಗನಾಥಸ್ತಂಭಕ್ಕೇ ಜಯ್!</p>
<p>ಕೊಡಂಜೆ ಸಾಹಸಿಗಳಿಗೆ ರಂಗನಾಥದ ಚಿಮಣಿ ಒಂದು ಸಂಗತಿಯೇ ಅಲ್ಲ. ಆದರೆ ಅಭ್ಯಾಸಕ್ಕೆ ಚಕ್ಕರ್ ಹೊಡೆದ ಗಣಪತಿ ಭಟ್ಟರ ಪಾಡನ್ನು ಅವರ ಮಾತಿನಲ್ಲೇ ಕೇಳಿ. “ನನಗಿದು ಹೊಸ ಅನುಭವ. ‘ಇದಕ್ಕೆ ಬೆನ್ನು, ಅದಕ್ಕೆ ಕಾಲು. ಇದರ ಮಡಚು, ಅದರ ಚಾಚು. ಇಲ್ಲಿ ಕಾಲು ಅಲ್ಲಿ ಕೈ. ಬೆನ್ನು ಎತ್ತು, ಮಡಚಿದ್ದರ ವಿಸ್ತರಿಸು, ಚಾಚಿದ್ದರ ಸೆಳಕೋ&#8230;’ ಸೂಚನೆಗಳು ಪುಂಖಾನುಪುಂಖ. ಯಾವುದು ಮೊದಲು ಯಾವುದು ಅನಂತರ, ನಾನು ತಬ್ಬಿಬ್ಬು. ನಿಧಾನಕ್ಕೆ ಗ್ರಹಿಸುತ್ತ ಏರಿದೆ.</p>
<p>ದೇವುಗೆ ಎರಡು ಹೆಂಡಿರು. ಒಬ್ಬಾಕೆಗೆ ಸದಾ ಇನ್ನೊಬ್ಬರತ್ತ ಕಣ್ಣು ಹೊಡೆಯುವ ಚಪಲ. ಆದರೂ ಪತಿವ್ರತೆ &#8211; ದೇವು ಕತ್ತಿಗೆ ಸದಾ ಜೋತು ಬಿದ್ದಾಕೆ. ಮೊತ್ತೊಬ್ಬಾಕೆಗೆ ಹಿಂಗದ ಹಸಿವು; ತೀರಿಸಿಕೊಳ್ಳುವುದೇನಿದ್ದರೂ ದೇವು ಬೆನ್ನಿಗೆ ಬಿದ್ದೇ. ನಾನು ಮಂಗಳೂರಿನಲ್ಲಿ ಬಸ್ಸಿಗೆ ಸೀಟು ಕಾದಿರಿಸುವ ಕಾಲದಲ್ಲಿ ದೇವು, “ನಾವು ಬರುವುದು ಮೂವರು ಆದರೆ ಸೀಟು ಒಂದೇ ಸಾಕು” ಎಂದು ಒಗಟು ನುಡಿದದ್ದು ನಿಜವೇ. ಅಷ್ಟೆಲ್ಲಾ ಆದರೂ ಚಿಮಣಿ ಏರುವ ತುರ್ತಿನಲ್ಲಿ ದೇವು ತನ್ನವರನ್ನು ಪರಹಸ್ತಕ್ಕಿಡಲೇ ಬೇಕಾಯ್ತು. ಕ್ಯಾಮರಾವನ್ನು ಕತ್ತಿನಿಂದ ಕಳಚಿ, ಬೆನ್ನ ಚೀಲವನ್ನು ಇಳಿಸಿ ಒಟ್ಟು ಹಗ್ಗಕ್ಕೆ ಕಟ್ಟಿ ಮೇಲಕ್ಕೇರಿಸಲು ದೇವು ಒಪ್ಪಲೇಬೇಕಾಯ್ತು! ಮತ್ತಿನದ್ದರಲ್ಲಿ ಭಟ್ಟರ ಮಾತಿಗೆ ಸಾಮ್ಯ ದೇವು ಮಾತಿನಲ್ಲೂ ಕಂಡರೆ ನನ್ನನ್ನು ಬಯ್ಯಬೇಡಿ. “ಬೆನ್ನು ಒತ್ತು, ಎಡಗಾಲು ಎದುರು ತುಳಿ. ಬಲಗಾಲು ಹಿಂದಿನ ಬಂಡೆಗೆ ಮಡಚು. ಬಲಗೈಯಲ್ಲಿ ಮುಂದಿನ ಬಂಡೆ ಎಡಗೈಯಲ್ಲಿ ಹಿಂದಿನ ಒತ್ತುತ್ತಿದ್ದಂತೆ, ಬೆನ್ನು ಎತ್ತು, ಮಡಚಿದ ಕಾಲಿನ ಮೇಲೆ ನಿಲ್ಲು. ದೇಹ ಮೇಲೇರಿದ್ದೇ ಮತ್ತೆ ಬೆನ್ನು ಒತ್ತು, ಬಲಗಾಲು ಎದುರು ತುಳಿ, ಎಡಗಾಲು ಹಿಂದಿನ&#8230;” ಕ್ರಮಪಾಠ ಧಾರೆಯಲ್ಲಿ ಉಸಿರಾಡುವುದೆಲ್ಲಿ, ಬೆವರೊರೆಸುವುದು ಯಾವಾಗ ದೇವುಗೆ ಹೇಳಿದವರಿಲ್ಲ. ಕಾಲು ಚಾಚಿದ್ದು ಹೆಚ್ಚಾಗಿ ಜಾರಿದಂತನಿಸಿತು, ಬೆನ್ನೂರುವ ಅವಸರದಲ್ಲಿ ತರಚಿರಬೇಕು ಮತ್ತೆ “ಬಿದ್ದೆನಯ್ಯೋ” ಎನ್ನುವ ಹಂತದಲ್ಲಿ ನಡುವೆ ಕೀಲಿನಂತೆ ಕೂತಿದ್ದ ಬಂಡೆ ವಿಶ್ರಾಂತಿ ಕಟ್ಟೆಯಾಗಿ ಒದಗಿತು.</p>
<p><a href="http://lh5.ggpht.com/_XLLsV3Btn2I/TDZ53nYoBAI/AAAAAAAAFcw/l93fBUZ2cfY/s512/scan.jpg"><img class="alignleft" src="http://lh5.ggpht.com/_XLLsV3Btn2I/TDZ53nYoBAI/AAAAAAAAFcw/l93fBUZ2cfY/s512/scan.jpg" alt="" width="343" height="512" /></a>ಹೌದು, ನಾನೂ ಅಲ್ಲಿ ವಿರಮಿಸಿದ್ದೆ ಆದರೆ ಬೇರೆಯೇ ಕಾರಣಕ್ಕೆ. ಆ ಚಿಮಣಿಯ ಸಂದಿನಲ್ಲೆಲ್ಲೋ ಬೇರು ಹುದುಗಿಸಿ, ಬಂಡೆಯ ಮಂಡೆಗೇ ಛತ್ರಿ ಹಿಡಿದಂತೆ ಒಂದು ಸಪುರ ಮರ ಹಬ್ಬಿತ್ತು. ಆ ಕೀಲು ಬಂಡೆಯಿಂದ ಮೇಲಕ್ಕೆ ಏರುವಾಗ ಮರದ ಕಾಂಡ ಅನಿವಾರ್ಯವಾಗಿ ಅನುಕೂಲವಾಗಿಯೂ ನಮಗೆ ಸಿಕ್ಕುತ್ತಿತ್ತು. ಮರಾ ನಾಮಬಲದಿಂದ ಕಟುಕ ಸ್ಥಾನೋನ್ನತಿ ಪಡೆದದ್ದು ನಿಜವಾದರೆ ಪದೋನ್ನತಿ ಪಡೆಯಲು ನಾವ್ಯಾಕೆ ನೆಚ್ಚಬಾರದು ನಿಜದ ಮರಾ? ಪುಷ್ಟವಾದ ಒಂದು ತೋಳಿನ ಗಾತ್ರದಲ್ಲಿದ್ದ ಮರದ ಕಾಂಡ, ನಾವು ಆಧರಿಸಿದಾಗ ಅತ್ತಿತ್ತ ತೊನೆದರೂ ನಮ್ಮ ಭಾರ ತಾಳಿಕೊಳ್ಳುವುದರಲ್ಲಿ ಏನೂ ಸಂಶಯವಿರಲಿಲ್ಲ. ಆದರೆ ತೀರಾ ವಿರಳ ಜನಸಂಪರ್ಕವಿದ್ದ ಸ್ಥಳಗಳಲ್ಲಿ ನಾವು ನುಗ್ಗುತ್ತಿದ್ದೇವೆ ಎಂಬ ನನ್ನ ಅರಿವು ಮರವನ್ನು ಒಂದೆರಡು ಬಾರಿ ತೀವ್ರ ಅಲುಗಾಡಿಸಿ, ಪರೀಕ್ಷಿಸಿಯೇ ಒಪ್ಪಿಕೊಳ್ಳುವಂತೆ ಮಾಡಿತು. ಇಲ್ಲವಾದರೆ ಅದು ನಮ್ಮ ದೃಷ್ಟಿಗೆ ನಿಲುಕದ ಮೇಲೆ ಅದು ಭಾರೀ ಜೇನುಗೂಡನ್ನು ಕೆದಕುತ್ತದೆಯೇ, ಸಡಿಲ ಮಣ್ಣುಕಲ್ಲಿನ ಕುಪ್ಪೆಯನ್ನು ನಮ್ಮ ತಲೆಗೇ ಕವುಚುತ್ತದೆಯೇ ಎನ್ನುವ ಭಯ. ಇಂಥ ಜಾಗ್ರತೆಯಿದ್ದೂ ಹಿಂದೊಮ್ಮೆ ಕೊಡಂಜೆಕಲ್ಲಿನಲ್ಲಿ ಸಿಕ್ಕ ‘ಮಧುಚುಂಬನ’ವನ್ನು (ಇಲ್ಲ, ಇಲ್ಲಿ ಉಪಕಥನಕ್ಕಿಳಿಯುವುದಿಲ್ಲ. ಅನುಕೂಲದಲ್ಲಿ ಮುಂದೊಂದು ದಿನ ಹೀಗೇ ಬರೆಯುತ್ತೇನೆ) ಮರೆಯಲಾದೀತೇ? ಜಮಾಲಾಬಾದಿನ ನೇರಮೈ ಏರುತ್ತಿದ್ದಾಗ ಮಗುಚಿದ ಭಾರೀ ಬಂಡೆಯ ಕಥೆ, ಇಲ್ಲೇ ಹಿಂದಿನ ಪುಟಗಳಲ್ಲಿ ನೀವೂ ಓದಿದ್ದೀರಿ &#8211; ಉಪೇಕ್ಷಿಸುವುದುಂಟೇ? ಇಲ್ಲಿ ಅಂಥದ್ದೇನೂ ಇರಲಿಲ್ಲ.  ಮತ್ತೆ ಚಿಮಣಿತಂತ್ರವನ್ನು ಬಿಟ್ಟು ಕಾಂಡವನ್ನು ಹಿಡಿದು ಸುಲಭವಾಗಿ ಬಂಡೆಯ ನೆತ್ತಿ ತಲಪಿದೆವು. ಅದು ಸಪಾಟಿತ್ತು. ನೂರಡಿಯಾಚೆ, ಕುರುಚಲು ಪೊದರುಗಳೆಡೆಯ ಸುಲಭ ನಡೆಮಡಿಯಲ್ಲಿ ರಂಗನಾಥನ ಶಿಖರ ತೋರುತ್ತಿತ್ತು.</p>
<p>ಭಾವನೆಗಳ ಅಮಲು ‘ಮೊದಲು ಯಾರು’ ಎನ್ನುವ ಪ್ರಶ್ನೆ, ಹುಸಿ ಗೌರವ ತರುವುದುಂಟು. ಯಾರದೋ ದುಡ್ಡು, ಇನ್ಯಾರದೋ ದುಡಿಮೆ, ಮತ್ತ್ಯಾರದೋ ಮೆರೆತ, ಮಗುದೊಬ್ಬರ ಬಳಕೆ ಇತ್ಯಾದಿ ಠಕ್ಕುಗಳಿಗೆ ನಮ್ಮಲ್ಲಿ ಆಸ್ಪದವಿರಲಿಲ್ಲ. ಸಾಧನೆ ತಂಡದ್ದು. ಸಹಜವಾಗಿ ಪ್ರತಿ ವ್ಯಕ್ತಿ ತಂಡದ ಒಂದು ಹೆಜ್ಜೆ. ಚಿಮಣಿ ಏರುವವರಿಗೆ ಹಗ್ಗ ಇಳಿಬಿಟ್ಟು ಕುಳಿತವ ನಾನು, ಅದನ್ನು ಮೊದಲು ಬಳಸಿದವ ಅಭಯ. ಮುಂದೆ ನಿರಪಾಯ ಜಾಡು ಸ್ಪಷ್ಟವಿದ್ದುದರಿಂದ ಆತ ಹಾಗೇ ಮುಂದುವರಿದ. ಹುಶಾರಿನಿಂದ ಮುಳ್ಳಕೈಗಳನ್ನು ಸರಿಸಿ, ಹುಲ್ಲು ಬಗೆದು ನಡೆದ. ಕೊನೆಯಲ್ಲಿ ಎಡಕ್ಕೆ ಅಥವಾ ದಕ್ಷಿಣದಿಕ್ಕು ಎನ್ನಿ, ಸಣ್ಣ (ಬಂಡೆ) ದಿಣ್ಣೆ. ಸುಲಭ ಚಡಿಗಳನ್ನು ಆಯ್ದು ಏರಿದ, ಒಮ್ಮೆಗೇ ಇನ್ನು ಎತ್ತರವಿಲ್ಲದ ಎತ್ತರ ತಲಪಿದ. ಸತತ ಮೂರು ಗಂಟೆಯ ಶ್ರಮದಲ್ಲಿ ಅಂದರೆ ಮಧ್ಯಾಹ್ನ ಹನ್ನೆರಡು ಗಂಟೆಯ ವೇಳೆಗೆ ನಮ್ಮ ತಂಡ ರಂಗನಾಥ ವಿಜಯ ಸಾಧಿಸಿತ್ತು.</p>
<p><strong>ಉಪಾಧ್ಯರ ಲಹರಿಯಲ್ಲಿ: </strong>ಉಪಾಧ್ಯರ ತಲೆ ಕುಂಬಾಗಿ, ಯೋಚನೆಗಳು ವಜ್ರದುಂಬಿಗಳಾಗಿದ್ದವು. ಸ್ತಂಭದ ಬುಡ ಬಿಟ್ತು ಹೊಸದೇ ಸಾಹಸ ಮಾಡಿ ಶಿಬಿರ ಸ್ಥಾನವನ್ನು ಸೇರಿದರೂ ಶಾಂತವಾಗಲಿಲ್ಲ. ಬೆವರೊರಸಿದರು, ನೀರು ಕುಡಿದರು, ಶತಪಥ ಹಾಕಿದರು, ಸ್ತಂಭ ನಿಟ್ಟಿಸಿದರು, ನಿಟ್ಟುಸಿರೂಬಿಟ್ಟರು. ಹಸಿರು ಸಾಲಿನ ನಡುವೆ ಕ್ಷುದ್ರ ಜಂತುಗಳಂತೆ ಕಂಡು ಕಾಣದಂತಿದ್ದ ಏರುತ್ತಿದ್ದ ಐವರು ಈಗ ಬಲಕ್ಕೆ ಸರಿದು ಆಕಾಶರೇಖೆಗೆ ಬಂದರು. ಖಚಿತ ಸ್ತಂಭದ ಮೈಯಿಂದ ಅಷ್ಟೂ ಜನ ಒಮ್ಮೆಲೆ ಸಾವಿರಾರು ಅಡಿ ದೂರದ ದಿಗ್ಭಿತ್ತಿಗೆ ಅಂಟಿಸಿದ ನಗಣ್ಯ ಕಸದಂತೆ ತೋರತೊಡಗಿದ್ದರು. ಭೀಕರ ಕೊಳ್ಳದ ನೂರಾರು ಅಡಿ ಮೇಲೆ ಅಲ್ಲಿ ಇಲ್ಲಿ ತೂಗಿಬಿದ್ದಂತೆ ಕಾಣುವುದು ನಿಜಕ್ಕೂ ಗಿಡವೋ ಹುಲ್ಲೋ ಅಲ್ಲಾ ನಮ್ಮವರೆಯೋ ಎಂಬ ಸಂಶಯ ಉಪಾಧ್ಯರಿಗೆ ಬಲಿಯುತ್ತಲೇ ಹೋಯ್ತು. ಗಿಡಮರಗಳ ಆಧಾರ. ರಕ್ಷಣೆ ಇಲ್ಲದೇ ಅನೂಹ್ಯ ಆಳದಿಂದ ಅನಂತ ಎತ್ತರಕ್ಕೆ ಏರುವ ಕ್ರಿಯೆ. ಕಾಲವೇ ನಿಂತಂತೆ ಪ್ರಗತಿ. ಬಂಡೆಯ ಚಡಿ, ಕೊರಕಲು, ಪೊಟರೆಯಂತ ಪೊಳ್ಳು ಹುಡುಕಿ ಏರುವಲ್ಲಿ ತಡವಾಗುತ್ತಿರಬೇಕು ಎಂದು ಯೋಚಿಸುತ್ತಿದ್ದಂತೆ ಉಪಾಧ್ಯರಿಗೆ ಹೊಸದೇ ಭಯ ಅಮರಿಕೊಂಡಿತು. ಫಕ್ಕನೆ ಆರೋಹಿ ಕೈಯಿಟ್ಟ ಪೊಟರೆಯೊಂದರಿಂದ ಯಾವುದೋ ಧ್ಯಾನದಲ್ಲಿ ಕುಳಿತ ಹಕ್ಕಿಯೋ ಇನ್ನೊಂದೋ ಬುರ್ರೆಂದು ಹೊರಚಿಮ್ಮಿದರೆ ಇವರ ಗತಿ? ಗಾಬರಿಯಿಂದ ಕೈಬಿಟ್ಟು, ಹಗ್ಗದಲ್ಲಿ ನೇತುಬಿದ್ದು ಮತ್ತದರ ತುಯ್ತಕ್ಕೆ ಇತರರು&#8230; ಸ್ತಂಭ ಹತ್ತಲಾಗದ ಹತಾಶೆಗೆ ಕಿಡಿಯಿಡುವ ದುಷ್ಟಯೋಚನೆಗಳು. ಅದನ್ನು ದೇವಕಿ, ಜೋನಾಸರಿಗೆ ತಿಳಿಸಿ ಅವರ ತಲೆಯನ್ನೂ ಕರಡು ಮಾಡುವ ಬುದ್ಧಿ ಉಪಾಧ್ಯರದ್ದಲ್ಲ. ಬದಲಿ ಕೆಲಸ ಹಚ್ಚಿ ಮರೆಯಲೆತ್ನಿಸುತ್ತ “ಬನ್ನಿ, ಆಚೆ ಬೆಟ್ಟಕ್ಕೆ ಹೋಪ” ಎಂದು ಹೊರಟೇಬಿಟ್ಟರು.</p>
<p><a href="http://lh4.ggpht.com/_XLLsV3Btn2I/TDZ538J-D0I/AAAAAAAAFc0/WaGi_oCXetY/s512/shikharada%20hulugalu.jpg"><img class="alignleft" src="http://lh4.ggpht.com/_XLLsV3Btn2I/TDZ538J-D0I/AAAAAAAAFc0/WaGi_oCXetY/s512/shikharada%20hulugalu.jpg" alt="" width="345" height="337" /></a>ದೇವಕಿ ಹತ್ತುವ ನಿರೀಕ್ಷೆಯೇ ಇಟ್ಟುಕೊಂಡವಳಲ್ಲ ಆದ್ದರಿಂದ ನಿರ್ಲಿಪ್ತಳಾಗಿದ್ದಳು. ಆದರೆ ಕಷ್ಟಸುಖಗಳಲ್ಲಿ ಜೊತೆಗೆ ಹೆಜ್ಜೆ ಹಾಕುತ್ತೇನೆ ಎಂದು ಯಾರದೋ ಸಮಕ್ಷಮದಲ್ಲಿ ಪ್ರಮಾಣ ಮಾಡಿದ್ದನ್ನು ಮರೆಯದವಳು. ಹಾಗೇಂತ ಭಾರೀ ಧೈರ್ಯಸ್ಥೆ ಆಗುವುದು, ದೈಹಿಕ ಮಿತಿ ಮೀರುವುದು ಸಾಧ್ಯವಿರಲಿಲ್ಲ. ಆತಂಕಗಳು ಅವಳವೂ ಇದ್ದರೂ ಅವು ನಿರಾಕಾರ. ಅವನ್ನು ಹತ್ತಿಕ್ಕುವಂತೆ ಹೊಟ್ಟೆ ಪಕ್ಷಪಾತಿಯಾದಳು; ಉಪಾಧ್ಯರನ್ನು ತಡೆದು ಮೂವರಿಗೂ ತಿಂಡಿ ಹಂಚಿದಳು. ಅಲ್ಲೇ ಅಡ್ಡಾಡಿದಳು. ಪ್ರೇಕ್ಷಕರಾಗಿ ಬಂದಿದ್ದ ಹತ್ತೆಂಟು ಯುವಕರೊಡನೆ ಇವರು ಹರಟಲು ಪ್ರಯತ್ನಿಸಿದರು. ಅವರಿಗೆ ಕನ್ನಡೀ ವರಾದ್, ಇವರಿಗೆ ತಮಿಳ್ ತೆರಿಯಾದ್! ಆದರೂ ಎಲ್ಲೂ ಪರಸ್ಪರ ಮುಟ್ಟದ ಡಬಲ್ಲ್ ರೋಡಿನ ಟ್ರಾಫಿಕ್ಕಿನಂತೆ ಏನೇನೋ ಸಂಭಾಷಣೆ ನಡೆಸಿದರು. ಹೀಗೆ ಇನ್ನೇನು ಗಂಟೆ ಹನ್ನೆರಡು ಮುಟ್ಟಿತು ಎನ್ನುವಾಗ ಒಮ್ಮೆಗೆ ಸ್ತಂಭದ ನೆತ್ತಿಯಲ್ಲೊಂದು ಮಾನವ ಜೀವ ಚಿಮ್ಮಿತು! ದೇವಕಿ ಲೆಕ್ಕಕ್ಕೆ ಅದು ‘ಮುಂದಾಳು ಅಶೋಕ್.’ ದೇಹಭಾಷೆ ನೋಡಿ ಉಪಾಧ್ಯರ ತೀರ್ಮಾನ ‘ಅಭಯ.’ ಮತ್ತೆ ಅಲ್ಲೇ ಐದು ಹತ್ತು ಮಿನಿಟಿಗೊಂದು ತಲೆ ಮೊಳೆದು ಪೂರ್ಣ ಐದಾಗುವಾಗ ಗಂಟೆ ಹನ್ನೆರಡೂವರೆ. ಮಸುಕುಗಟ್ಟಿದ ದೂರದ ಪರ್ವತಮಾಲೆಯಿಂದ ತುಸುವೇ ಎತ್ತರಕ್ಕೆ, ರಂಗನಾಥ ಸ್ತಂಭಕ್ಕೇ ಮೂಡಿತ್ತು ಐದು ಕೋಡು. ಲೆಕ್ಕ, ಗುರುತು ಸರಿಯಾದ ಮೇಲೆ ಕ್ಯಾಮರಾ ತುಂಬಿಕೊಂಡರು. ಅದಕ್ಕಿಂತ ಹೆಚ್ಚಿನ ದಾಖಲೆ, ಸಂವಹನ ಕೂಡಾ ನಡೆಯಲಿಲ್ಲ. ಪರಸ್ಪರ ಧ್ವನಿ ಏರಿಸಿ ಆಡಿದ ಮಾತುಗಳೆಲ್ಲಾ ಬರಿಯ ಬೊಬ್ಬೆಗಳು. ಕೇವಲ ಅರ್ಧ ಗಂಟೆಯ ಒಳಗೆ ಅವರು ಇಳಿಯ ಹೊರಟಿರಬೇಕು, ಕಣ್ಮರೆಯಾದರು.</p>
<p>ಈಗ ಮತ್ತೆ ಸಮಯ ಮನಸ್ಸಿನ ಮೇಲೆ ಭಾರ ಹಾಕುವ ಸನ್ನಿವೇಶ. ಬೆಳಗ್ಗಿನ ಬಳಲಿಕೆ ದೂರವಾಗಿತ್ತು, ಹಸಿವು ಹಿಂಗಿತ್ತು. ಸುಮ್ಮನೇ ಕುಳಿತರೆ ನಿದ್ದೆ ಬಾಕಿ ಅಮರಿ, ತಿಳಿವು ಕಡಿಮೆಯಾಗಿ ಆತಂಕಕ್ಕೆ ಗೊಂದಲ ಸೇರಿ ಅಧ್ವಾನವಾಗುವ ಭಯ. ದೇವಕಿ ಜಾಗೃತಳಾದಳು. (ಭಕ್ತ ಜನವೇ ಒಕ್ಕೊರಲಿನಲ್ಲಿ ಹೇಳಿ ರಂಗನಾಥಸ್ತಂಭಕ್ಕೇ ಜಯ್!)</p>
<p><strong>ಆನಂದಾನುಭೂತಿ</strong>: ಆನಂದನ ಪತ್ರ-ಲೇಖನದ ಸಂಭ್ರಮದ ಪರಿ ಬೇರೇ. ಅವನ ಮಾತಿನಲ್ಲೇ ಮುಂದುವರಿಯೋಣಾ “ಗುರುಕೃಪಾಹೀನರಾದ ನಾವು ತಬ್ಬಲಿಗಳಂತೆ ಪ್ರಪಾತದಂಚಿನಲ್ಲಿ ತೆವಳೀ ತೆವಳೀ ಅಂತಿಮವಾಗಿ ಕೊಡಿ ತಲಪಿದೆವು. ಅತ್ತ ನಮ್ಮನ್ನು ಅದುವರೆಗೆ ಕಾಣದೇ ಚಡಪಡಿಸುತ್ತಿದ್ದವರಿಗೆ ಮೂಡಿದ ಆನಂದಕ್ಕೆ ಪಾರವೇ ಇಲ್ಲ. ಕೂಡಲೇ ಕೋತಗೇರಿ ಆಕಾಶವಾಣಿಯಿಂದ ನಮ್ಮ ಅಸಮ ಸಾಹಸವನ್ನು ಜಗದಗಲಕ್ಕೆ ಬಿತ್ತರಿಸಲಾಯಿತು. (ಕ್ಷಮಿಸಿ, ಆನಂದನಿಗೆ ಸುಂದರ ಕಲ್ಪನೆಗಳು ಬರುತ್ತಿರುತ್ತವೆ. ಇಂದಿಗೂ ಕೋತಗೇರಿಯಲ್ಲಿ ಆಕಾಶವಾಣಿ ನಿಲಯವಿಲ್ಲ!) ಹತ್ತಲು ಸುಮಾರು ನಾಲ್ಕು ಗಂಟೆ, ಇಳಿಯಲು ಎರಡು ಗಂಟೆ ನಮ್ಮ ವೇಗಸೂಚಿ. ದೇಶ, ಕಾಲದ ಈ ದೂರದಲ್ಲಿ ನಿಂತು ನಾನು ನೆನಪಿಸಿಕೊಳ್ಳುವುದಿಷ್ಟೆ, ಪ್ರದೀಪನ ಶಿಲಾರೋಹಣ ಚಾಕಚಕ್ಯತೆ, ಗೋವಿಂದರಾಜರ ನೇತೃತ್ವ ಇಲ್ಲದಿದ್ದರೆ ರಂಗನಾಥ ಸ್ತಂಭ ಜಯಿಸಿದ ಕೀರ್ತಿ ನನ್ನ ಪಾಲಿನದಾಗುತ್ತಿರಲಿಲ್ಲ.”</p>
<p><strong><a href="http://lh4.ggpht.com/_XLLsV3Btn2I/TDZ5Y6zqY5I/AAAAAAAAFcg/ZLpTyoubY0M/s720/ranga%201.jpg"><img class="alignleft" src="http://lh4.ggpht.com/_XLLsV3Btn2I/TDZ5Y6zqY5I/AAAAAAAAFcg/ZLpTyoubY0M/s720/ranga%201.jpg" alt="" width="345" height="226" /></a></strong><strong>ಗಗನಯಾನಿಗಳು:</strong> ರಂಗನಾಥನ ಮಂಡೆ ಎರಡು ಹೋಳು. ದಕ್ಷಿಣದ ಪಾಲು ದೊಡ್ಡದು; ಸುಮಾರು ಮೂರಡಿ ಅಗಲ, ಹದಿನೈದು ಅಡಿ ಉದ್ದದ ತಗ್ಗುತೆಮರುಗಳ ದಿಣ್ಣೆ. ಮತ್ತೂ ದಕ್ಷಿಣಕ್ಕೆ, ಎರಡಡಿ ತಗ್ಗಿನಲ್ಲಿ ಇಳಿಜಾರಾಗಿ ಪ್ರಪಾತದತ್ತ ಕಣ್ಮರೆಯಾಗುವ ನೆಲ. ಹೆಚ್ಚಿನ ಧೈರ್ಯದಲ್ಲಿ ಅಲ್ಲೂ ತುಸುವೇ ಕಾಲಾಡಿಸಬಹುದಿತ್ತು. ಹೋಳೆರಡರ ಸಂದಿನಲ್ಲಿ ಒಂದು ಭಾರೀ ಮುಳ್ಳುಗಿಡ, ಭರವಸೆಯ ನಿಶಾನಿ ಬೇರೂರಿತ್ತು. ಹಿಂದಿನ ದಿನ ಶಿಬಿರಸ್ಥಾನದಿಂದ ತೋರಿದ್ದ ಹಸುರುಗೈ ಅದರದ್ದೇ ಒಂದು ರೆಂಬೆ. ಶಿಖರದ ಇನ್ನೊಂದು ಹೋಳಿನ ಮೇಲಂತೂ ಇದರದೇ ಹೊದಿಕೆ. ಅದನ್ನು ಜಾಗ್ರತೆಯಲ್ಲಿ ಸುಧಾರಿಸಿದರೂ ಅಲ್ಲಿ ಹೆಚ್ಚೆಂದರೆ ನಾಲ್ಕೈದು ಹೆಜ್ಜೆ ಹಾಕುವಷ್ಟೇ ಅವಕಾಶ. ಒಟ್ಟಾರೆ ಶಿಖರಕ್ಕೆ ಇನ್ನೂ ಐದು ಮಂದಿ ಬಂದಿದ್ದರೆ ದೃಶ್ಯ ವೀಕ್ಷಣೆಗೆ ನಾವು ಸರದಿಯ ಸಾಲು ಹಿಡಿಯಬೇಕಾಗುತ್ತಿತ್ತು! ಸುತ್ತ ಬೋಳು ಆಕಾಶ. ಚಿತ್ತಾರವಿಡಲು ಬಿಳಿಯ ಮೋಡಗಳೂ ಇರಲಿಲ್ಲ. ಬೀಸುಗಾಳಿಯೂ ನಮ್ಮನ್ನು ವಿಚಾರಿಸಿಕೊಳ್ಳಲು ಬರಲಿಲ್ಲ. ಬಿಸಿಲು  ಪೂರ್ಣವಿದ್ದರೂ ‘ರಣಗುಡುವ’, ‘ತಲೆ ಚುರುಗುಟ್ಟುವ’ ಇತ್ಯಾದಿ ವಿಶೇಷಣಗಳು ನಿರುಪಯುಕ್ತವಾಗುವಂತೆ ಹಗಲು ನಮಗೆ ಪ್ರಶಸ್ತವಾಗಿಯೇ ಇತ್ತು. ಇದೇ ವಲಯದಲ್ಲಿ ಆದರೆ ಹವಾಮಾನ ವೈಪರೀತ್ಯದಲ್ಲಿ ನಾನು ತಾತಾರ್ ಶಿಖರ ಹತ್ತಿದ್ದನ್ನು ನೀವು ಓದಿಯೇ ಇದ್ದೀರಿ. (ಇಲ್ಲವಾದರೆ ಕೂಡಲೇ ಇದೇ ಕಳೆದ (೨೦೧೦ರ) ಜನವರಿ ಎಂಟನೇ ತಾರೀಕಿನಿಂದ ತೊಡಗಿದಂತೆ ಆರು ಕಂತುಗಳಲ್ಲಿ ಧಾರಾವಾಹಿಯಾದ ‘ಹೋಗೋಣ ಬನ್ನಿ ತಾತಾರಿಗೆ’ ಅವಶ್ಯ ಓದಿ ನೋಡಿ) ಭೋರಿಡುವ ಗಾಳಿ, ಕೊರೆಯುವ ಚಳಿ, ಮುಸುಕಿಕ್ಕುವ ಮಂಜು, ರಾಚುವ ಮಳೆ ಹೀಗೆ ಯಾವುದೇ ಒಂದು ವಕ್ಕರಿಸಿದ್ದರೂ ನಮ್ಮ ಕತೆ ಬರಿಯ ರೋಚಕ ಅನುಭವವಾಗದೆ ದುರಂತ ಕಥೆಯೇ ಆಗಿಬಿಡುತ್ತಿತೋ ಏನೋ!</p>
<p>ದಿಗಂತದಲ್ಲಿ ಬೆಟ್ಟಗಳೇ ಕಟ್ಟಿದ ಕೋಟೆ, ನಡುವೆ ಭವಾನಿ ನದಿಯ ಜಾಲ, ಎಲ್ಲಾ ಎಲ್ಲವೂ ಒಂದು ಬೀಸು ನೋಟಕ್ಕೇ ನಮ್ಮದು. ದೂರ ಪೂರ್ವದಲ್ಲಿ ಭವಾನಿಸಾಗರ ನೆಲಕ್ಕೆ ಹಾಸಿದ ಬಿಳಿ ಹಚ್ಚಡ. ಉಳಿದಂತೆ ಹಸುರಿನ ಕಂಬಳಿ ಸರ್ವವ್ಯಾಪಿ. ಅಲ್ಲೊಂದು ಇಲ್ಲೊಂದು ಮರ ಎಲೆಯುದುರಿಸಿದ ರಿಕ್ತತೆಯಲ್ಲೋ ಹೊಸ ಚಿಗುರಿನ ಚಿಮ್ಮುಗೆಯಲ್ಲೋ ಕುಸುಮಿಸಿದ ಸಂಭ್ರಮದಲ್ಲೋ ಕಲಾಕುಸುರಿಯಂತೆ ಶೋಭಿಸುತ್ತಿತ್ತು. ನದಿಯ ವಿಸ್ತಾರ ಪಾತ್ರೆ ಇದ್ದಲ್ಲಿ ಮಾತ್ರ ಭೂಮಿಯನ್ನು ಕಂಬಳಿಯ ರೀತಿಯಲ್ಲಿ ಮಡಚಲು ಹೊರಟಿದ್ದ ಕೆಂಪುಗಣ್ಣಿನ ರಾಕ್ಷಸನ (ಹಿರಣ್ಯಾಕ್ಷ) ಕಥೆಗೆ ಇಲ್ಲಿದೆ ಸ್ಫೂರ್ತಿ ಎಂದು ಅನ್ನಿಸಿ ರೋಮಾಂಚನವಾಯ್ತು. ಅಬ್ಬಾ ಎಂದರೆ ಆರಡಿಯ ವಾಮನರಿಗೆ ಸಾವಿರ ಅಡಿಯ ತ್ರಿವಿಕ್ರಮತ್ವ ಲಭಿಸಿ, ಭೂಮಿ ಅಳೆದು ಮುಗಿಸಿದ ಭಾವ ನಮ್ಮದು! ಹತ್ತುವ ಉದ್ದಕ್ಕೂ ಗೆಯ್ಮೆಯ ಸಂಪತ್ತಿನ ಅರಿವು ಇದ್ದರೂ ಮುಕ್ತವಾಗಿ, ಎಲ್ಲರೂ ಒಂದಾಗಿ ಅನುಭವಿಸುವ ವಿರಾಮ ದಕ್ಕಿರಲಿಲ್ಲ. ಆದರೆ ರಂಗನಾಥನ ನೆತ್ತಿಯಲ್ಲಿದ್ದ ಅರ್ಧ ಗಂಟೆಯುದ್ದಕ್ಕೂ ಸಣ್ಣಪುಟ್ಟ ತಿನಿಸು ಕುರುಕುತ್ತಾ ನೀರು ಗುಟುಕರಿಸುತ್ತಾ ಕ್ಯಾಮರಕ್ಕೆ ಪೋಸು ಕೊಡುತ್ತಾ ಹತ್ತುವಾಗಿನ ರೋಮಾಂಚಕ ಸನ್ನಿವೇಶಗಳನ್ನು ಉತ್ಪ್ರೇಕ್ಷಿಸುತ್ತಾ ಇಳಿಯಲಿರುವ ಆಳವನ್ನು ಯೋಚಿಸಿ ಒಳಚಳಿಯಲ್ಲಿ ಕಂಪಿಸುತ್ತಾ ಇದ್ದರೂ ದೃಶ್ಯಾವಳಿಗಳ ಸುಂದರ ಛಾಪು ನಮ್ಮ ಮೇಲೆ ಆಗುತ್ತಲೇ ಇತ್ತು; ನಾವು ಇನ್ನಿಲ್ಲದಂತೆ ಸಂಭ್ರಮಿಸಿದೆವು.</p>
<p><strong> (ಮುಂದುವರಿಯಲಿದೆ)</strong></p>
<blockquote><p>[ಆಡಳಿತದ ಸುಪುಷ್ಟತೆಗಾಗಿ ಜನನಾಯಕರೆಂದೇ ಬಿಂಬಿಸಲ್ಪಟ್ಟ ಜನಗಳು ಎಲ್ಲ ಮರೆತು ‘ತುಳಿ, ಎಳಿ’ಗಳನ್ನು ಸ್ವಾರ್ಥ ಸಾಧನೆಗೆ ಬಳಸುತ್ತಿರುವ ಕಾಲಕ್ಕೆ, ಅವನ್ನು ಹೊಸ ಅನುಭವದೆತ್ತರಕ್ಕೆ ಬಳಸಿ ಯಶಸ್ವಿಯಾದ ನಮ್ಮ ಸಂತೋಷಕ್ಕೆ ನಿಮ್ಮ ಸಂತೋಷವನ್ನು ಕೇಳಲು ಕಾತರನಾಗಿದ್ದೇನೆ. ನಿಮ್ಮ ಸಿದ್ಧಿಯ ಅಭಿವ್ಯಕ್ತಿ ಶುದ್ಧ ಕನ್ನಡವೋ ಆಂಗ್ಲ ಲಿಪಿಯ ಕನ್ನಡವೋ ಅಲ್ಲಾ ಶುದ್ಧ ಇಂಗ್ಲೀಷೇ ಆದರೂ ಸರಿ, ಭಾವ ಮುಖ್ಯ. (ಹಿಂದ್)‘ಉಳಿ’ಯಬೇಡಿ, (ಸಂಕೋಚದಲ್)‘ಅಳಿ’ಯಬೇಡಿ]</p></blockquote>
<br />  <a rel="nofollow" href="http://feeds.wordpress.com/1.0/gocomments/athree.wordpress.com/502/"><img alt="" border="0" src="http://feeds.wordpress.com/1.0/comments/athree.wordpress.com/502/" /></a> <a rel="nofollow" href="http://feeds.wordpress.com/1.0/godelicious/athree.wordpress.com/502/"><img alt="" border="0" src="http://feeds.wordpress.com/1.0/delicious/athree.wordpress.com/502/" /></a> <a rel="nofollow" href="http://feeds.wordpress.com/1.0/gofacebook/athree.wordpress.com/502/"><img alt="" border="0" src="http://feeds.wordpress.com/1.0/facebook/athree.wordpress.com/502/" /></a> <a rel="nofollow" href="http://feeds.wordpress.com/1.0/gotwitter/athree.wordpress.com/502/"><img alt="" border="0" src="http://feeds.wordpress.com/1.0/twitter/athree.wordpress.com/502/" /></a> <a rel="nofollow" href="http://feeds.wordpress.com/1.0/gostumble/athree.wordpress.com/502/"><img alt="" border="0" src="http://feeds.wordpress.com/1.0/stumble/athree.wordpress.com/502/" /></a> <a rel="nofollow" href="http://feeds.wordpress.com/1.0/godigg/athree.wordpress.com/502/"><img alt="" border="0" src="http://feeds.wordpress.com/1.0/digg/athree.wordpress.com/502/" /></a> <a rel="nofollow" href="http://feeds.wordpress.com/1.0/goreddit/athree.wordpress.com/502/"><img alt="" border="0" src="http://feeds.wordpress.com/1.0/reddit/athree.wordpress.com/502/" /></a> <img alt="" border="0" src="http://stats.wordpress.com/b.gif?host=athreebook.com&amp;blog=3999388&amp;post=502&amp;subd=athree&amp;ref=&amp;feed=1" width="1" height="1" />]]></content:encoded>
			<wfw:commentRss>http://athreebook.com/2010/07/21/21july2010-2/feed/</wfw:commentRss>
		<slash:comments>12</slash:comments>
	
		<media:content url="" medium="image">
			<media:title type="html">Abhaya</media:title>
		</media:content>

		<media:content url="http://lh5.ggpht.com/_XLLsV3Btn2I/TEbAHrJ0WPI/AAAAAAAAFd4/4paB3OeU2Aw/s512/ranganna%20001.jpg" medium="image" />

		<media:content url="http://lh6.ggpht.com/_XLLsV3Btn2I/TEbAHqtRY3I/AAAAAAAAFd0/2PSz3ZVYeIE/s720/ranganna%20001_1.jpg" medium="image" />

		<media:content url="http://lh5.ggpht.com/_XLLsV3Btn2I/TDZ53nYoBAI/AAAAAAAAFcw/l93fBUZ2cfY/s512/scan.jpg" medium="image" />

		<media:content url="http://lh4.ggpht.com/_XLLsV3Btn2I/TDZ538J-D0I/AAAAAAAAFc0/WaGi_oCXetY/s512/shikharada%20hulugalu.jpg" medium="image" />

		<media:content url="http://lh4.ggpht.com/_XLLsV3Btn2I/TDZ5Y6zqY5I/AAAAAAAAFcg/ZLpTyoubY0M/s720/ranga%201.jpg" medium="image" />
	</item>
		<item>
		<title>ಸಂದುಗೊಂದಿನಲ್ಲಿ ಉನ್ನತ ಚಿಂತನ</title>
		<link>http://athreebook.com/2010/07/15/15july2010/</link>
		<comments>http://athreebook.com/2010/07/15/15july2010/#comments</comments>
		<pubDate>Thu, 15 Jul 2010 01:00:45 +0000</pubDate>
		<dc:creator>abhayaftii</dc:creator>
				<category><![CDATA[ಪ್ರವಾಸ ಕಥನ]]></category>
		<category><![CDATA[ರಂಗನಾಥ ಸ್ಥಂಬ]]></category>
		<category><![CDATA[ವನ್ಯಲೋಕ]]></category>

		<guid isPermaLink="false">http://athreebook.com/?p=499</guid>
		<description><![CDATA[ರಂಗನಾಥ ವಿಜಯ &#8211; ಭಾಗ ಐದು “ಸುರುಳಿ ಸುತ್ತಿದ ಹಗ್ಗ ಬಿಡಿಸಿ, ಒಂದು ತುದಿಯನ್ನು ತನ್ನ ಸೊಂಟಕ್ಕೆ ಬಿಗಿದುಕೊಂಡು ಅಶೋಕರು ಚಕ್ರವ್ಯೂಹ ಪ್ರವೇಶಿಸಿದ ಅಭಿಮನ್ಯುವಿನಂತೆ ಕಣ್ಮರೆಯಾದರು. ದೇವಕಿಗೆ ಅಳುಕು, ಉಪಾಧ್ಯರಿಗೆ ನರಸೆಳೆತ, ಜೊನಾಸ್ ಬುರೂಸ್! ನಾನು?” ಬೆದರಿದ ಕಣ್ಣಿನಲ್ಲಿ ಎಲ್ಲ ಗ್ರಹಿಸುತ್ತ ಗಣಪತಿ ಭಟ್ಟರ ಸ್ವಗತ ನಡೆದಿತ್ತು. “ದೇವು ಸೊಂಟಕ್ಕೆ ಗಂಟು ಕೊಟ್ಟರು. ಮೇಲಿನಿಂದ ಅಭಯ &#8230; <a href="http://athreebook.com/2010/07/15/15july2010/">Continue reading <span class="meta-nav">&#8594;</span></a><img alt="" border="0" src="http://stats.wordpress.com/b.gif?host=athreebook.com&amp;blog=3999388&amp;post=499&amp;subd=athree&amp;ref=&amp;feed=1" width="1" height="1" />]]></description>
			<content:encoded><![CDATA[<p><strong>ರಂಗನಾಥ ವಿಜಯ &#8211; ಭಾಗ ಐದು</strong></p>
<p><a href="http://lh4.ggpht.com/_XLLsV3Btn2I/TDuojaQDctI/AAAAAAAAFdY/9ApVegL32Os/s512/ranganna%20003.jpg"><img class="alignleft" src="http://lh4.ggpht.com/_XLLsV3Btn2I/TDuojaQDctI/AAAAAAAAFdY/9ApVegL32Os/s512/ranganna%20003.jpg" alt="" width="360" height="512" /></a>“ಸುರುಳಿ ಸುತ್ತಿದ ಹಗ್ಗ ಬಿಡಿಸಿ, ಒಂದು ತುದಿಯನ್ನು ತನ್ನ ಸೊಂಟಕ್ಕೆ ಬಿಗಿದುಕೊಂಡು ಅಶೋಕರು ಚಕ್ರವ್ಯೂಹ ಪ್ರವೇಶಿಸಿದ ಅಭಿಮನ್ಯುವಿನಂತೆ ಕಣ್ಮರೆಯಾದರು. ದೇವಕಿಗೆ ಅಳುಕು, ಉಪಾಧ್ಯರಿಗೆ ನರಸೆಳೆತ, ಜೊನಾಸ್ ಬುರೂಸ್! ನಾನು?” ಬೆದರಿದ ಕಣ್ಣಿನಲ್ಲಿ ಎಲ್ಲ ಗ್ರಹಿಸುತ್ತ ಗಣಪತಿ ಭಟ್ಟರ ಸ್ವಗತ ನಡೆದಿತ್ತು. “ದೇವು ಸೊಂಟಕ್ಕೆ ಗಂಟು ಕೊಟ್ಟರು. ಮೇಲಿನಿಂದ ಅಭಯ ರೈಟ್ ಅಂದ. ನಾನು ಆ ಮೂವರ ಮೊತ್ತವೇ ಇರಬೇಕೆಂದುಕೊಳ್ಳುತ್ತಾ ಬಂಡೆ ಎದುರಿಸಿದೆ. ಕೆಳಮುಖವಾಗಿ ಹಿಡಿದ ಬೊಗಸೆ ಕೈಯಂತಿದ್ದ ೨೦-೨೫ ಅಡಿ ಎತ್ತರದ ಕೊರಕಲು &#8211; ಮೊದಲ ಸವಾಲು. ಅಂಚು ತುಳಿಯಬೇಕು, ಬಿರುಕಿಗೆ ಕಾಲು ಜಾರಬಾರದು. ಜಾರಿದರೆ ಕಾಲು ತುಂಡು ಗ್ಯಾರಂಟಿ. ಅವರಿವರ ಮಾರ್ಗದರ್ಶನದಲ್ಲಿ ಧೈರ್ಯ ಒಟ್ಟುಗೂಡಿಸಿ ಏರಿಯೇ ಬಿಟ್ಟೆ.”<br />
<span id="more-499"></span>ದೇವಕಿ, ಜೊನಾಸರು ಶಿಬಿರ ಸ್ಥಾನದತ್ತ ಪಾದ ಬೆಳೆಸಿದ್ದನ್ನು ನಾವು ಮೇಲಿನಿಂದ ನೋಡುತ್ತಾ ಇದ್ದೆವು. ನಾವು ಇಳಿದ ದಿಕ್ಕಿಗಿಂತಲೂ ಪಶ್ಚಿಮಕ್ಕೆ, ಅಂದರೆ ಹೆಚ್ಚು ಕಡಿಮೆ ಸ್ತಂಭದ ಬುಡದಿಂದ ಶಿಬಿರಸ್ಥಾನಕ್ಕೆ ನೇರ ಹೊಸ ಜಾಡು ಮೂಡಿಸುವುದೇ ಒಳ್ಳೆಯದೆಂದು ನಮಗೆ ಕಾಣಿಸಿತು. ಆ ಪ್ರಕಾರವೇ ಅವರಿಬ್ಬರು ಸಾಕಷ್ಟು ಮೇಲೇರಿದ್ದರು. ಹೊಸ ಮುಳ್ಳುಬಲ್ಲೆಗಳೊಡನೆ ಜಟಾಪಟಿ. ಮತ್ತಷ್ಟು ಸಡಿಲ ನೆಲದೊಡನೆ ಏಗಾಟ ಎಲ್ಲ ಮುಗಿಸಿ ಇನ್ನೇನು ತೆರೆಮೈ ಬಂತು. ಹುಲ್ಲಗುತ್ತಿಗಳನ್ನು ಬಾಚಿ ಹಿಡಿದು ಏರಿಬಿಡುತ್ತಾರೆಂದು ಭಾವಿಸುವಾಗ ಎದುರಾಯ್ತು ಮಳೆಗಾಲ ರೂಪಿಸಿದ್ದ ಭಾರೀ ಕೊರಕಲು. ಅಕ್ಷರಶಃ ಮಳೆಗಾಲದಲ್ಲಿ ಅಲ್ಲಿ ಜಲಪಾತವೇ ರೂಪುಗೊಳ್ಳುವುದಿರಬೇಕು; ಅಷ್ಟೂ ಕಡಿದು. ಹಗ್ಗದ ರಕ್ಷಣೆ, ಅನುಭವೀ ಶಿಲಾರೋಹಿಗಳ ಸಲಹೆ ಇಲ್ಲದೆ ಮುಂದುವರಿಯುವುದು ಅಸಾಧ್ಯ. ಕನಿಷ್ಠ ಅಡ್ಡ ಹಾಯ್ದು, ಇಳಿಜಾಡನ್ನು ಸೇರೋಣವೆಂದರೂ ಒಡ್ಡಿಕೊಳ್ಳದ ಅಸ್ಥಿರತೆ. ನಿಜ, ಎತ್ತರದಲ್ಲಿ ಕುಳಿತ ನಮ್ಮ ಬಿಟ್ಟಿಸಲಹೆಗಳು ಅವರ ನೆಲಮಟ್ಟದ ವಾಸ್ತವಗಳು ಕಾಣಿಸದೇ ಅವರಿಬ್ಬರನ್ನು ಸೋಲಿಸಿತ್ತು. ಆದರೆ ಅವರು ತಲ್ಲಣಿಸಲಿಲ್ಲ. ಇನ್ನೊಂದೇ ದಿಕ್ಕಿನಲ್ಲಿ ಹೊಸ ಪ್ರಯತ್ನ ಬೆಳೆಸುವ ಛಲದಲ್ಲಿ ಮತ್ತೆ ಸ್ತಂಭದ ಬುಡಕ್ಕೇ ಮರಳಿದರು. ಈಗ ಉಪಾಧ್ಯ ಅವರಿಗೆ ಹೊಸ ಸದಸ್ಯನಾಗಿ ಸೇರಿಕೊಂಡರು. ಮತ್ತೆ ಕಷ್ಟವೋ ಸುಖವೋ ಯೋಚನೆ ಬಿಟ್ಟು, ಒಟ್ಟು ತಂಡ ಇಳಿದು ಬಂದ ಹಳೆಯ ಜಾಡನ್ನೇ ಅನುಸರಿಸಿದರು.</p>
<p>ಸ್ತಂಭದ ಕುರಿತು ಬಂದ ಅಲಂಕಾರಿಕ ಮಾತುಗಳಲ್ಲಿ ಮೂಡಿದ ‘ಉತ್ತರೀಯ’ವೇ ನಮ್ಮ ಏರು ಜಾಡಾಗಬಹುದೆಂದು ಅಂದಾಜಿಸಿದ್ದೆ. ವಾಸ್ತವ ಇಲ್ಲೂ ಕಷ್ಟ ಸಾಧ್ಯವನ್ನೇ ನಮಗೆ ತೋರಿರಬೇಕು. ಆ ಉತ್ತರೀಯದ ತುದಿಮುಟ್ಟಲು ಸುಮಾರು ನೂರೈವತ್ತು ಅಡಿ ಯಾವುದೇ ಹುಲ್ಲು, ಹಸಿರು ನಮಗೆ ಆಧಾರವಾಗಿ ಒದಗುವಂತಿರಲಿಲ್ಲ. ಗಾದೆಗೆ (ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ) ಹೆಚ್ಚಿನ ಸಮ್ಮಾನ ಮಾಡುವಂತೆ ತೋರ ನೋಟಕ್ಕೆ ಆ ವಲಯ ನುಣ್ಣಗೇ ಕಾಣಿಸಿ, ಒಮ್ಮೆಗೆ ಅಪಾಯಕಾರೀ ಸವಾಲೇ ಇರಬೇಕೆಂದು ಅನ್ನಿಸಿದ್ದೂ ಹೌದು. ಬಹುಶಃ ಮಳೆಗಾಲದ ನೀರ ಮೊತ್ತ ಅಲ್ಲಿ ಅಗಲಕ್ಕೆ ಹರಡಿಕೊಂಡು, ತೀರಾ ಬಿರುಸಾಗಿ ಹರಿಯುವುದಿರಬೇಕು. ಹಾಗಾಗಿ ಮಣ್ಣು, ಕಾಲಕ್ರಮೇಣ ಹಸಿರು ಕುದುರಲು ಅವಕಾಶವೇ ಒದಗಿರದು. ಆದರೆ ಆ ಮೈಯನ್ನು ಸಮೀಪಿಸಿದಾಗ ಅದೃಷ್ಟವಶಾತ್ ಸಹಜ ಶಿಲಾರೋಹಿಗಳಿಗೆ ಅಥವಾ ತರಬೇತಾದವರಿಗೆ ಅಲ್ಲಿ ಹತ್ತುವ ಸೌಕರ್ಯಕ್ಕೆ ಧಾರಾಳ ಒಡಕೂ ಬಿರುಕೂ ಕಾಣಿಸಿದವು. ಹಾಗೇ ಏರುಕೋನವೂ ಸಾಕಷ್ಟು ಸುಲಭವೇ ಇತ್ತು. ಹಿಂದೆ ನಾವು ಏರಲು ಬಂದಾಗ ಬಹುಶಃ ಈ ಹಂತದ ದಕ್ಷಿಣ-ಪೂರ್ವ ಮೈ ನಮಗೆ ಆರಂಭ ಬಿಂದುವಾಗಿ ಒದಗಿದ್ದಿರಬೇಕು. ಆದರೆ ಆಗ ನಮಗೆ ಇಲ್ಲಿವರೆಗೆ ಮೆಟ್ಟಿಲುಗಳಂತೇ ಒದಗಿದ್ದ ಭಾರೀ ಮರ ಈ ಬಾರಿ ಕಾಣಿಸದೇ ಹೋದದ್ದು ಪ್ರಾಕೃತಿಕ ಬದಲಾವಣೆಯ ಸೂಚಿಯೋ (ಬಿದ್ದು ಹೋಗಿದ್ದಿರಬಹುದು) ನಮ್ಮ ಭೌಗೋಳಿಕ ಜ್ಞಾನದ ತಪ್ಪೋ ನಾನು ತೀರ್ಮಾನಿಸದಾದೆ. ಏನೇ ಇರಲಿ, ಈ ಬಾರಿ ಶುದ್ಧ ಶಿಲಾರೋಹಣದಲ್ಲೇ ಆ ಹಳೆಯ ಎತ್ತರವನ್ನು ತಲಪುವಂತಾಗಿತ್ತು.</p>
<p>ಬಂಡೆಯ ಪೂರ್ಣ ಪೂರ್ವ ಮೈಗೆ ಬರುತ್ತಿದ್ದಂತೆ ಆಳದ ಕೊಳ್ಳದ ದೃಶ್ಯಗಳು ಒಮ್ಮೆಲೆ ತೆರೆದುಕೊಂಡವು. ಅದನ್ನು ನೇರ ನೋಡಲಾಗದವರು, ಆ ದೃಶ್ಯಕ್ಕೆ ಕಣ್ಣುಮುಚ್ಚಿ ನಡೆಯಿರೆಂದರೂ ಭಾವನಾತ್ಮಕವಾಗಿ ಭಯ ಕಳಚಿಕೊಳ್ಳಲಾಗದವರು ಹಿಂದೆ ಸರಿದಾಗಿತ್ತು. ಆ ನೋಟದಲ್ಲಿ ಉಳಿದವರಿಗೆ ಅತಿ ಜಾಗರೂಕತೆಯಿಂದ ಮುಂದುವರಿಯಲು ನೋಟೀಸೂ ಸ್ಪಷ್ಟವಿತ್ತು. ಅರ್ಜುನ ಲಕ್ಷ್ಯ ಬೇಧನದ ಕರ್ಮ &#8211; ನೂರಾನಾಲ್ಕು ಸೋದರ ಕಣ್ಣುಗಳು ಸೋತಲ್ಲಿ ಗಿಣಿ ಕಣ್ಣು ಹೊಡೆದಂತೆ, ಈ ಕಾಲಿಗೆ ಯಾವ ಚಡಿ, ಆ ಕೈಗೆ ಯಾವ ಹಿಡಿ ಎಂದಷ್ಟೇ ನೋಡಿ, ಅಡಿಯ ಮೇಲೆ ಅಡಿ, ನಡಿ ನಡಿ ನಡಿ. ದೇವು ಒಪ್ಪಿಸಿಕೊಂಡ ಮಾತು ಕೇಳಿ, “ಔನ್ನತ್ಯ ಭೀತಿಯ ಮಾನಸಿಕ ತಡೆ ಇಲ್ಲದ ನನಗೂ ಭಟ್ಟರಿಗೂ ಮುಂದುವರಿಯುವುದರಲ್ಲಿ ಯಾವುದೇ ಆತಂಕವಿರಲಿಲ್ಲ. ವರ್ಧನರು ನೀಡಿದ ಬಿಲೇಯನ್ನು ಅಲ್ಲಿ ನಾವು ಅವಲಂಬಿಸುವ ಅಗತ್ಯವೇ ಇರಲಿಲ್ಲ. ಆದರೂ ಅದು ಇರುವ ಧೈರ್ಯದಿಂದಲೇ ನನ್ನ ಅನುಭವಕ್ಕೆ ದುಸ್ಸಾಧ್ಯವಾದ ಹೆಜ್ಜೆಗಳನ್ನು ಹಿಡಿತಗಳನ್ನು ಸಾಧಿಸುತ್ತ ಏರಿದೆ. ಹಿರಿಮಂಗನ ಬಾಲಕ್ಕೆ ಜೋತು ಬಿದ್ದಾಡಲು ಬಂದ ಕಿರಿಮಂಗಗಳಂತಿದ್ದೆವು ನಾವು.” ಹೀಗೆ ಏರಿ ಬಂದ ಜಾಡು ನೇರ ನಿಂತ ಬಂಡೆಮೈಗೆ ಮುಗಿದಿತ್ತು.</p>
<p>ಉತ್ತರೀಯದ ‘ಹಸುರು ಕುಚ್ಚು’ ಹದಿನೈದಿಪ್ಪತ್ತಡಿ ಮೇಲೆ ಕಾಣಿಸುತ್ತಿತ್ತು. ಆದರೆ ಈ ವ್ಯತ್ಯಾಸದಲ್ಲಿ ಬಂಡೆ ತುಸುವೇ ಉಬ್ಬಿತ್ತು; ಮಹಾಕಾಯನ (ರಂಗನಾಥ) ಹೊಟ್ಟೆಯಲ್ಲೊಂದು ಸಣ್ಣ ಮಾಂಸಲ ಮಡಿಕೆ! (ಬೊಜ್ಜಿನವರಿಗೆ ‘ಟಯರು’ ಎನ್ನುತ್ತಾರಲ್ಲ ಹಾಗೆ) ದೂರದ ನೋಟಕ್ಕೆ ಇದೂ ಸಪಾಟು ಮೈಯ ಭಾಗ. ಈ ಉಬ್ಬು, ನೇರ ಬಂಡೆ ಸಂಧಿಸುವ ಉದ್ದಕ್ಕೆ ಒಂದು ಕೊರಕಲೇನೋ ಮೇಲೇರಿತ್ತು. ಅದು ನಮ್ಮ ದೇಹ ಹೊಗಿಸಲಾಗದಷ್ಟು ಸಪುರ, ಹಿಡಿತಗಳಿಗೆ ದಕ್ಕದಷ್ಟು ಅಗಲವಿತ್ತು. ಸಂದಿನೊಳಗೆ ಬೂಟಿನ ತುದಿಗಾದರೂ ಒಂದು ಚಡಿ ಸಿಕ್ಕೀತೆ ಎಂದರೆ ಒಂದು ಸುಕ್ಕೂ ದಕ್ಕದ ನುಣುಪು. ಹಾಗೆ ಎತ್ತಿದ್ದ ಎಡಗಾಲನ್ನು ಕೊರಕಲಿನೊಳಗೆ ಪೂರ್ಣ ತೂರಿ, ಪಾದವನ್ನೇ ಇರುಕಿಸಿ (jamming), ಮೊದಲ ಹೆಜ್ಜೆ ಕಂಡುಕೊಂಡೆ. ಬಲಗಾಲಿನಿಂದ ನೆಲ ಒದ್ದು, ಚಿಮ್ಮಿ ಮತ್ತೆ ಮೇಲೆ ಎಡ ಮೊಣಗೈಯನ್ನು ಪಾದದಂತೇ ಇರುಕಿಸಿದೆ. ಜೊತೆಗೆ ಬಲ ಅಂಗೈಯನ್ನು ದೂರಕ್ಕೆ ಊರಿ ಆಧರಿಸಿಕೊಳ್ಳುತ್ತಿದ್ದಂತೆ ಬಲ ತುದಿಗಾಲಿಗೊಂದು ಬಂಡೆಯ ಸಪುರ ಚಡಿ ಸಿಕ್ಕಿತು. ಇಲ್ಲಿ ಅವಸರ ಸಲ್ಲ, ಸಿದ್ಧಸೂತ್ರಗಳನ್ನು ಹೊಸದೇ ಸಮಸ್ಯೆಗಳಿಗೆ ಅಳವಡಿಸುವ ತಾಳ್ಮೆ ಮುಖ್ಯ. ಬಲಗಾಲ ಮೇಲೆ ಭಾರಹಾಕಿ, ಎರಡೂ ಅಂಗೈಗಳನ್ನು ಜೋಡಿಸಿ ಹಿಮ್ಮುಖವಾಗಿ ಬಂಡೆ ಮೇಲೆ ಒತ್ತುಸನ್ನೆ ಮಾಡಿ, ನಿಧಾನಕ್ಕೆ ಮೇಲಿನ ಭದ್ರ ನೆಲೆ ತಲಪಿದೆ.</p>
<p>ಅನ್ವೇಷಣೆಗಳು ಮೇಲಿನಿಂದ ರಕ್ಷಣಾ ಹಗ್ಗಯಿರುವ ಶಿಲಾರೋಹಣದ ಅಭ್ಯಾಸದ ತರಗತಿಯಲ್ಲ. ಇಲ್ಲಿ ತುಸು ಚಡಪಡಿಕೆಯಂತೇ ತೋರುವ ಕ್ಷಣಗಳು ಕಾಣುವುದೂ ತಪ್ಪಲ್ಲ. ಇಂಥವು ಮುಂದಾಳಾದವನಿಗೆ ಸ್ವಲ್ಪ ಅಪಾಯಕಾರಿಯೂ ಅಷ್ಟೇ ಅನಿವಾರ್ಯವೂ ಹೌದು! ಈ ವಿಚಾರದಲ್ಲಿ ಶುದ್ಧ ಶಿಲಾರೋಹಣದಲ್ಲಿ ಅನುಭವ ಕಡಿಮೆಯಿದ್ದ ದೇವು ಉತ್ಪ್ರೇಕ್ಷೆ ನೋಡಿ. “ತೊಂಬತ್ತು ಡಿಗ್ರಿ ಏರನ್ನು, ವರ್ಧನರು ಯಾವುದೇ ಆಧಾರವಿಲ್ಲದೇ ಏರಿದ್ದು ನೋಡಿ, ಮಾತು ಬಾರದೆ ದಂಗಾಗಿ ಬಿಟ್ಟೆ. ಅದು ಬಿಸಿಲು, ಮಳೆ, ಗಾಳಿಗೆ ಅತಿ ಹೆಚ್ಚಾಗಿ ಪಕ್ಕಾದ ಶಿಲೆಯ ಭಾಗ. ಮರದ ತೊಗಟೆಯಂತೆ ಕಲ್ಲಿನ ಚಿಕ್ಕ ಚಿಕ್ಕ ಪದರಗಳು ಕಿತ್ತು ಬರುತ್ತಿದ್ದವು. ಅವನ್ನೂ ಬಳಸಿಕೊಂಡು ಏರುವುದು, ಇತರರನ್ನು ದಾಟಿಸುವುದು ಒಬ್ಬ ಪರಿಪೂರ್ಣ ಶಿಲಾರೋಹಿಯ ಶೇಕಡಾ ನೂರು ಕೌಶಲದ, ಶೇಕಡ ನೂರು ಆತ್ಮವಿಶ್ವಾಸದ, ಶೇಕಡಾ ಇನ್ನೂರು ಧೈರ್ಯದ ಪ್ರದರ್ಶನ.” ಇಲ್ಲಿ, ಇಂಥಲ್ಲಿ ಅಪಾಯದ ಮುಂಗಾಣ್ಕೆ ಮತ್ತು ಆ ಕುರಿತು ನನ್ನ ತಿಳುವಳಿಕೆಗೆ ನಿಲುಕಿದಂತೆ ಕೈಗೊಂಡ ಕ್ರಮಗಳ ಬಗ್ಗೆ ಎರಡು ಥಿಯರಿ ಬಿಟ್ಟರೆ, ‘ಬೋರು, ಇದ್ಯಾರಿಗೆ ಬೇಕು’ ಎನ್ನಲಾರಿರಿ ಎಂದು ಭಾವಿಸುತ್ತೇನೆ.</p>
<p>ವಿಶಿಷ್ಟ ಸನ್ನಿವೇಶಗಳಲ್ಲಿ ಹಿಂದಿನವರು ಮುಂದಾಳನ್ನು ಎಚ್ಚರದಿಂದಲೇ ಗಮನಿಸುತ್ತಿರಬೇಕು. (ಇದರ ಕೊರತೆಯೇ ಅಲ್ಲವೇ ನಮ್ಮ ಪ್ರಜಾಪ್ರಭುತ್ವದ ಬಿಕ್ಕಳಿಕೆಗೆ ಕಾರಣ!) ಆಗ ಆಕಸ್ಮಿಕಗಳಲ್ಲಿ ಹಿಂದಿನವರ ಸಮಯಪ್ರಜ್ಞೆ ಮುಂದಾಳನ್ನೂ ಒಟ್ಟಾರೆ ತಂಡವನ್ನೂ ಅಪಾಯದಿಂದ ದೂರ ಮಾಡಬಹುದು. ಉದಾಹರಣೆಗೆ ಕೆಳಗೆ ನಿಂತವರು ಕೈ ನಿಲುಕುವವರೆಗೆ ಏರುವವನ ಜಾರುಪಾದವನ್ನು ಒತ್ತಿ ಆಧರಿಸಬಹುದು (ಏರಿದವನ ಪಾದ ಒತ್ತುವ ಕೆಲಸ!). ಅದು ಸಾಲದೇ ಆತ ಜಾರಿ ಕೆಳಬರುತ್ತಿದ್ದರೆ, ಪೂರ್ಣ ಆಘಾತಕ್ಕೊಳಗಾಗದಂತೆ ಆತನನ್ನು ಬಂಡೆಗೇ ಒತ್ತಿ ನಿಲ್ಲಿಸಲೂಬಹುದು. ಆದರೆ ಇವೆಲ್ಲಾ ನಿಜದ ಸುರಕ್ಷಾ ಕ್ರಮಗಳಲ್ಲ (ಶಾಸ್ತ್ರಾಧಾರವಿಲ್ಲ). ಇಲ್ಲೆಲ್ಲ ಕೆಳಗಿನವರ ವಿವೇಚನೆ, ಸಮಯಸ್ಫೂರ್ತಿ ಸ್ಪಷ್ಟವಿಲ್ಲದಿದ್ದರೆ ಅಪಾಯ ನಿವಾರಣೆಯ ಬದಲು ಅದು ಹೆಚ್ಚಬಹುದು! ಏರುವವನ ಬೂಟು ಮತ್ತು ಬಂಡೆಗಳ ಎಡೆಯಲ್ಲಿ ಆಧಾರ ಕಲ್ಪಿಸಹೊರಟವನ ಬೆರಳುಗಳು ಘಾಸಿಗೊಳ್ಳುವುದು ಕನಿಷ್ಠ. ಮತ್ತೆ ಹೆಚ್ಚು ಮೇಲಿನಿಂದ ಬೀಳುವವನನ್ನು ಹಿಡಿದು ನಿಲ್ಲಿಸುವ ‘ಅಮಾನುಷ’ ಕ್ರಿಯೆಯಲ್ಲಿ ರಕ್ಷಕನೇ ಜಖಂಗೊಳ್ಳುವ ಅಥವಾ ನಿಂತ ನೆಲೆಯನ್ನೇ ಕಳೆದುಕೊಂಡು ಇಬ್ಬರೂ ಪ್ರಪಾತಕ್ಕೆ ಉರುಳಿಹೋಗುವ ಹೆಚ್ಚಿನ ಅಪಾಯವನ್ನು ಖಂಡಿತಾ ಮರೆಯಬಾರದು. ಈ ಸೂಚನೆಗಳನ್ನು ಮರೆತವನ ಸ್ಥಿತಿ &#8211; ದುಡಿಮೆಯ ಪ್ರೀತಿಯಿಲ್ಲದವನಿಗೆ ಬಂಡವಾಳ ಕಲ್ಪಿಸಿದವನ, ಮುಳುಗುವವನ ಕೈಗೆ ಜುಟ್ಟುಕೊಟ್ಟವನಿಂದ ಭಿನ್ನವಲ್ಲ ಕಣಾ ಅತ್ರಿಪಿತಾ!</p>
<p><a href="http://lh4.ggpht.com/_XLLsV3Btn2I/TDuoijRGoqI/AAAAAAAAFdU/k-_MSdTERyo/s640/ranganna%20002.jpg"><img class="alignleft" src="http://lh4.ggpht.com/_XLLsV3Btn2I/TDuoijRGoqI/AAAAAAAAFdU/k-_MSdTERyo/s640/ranganna%20002.jpg" alt="" width="343" height="266" /></a>ನೈಜ ಶಿಲಾರೋಹಣ ಪಾಠದಲ್ಲಿ ಮೊದಲಿಗನೂ ಪರೋಕ್ಷವಾಗಿ ಹಗ್ಗದಿಂದ ರಕ್ಷಣೆ ಪಡೆಯುತ್ತಾನೆ. ಅಸಾಮಾನ್ಯ ತುಂಡುಗಲ್ಲುಗಳನ್ನು ಏರುವಲ್ಲಿ, ಕಲಿಕೆಗಾಗಿ ಬಂಡೆಗಳ ಕಠಿಣಮೈಯನ್ನೇ ಆಯ್ದು ಏರುವಲ್ಲಿ ಹೇಗಾದರೂ ಮುಂದಾಳಿಗೆ ಮೇಲಿನಿಂದಲೇ ರಕ್ಷಣಾಹಗ್ಗ ಒದಗುವಂತೆ ನೋಡಿಕೊಳ್ಳುವುದು ಕಡ್ಡಾಯವೇ ಇರುತ್ತದೆ. ಹಿಂದೊಮ್ಮೆ ಮೂಡಬಿದ್ರೆಯ ಕೊಡಂಗಲ್ಲು (ಮಹಾವೀರ ಕಾಲೇಜಿನ ಸಮೀಪವಿದೆ. ಸುಮಾರು ಎಂಬತ್ತಡಿ ಎತ್ತರದ, ಎಲ್ಲಾ ದಿಕ್ಕಿನಿಂದಲೂ ಕನಿಷ್ಠ ಲಂಬಕೋನದ ಏರಿಕೆಯ ಸವಾಲು) ಏರಲು ಹೋಗಿದ್ದೆವು. ಆಗ ಉದ್ದದ ಸಪುರ ಹಗ್ಗವೊಂದರ ಒಂದು ತುದಿಗೆ ಸಣ್ಣ ಕಲ್ಲು ಕಟ್ಟಿ, ಬಂಡೆಯ ನೆತ್ತಿ ಹಾದು ಆಚೆಗೆ ಬೀಳುವಂತೆ ಎಸೆದೆದಿದ್ದೆವು. ಅನಂತರ ಅದರ ಇನ್ನೊಂದು ತುದಿಗೆ ನಮ್ಮ (ಹೆಚ್ಚು ತೂಕದ) ರಕ್ಷಣಾ ಹಗ್ಗವನ್ನು ಕಟ್ಟಿ ಎಳೆದು ಮುಂದಾಳಿಗೆ ರಕ್ಷಣಾ ವ್ಯವಸ್ಥೆ ಮಾಡಿದ್ದು ಇಲ್ಲಿ ಸ್ಮರಣಾರ್ಹ (ರೇಖಾಚಿತ್ರ ನೋಡಿ). ರಂಗನಾಥ ಸ್ತಂಭದಲ್ಲಿ ನೆಲ ಬಿಡುವ ಮೊದಲ ಸುಮಾರು ಐವತ್ತಡಿಯ ಏರಿಕೆಯ ಹಂತದಲ್ಲಿ ನನಗೆ ಹಗ್ಗದ ರಕ್ಷಣೆ ಇರಲಿಲ್ಲ ನಿಜ. ಆದರೆ ಅದು ನನ್ನನುಭವಕ್ಕೆ ತೀರಾ ಸಾಮಾನ್ಯ ಏರಿಕೆಯಾದ್ದರಿಂದ ರಕ್ಷಣೆಯ ಪ್ರಶ್ನೆ ಬರಲಿಲ್ಲ. ಆದರೀಗ ನಾವು ನಿಂತ ನೆಲೆಯಿಂದ ಏರಿಕೆ ಹದಿನೈದಿಪ್ಪತ್ತಡಿಯೇ ಇದ್ದರೂ ಬೀಳು ನೂರಾರಡಿ ಆಳದ ಕೊಳ್ಳಕ್ಕೇ ಆಗಬಹುದಿತ್ತು. ಹಾಗಾಗಿ ಇಲ್ಲಿ ನನಗೂ ಹಗ್ಗದ ರಕ್ಷಣೆಯಿತ್ತು. ರಕ್ಷಕ ಕೊಳ್ಳಕ್ಕೆ ಮುಖ ಹಾಕಿ ಭದ್ರವಾಗಿ ನೆಲೆಯೂರಿ (ಸ್ಥಳಾನುಕೂಲ ನೋಡಿಕೊಂಡು ಕುಳಿತೂ ಇರಬಹುದು, ನಿಂತೂ ಇರಬಹುದು) ನಾನು ಏರಿದಂತೆ ಬರುವ ತುಸುವೇ ಜಗ್ಗಾಟಕ್ಕೆ ಹಗ್ಗ ಕೊಡುತ್ತಾ ಹೋದ. ಅಕಸ್ಮಾತ್ ನಾನು ಹತ್ತಡಿಯಿಂದ ಜಾರಿ ಉರುಳಿದ್ದರೂ ನೂರಾರಡಿ ಆಳಕ್ಕೆ ಅಪ್ಪಳಿಸುತ್ತಿರಲಿಲ್ಲ; ಖಚಿತವಾಗಿ ಇಪ್ಪತ್ತಡಿ ಅಂತರದಲ್ಲೇ ಅಂದರೆ ರಕ್ಷಕನಿಂದ ಕೇವಲ ಹತ್ತಡಿ ಕೆಳಗೇ ಸೊಂಟಕ್ಕೆ ಬಿಗಿದ ಹಗ್ಗದಲ್ಲಿ ನಿರಪಾಯವಾಗಿ ನೇಲುತ್ತಿದ್ದೆ. ಮತ್ತೆ ಹೊಸದೇ ಜಾಡನ್ನು ಅನುಸರಿಸಿ ರಕ್ಷಕನನ್ನು ಉತ್ತರಿಸಿ ಗುರಿ ಸಾಧಿಸುತ್ತಿದ್ದೆ. ಉರುಳುವಲ್ಲೂ ಮನಸ್ಸು ಸ್ಥಿರವಾಗಿಟ್ಟುಕೊಂಡವರು ಒಂದಿನಿತು ತರಚಲು ಗಾಯವೂ ಇಲ್ಲದೆ ಪಾರಾಗುವುದು ಹಿಂದೆ ನಾನು ಹಲವು ಬಾರಿ ಕಂಡದ್ದೇ ಇದೆ.</p>
<p>ಪ್ರಕೃತಿ ಸ್ತಂಭದ ಸಪಾಟಿಗೆ ಇಲ್ಲಿಂದ ತಿರುಪೇರು ಕೊಟ್ಟಿತ್ತು. ಸುಮಾರು ಹದಿನೈದು ಇಪ್ಪತ್ತಡಿ ಅಗಲಕ್ಕೆ ಅರುವತ್ತರಿಂದ ಎಪ್ಪತ್ತರ ಕೋನದಲ್ಲಿ ಏರಲು ಒದಗುವ ಓಣಿ. ಓಣಿಯ ಒಳ ಅಂಚಿನ ಉದ್ದಕ್ಕೆ ಶಾಖೋಪಶಾಖೆ ಹರಡಿ ಗಟ್ಟಿ ನಿಂತ ಗಿಡಗಳ (ಬೊನ್ಸಾಯ್ ಅಥವಾ ಕುಬ್ಜ ಮರಗಳ ಎನ್ನಬಹುದು) ಸಾಲೇ ಸಾಲು. ಇವೇ ಬಂಡೆಯಲ್ಲಿ ಸೀಳು ಮೂಡಿಸಿದ್ದೋ ಅಥವಾ ಪ್ರಾಕೃತಿಕ ಸೀಳಿನಲ್ಲಿ ಬೇರು ರೂಢಿಸಿದ್ದೋ ಎಂದು ತರ್ಕಿಸಲಾಗದ ಬಂಧ ಅಲ್ಲಿತ್ತು. ಆ ಅಂಚಿನಾಚೆ (ಓಣಿಯ ಎಡ ಮೂಲೆ ಎನ್ನಿ) ಗೋಡೆಮೈ, ಓಣಿಯ ಮೇಲೆ ಮುಂಚಾಚಿಕೊಂಡಿದ್ದದ್ದು ನಮ್ಮ ಅಂದಿನ ಯೋಜನೆ, ತಯಾರಿಗೆ ಕಲ್ಪಿಸಲಾಗದ ಸವಾಲು ಎನ್ನಲಡ್ಡಿಯಿಲ್ಲ. ಓಣಿಯ ಬಲ ಅಂಚು &#8211; ತೆರೆಮೈ ಆಕಾಶವೇ ಛತ್ತು, ಬಿತ್ತೋ ಭವಾನಿಪಾತ್ರೆಯೇ ಸ್ವತ್ತು! ಸಹಜವಾಗಿ ನಮಗೆ ಸ್ತಂಭದ ಪೂರ್ವಮೈಯ ಮುಕ್ಕಾಲಂಶದ ಏರು ಓಣಿಯ ಸಂದಿನ ಗುಂಟ, ಗಿಡಗಂಟಿಗಳೆಡೆಯ ವಿಹಾರವೇ ಆಯ್ತು. ಪ್ರಪಾತದಂಚಿನಲ್ಲಿ ನೇರ ಕೊಳ್ಳ ದಿಟ್ಟಿಸುತ್ತ, ಪ್ರತಿ ಹಿಡಿಕೆ ಕಳಚಿದಾಗ, ಹೆಜ್ಜೆ ಜಾರಿದಾಗ ಪತ್ರಿಕೆಗಳಲ್ಲಷ್ಟೇ ವರ್ತಮಾನವಾಗಿ, ಭೂತಕ್ಕೆ ಸಂದುಹೋಗುವ ಭಯ ಮರೆತು ಪಟ್ಟಾಂಗ ಹೊಡೆಯುತ್ತ ಏರಿದೆವು. (ರಕ್ಷಣಾಹಗ್ಗದ ಬಂಧನ ಮತ್ತು ಮೊದಲೇ ಹೇಳಿದ ಕಂಬಳಿಹುಳದ ಚಲನೆ ತಂಡಕ್ಕೆ ಉದ್ದಕ್ಕೂ ಕಡ್ಡಾಯ ಎನ್ನುವುದು ನೆನಪಿರಲಿ.)</p>
<p>ಚಾರಣದ ಗಂಡುಗೋವಿ ದೇವು ಸಾಧನೆಯ ಸಂತೋಷದಲ್ಲೇ ಹೇಳ್ತಾರೆ, “ಮೂರ್ನಾಲ್ಕು ನೀರಿನ ಬಾಟಲುಗಳೂ ತಿಂಡಿ ಹಣ್ಣುಗಳ ಸಣ್ಣ ಕಟ್ಟೂ ನನ್ನ ‘ಬೆಂಗಾವಲಿನ’ ಚೀಲದಲ್ಲಿದ್ದವು. ಏರುವಾಗ ಅದು ಓಲಾಡುತ್ತಾ ಉಪದ್ರವ ಕೊಡುತ್ತಿತ್ತು. ಪ್ರತಿ ಕಠಿಣ ಏರಿಕೆಯ ಮುನ್ನ ನಾನು ಚೀಲ ಕಳಚಿ, ಅದನ್ನು ಪ್ರತ್ಯೇಕ ಹಗ್ಗದಲ್ಲಿ ಮೇಲಿನವರು ಎಳೆದುಕೊಳ್ಳಬೇಕಾಗುತ್ತಿತ್ತು. ಸಾಮಾನ್ಯವಾಗಿ ಇತರರು ಬಿಲೇ ತೊಡರಿಸಿಕೊಳ್ಳುವಾಗ ಕುಣಿಕೆಯನ್ನು ಅಂಗಿ ಹಾಕಿದಂತೆ ಮೇಲಿನಿಂದ ಇಳಿಸಿಕೊಂಡರೆ, ನಾನು ಲಂಗ ಧರಿಸುವಂತೆ ಕೆಳಗಿನಿಂದ ಏರಿಸಬೇಕಾಗುತ್ತಿತ್ತು. ಈ ನನ್ನ ಗಂಟಜ್ಞಾನದಿಂದ ಏರುಜಾಡಿನಲ್ಲಿ ಕುಣಿಕೆ ತಯಾರು ಮಾಡಿಕೊಡುತ್ತಿದ್ದ ಅಭಯನಿಗೆ ಕಿರಿಕಿರಿ. ಇಳಿಜಾಡಿನಲ್ಲಿ ಅವನಪ್ಪನಿಗೆ ಹಾಸ್ಯಗೋಷ್ಠಿ. ನಿರಾಕಾರವೂ (ಟೀಕು: ನಿರ್ದಿಷ್ಟವಾದ ಆಕಾರವಿಲ್ಲದ್ದು ಎಂದು ವಾಚ್ಯಾರ್ಥವನ್ನು ಮಾತ್ರ ಗ್ರಹಿಸತಕ್ಕದ್ದು) ಪರಬ್ರಹ್ಮವೂ (ಟೀಕು: ಸ್ವಂತಕ್ಕೆ ಹೊರೆ, ಇತರರಿಗೆ ಅವಶ್ಯವಾದದ್ದು ಎಂದಷ್ಟೇ ಅರ್ಥ) ಆದ ಈ ಚೀಲ ಹೇರಿಕೊಂಡೇ ನಾನೊಮ್ಮೆ ಕುರುಡು ಹಂದಿಯಂತೆ ನುಗ್ಗಿದಾಗ ಬಂಡೆ ಮತ್ತು ಕೊಂಬೆಯ ನಡುವೆ ಸಿಕ್ಕಿಬಿದ್ದೆ. ಗೋಕುಲದ ನೆನಪಿನಲ್ಲಿ ಒಮ್ಮೆಗೆ ಮರರೂಪ ತಳೆದ ರಕ್ಕಸನ ಫಿತೂರಿಯೇ ಸರಿ ಎಂದುಕೊಂಡೆ. ಆದರೆ ನಾನು ದೇವರ ದೇವನಲ್ಲ, ಬರಿಯ ಹನೆಹಳ್ಳಿ ದೇವು! ಮುಂದಿಲ್ಲ, ಹಿಂದಿಲ್ಲದ ನನ್ನನ್ನು ಅಶೋಕರು ಪಾರುಗಾಣಿಸಿದರು.”</p>
<p>ರಾತ್ರಿ ಇಡೀ ಬೀಸಿದ ಗಾಳಿ ಈಗ ನಿಂತಿತ್ತು. ಬಿಸಿಲಿಗೆ ಕಾವು ಕೂಡಿತ್ತು. ರಕ್ಷಣೆಯ ಹಗ್ಗದ ವಿಲೇವಾರಿ, ಏರುವವರಿಗೆ ಸೂಚನೆಗಳ ನಮ್ಮದೇ ಧ್ವನಿ ಬಿಟ್ಟರೆ, ಇಡೀ ಕಣಿವೆ ನೀರವ ನಿಶ್ಚಲವಾಗಿ ನಮ್ಮನ್ನು ನೋಡುತ್ತಿರುವಂತೆ ಅನಿಸುತ್ತಿತ್ತು. ಒಂದೊಂದು ಮಜಲು ದಾಟಿದವರಿಗೆ ಗಿಡಗಳ ನೆರಳಿನಲ್ಲಿ ತುಸು ವಿಶ್ರಾಂತಿ, ಹೊತ್ತ ನೀರಂಡೆಯ ಸಾಂತ್ವನ. ಪ್ರಸನ್ನನ ಮಾಯಾಚೀಲ ಕೊಡುತ್ತಿದ್ದ ಸಿಹಿತಿಂಡಿ ಅಯಾಚಿತ ಬೋನಸ್!</p>
<p>ಕೆಳಗಿನ ಲೋಕದಲ್ಲಿ ದೇವಕಿ, ಜೋನಾಸರು ವಾಪಾಸಾದದ್ದು ನೋಡಿದ್ದೆವು. ಉಪಾಧ್ಯರು ಅವರನ್ನು ಸೇರಿದ್ದು ನಾನು ಕೇವಲ ಹುಯ್ಲುಗಳಲ್ಲಿ ಕೇಳಿಸಿಕೊಂಡಿದ್ದೆ. ಅವರು ಮರಗಳ ಟೊಪ್ಪಿ ಕಳೆದು, ಹುಲ್ಲುಮೈ ಸೇರಿ, ನಮ್ಮ ಕಣ್ಣಿಗೆ ಬೀಳಲು ಭಾರೀ ಸಮಯವನ್ನೇ ತೆಗೆದುಕೊಂಡರು. ನಾನು ಬಿಡುವಾದಾಗೆಲ್ಲಾ ‘ಹಿಂದುಳಿದವರಿಗಾಗಿ’ ಬೊಬ್ಬೆ ಸೇವೆ ನಡೆಸಿದ್ದೆ. (ವಾಸ್ತವದಲ್ಲಿ ನಾವು ಶಿಖರ ತಲಪುವಷ್ಟೇ ಮುಖ್ಯ ಇತರರ ಕ್ಷೇಮಸಮಾಚಾರ ಎಂಬುದು ಆಂತರ್ಯ.) ಮಲೆಗಳಲ್ಲಿ ದಾರಿ ತಪ್ಪಿಸುವ ಬಳ್ಳಿ ಎಂದು ಒಂದು ಸಸ್ಯಕ್ಕೆ ಜನಪದರು ಮಹತ್ವವನ್ನು ಕಲ್ಪಿಸಿದ್ದಾರೆ. ಅದರ ಅರ್ಥವ್ಯಾಪ್ತಿಯನ್ನು ಹಿಂದೆ ನಾವು ಅನೇಕ ಬಾರಿ ಉಪಾಧ್ಯರಲ್ಲೂ ಗುರುತಿಸಿದ್ದು ಉಂಟು! ಹಾಗಾಗಿ ಈ ಸಲ ಉಪಾಧ್ಯರಿರುವುದರಿಂದ ಸಹಜವಾಗಿ ದಾರಿ ತಪ್ಪಿತೋ? ದೇವಕಿ ಗೊಣಗದಿದ್ದರೂ (ಎಷ್ಟಿದ್ದರೂ ದುರ್ಬಲ ವರ್ಗವಲ್ಲವೇ! &#8211; ಕವಲು ಬರೆದವರು ಒಪ್ಪದೇ ಇರಬಹುದು ಎನ್ನುವುದು ಇಲ್ಲಿ ಕಾಲಾತಿಕ್ರಮಣದೋಷ!) ಅವಳನ್ನು ಸುಧಾರಿಸುವಲ್ಲಿ ಉಳಿದವರು ನಿಧಾನಿಗಳಾದರೋ? ದುರ್ಬಲ ಹಸ್ತ ಮತ್ತು ನಡುಗುವ ಕಾಲಿನ ಜೋನಾಸ್ ಸಂಕಟ ಹೆಚ್ಚಿತೋ ಎಂಬುದಕ್ಕೆಲ್ಲ ಉನ್ನತಮಟ್ಟದ ಆಯೋಗ ಹೊರಡಿಸಬೇಕಾದೀತು. ಅದೇನೇ ಇರಲಿ, ಇವರು ಕಡೆಗೂ ಬಯಲಾದದ್ದು ಉನ್ನತಮಟ್ಟದ ವೀಕ್ಷಕರ (ನಮ್ಮದಲ್ಲ) ಸಹಾಯದಿಂದ ಎನ್ನುವುದಂತೂ ನಿಜ. ಇದೇನಪ್ಪಾಂತ ಗಾಬರಿಯಾಗಬೇಡಿ &#8211; ಬಿಸಿಲೇರುತ್ತಿದ್ದಂತೆ ನಮ್ಮ ಶಿಬಿರ ಸ್ಥಾನದ ಬಳಿ ಕೆಲವು ಹಳ್ಳಿಗರು ಬಂದು ನಮ್ಮ ಆರೋಹಣ ವೀಕ್ಷಣೆ ನಡೆಸಿದ್ದರು. ಅವರು ಕಣಿವೆಯ ಅಂಚಿನಲ್ಲಿ ನಿಂತು ನಮ್ಮ ಮೂವರಿಗೆ ಮಾತಿನ ಬಲ, ದಿಕ್ಕು ಕೊಟ್ಟು ಮೇಲೇರಿಸಿಕೊಂಡಿದ್ದರು.</p>
<p>ನನ್ನ ಬೊಬ್ಬೆ ಸೇವೆ ಕುರಿತು ದೇವು ಪಡ್ಡೆತನ ಬರೆದದ್ದೇ ಬೇರೆ. “ಮಧುಮಲೆಗೆ ಮಧುಚಂದ್ರಕ್ಕೆ ಬಂದವರಂತೆ ವರ್ಧನ್ ಆಗಾಗ ಪ್ರೀತಿಪೂರ್ವಕವಾಗಿ, ಕೋಮಲವಾಗಿ ‘ದೇವಕೀಈಈಈಈಈ’ ಎಂದು ಅಬ್ಬರಿಸುತ್ತಿದ್ದದ್ದು ಗುಡುಗುಡಿಸಿ, ರಂಗನಾಥನನ್ನು ಅಲುಗಾಡಿಸಿ, ಗಿರಿಕಾನನಗಳಲ್ಲಿ ತುಂಬಿ, ತುಳುಕಿ, ಹರಿದು ಭವಾನಿ ಸಾಗರವನ್ನೇ ಸೇರುತ್ತಿತ್ತು. ಶಿಬಿರ ಸ್ಥಾನದಲ್ಲಿ ಸೇರಿದ್ದ ಕುತೂಹಲಿಗಳನ್ನೂ ಉಪಾಧ್ಯ ಜೋನಾಸರನ್ನುದ್ದೇಶಿಸಿ ನಾವೂ ಸಾಕಷ್ಟು ಬೊಬ್ಬೆ ಮಾತುಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಅಧ್ಯಾಪಕರಾದ ಗ್ರಹಚಾರಕ್ಕೆ ಭಟ್ಟರು ಮಾತ್ರ ಇಲ್ಲಿ ಕಿರುಚದೆ (ಕ್ಷಮಿಸಿ, ಇವರ ಶಾಲಾ ಕಿರುಚು ಅಥವಾ ಅಕಿರುಚುಗಳ ಬಗ್ಗೆ ನಾನು ಅಜ್ಞಾನಿ), ಗಂಭೀರವಾಗಿ ಮುಂದುವರಿದಿದ್ದರು.”</p>
<p><strong>ಎರಡು ಉಪಕಥೆಗಳು:</strong> ನಮ್ಮ ಕಥಾನಕದ ಉಲ್ಟಾಚಿತ್ರ ನನ್ನ ತಮ್ಮ ಆನಂದನ ಅನುಭವ. ಅವರ ತಂಡ ಮೂವರದು &#8211; ಆನಂದ, ಪ್ರದೀಪ್ ಆರೋಹಿಗಳು. ಹತ್ತದ ನಾಯಕ ಗೋವಿಂದರಾಜ್. ಆನಂದ ಬರೆಯುತ್ತಾನೆ, “ನಾವು ಹತ್ತುವ ಒಂದೆರಡು ತಿಂಗಳ ಹಿಂದೆ ಯಾರೋ ಹುಚ್ಚ, ಒಂಟಿಯಾಗಿ ಪಿಲ್ಲರ್ ಹತ್ತಿದ್ದನಂತೆ. ಆತ ಕೊಡಿ ತಲಪಿ, ಒಂದು ಬಾವುಟ ಹಾರಿಸಿ, ಕಡೆಗೆ ಕೊಳ್ಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನಂತೆ. ಆ ಬಾವುಟ ಪಟಪಟ ಎಂದು ಸೊಡರ ಕುಡಿಯಂತೆ (ನಾನು ಬೀಯೇ ಪರೀಕ್ಷೆಗೆ ಓದುತ್ತಿದ್ದಾಗ ‘ಚಪಲೆ ಸೊಡರಕುಡಿಯಂ ಪೋಲ್ವಳ್’ ಎಂದು ಗಟ್ಟಿ ಮಾಡುತ್ತಿದ್ದದ್ದು ಇವನು ಕೇಳಿಸಿಕೊಂಡ ಪರಿಣಾಮ ಅಷ್ಟೇ &#8211; ಅಶೋಕ) ನಾವು ಹತ್ತುವಂದೂ ತೊನೆದಾಡುತ್ತಿತ್ತು. ಬೆಳಿಗ್ಗೆ ಮೊದಲು ನಾವು ಮೂವರೂ ಕಣಿವೆಯ ಬಲ ಪಾರ್ಶ್ವದೆಡೆಗೆ ಇಳಿದು ಹೋದೆವು. ಕಾಡು ಕಡಿದು ಕಡಿದು ಬಂಡೆಯ ಬುಡ ತಲಪಿದೆವು. ಮುಂದೆ ಮೆಗಾಫೋನ್ ಹಿಡಿದು ಗೋವಿಂದರಾಜರು ಕೊಡುತ್ತಿದ್ದ ನಿರ್ದೇಶನದಂತೆ ನಾವಿಬ್ಬರು ಪಿಲ್ಲರ್ ಏರಲು ತೊಡಗಿದೆವು.</p>
<p>“ಮೊದಲ ಐವತ್ತಡಿ ಮಣ್ಣು, ಬಂಡೆ, ಗಿಡ ಅಂತ ಏರಿದೆವು. ನಂತರ ಒಂದು ಸಣ್ಣ ಚಿಮಣಿ. ನಾವು ಮೇಲೆ ಮೇಲೆ ಹೋದಂತೆ ಅತ್ತ ಗೋವಿಂದರಾಜ್ ಇಳಿದ ದಾರಿಯಲ್ಲೇ ವಾಪಾಸು ಹೋಗುತ್ತಾ ದುರ್ಬೀನಿನಲ್ಲಿ ನೋಡಿ ನಮಗೆ ಸೂಚನೆಗಳನ್ನು ಕೊಡುತ್ತಾ ಇದ್ದರು. ಅರ್ಧ ಏರಿದ ಮೇಲೆ ದಾರಿ ಸಿಗದೆ ನಾವು ಕಂಬದ ಆಚೆಗೆ ಹೋಗಬೇಕಾಯ್ತು. ಗುರುಗಳ ಸಾನ್ನಿಧ್ಯವಿಲ್ಲದೇ ತಬ್ಬಲಿಗಳಂತಾದ ನಾವು ಪ್ರಪಾತದಂಚಿನಲ್ಲಿ ತೆವಳೀ ತೆವಳೀ&#8230;”</p>
<p>ಅದೇ ನನ್ನ ಮೊದಲ ಪ್ರಯತ್ನದ ತಂಡದ ಸದಸ್ಯ ಬಾಲಕೃಷ್ಣ ಅನಾಥಪ್ರಜ್ಞೆ ವಿದೂರ. ನಾವು ನಾಲ್ಕು ಜನ ಎರಡು ಬೈಕುಗಳಲ್ಲಿ ದಕ್ಷಿಣ ಭಾರತ ಸುತ್ತುತ್ತಾ ಕೋತಗೇರಿ ತಲಪಿದ್ದು ಮತ್ತೆ ಈಗಾಗಲೇ ದೇವಕಿ ಹೇಳಿದಂತೆ ಸ್ತಂಭ ನಾವೆಲ್ಲ ಮುಟ್ಟಿದ್ದು ನಿಮಗೆ ಗೊತ್ತೇ ಇದೆ. ಆದರೆ ಹತ್ತುವ ಪ್ರಯತ್ನದಲ್ಲಿ ನನಗೆ ಸ್ವಲ್ಪ ‘ಪಾಠಬೇಧ’ ಉಂಟು! ಅಂದು ನಾವು ಕೀಲುಕೋತಗೇರಿಯಿಂದ ಹಿಡಿದ ಮಾರ್ಗದರ್ಶಿ ಮಹಾಕುಡುಕ. ಸಹಜವಾಗಿ ಹಿಂದುಳಿಯ ಬಯಸಿದ ದೇವಕಿಯನ್ನು ಅವನ ಜೊತೆ ಬಿಟ್ಟು ಹೋಗಲಾಗದ ದ್ವಂದ್ವದಲ್ಲಿ ನಾನೂ ಹಿಂದುಳಿದೆ. ಅರವಿಂದರಾವ್, ಬಾಲಕೃಷ್ಣ ಮೊದಲು ಮರ ಮತ್ತೆ ತೋರಬಳ್ಳಿ ತುಳಿದು, ಚಕ್ಕೆ ಎದ್ದ ಬಂಡೆಯಂಚುಗಳನ್ನು ಹಿಡಿದು ಸ್ತಂಭದ ಮೈ ತಲಪಿದ್ದರು. ಎಡಕ್ಕೆ ಸರಿಯೋಣವೆಂದರೆ ಸ್ವಲ್ಪದರಲ್ಲೇ ಆ ಕೊರಕಲ ಸರಣಿ ಸ್ತಂಭದ ಪಶ್ಚಿಮ ಮೈಯ ಪ್ರಪಾತದಂಚಿನಲ್ಲಿ ಮುಗಿದಿತ್ತು. ಹತ್ತು ಹೆಜ್ಜೆ ಹಿಂದೆ ಬಂದು, ಬಲಕ್ಕೆ ನೇರ ಮೇಲೇರುವ (ಮಳೆಗಾಲದ) ನೀರಜಾಡು ಅನುಸರಿಸಿದರು. ಸುಮಾರು ನೂರೆಂಬತ್ತು ಮೀಟರ್ ಕಳೆದ ಮೇಲೆ (ಬಾಲಣ್ಣ ಒಯ್ದ ರಕ್ಷಣಾ ಹಗ್ಗದ ಅಳತೆಯಿಟ್ಟಿದ್ದ) ಸ್ವಲ್ಪ ಮಟ್ಟಸ ನೆಲ. ಆಚೆ ಸುಮಾರು ಹತ್ತಿಪ್ಪತ್ತಡಿ ಎತ್ತರದ ಅಪ್ಪಟ ಗೋಡೆಯಂಥಾ ಬಂಡೆ. ಅವರು ಪರಸ್ಪರ ಕೈಕೊಟ್ಟು ಎತ್ತಿ, ಎಳೆದು ಅದನ್ನುತ್ತರಿಸಿದರು. ಮತ್ತಿನ ವಿವರಗಳನ್ನು ದಾಖಲಿಸುವಲ್ಲಿ ಬಾಲಣ್ಣ ಯಾಕೋ ಅವಸರ ಮಾಡಿದಂತನ್ನಿಸುತ್ತದೆ. ಆತನ ನೆನಪಿನ ಲಹರಿ ಹೇಳುತ್ತದೆ, “ನಂತ್ರ ನಾವು ಬಹಳ ಸಲೀಸಾಗಿ ಮೇಲೆ ಹೋಗಿದ್ದೆವು. ಶಿಖರದಲ್ಲಿ ಹದಿನೈದು ಇಪ್ಪತ್ತು ಮಿನಿಟಿನ ವಿಶ್ರಾಂತಿ. ಹತ್ತಲು ಸುಮಾರು ಒಂದೂವರೆ ಗಂಟೆ ಬಳಸಿದ್ದರೆ ಇಳಿಯಲು ಕೇವಲ ಇಪ್ಪತ್ತರಿಂದ ಇಪ್ಪತ್ತೈದು ಮಿನಿಟು ಮಾತ್ರ” ಎಂದು ಬಾಲಣ್ಣ ಮುಗಿಸುತ್ತಾರೆ.</p>
<p>ದೈತ್ಯರಾಯನ ಹಸಿರು ಕಲಾಪತ್ತು: ಕಲ್ಲಿನೆಡೆಯ ಗಿಡಗಳು ಒಂದು ರೀತಿಯಲ್ಲಿ ಕುಬ್ಜ ವೃಕ್ಷಗಳೇ (ಪ್ರಾಕೃತಿಕವಾಗಿಯೇ ಬೊನ್ಸಾಯ್) ಆಗಿದ್ದವು. ಕಠಿಣ ಪರಿಸರದಲ್ಲಿ ನೆಲ ನೀರು ಹಿಡಿಯುವ ಹಠದಲ್ಲಿ ಗಾತ್ರಮಹತ್ತು ಗಳಿಸದಿದ್ದರೂ ಕಸುವಿನಲ್ಲಿ ಅಸಾಮಾನ್ಯವಿದ್ದವು. ಎಲ್ಲೂ ಮುರಿ, ಕಡಿ ಸಂಸ್ಕೃತಿ ನಮ್ಮದಲ್ಲ. ಆದರೆ ಅನಿವಾರ್ಯ ಎಂದು ಕಾಣಿಸಿದಲ್ಲೂ ಈ ಗಿಡದಂತಿರುವ ಮರಗಳು ಮುರಿಯುವುದಿರಲಿ, ಬಗ್ಗಲೂ ಇಲ್ಲ! (ನಾವು ಕತ್ತಿ ಒಯ್ದೇ ಇರಲಿಲ್ಲ) ನಾವು ಅವುಗಳ ಎಡೆಯಲ್ಲಿ ತೂರಿ, ಒಮ್ಮೊಮ್ಮೆ ಕೊಂಬೆ ಏರಿ ಮುಂದುವರಿದೆವು. ಇದರಿಂದ ಕೆಲವೊಮ್ಮೆ ನಾವು ಪರಸ್ಪರ ಬಂಧಿಸಿಕೊಂಡಿದ್ದ ಹಗ್ಗ ದೊಡ್ಡಾಳನ್ನು ಸಣ್ಣ ಸಂದಿನಲ್ಲಿ ನುಗ್ಗುವಂತೆಯೂ ಗಿಡ್ಡಾಳಿಗೆ ಎತ್ತರದ ಕೊಂಬೆ ಹತ್ತಿಳಿಯುವಂತೆಯೂ ಶಿಕ್ಷೆ ಕೊಟ್ಟದ್ದಿದೆ. ತೀರಾ ಫಜೀತಿಗಿಟ್ಟುಕೊಂಡಲ್ಲಿ ಕೆಲವರು ಹಗ್ಗದಿಂದ ತಮ್ಮನ್ನು ಬೇರ್ಪಡಿಸಿಕೊಂಡು, ಹುಶಾರಾಗಿ ಎದುರಾದ ಅಡ್ಡಿಯನ್ನುತ್ತರಿಸಿ, ಮತ್ತೆ ಹಗ್ಗಕ್ಕೆ ಸೇರಿ ಮುಂದುವರಿದದ್ದೂ ಇದೆ. ಹೆಚ್ಚುಕಡಿಮೆ ಮುಕ್ಕಾಲು ಸ್ತಂಭ ಏರಿ ಮುಗಿಯಿತೆನ್ನುವಲ್ಲಿಗೆ (ಹಸಿರು ಕಲಾಪತ್ತಿನ ಶಲ್ಯ ದೈತ್ಯನ ಭುಜಕ್ಕೇ ಮುಗಿದಂತೆ) ತಿರುಪೇರಿನ ಕೊನೆ ಬಂತು. ಜೊತೆಗೆ ಮುಂದೆ ನೈಜ ಏರಿಕೆ ಅಸಾಧ್ಯವೆನ್ನುವಂತೆ ಬಂಡೆ ಎದ್ದು ನಿಂತಿತ್ತು! ಓಣಿಯ ಒಳ ಅಂಚಿಗೆ  ನೇರವಾಗಿ ಬಂಡೆ ಗೋಡೆಯಲ್ಲಿ ಆಳವಾದೊಂದು ಬಿರುಕು ಮಾತ್ರ ಉಳಿದಿತ್ತು. ಸುಮಾರು ನೂರಡಿ ಮೇಲೆ, ಆ ಗೋಡೆ ಮುಗಿದಂತೆ ತೋರುವಲ್ಲಿಂದ ಹಸಿರು ಇಣುಕಿ ನಮ್ಮನ್ನಣಕಿಸಿತು. ಅದನ್ನೇರುವ ಅಂದಾಜೂ ಅಂದು ನಾವು ಮಾಡುವಂತಿರಲಿಲ್ಲ. ಮಿತಿಯ ಅರಿವಿನೊಡನೆ ಶಿಖರ ಸಾಧನೆ (ಇಲ್ಲವೇ ಆರೋಗ್ಯಪೂರ್ಣ ವಾಪಾಸಾತಿ) ನಮ್ಮ ಗುರಿ. ಪ್ರಾಣವನ್ನೇ ಪಣವಾಗಿಟ್ಟು ಏರಲು ಹೊರಟು ಇನ್ನೊಂದೇ ಹೆಚ್ಚಿನ ಸಿದ್ಧತೆಯ ಆರೋಹಣಾವಕಾಶವನ್ನು (ಜೊತೆಗೆ ಜೀವವನ್ನೂ!) ಕಳೆದುಕೊಳ್ಳುವುದು ವಿವೇಚನಾಶಾಲಿಯಾದ ಪರ್ವತಾರೋಹಿಗೆ ಹೇಳಿದ್ದಲ್ಲ. ಸರಿ, ಕತ್ತಿನವರೆಗೆ ಬಂದವರನ್ನು ನೆತ್ತಿಗೇರಿಸಿಕೊಳ್ಳದ ರಂಗನಾಥನನ್ನು ಇನ್ನೊಂದೇ ಸಾಹಸಯಾನದಲ್ಲಿ ಒಲಿಸಿಕೊಳ್ಳುವುದಾಯ್ತು ಎಂದು ಹೇಳಿಕೊಂಡೆವು. ಆನಂದನದ್ದೆಲ್ಲೋ ಸರಬುರುಡೆ ಇರಬೇಕು, ಬಾಲಣ್ಣ ಹೇಳಿದ ನೆತ್ತಿ ರಂಗನಾಥ ಸ್ತಂಭದ್ದಲ್ಲ, ಅರವಿಂದರದ್ದಿರಬೇಕು ಎಂದೆಲ್ಲಾ ಸಮಾಧಾನಿಸಿಕೊಂಡೆವು. ಅವರೋಹಣಪರ್ವಕ್ಕೂ ಮೊದಲು ಕೇವಲ ಕುತೂಹಲದಲ್ಲಿ ಓಣಿಯೂ ಗೋಡೆಯೂ ಸೇರಿದ ಸಂದಿನಲ್ಲಿದ್ದ ಹಸಿರಿನ ಆಧಾರದಲ್ಲೇ ಓಣಿಯ ಬಲ ಅಂಚಿಗೆ ಅಂದರೆ ಪ್ರಪಾತದಂಚಿಗೆ ಮೆಲ್ಲನೆ ಸರಿದೆವು. ಆ ಜಾಗ ದೂರ ನೋಟಕ್ಕೂ ಸ್ಪಷ್ಟವಾಗಿ ದೈತ್ಯರಾಯನ ಭುಜದ ಕೊನೆಯಂತೇ ತೋರುವ ಪ್ರದೇಶ. ಅಂದರೆ ದಕ್ಷಿಣ ಅಂಚಿನಲ್ಲಿ ಏರಿಕೆಗೆ ತೊಡಗಿದ್ದ ನಾವು, ಪೂರ್ಣ ಪೂರ್ವ ಮೈಯನ್ನು ಬಳಸಿ, ಬಂಡೆಯ ಉತ್ತರ ಅಂಚನ್ನು ಸೇರಿದ್ದಾಗಿತ್ತು.</p>
<p>ಯಾವುದೇ ಕಾಡುಬಂಡೆಯ ನೆತ್ತಿಯಲ್ಲಿ ಭದ್ರ ಆಧಾರಕ್ಕೆ ಬಿಗಿದು, ಕೊಳ್ಳದಾಳದ ನೆಲ ಮುಟ್ಟುವಂತೆ ಬಿಟ್ಟ ಸ್ಥಿರ ಹಗ್ಗವನ್ನು ವಿವಿಧ ಕ್ರಮಗಳಲ್ಲಿ ಬಳಸಿಕೊಂಡು ಇಳಿಯುವುದು (ಈ ತಂತ್ರವನ್ನು ರ್ಯಾಪೆಲಿಂಗ್ ಎನ್ನುತ್ತೇವೆ) ನಿಜಕ್ಕೂ ರೋಮಾಂಚಕಾರಿ ಅನುಭವ. ನನ್ನ ಮೈಸೂರಿನ ದಖ್ಖಣ ಪರ್ವತಾರೋಹಣ ಸಂಸ್ಥೆಯ ದಿನಗಳಲ್ಲಿ ಪಾಂಡವಪುರದ ಕುಂತಿಬೆಟ್ಟ ನಮಗೆ ಇಂಥಾ ಶಿಲಾವರೋಹಣ ತಂತ್ರಾಭ್ಯಾಸಕ್ಕೆ ಅತ್ಯಂತ ಎತ್ತರದ ಅವಕಾಶವನ್ನು (ಸುಮಾರು ಮುನ್ನೂರಡಿ) ಒದಗಿಸುತ್ತಿತ್ತು. ಅಲ್ಲೂ ಕೊಳ್ಳವನ್ನು ನೇರ ದೃಷ್ಟಿಸುತ್ತ, ದೇಹವನ್ನು ಸೆಟೆಸಿ ಬಂಡೆ ಮೈಗೆ ಲಂಬವಾಗಿಟ್ಟುಕೊಂಡು ಕೊಳ್ಳದಾಳಕ್ಕೆ ಒಂದೊಂದೇ ಹೆಜ್ಜೆ ಹಾಕುವ ಸ್ಟೊಮಕ್ ರ್ಯಾಪ್ಲಿಂಗ್ ಮಾಡುತ್ತಿದ್ದ ಕೆಲವೇ ಗಟ್ಟಿ ಎದೆಗಳಲ್ಲಿ ನನ್ನದೂ ಒಂದು. ಅಂಥವನಿಗೂ ಇಲ್ಲಿ, ರಂಗನಾಥ ಸ್ತಂಭದ ಕನಿಷ್ಠ ಎಂಟನೂರು ಅಡಿ ಆಳವನ್ನು ನೇರ ನೋಡುವ ‘ಭುಜ’ದ ಅಂಚಿಗೆ ಬಂದಾಗ ಒಮ್ಮೆ ಎದೆಬಡಿತದ ಲಯತಪ್ಪುವುದು ಎನ್ನುತ್ತಾರಲ್ಲ ಅಂತ ಅನುಭವ! ಭವಾನಿಕೊಳ್ಳದಾಕಳಿಕೆ ಎಲ್ಲಿ ನಮ್ಮನ್ನು ಸೆಳೆದುಬಿಡುತ್ತದೋ ಎನ್ನುವ ಭಯ. ಮಂಗಬಂಡೆ ಕುರಿತು ಹುಡುಕಿದರೆ ನೆಲದಲ್ಲೊಂದು ಬೊಟ್ಟು. ನಮ್ಮ ಶಿಬಿರಸ್ಥಾನ ಹೆಚ್ಚುಕಡಿಮೆ ಮರೆಯಾಗಿತ್ತು. ಉಪಾಧ್ಯ ಮತ್ತು ದೇವಕಿ ರಕ್ಕಸ ಕಕ್ಕಸಿನತ್ತ ನಡೆದು ಹೋಗಿದ್ದುದರಿಂದ ನಮಗೆ ಅಸ್ಪಷ್ಟ ಕ್ಷುದ್ರ ಜೀವಿಗಳಂತೆ ತೋರಿದರು. ಬೊಬ್ಬೆ ವಿನಿಮಯದಲ್ಲಿ ನಮ್ಮ ನಿರಾಶೆಯನ್ನು ಹುಗಿದಿಟ್ಟರೂ ಸವೆದ ಜಾಡನ್ನು ಮರಳಿ ಸವೆಸಲು ತಿರುಗಿದೆವು.</p>
<p><strong>(ಮುಂದುವರಿಯುವುದು)</strong></p>
<blockquote><p>[ಮೂರಕ್ಕೆ ಮುಕ್ತಾಯ ಎನ್ನುವ ಆಡುನುಡಿ ಹುಸಿಯಾಯ್ತೇ? ಇಷ್ಟು ಹತ್ತಿರ ಆದರೂ ಅಷ್ಟು ದೂರ ಎನ್ನುವಂಥಾ ಸ್ಥಿತಿ ನಮ್ಮದು.ತಾದ್ದಕ್ಕೆ ಇನ್ನೊಂದೇ ಸಾಹಸಯಾತ್ರೆ ಮುಂದಿನ ಕಂತೇ? ಇವೇ ಮುಂತಾದ ಪ್ರಶ್ನೆಗಳು ಆರನೆಯ ಕಂತಿನವರೆಗೆ ನಿಮ್ಮನ್ನು ಕಂತಿರಲಿ. ಪರಿಣಾಮದಲ್ಲಿ ಏಳುವ ನಿಮ್ಮ ‘ಹಾಹಾಕಾರ’ಕ್ಕೆ ಅರ್ಥಪೂರ್ಣ ಶಬ್ದಗಳ ಜೋಡಣೆ ಮಾಡಿ, ಕೆಳಗೆ ದಾಖಲಿಸುತ್ತೀರಾಗಿ ನಂಬಿದ್ದೇನೆ.]</p></blockquote>
<br />  <a rel="nofollow" href="http://feeds.wordpress.com/1.0/gocomments/athree.wordpress.com/499/"><img alt="" border="0" src="http://feeds.wordpress.com/1.0/comments/athree.wordpress.com/499/" /></a> <a rel="nofollow" href="http://feeds.wordpress.com/1.0/godelicious/athree.wordpress.com/499/"><img alt="" border="0" src="http://feeds.wordpress.com/1.0/delicious/athree.wordpress.com/499/" /></a> <a rel="nofollow" href="http://feeds.wordpress.com/1.0/gofacebook/athree.wordpress.com/499/"><img alt="" border="0" src="http://feeds.wordpress.com/1.0/facebook/athree.wordpress.com/499/" /></a> <a rel="nofollow" href="http://feeds.wordpress.com/1.0/gotwitter/athree.wordpress.com/499/"><img alt="" border="0" src="http://feeds.wordpress.com/1.0/twitter/athree.wordpress.com/499/" /></a> <a rel="nofollow" href="http://feeds.wordpress.com/1.0/gostumble/athree.wordpress.com/499/"><img alt="" border="0" src="http://feeds.wordpress.com/1.0/stumble/athree.wordpress.com/499/" /></a> <a rel="nofollow" href="http://feeds.wordpress.com/1.0/godigg/athree.wordpress.com/499/"><img alt="" border="0" src="http://feeds.wordpress.com/1.0/digg/athree.wordpress.com/499/" /></a> <a rel="nofollow" href="http://feeds.wordpress.com/1.0/goreddit/athree.wordpress.com/499/"><img alt="" border="0" src="http://feeds.wordpress.com/1.0/reddit/athree.wordpress.com/499/" /></a> <img alt="" border="0" src="http://stats.wordpress.com/b.gif?host=athreebook.com&amp;blog=3999388&amp;post=499&amp;subd=athree&amp;ref=&amp;feed=1" width="1" height="1" />]]></content:encoded>
			<wfw:commentRss>http://athreebook.com/2010/07/15/15july2010/feed/</wfw:commentRss>
		<slash:comments>7</slash:comments>
	
		<media:content url="" medium="image">
			<media:title type="html">Abhaya</media:title>
		</media:content>

		<media:content url="http://lh4.ggpht.com/_XLLsV3Btn2I/TDuojaQDctI/AAAAAAAAFdY/9ApVegL32Os/s512/ranganna%20003.jpg" medium="image" />

		<media:content url="http://lh4.ggpht.com/_XLLsV3Btn2I/TDuoijRGoqI/AAAAAAAAFdU/k-_MSdTERyo/s640/ranganna%20002.jpg" medium="image" />
	</item>
		<item>
		<title>ರಂಗನಂಘ್ರಿಗೆ ಮಣಿದೂ&#8230;</title>
		<link>http://athreebook.com/2010/07/09/%e0%b2%b0%e0%b2%82%e0%b2%97%e0%b2%a8%e0%b2%82%e0%b2%98%e0%b3%8d%e0%b2%b0%e0%b2%bf%e0%b2%97%e0%b3%86-%e0%b2%ae%e0%b2%a3%e0%b2%bf%e0%b2%a6%e0%b3%82/</link>
		<comments>http://athreebook.com/2010/07/09/%e0%b2%b0%e0%b2%82%e0%b2%97%e0%b2%a8%e0%b2%82%e0%b2%98%e0%b3%8d%e0%b2%b0%e0%b2%bf%e0%b2%97%e0%b3%86-%e0%b2%ae%e0%b2%a3%e0%b2%bf%e0%b2%a6%e0%b3%82/#comments</comments>
		<pubDate>Fri, 09 Jul 2010 01:28:05 +0000</pubDate>
		<dc:creator>abhayaftii</dc:creator>
				<category><![CDATA[ರಂಗನಾಥ ಸ್ಥಂಬ]]></category>
		<category><![CDATA[ವನ್ಯಲೋಕ]]></category>
		<category><![CDATA[Ranganatha Pillar]]></category>

		<guid isPermaLink="false">http://athreebook.com/?p=495</guid>
		<description><![CDATA[ರಂಗನಾಥ ಸ್ತಂಭ ವಿಜಯ &#8211; ಭಾಗ ನಾಲ್ಕು ಬಂಡೆ ಬೊಬ್ಬಿಟ್ಟಿತು, ಕಾಡು ಚೀರಿತು, ತಂಡದವರಂತೂ “ಅಶೋಕ್ ಹೇಗಿದ್ದೀರಿ? ಪ್ರಸನ್ನಾ ಹುಶಾರಾ? ಗಣಪತಿ ಭಟ್ಟರ ಕೈ ಹ್ಯಾಗಿದೇ?” ಉದ್ಗಾರಗಳದೇ ಸಂತೆ. ಆದರೆ ಅದೃಷ್ಟ ನಮ್ಮೆಲ್ಲರ ಜೊತೆಗಿತ್ತು. ಬಂಡೆ ಜಾರಿದಾಗ ನಾನು ನೇರದಲ್ಲಿದ್ದದ್ದು ನಿಜ. ಆದರೆ ಅದು ಗಿಡಕ್ಕೆ ತಾಗಿ ಹೊರಳಿ ಬೀಳುವ ಕ್ಷಣಾರ್ಧದಲ್ಲಿ ಮುಂದಿನ ಹೆಜ್ಜೆಗೆ ಅರಿವಿಲ್ಲದೆ &#8230; <a href="http://athreebook.com/2010/07/09/%e0%b2%b0%e0%b2%82%e0%b2%97%e0%b2%a8%e0%b2%82%e0%b2%98%e0%b3%8d%e0%b2%b0%e0%b2%bf%e0%b2%97%e0%b3%86-%e0%b2%ae%e0%b2%a3%e0%b2%bf%e0%b2%a6%e0%b3%82/">Continue reading <span class="meta-nav">&#8594;</span></a><img alt="" border="0" src="http://stats.wordpress.com/b.gif?host=athreebook.com&amp;blog=3999388&amp;post=495&amp;subd=athree&amp;ref=&amp;feed=1" width="1" height="1" />]]></description>
			<content:encoded><![CDATA[<p><strong>ರಂಗನಾಥ ಸ್ತಂಭ ವಿಜಯ &#8211; ಭಾಗ ನಾಲ್ಕು</strong><br />
<a href="http://lh5.ggpht.com/_XLLsV3Btn2I/TBrMnBR65eI/AAAAAAAAFVI/cxig5ysm5Lg/s720/3.jpg"><img class="alignleft" src="http://lh5.ggpht.com/_XLLsV3Btn2I/TBrMnBR65eI/AAAAAAAAFVI/cxig5ysm5Lg/s720/3.jpg" alt="" width="344" height="234" /></a>ಬಂಡೆ ಬೊಬ್ಬಿಟ್ಟಿತು, ಕಾಡು ಚೀರಿತು, ತಂಡದವರಂತೂ “ಅಶೋಕ್ ಹೇಗಿದ್ದೀರಿ? ಪ್ರಸನ್ನಾ ಹುಶಾರಾ? ಗಣಪತಿ ಭಟ್ಟರ ಕೈ ಹ್ಯಾಗಿದೇ?” ಉದ್ಗಾರಗಳದೇ ಸಂತೆ. ಆದರೆ ಅದೃಷ್ಟ ನಮ್ಮೆಲ್ಲರ ಜೊತೆಗಿತ್ತು. ಬಂಡೆ ಜಾರಿದಾಗ ನಾನು ನೇರದಲ್ಲಿದ್ದದ್ದು ನಿಜ. ಆದರೆ ಅದು ಗಿಡಕ್ಕೆ ತಾಗಿ ಹೊರಳಿ ಬೀಳುವ ಕ್ಷಣಾರ್ಧದಲ್ಲಿ ಮುಂದಿನ ಹೆಜ್ಜೆಗೆ ಅರಿವಿಲ್ಲದೆ ಪೂರ್ಣ ದಾಟಿಬಿಟ್ಟಿದ್ದೆ. ಅಕ್ಷರಶಃ ನನ್ನ ಕೂದಲೂ ಕೊಂಕಲಿಲ್ಲ. ಮೊದಲು ಆತಂಕದ ಭಾವ ಮತ್ತೆ ಬೈಗುಳ, ಎಚ್ಚರಿಕೆಗಳ ಸುರಿಮಳೆ. ಕೊನೇಗೆ ತರಹೇವಾರಿ ನಂಬಿಕೆಗಳ ಮೇಲೆ ಅದೃಷ್ಟದಿಂದ ದೇವರವರೆಗೆ ವಂದನಾರ್ಪಣೆ! ತೀವ್ರ ಏರಿಳಿತಗಳಲ್ಲಿ ನೇರ ಸಾಲು ಹಿಡಿಯಬಾರದು. ನಡೆಯುವಾಗಲೂ ಸೂಕ್ಷ್ಮ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಇತರರ ಚಲನವಲನಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುತ್ತಾ ಮುಂದುವರಿಯಬೇಕು. ಮೋಜಿಗೇ ಆದರೂ ಪ್ರಕೃತಿಯ ನೈಜ ಸಮತೋಲನವನ್ನು ತಪ್ಪಿಸಬಾರದು ಎಂಬಿತ್ಯಾದಿ ಪಾಠಗಳ ಮನನಕ್ಕೆ ಈ ಆಕಸ್ಮಿಕ ಅವಕಾಶ ಮಾಡಿಕೊಟ್ಟದ್ದಂತೂ ಖರೆ.</p>
<p><span id="more-495"></span>ಮುಂದುವರಿದಂತೆ ಪೊದರುಗಳು ವಿರಳ. ಎತ್ತೆತ್ತರದ ಮರ, ಉಂಡುಂಡೆ ಕಾಂಡ. ಇದು ಯಾವ ಜಾತಿಯ ಮರವಪ್ಪಾಂತ ತಲೆ ಎತ್ತಿ ನೋಡಿದರೆ ಆಶ್ಚರ್ಯ. ಕಳ್ಳಿ! (Cactus) ಹೌದು, ಒಣ ಬಯಲಿನ ದಿಬ್ಬದಂಚುಗಳ ರಕ್ಷಕಿ, ಅಲಂಕಾರಿಕ ಉದ್ಯಾನವನಗಳಲ್ಲಿ ಬಳಿಸುಳಿಯಗೊಡದ ವಿಭಿನ್ನ ರೂಪೀ ನರ್ತಕಿ, ಶುದ್ಧ ಮುಳ್ಳಿ. ಮಂದ ಹಸುರಿನ ಚೌಕ ಗೂಟಗಳ ಪುಟಾಣಿ ತುಂಡುಗಳನ್ನು ತುದಿಯಿಂದ ತುದಿಗೆ ಬೆಸೆದಂತೆ, ಆಕಾಶಕ್ಕೇನೋ ಮೊರೆಯಿಡುವ ಕೈಗಳು ಚಾಚಿದಂತೆ, ವಿನಯದಲ್ಲಿ ಮೈಡೊಂಕಿದಂತೆ, ಕೃಷ್ಣನೆದುರಿನ ತ್ರಿವಕ್ರೆಯಂತೆ ಅಕರಾಳ ವಿಕರಾಳ ಭಂಗಿಗಳಲ್ಲಿ ಕಂಡು ಗೊತ್ತಿದ್ದ ಕಳ್ಳಿ, ಇಲ್ಲೇನು ಭಾರೀ ಮರದ ಮೇಲೆ ಸವಾರಿ ಹೊರಟಿದೆಯೇ? ಇಲ್ಲ, ಅದು ಕಳ್ಳಿಯದೇ ಕಾಂಡ, ಹದಿನೈದು ಇಪ್ಪತ್ತಡಿಗೂ ಮಿಕ್ಕು ಎತ್ತರದವರೆಗೂ ಸಾಗುವಾನಿಯಂಥದ್ದೇ ದಿಂಡಿನ ಕಳ್ಳಿಮರ; ಮೇಲೆ ನೋಡಿದರಷ್ಟೇ ಗುಟ್ಟು ರಟ್ಟು! ಅದು ಕಳ್ಳಿಮರಗಳದ್ದೇ ಕಾಡೋ ಎಂಬಷ್ಟು ಮರಗಳ ದಟ್ಟಣೆ. ಇತರ ಹಲವು ಮರ ಮತ್ತು ಅವನ್ನೆಲ್ಲ ಪರಸ್ಪರ ಬಂಧಿಸುವ ತೋರ ಬಳ್ಳಿಗಳೂ ಹೆಣೆದು ಆಕಾಶಕ್ಕಲ್ಲಿ ಅವಕಾಶವೇ ಇರಲಿಲ್ಲ. ಅಲ್ಲಿ ಇಲ್ಲಿ ಓಟೆಯ ಹಿಂಡು, ಬೆತ್ತದ ಹಂಬು ಬಿಟ್ಟರೆ ಕೆಳಸ್ತರದ ಹಸುರು ಅಲ್ಲಿ ತುಂಬಾ ಕಡಿಮೆಯಿತ್ತು. ನುಸುಲು ಮಣ್ಣಿನಲ್ಲಿ ಕಣಿವೆಯತ್ತಣ ಜಾರಿಕೆಯನ್ನು ನಿವಾರಿಸಿಕೊಂಡು ಪಶ್ಚಿಮಕ್ಕೆ ಸರಿದು ಹತ್ತೇ ಮಿನಿಟಿನಲ್ಲಿ ಸ್ತಂಭದ ದಕ್ಷಿಣ ಮೂಲೆಯನ್ನು ತಲಪಿದ್ದೆವು. ಒಟ್ಟಾರೆ ಒಂದೂವರೆ ಗಂಟೆಯ ಶ್ರಮದಲ್ಲಿ ರಂಗನಾಥನ ಚರಣಾರವಿಂದ ಸ್ಪರ್ಷದ ಪುಳಕ ನಮಗೊದಗಿತ್ತು.</p>
<p><strong>ಗಲಿವರನ ಅಳತೆ ಎಲ್ಲಿಂದ?:</strong></p>
<p>ಅಲ್ಲಿ ತೋರುವಂತೆ ಭವಾನಿ ನದಿಕೊಳ್ಳದ ಸುವಿಸ್ತಾರ ದಕ್ಷಿಣ ದಂಡೆಯ ಭಾರೀ ಏಕಶಿಲಾ ಶಿಖರ ನಮ್ಮ ರಂಗನಾಥ. ಕೊಡೈಕೆನಾಲಿನ ಪಿಲ್ಲರ್ ರಾಕಿನ ಭಂಗಿ ಮತ್ತು ಪರಿಸರದಲ್ಲಿ ಬಹುಮಟ್ಟಿಗೆ ಹೋಲುವ ರಚನೆ ಇದು. ಒಂದೇ ವ್ಯತ್ಯಾಸ &#8211; ಅದು ಕುಬ್ಜ, ಇದು ದೈತ್ಯ; ವಾಮನ ತ್ರಿವಿಕ್ರಮ. ಇಲ್ಲಿ ನಮ್ಮೂರಿನ ಹಲವು ಶಿಲಾ ಶಿಖರಗಳು ಸಹಜವಾಗಿ ನೆನಪಿಗೆ ಬರುತ್ತವೆ, ಆದರೆ ಹೋಲಿಕೆ ಸಲ್ಲ. ಜಮಾಲಬಾದ್, ಕೊಡಂಜೆ ಕಲ್ಲು, ಕಾರಿಂಜ ಇತ್ಯಾದಿ ನಮ್ಮ ಕಲ್ಲ ಶಿಖರಗಳು ಸ್ವತಂತ್ರವಾಗಿ ರೂಪುಗೊಂಡವು. ಪ್ರಾಕೃತಿಕ ವೈಪರೀತ್ಯ ಮತ್ತು ಮನುಷ್ಯ ತಿದ್ದುಪಡಿಗಳು ಅವನ್ನು ಪ್ರಭಾವಿಸಿರಬಹುದು. ಆದರೆ ಮೂಲತಃ ಇವು ಬೆಟ್ಟಗಳೇ ಆಗಿದ್ದಿರಬೇಕು. ರಂಗನಾಥ ಸ್ತಂಭ ಹಾಗಲ್ಲ. ಮನುಷ್ಯ ನೆನಪಿನ ಕಿರು ಕಾಲಮಾನಗಳನ್ನು ಮೀರಿದ ದಿನಗಳಲ್ಲೆಲ್ಲೋ ಇದು ಭವಾನಿ ನದಿಯ ದಕ್ಷಿಣ ದಂಡೆಯ ಅವಿಭಾಜ್ಯ ಅಂಶವಾಗಿದ್ದಿರಬೇಕು. ಭೂಕಂಪವೋ ಮೇಘಸ್ಫೋಟವೋ ಈ ಕಣಿವೆಯನ್ನು ತಟ್ಟಿದ್ದಿರಬೇಕು. ಪರಿಣಾಮವಾಗಿ ಸಿಡಿಲ ಮಸೆತ, ನೀರ ಕೊರೆತ, ಭಾರೀ ದಂಡೆ ಕುಸಿತಗಳು ಅಕ್ಷರಶಃ ಇದನ್ನು ಯುದ್ಧ ಭೂಮಿಯಂತಾಗಿಸಿರಬೇಕು. ಆಗ ಈ ಭಾರೀ ಶಿಲಾ ಖಂಡ ಮುಖ್ಯ ಹಾಸಿನಿಂದ ಬೇರ್ಪಟ್ಟದ್ದಿರಬಹುದು, ತುಸು ವಾಲಿದ್ದೂ ಇರಬಹುದು. ಮತ್ತೆ ಸುತ್ತಣ ಮಣ್ಣು, ಸಣ್ಣ ಪುಟ್ಟ ಶಿಲಾ ಹಳಕುಗಳು ತೊಳೆದು ಹೋಗಿ, ಕುಸಿದು ಬಿದ್ದು, ಪ್ರಕೃತಿ ಪ್ರಕಟಿಸಿದ ಮೇರು ಕೃತಿಗೆ ಹೆಸರು ರಂಗನಾಥ ಸ್ತಂಭ. ಮತ್ತಿನ ವರ್ಷಗಳಲ್ಲಿ ಋತುಮಾನಗಳ ಪೆಟ್ಟು, ಜೀವ ಜಾಲಗಳ ಬಂಧ ಅದಕ್ಕೆ ಇಂದಿನ ಸ್ವತಂತ್ರ ನಿಲುವು, ಪ್ರಭೆ ಕೊಟ್ಟಿದೆ. ಕಣಿವೆಯ ತೀವ್ರ ಇಳುಕಲಿನ ಮೈಯಲ್ಲಿ ನಿಂತ ಇದರ ನಿಖರ ಬುಡ ಗುರುತಿಸುವುದು ಕಷ್ಟ. ಅದರ ಉತ್ತರ ಮುಖದ ತಳ ಅಥವಾ ಭವಾನಿ ನದಿಯ ಪಾತ್ರೆಯಲ್ಲೆಲ್ಲೋ ಇದ್ದಿರಬಹುದಾದ ಸ್ತಂಭದ ನಿಜ ಬುಡವನ್ನು ಸ್ಥಾಪಿಸಿ (ಎಷ್ಟು ಸಾವಿರ ಅಡಿಯೋ), ಆರೋಹಣಕ್ಕಿಳಿಯುವುದು ನಮ್ಮ ಉದ್ದೇಶವಲ್ಲ. ನಮ್ಮದೇನಿದ್ದರೂ ನೈಜ ಆರೋಹಣಕ್ಕೆ ಸುಲಭಸಾಧ್ಯವಾದ, ಸಾಧ್ಯವಾದರೆ ಅತ್ಯಂತ ಕಡಿಮೆ ಎತ್ತರದ ಬುಡದಿಂದ ತೊಡಗಿ ಚುರುಕಾಗಿ ಶಿಖರ ಸಾಧಿಸುವುದು ಮಾತ್ರ. ವಾಸ್ತವದಲ್ಲಿ ನಾವು ಹೆಚ್ಚುಕಡಿಮೆ ಶಿಲಾರೋಹಣಕ್ಕೆ ಪ್ರಶಸ್ತವಾದ ಸ್ಥಳವನ್ನೇ ಮುಟ್ಟಿದ್ದೆವು (ದಕ್ಷಿಣ ಕೊನೆಯ ಪೂರ್ವದ ಮಗ್ಗುಲು).</p>
<p><a href="http://lh4.ggpht.com/_XLLsV3Btn2I/TDZ5YRtQepI/AAAAAAAAFcQ/mke58yfb5tU/s640/Bowline.JPG"><img class="alignleft" src="http://lh4.ggpht.com/_XLLsV3Btn2I/TDZ5YRtQepI/AAAAAAAAFcQ/mke58yfb5tU/s640/Bowline.JPG" alt="" width="344" height="258" /></a>ಶಿಲಾರೋಹಣದ ಪ್ರಾಥಮಿಕ ಪಾಠ ಮತ್ತು ನಿಜ ಪ್ರಯೋಗವೆರಡನ್ನೂ ನಮ್ಮಲ್ಲಿ ಅನೇಕರು ಇಲ್ಲೇ ಅನುಭವಿಸುವವರಿದ್ದರು. ವಾಸ್ತವದಲ್ಲಿ ನಾನೊಬ್ಬನೇ ತರಬೇತಾದ ಮತ್ತು ಸ್ವಲ್ಪ ಅನುಭವೀ ಶಿಲಾರೋಹಿ. ಅಭಯ ನನ್ನ ಸಹವಾಸ ದೋಷದಲ್ಲಿ, ದೇವು ಸ್ವತಂತ್ರ ಪ್ರವೃತ್ತಿಯಲ್ಲಿ ಅಲ್ಪಸ್ವಲ್ಪ ಶಿಲಾರೋಹಣ ಅನುಭವವೋ ಮಾಹಿತಿಯೋ ಇದ್ದವರಾದರೂ ಒಟ್ಟಾರೆ ತಂಡದ ಜವಾಬ್ದಾರಿ ನನ್ನೊಬ್ಬನದೇ. ಹಾಗಾಗಿ ಈ ಸಾಹಸಯಾತ್ರೆಗೂ ವಾರದ ಹಿಂದೆ ಮೂಡಬಿದ್ರೆ ಸಮೀಪದ ಕೊಡಂಜೆ ಕಲ್ಲಿಗೊಂದು ಭೇಟಿ ಕೊಟ್ಟಿದ್ದೆವು. ಕನಿಷ್ಠ ಸಲಕರಣೆಯಾದ ರಕ್ಷಣಾ ಹಗ್ಗದ ಪರೀಕ್ಷೆಯಿಂದ ತೊಡಗಿ ಉಪಯುಕ್ತ ಗಂಟುಗಳು ಮತ್ತವುಗಳನ್ನು ಬಳಸುವ ಕ್ರಮಗಳನ್ನು ಅಭ್ಯಸಿಸಿದ್ದೆವು. Bow line ಅಥವಾ endman (ಹೆದೆಯನ್ನು ಕೊಪ್ಪಿಗೆ ಸಿಕ್ಕಿಸುವ) ಗಂಟು ಹಗ್ಗದ ಒಂದು ತುದಿ ಬಳಸಿ ಹಾಕುವಂಥದ್ದು; ಇದು ಮುಂದಾಳಿಗೆ ಅಥವಾ ಕೊನೆಯಾಳಿಗೆ. ಮತ್ತೆ ಹಗ್ಗದ ಉದ್ದದಲ್ಲಿ ಎಲ್ಲೂ ತೊಡರಿಸಿಕೊಳ್ಳಬಹುದಾದ ಗಂಟು middleman ಅವಶ್ಯಕತೆ ಮತ್ತು ಅನುಕೂಲ ನೋಡಿಕೊಂಡು ಎಷ್ಟೂ ಜನರನ್ನು ಪೋಣಿಸುತ್ತದೆ &#8211; ಇವು ಶಿಲಾರೋಹಿಗೆ ರಕ್ಷಣೆಯ ದೃಷ್ಟಿಯಲ್ಲಿ ಅವಶ್ಯ.  ಇದರ ಕಲಿಕೆ, ಬಳಕೆ ಪಾಠಗಳೊಡನೆ ಅಂದು ಸುಮಾರು ನಾನೂರಡಿ ಎತ್ತರದ ಕೊಡಂಜೆ -ಕೋಡುಗಲ್ಲನ್ನು ನಾವು ಏರಿದ್ದೆವು. ಬಂಡೆಗೆ ಕೈ, ಕಾಲು ಉಜ್ಜಿ ಬಿಸಿಲಿಗೆ ಬಸವಳಿದಿದ್ದೆವು, ಚಿಮಣಿಯಲ್ಲಿ (ಮುಂದೆ ವಿವರಿಸುತ್ತೇನೆ) ದೇಹ ತೂರಿ, ತೇಕಿ ದಣಿದಿದ್ದೆವು. ಆ ಪಾಠಗಳ ಕಡತವನ್ನೇ ಬಿಚ್ಚಿದಂತೆ ರಂಗನಾಥನ ಪಾದಮೂಲದಲ್ಲಿ ನಾನು ಹಗ್ಗದ ಸುರುಳಿ ಬಿಚ್ಚಿ, ಒಂದು ಕೊನೆಯನ್ನು ನನ್ನದೇ ಸೊಂಟಕ್ಕೆ ಬಿಗಿದೆ.</p>
<p>ಸ್ತಂಭದ ಒಂದು ಸಣ್ಣ ಕೊರಕಲಿನ, ಸಣ್ಣ ಚಡಿಯಲ್ಲಿ ನಾನು ಮೊದಲ ಹೆಜ್ಜೆ ತೊಡಗಿಸುವಾಗ ಗಂಟೆ ಒಂಬತ್ತು. ನನ್ನ ಕೈ ಹಿಡಿಕೆಗಳು, ಊರುವ ಹೆಜ್ಜೆಗಳು, ಮೈಯ್ಯ ಭಂಗಿ ಹಿಂದಿನವರಿಗೆ ಸುಲಭ ಅನುಸರಣೆಗೂ ಒದಗುವಂತೆ ನೋಡಿಕೊಂಡು ಏರಿದೆ. ಹತ್ತು ಮಾತುಗಳಿಗಿಂತ ಒಂದು ನಿದರ್ಶನ ಲೇಸು. ಸುಮಾರು ನಲವತ್ತು ವರ್ಷಗಳ ಹಿಂದೆ (೧೯೭೦), ದಖ್ಖಣ ಪರ್ವತಾರೋಹಣ ಸಂಸ್ಥೆಯ ಸ್ಥಾಪಕ, ಶಿಲಾರೋಹಣ ತಂತ್ರ ನಿಪುಣ, ನನ್ನ ಗುರು ಗೋವಿಂದರಾಜರು ನೀಡಿದ ಕ್ರಮಪಾಠ ನನ್ನ ಸ್ಮರಣೆಯಲ್ಲಿ ಸ್ಪಷ್ಟವಿತ್ತು. ರಕ್ಷಣೆಯ ಹಗ್ಗ ಸೊಂಟದಲ್ಲಿ ಉಸಿರು ಕಟ್ಟಿಸದಷ್ಟು ಸಡಿಲ, ಜಾರಿ ಎದೆಗೆ ಏರದಷ್ಟು ಬಿಗಿಯಿತ್ತು. ಆರೋಹಣ ಸಮಯದಲ್ಲಿ ಅದು ಕೈಕಾಲುಗಳಿಗೆ ತೊಡರದಂತೆ, ಅದರ ಚಾಚಿಕೆ ರಕ್ಷಕನ ದಿಕ್ಕು ತಪ್ಪದಂತೆ ನಿಭಾವಣೆ ಮುಖ್ಯ. (ಅರೆ, ಆಕಾಶ ಏನು ನೋಡ್ತೀರಿ, ಇದು ಅಧ್ಯಾತ್ಮ ಪಾಠವಲ್ಲ ಸ್ವಾಮೀ! ಮೇಲಿರುವವನು ಸಹ ಆರೋಹಿ!)  ನಿಲುಕದ ಹಿಡಿಕೆಗಳಿಗೆ ತಿಣುಕದ, ಒದಗಿದ ನೈಜ ಚಡಿ, ಸಂದು, ದಿಬ್ಬಗಳನ್ನು ಗರಿಷ್ಠ ಪ್ರಯೋಜನಕ್ಕೆ ಬಳಸುವ ಸಂಯಮ, ಜಾಣ್ಮೆ ಇಲ್ಲಿ ನಿಜ ಪ್ರಗತಿಯ ಮೆಟ್ಟಿಲು. ನಮ್ಮ ಎರಡು ಪಾದ ಮತ್ತೆರಡು ಹಸ್ತಗಳ ಬಳಕೆಯಲ್ಲಿ ಆದಷ್ಟು ಮೂರು ಸಂಪರ್ಕಗಳು ಗಟ್ಟಿಯಿರಲೇ ಬೇಕು. ಕಾಲು ಕತ್ತರಿ ಹಾಕದ, ಬಂಡೆಗೆ ಮೈ ಚಾಚದ ಓತಿ ನಡೆಯೇ ಶುದ್ಧ. ಇಳಿಯುವ ತ್ರಾಣವನ್ನು ಠೇವಣಿಯಂತೆ ಉಳಿಸಿ, ಏರಿಕೆಗೆ ಬಡ್ಡಿಯನ್ನಷ್ಟೇ ಬಳಸಿ. ಇದ್ದ ಎಲ್ಲಾ ಶಕ್ತಿ ಬಳಸಿ ಏರುವುದು ಕ್ರೀಡಾಭಾವವಲ್ಲ; ಆತ್ಮಹತ್ಯಾ ದೋಷ! ಏರುವುದು ದಿಬ್ಬವೇ ಆದರೂ ಛಲ ಮತ್ತು ಪ್ರಯತ್ನ ಗುಡ್ಡದಷ್ಟು, ಶಿಸ್ತು ಮತ್ತು ವಿನಯ ಬೆಟ್ಟದಷ್ಟಾದರೆ ಗಳಿಕೆ ಪರ್ವತ ಶ್ರೇಣಿಯಷ್ಟು ನಿಶ್ಚಯ. ಅಂಥವರಿಗೆ ಉಳಿಯುವುದು ಎರಡೇ ಬಂಡೆ. ಒಂದು ಏರಿದ್ದು, ಇನ್ನೊಂದು ಏರದ್ದು, ಏರಲಾಗದ್ದು ಇಲ್ಲ.</p>
<p>ಸುಮಾರು ಐವತ್ತಡಿ ಎತ್ತರದಲ್ಲಿ ಸುಮಾರು ಮೂರ್ನಾಲ್ಕು ಮಂದಿಗೆ ನಿಂತು ವಿರಮಿಸಬಹುದಾದ ಸ್ಥಳ ಕಾಣಿಸಿತು. ಅಲ್ಲಿ ನಾನು ದೃಢವಾಗಿ ಕುಳಿತು, ಎಳೆದೊಯ್ದ ಹಗ್ಗವನ್ನು ರಕ್ಷಣಾತ್ಮಕವಾಗಿ ನಿಯಂತ್ರಿಸುತ್ತ ಕೆಳಗಿನೊಬ್ಬರಿಗೆ ಏರಲು ಸೂಚನೆ ಕೊಟ್ಟೆ. ಆತ ನಾನೆಳೆದ ಹಗ್ಗದಲ್ಲೊಂದು middle man ಅಥವಾ thumb knot on the bite ಹಾಕಿ, ತನ್ನನ್ನು ಅದಕ್ಕೆ ತೊಡರಿಸಿಕೊಂಡು ಏರತೊಡಗಿದ. ಎಡ ಮೊಣಕಾಲೆತ್ತರದ ಕಿರು ಒಡಕಿನಲ್ಲಿ ಎಡ ತುದಿಗಾಲನ್ನು ಸಿಕ್ಕಿಸಿ, ಬಲಭುಜದ ಮೇಲಕ್ಕಿದ್ದ ಕಲ್ಲ ಚಡಿಗೆ ಕೈಯುದ್ದ ಮಾಡಿ ನಾಲ್ಕೂ ಬೆರಳುಗಳ ಒಗ್ಗಟ್ಟಿನಲ್ಲಿ ಜಿಗುಟಿ ಹಿಡಿದು, ಬಲಗಾಲಿನಿಂದ ನೆಲ ಚಿಮ್ಮಿದ. ಈಗ ಮೊದಲೇ ಕಂಡುಕೊಂಡಿದ್ದ ಕಲ್ಲುಬ್ಬೊಂದನ್ನು ಎಡಗೈಯಲ್ಲಿ ಬಾಚಿ ಅವುಚಿಕೊಂಡು ಬಲಗಾಲಿಗೊಂದು ಎತ್ತರದ ನೆಲೆ ಕಾಣಿಸಿದ. ಹೀಗೆ ಒಂದೊಂದೇ ಹಿಡಿಕೆ, ತುಳಿಕೆಗಳಲ್ಲಿ ಆತ ಮೇಲೆ ಬರುತ್ತಿದ್ದಂತೆ ನಮ್ಮ ನಡುವೆ ಸಡಿಲ ಬೀಳುತ್ತಿದ್ದ ಹಗ್ಗವನ್ನಷ್ಟೇ ನಾನು ಎಳೆದೆಳೆದು ಬಿಗಿ ಮಾಡಿಕೊಳ್ಳುವುದೂ ನಡೆದೇ ಇತ್ತು. ಇದರಿಂದ ಆತ ಯಾವುದೇ ಹಂತದಲ್ಲಿ ಕಾಲು ಜಾರಿಯೋ ಹಿಡಿಕೆ ಕಿತ್ತುಹೋಗಿಯೋ ಕೆಳಕ್ಕೆ ಉರುಳುವ ಆಕಸ್ಮಿಕವೊದಗಿದರೆ, ಇದ್ದಲ್ಲೇ ಒಂದೆರಡು ಅಡಿಗಳ ಅಂತರದಲ್ಲೇ ಹಗ್ಗದಲ್ಲಿ ನೇಲುತ್ತಾನೆ. ಖಂಡಿತವಾಗಿಯೂ ನೆಲಕ್ಕಪ್ಪಳಿಸಿ ಹೋಗುತ್ತಿರಲಿಲ್ಲ. ಇದನ್ನು ಗಂಭೀರವಾಗಿ ಗಮನಿಸದ ಸಾಮಾನ್ಯರು ಶಿಲಾರೋಹಣ ಅಥವಾ rock climbingನ್ನು rope climbing ಎಂದೇ ತಪ್ಪು ತಿಳಿದುಬಿಡುತ್ತಾರೆ. ಇದಕ್ಕೆ ಪೂರಕವಾಗಿ ಐತಿಹಾಸಿಕ ಕಥೆ, ಸಿನಿಮಾಗಳಲ್ಲೂ ಬಾಚುಮುಳ್ಳಿನ ಉಂಗುರಕ್ಕೋ ಉಡದ ಬಾಲಕ್ಕೋ ಹಗ್ಗ ಬಿಗಿದು ಭಾರೀ ಹಡಗಿಗೆ ಏರಿ ಹೋಗುವುದು, ಎತ್ತೆತ್ತರದ ಕೋಟೆಗೆ ಲಗ್ಗೆ ಹಾಕುವುದು ಹೆಚ್ಚಿನವರ ನೆನಪಿನಕೋಶದಲ್ಲಿ ಇರುವುದೂ ತಪ್ಪಲ್ಲ! ನೈಜ ಶಿಲಾರೋಹಣ ಅಭ್ಯಾಸಕ್ಕೆ ಸಾಮಾನ್ಯರಿಗೂ ಒಲಿಯುವ ಸಾಹಸ ಕ್ರೀಡೆ; ಅಮಾನುಷ ಸಾಧನೆ, ಚಮತ್ಕಾರ ಖಂಡಿತ ಅಲ್ಲ. ಒಟ್ಟಾರೆ ಅನುಭವ ಮತ್ತು ದೈಹಿಕ ಮಿತಿಯೊಳಗೆ ಮಾಡುವ ಯಾವುದೇ ನೈಜ ಶಿಲಾರೋಹಣದಲ್ಲಿ ಹಗ್ಗ ಕೇವಲ ಮಾನಸಿಕ ದೃಢತೆಗೆ ಬಳಕೆಯಾಗುತ್ತದೆ. ಪರಿಸ್ಥಿತಿಯ ಅನಿವಾರ್ಯತೆಗಳಲ್ಲಿ, ಆಕಸ್ಮಿಕಗಳಲ್ಲಿ ಹಗ್ಗದ ಪೂರ್ಣ ಬಳಕೆಯಾಗುವುದು ನಿಜವೇ ಆದರೂ ಇದು ನಿಜ ಕ್ರೀಡಾ ಸಾಧನೆಯಲ್ಲ.</p>
<p>ಮೊದಲು ಪ್ರಸನ್ನ ಮತ್ತೆ ದೇವು ಬಂದರು. ನಾಲ್ಕನೆಯವರಿಗೆ ಅಲ್ಲಿ ಜಾಗ ಸಾಕಾಗದೆಂದು ನಾನು ಮತ್ತೂ ಮೇಲಿನ ಹಂತಕ್ಕೆ ಹಗ್ಗ ಎಳೆದುಕೊಂಡು ಏರಿದೆ. ಈಗ ಎರಡನೆಯವನು ದೃಢವಾಗಿ ನೆಲೆಸಿ (ಸ್ಥಳಾನುಕೂಲದಲ್ಲಿ ನಿಂತೋ ಕುಳಿತೋ), ನನ್ನ ಏರುಜಾಡನ್ನು ತನ್ನ ಮನಸ್ಸಿನಲ್ಲಿ ದಾಖಲಿಸಿಕೊಳುತ್ತಾ ಹಗ್ಗವನ್ನು ಕೊಡುತ್ತಾ ಪರೋಕ್ಷವಾಗಿ ನನಗೆ ರಕ್ಷಣೆಯನ್ನು ಕೊಡುವುದೂ ನಡೆಯುತ್ತದೆ. ಅದೇ ಸಮಯದಲ್ಲಿ ಮೂರನೆಯವನು ನಾಲ್ಕನೆಯವನನ್ನು ಹೀಗೇ ಏರಿಸಿಕೊಳ್ಳುತ್ತಿರುತ್ತಾನೆ. ತಂಡದಲ್ಲಿ ತರಬೇತಾದವರ ಸಂಖ್ಯೆ ಮತ್ತು ಹಗ್ಗಗಳು ಹೆಚ್ಚಾದಷ್ಟೂ ಒಂದು ಬಿಟ್ಟು ಒಂದರಂತೆ ಆರೋಹಿಗಳ ಸಂಖ್ಯೆ ಏರುತ್ತದೆ, ಕಂಬಳಿ ಹುಳುವಿನ ಚಲನೆಯಂತೆ ಪ್ರಗತಿ ಚುರುಕಾಗುತ್ತದೆ. (ನಮ್ಮಲ್ಲಿ ನೂರಡಿ ಮತ್ತು ಇನ್ನೂರಡಿಯ ಒಂದೊಂದು ಹಗ್ಗಗಳಿದ್ದವು.) ಆದರ್ಶಗಳ ಮಾತಂತಿರಲಿ, ನಮ್ಮ ಕಥೆ ಮುಂದೇನಾಯ್ತೂಂತ ಸ್ವಲ್ಪ ಅವರವರ ಮಾತಿನಲ್ಲೇ ಕೇಳಿ.</p>
<p><a href="http://lh4.ggpht.com/_XLLsV3Btn2I/TBrMm7h6vDI/AAAAAAAAFVA/CPOGPRNjjKA/s720/1.jpg"><img class="alignleft" src="http://lh4.ggpht.com/_XLLsV3Btn2I/TBrMm7h6vDI/AAAAAAAAFVA/CPOGPRNjjKA/s720/1.jpg" alt="" width="347" height="231" /></a>ನೆನಪಿನ ಹೊರೆಯಲ್ಲಿ ಬಳಲಿದ ದೇವಕಿ: ದೇವಕಿ ನನ್ನಷ್ಟೇ ರಂಗನಾಥ ಸ್ತಂಭದ ಮಾಹಿತಿ ಇದ್ದವಳು ಎನ್ನುವುದು ನಿಮಗೂ ಗೊತ್ತು. ಆದರೆ ಶಿಲಾರೋಹಣದ ತುಡಿತ ಮಾತ್ರ ವ್ಯತಿರಿಕ್ತವಾಗಿತ್ತು. ಆಕೆಯ ಉಜಿರೆಯ ಕಾಲೇಜು ದಿನಗಳಲ್ಲಿ ಜಮಾಲಾಬಾದ್ ಮೆಟ್ಟಿಲೆಣಿಸಿದ್ದೊಂದೇ ಸಾಧನೆ. ನಮ್ಮ ವಿವಾಹದಿಂದೀಚೆಗೆ (೧೯೮೦) ನನ್ನ ಸಾಹಸ ಪ್ರವಾಸಗಳೆಲ್ಲದರಲ್ಲೂ ಆಕೆ ಅನಿವಾರ್ಯ ಸಂಗಾತಿ. ಆದರೆ ಪ್ರಪಾತದಂಚಿನಲ್ಲಿ ಕೊಳ್ಳ ಹಣಿಕುತ್ತಾ ಎತ್ತರಗಳನ್ನು ಸಾಧಿಸುವುದರಲ್ಲಿ ಆಕೆಗೆ ಸಣ್ಣ ಮಾನಸಿಕ ತಡೆಯಿತ್ತು (ಎತ್ತರದ ಭೀತಿ &#8211; vertigo). ಕುದುರೆಮುಖ ಶಿಖರದಲ್ಲಿ ನಿಂತು ಬೆಳ್ತಂಗಡಿ ವೀಕ್ಷಿಸಿ ಈಕೆ ಸಂತೋಷಿಸಬಲ್ಲಳು. ಆದರೆ ಮನೆಯ ಒಂದೇ ಮಹಡಿಯ ಅಂಚುಗಟ್ಟೆ ಏರಿ ಟೀವೀ ಆಂಟೆನ್ನಾ ತಿರುಗಿಸುತ್ತಾ ನೇರ ಅಂಗಳ ದಿಟ್ಟಿಸಲಾರಳು. ಅನಿವಾರ್ಯತೆಯಲ್ಲಿ ಭಯ ಹತ್ತಿಕ್ಕಿ ದೇವಕಿ ಗುರಿ ಸಾಧಿಸಿದ ನಿದರ್ಶನಗಳು ಹಲವಿವೆ. ಆದರೆ ಅದಕ್ಕೆ ತಾನು ತೆಗೆದುಕೊಂಡ ಇತರರ ಸಮಯ ಮತ್ತು ಸಹನೆಯ ಬಗ್ಗೆ ವಿಷಾದವೂ ಇದೆ. ಎಲ್ಲಕ್ಕೂ ಮುಖ್ಯವಾಗಿ ಆ ಸಾಧನೆಗಳು ಅವಳಿಗೆಂದೂ ಸವಿನೆನಪಿನ ಭಾಗವಾಗುವುದೇ ಇಲ್ಲ! (ಇಲ್ಲಿ ಅನುಭವದ ನೆನಪೇ ಸಿಹಿ ಎನ್ನುವ ಗಾದೆ ಸುಳ್ಳಾಗುತ್ತದೆ; ಛೆ, ವೇದದ ಗತಿ?) ಈಚೆಗೆ ನಾನು ರಂಗನಾಥ ಸ್ತಂಭದ ಮರುಜಪಕ್ಕಿಳಿದೊಡನೆ ಆಕೆ ತಾನು ‘ತಳಶಿಬಿರಾಧಿಪತಿ’ ಎಂದು ಪುರಶ್ಚರಣೆ ಆರಂಭಿಸಿದ್ದಳು. ಹಾಗಾಗಿ ಮಂಗಳೂರು ಬಿಟ್ಟಂದಿನಿಂದ ನಾನಂತೂ ದೇವಕಿಗೆ ಒತ್ತಾಯಿಸುವ, ಮಂಕುಮಾಡುವ, ನೆನಪಿಸುವ ಕೆಲಸವನ್ನೇನೂ ಮಾಡಲಿಲ್ಲ. ಆ ಬೆಳಿಗ್ಗೆ ಆಕೆ ಪೂರ್ಣ ಉಮೇದಿನಲ್ಲಿ ಮತ್ತು ಯಾರಿಗೂ ಕಡಿಮೆಯಿರದ ತಾಕತ್ತಿನಲ್ಲೇ ಸ್ತಂಭದ ಬುಡದವರೆಗೂ ಹೆಜ್ಜೆ ಹಾಕಿದ್ದಳು. ಇನ್ನು ಯಾರಿಗೆ ಗೊತ್ತು, ಅದೇ ಸ್ತೋಮ ಪ್ರಜ್ಞೆಯಲ್ಲಿ ಬಂಡೆ ಏರಿಯೂ ಬಿಟ್ಟರೆ ಯಾಕೆ ಬೇಡ ಎಂಬುದು ನನ್ನ ಮೌನದ ಗುಟ್ಟು. ಆದರೆ ನಾನು ಮೂರನೇ ಹಂತದಲ್ಲಿದ್ದಾಗ ಅಭಯನಿಂದ ಸುದ್ದಿ ಬಂತು, “ಅಮ್ಮ ರಿಟಾಯರ್ ಆಗಿದ್ದಾಳೆ.” ಹಾಗಾದರೆ ದೇವಕಿ ಬಂದದ್ದು ಯಾಕೆ? ಅವಳ ಮಾತಿನಲ್ಲೇ ಕೇಳಿ.</p>
<p>“ಈ ಬಾರಿ ನಾನು ಮಂಗಳೂರಿನಲ್ಲೇ ಉಳಿದುಬಿಡುವುದಾಗಿ ನಿರ್ಧರಿಸಿದ್ದೆ. ಆದರೆ ಆ ಬಂಡೆಯ ಗಾತ್ರವನ್ನು ನೆನೆಸಿದಾಗೆಲ್ಲಾ ಅಶೋಕ್ ಮತ್ತು ಅಭಯರನ್ನು ಮಾತ್ರ ಹೋಗಲು ಬಿಟ್ಟು ತಣ್ಣಗೆ ಕೂರಲು ಮನಸ್ಸು ಕೇಳಲಿಲ್ಲ. ನಾನು ಬಂಡೆ ಏರುವುದಿಲ್ಲ ಎಂದು ನಿರ್ಧರಿಸಿಕೊಂಡೇ ತಂಡ ಸೇರಿಕೊಂಡೆ. ಬಸ್ಸೇರಿ ಮೈಸೂರಿನಲ್ಲಿ ಅತ್ತೆ ಮನೆ ಸೇರಿದಾಗ ಸಂಭ್ರಮದ ವಾತಾವರಣದಲ್ಲಿ ನಾನೂ ಕ್ರಿಯಾಶೀಲ ಸದಸ್ಯೆಯೇ ಸರಿ ಎನ್ನುವಂತಾಗಿತ್ತು. ಮುಂದೆ ದಾರಿ ಸವೆದಂತೆಲ್ಲಾ ನೀಲಗಿರಿ ಶ್ರೇಣಿಯನ್ನು ಕಣಿವೆಯ ಅಂಚುಗಳಲ್ಲೂ ನಮ್ಮ ಸುಮೋ ಅಂಕಾಡೊಂಕಿ ಏರಿ ಭಾರೀ ಶಿಖರಗಳನ್ನು ಸಣ್ಣ ಮಾಡುತ್ತಿದ್ದಂತೆ ನನಗೇನು ಅನುಭವ ಕಡಿಮೆಯೇ ಎಂಬ ಭಾವ ಬಲಿಯಿತು. ನೆನಪು ಆಯುತ್ತದೆ.</p>
<p><a href="http://lh6.ggpht.com/_XLLsV3Btn2I/TBrMnfJaJwI/AAAAAAAAFVQ/dCzswG9vDF4/s720/5.jpg"><img class="alignleft" src="http://lh6.ggpht.com/_XLLsV3Btn2I/TBrMnfJaJwI/AAAAAAAAFVQ/dCzswG9vDF4/s720/5.jpg" alt="" width="346" height="232" /></a>“ಆನಂದ ಸಾಧಿಸಿದ್ದನ್ನು ನಾನು ಹೆಂಡತಿಯೊಡನೆ ಸಾಧಿಸುತ್ತೇನೆ’ ಎಂಬ ಛಲದಲ್ಲಿ ಹಿಂದೊಮ್ಮೆ ದಕ್ಷಿಣ ಭಾರತ ಬೈಕ್ ಪ್ರವಾಸದಲ್ಲಿ ಅಶೋಕ್ ನನ್ನನ್ನು ಇಲ್ಲಿಗೆ ತಂದಿದ್ದರು (೧೯೮೫). ನಮಗಿಬ್ಬರಿಗೂ ತಂಡದ ಇತರರಿಗೂ ರಂಗನಾಥ ಸ್ತಂಭದ ಪ್ರಥಮ ದರ್ಶನವದು. ನಮ್ಮ ಕೋತಗೇರಿಯ ಗೆಳೆಯರಾದ ಶೋಭಾ, ವರ್ಮ ದಂಪತಿ ಆ ದಿನದ ಆತಿಥೇಯರು ಮಾತ್ರವಲ್ಲ, ತಮ್ಮ ಪುಟ್ಟ ಸ್ಯಾಲಿಯೊಡನೆ (ಮಗಳು) ವೀಕ್ಷಕರಾಗಿಯೂ ಬಂದಿದ್ದರು. ಆರೋಹಣ ತಂಡದ ಇತರ ಇಬ್ಬರು ಸದಸ್ಯ &#8211; ಅರವಿಂದ ರಾವ್ ಮತ್ತು ಬಾಲಕೃಷ್ಣರೊಡನೆ ಕಾಡುನುಗ್ಗಿ, ಕಣಿವೆಗಿಳಿದು, ದಿಕ್ಕು ಆಯ್ದು, ಬಂಡೆಯ ಮೈಯಲ್ಲಿ ತೊಡಗಿಕೊಳ್ಳುವವರೆಗೆ ನನ್ನ ವಿಶ್ವಾಸಕ್ಕೇನೂ ಕೊರತೆಯಿರಲಿಲ್ಲ. ನಾನು ಸ್ವಲ್ಪ ನಿಧಾನಿ. ಅಶೋಕ್ ನನಗಾಗಿ ಹಿಂದೆ ಉಳಿದಿದ್ದರು. ಯಾವುದೋ ಅಸಂಖ್ಯ ಶಾಖೆಯ ಮರ ಏರಿ, ಬಂಡೆಗೆ ವರ್ಗಾವಣೆಯೇನೋ ಸುಲಭವಾಗಿ ಪಡೆದೆವು. ಸಣ್ಣ ಕೊರಕಲಿನೊಳಗೆ ಬಿರುಕು, ಉಬ್ಬು ಆರಿಸುತ್ತ ಸುಮಾರು ನೂರು ನೂರೈವತ್ತು ಅಡಿ ಹತ್ತಿ ಹೊರಮೈ ಅಂಚಿಗೆ ಹೊರಳಿದೆ. ಅಬ್ಬಾ! ನೂರಾರು ಅಡಿ ಆಳದ ಕೊಳ್ಳ ಒಮ್ಮೆಲೇ ನನ್ನ ಪಾದಮೂಲದಲ್ಲೇ ಎನ್ನುವಂತೆ ತೆರೆದುಕೊಂಡಿತು. ನನ್ನ ಮನಸ್ಸಿನ ಉತ್ಸಾಹದ್ರವ ಹಿಂಡಿ ಹೋಗಿ ನಾನು ಭಯದ ಹಿಪ್ಪೆಯೇ ಆದೆ. ಮತ್ತೆ ಅಶೋಕ್‌ನ ಯಾವುದೇ ಮಾತು ನನಗೆ ಮುಂದುವರಿಯಲು ಪ್ರೇರಣೆ ಕೊಡಲಿಲ್ಲ. ಕೊಳ್ಳಕ್ಕೆ ಬೆನ್ನು ಹಾಕಿ ಮತ್ತೆ ಕೊರಕಲಿನಲ್ಲಿ ಇಳಿಯಹೊರಟರೂ ಕಣ್ಣ ಮುಂದೆ ನನ್ನನ್ನು ನುಂಗುವ ಆಳವೇ ಗಟ್ಟಿ ನಿಂತು, ಅಂದು ಅಶೋಕ್‌ನನ್ನು ಸಾಕಷ್ಟು ಸತಾಯಿಸಿದ್ದೆ. ಆದರೂ ನೆನಪು ಆಯುತ್ತದೆ.</p>
<p>“ಕಳೆದ ಹದಿನಾಲ್ಕು ವರ್ಷಗಳ ಸಾಹಸಯಾನಗಳ ಗೆಯ್ಮೆಯಲ್ಲಿ ನನ್ನ ಅನುಭವದ ಕೊಡಕ್ಕೆ ಸೇರ್ಪಡೆಯೇ ಹೆಚ್ಚು. ಜ್ಞಾನ (ವೃದ್ಧಾಪ್ಯ?) ಪ್ರೌಢಿಮೆಯಲ್ಲಿ ನಾನು ಅಶೋಕ್‌ಗೆ ಎರಡನೆಯವಳು. ಕಳೆದ ಮೇಯಲ್ಲಿ ಒಟ್ಟಾರೆ ಊಟಿ ದರ್ಶನದಲ್ಲಿ ಇಲ್ಲಿಗೂ ಭೇಟಿಕೊಟ್ಟಿದ್ದೆವು. ರಂಗನಾಥ ಮಂಜಿನ ಮುಸುಕಿನೊಳಗಿದ್ದ. ‘ಎಲ್ಲಿರುವೆ ರಂಗನಾಥಾಆಆಆಆಆಆಆ’ ಎಂದು ಕಣಿವೆ ಪ್ರತಿಧ್ವನಿಸುವಂತೆ ಬೊಬ್ಬಿಟ್ಟೆವು. ಆತನಿಗೆ ಕೇಳಿಸಿರಬೇಕು. ಧುತ್ತನೆ ಸ್ತಂಭ ಮೈದೋರಿ, ನುಡಿದಂತಾಗಿತ್ತು ‘ಇಕೋ ಇಲ್ಲಿ! ನಾನಿರುವ ಎತ್ತರಕ್ಕೆ ನೀನೇರಬಲ್ಲೆಯಾ?’ ಅಂದಿನ ಕಾರ್ಯಕ್ರಮ ಪಟ್ಟಿಯಲ್ಲಿ ಅಷ್ಟು ದೊಡ್ಡ ಸವಾಲಿಗೆ ಜವಾಬು ಕೊಡಲು ಸಮಯವಿರಲಿಲ್ಲ. ಶೀಘ್ರದಲ್ಲೇ ಇನ್ನೊಮ್ಮೆ ಬಂದು ಉತ್ತರ ಕೊಟ್ಟೇವು ಎಂದು ತಂಡ ನಿರ್ಧರಿಸಿದಾಗ ನನ್ನ ಅನುಮೋದನೆಯೂ ಇತ್ತು; ಹಳೆಯ ಸೋಲಿಗೆ ಮಂಜು ಮುಸುಕಿತ್ತು. ಹಾಗೇ ಈ ಬಾರಿ ಬಂಡೆಯ ಬುಡದವರೆಗೂ ಮುಂದುವರಿದೆ. ಆದರೆ ಕಲ್ಪಿತ ದೃಢತೆ ಕನಿಷ್ಠ ಎಂಟ್ನೂರಡಿ ಖಾಚಿತ್ಯದೆದುರು ಕರಗಿಹೋಯ್ತು. ಆಳ ದಿಟ್ಟಿಸುವ ಭಯ &#8211; ಸ್ವಭಾವ, ಜಾಗ್ರತವಾಯ್ತು. ಅಭಯನ ಇನ್ನಿಲ್ಲದಂತೆ ಒತ್ತಾಯಿಸಿದ. ಅಶೋಕ್ ವಾಪಾಸ್ ಬಂದು ಬೆನ್ನಿಗೆ ನಿಂತಿದ್ದರೂ ಬದಲದ ಮಾನಸಿಕ ತಡೆಯಿಂದ ನಾನು ಹಿಂದುಳಿದೆ.”</p>
<p><strong>ಮತ್ತಷ್ಟು ಹತಪ್ರಭೆಗಳು:</strong> ಜೊನಾಸ್ ಕೆಲವು ವರ್ಷಗಳ ಹಿಂದೆ ಮಂಗಳೂರಿನಲ್ಲೇ ಇದ್ದಾಗ ನಮ್ಮೊಡನೆ ಒಂದೆರಡು ಚಾರಣ ಕಾರ್ಯಕ್ರಮಗಳಿಗೆ ಬಂದಿದ್ದರು. ಅವರ ದೈಹಿಕ, ಮಾನಸಿಕ ಒಲವುಗಳು ನಮ್ಮದೇ ಸ್ತರದಲ್ಲಿದ್ದರೂ ಆರ್ಥಿಕ ಪಾರತಂತ್ರ್ಯ ಹೆಚ್ಚಿನ ಚಟುವಟಿಕೆಗಳಿಗೆ ಕಡಿವಾಣ ಹಾಕಿತ್ತು. ಈಚೆಗೆ ಕರಿಚಿನ್ನದ ನಾಡು (ಗಲ್ಫ್ ದೇಶ) ಸೇರಿದ್ದವರು, ಗೃಹಸ್ಥನಾಗುವ ಯೋಚನೆಯೊಡನೆ ರಜೆಯಲ್ಲಿ ಬಂದಿದ್ದರು. ನಾನು ಊಟಿ ಎಂದಾಗ ಸಹಜವಾಗಿ ಅವರ ತಲೆ ಓಡಿದ್ದು ಮಧುಚಂದ್ರದ ಯೋಜನೆಗೆ! ಹೆಚ್ಚೆಚ್ಚು ಚಾರಣ ಮಾಡಬೇಕೆಂಬ ಮೂಲ ಪ್ರವೃತ್ತಿಯ ಪೋಷಣೆಯ ಆಸೆಗೂ ಮಿಗಿಲಾಗಿ ಭಯವೂ ಇವರನ್ನು ಒಮ್ಮೆ ವಿಚಲಿತಗೊಳಿಸಿತಂತೆ. ಆದರೆ ಇಲ್ಲಿ ಜಾಣಾ’s (Jonas’ ಎಂಬರ್ಥದಲ್ಲಿ?) ಮನಸ್ಸು ಮದುವೆಯೋತ್ತರದ ಯೋಜನೆಯನ್ನೇ ಬೆಳೆಸಿತು. ಬಿಡುವುಂಟು. ಸಣ್ಣ ಖರ್ಚು ಮತ್ತು ಶ್ರಮದಲ್ಲಿ ಸಾಹಸಾನುಭವ ದಕ್ಕಿದರೆ ಯಾಕೆ ಬೇಡ? ಕಷ್ಟವಾದರೆ ಹತ್ತದುಳಿದ. ಮಧುಚಂದ್ರಕ್ಕೆ ಊಟಿ ಹೇಗೆ ಎಂದು ನೋಡಿ ಅಂದಾಜಿಸುವ ಮಟ್ಟದಲ್ಲಿ ನಷ್ಟವಿಲ್ಲ! ಜೊನಾಸ್ ಇಂಗಿತ ನನಗೆ ಮೊದಲೇ ಸ್ಪಷ್ಟವಾಗಿತ್ತು. ಸಾಲದ್ದಕ್ಕೆ ಕೆಲವೇ ದಿನಗಳ ಮೊದಲು ಇವರ ವೃತ್ತಿ ಸಂಬಂಧದಲ್ಲಿ ಯಾವುದೋ ರಾಸಾಯನಿಕ ಇವರ ಕೈಗೆ ಹತ್ತಿ, ತೀವ್ರ ಹುಣ್ಣುಗಳಾದದ್ದು ಇನ್ನೂ ಪೂರ್ತಿ ಗುಣವಾಗಿರಲಿಲ್ಲ. ಭಟ್ಟರ ಮಾತಿನಲ್ಲಿ ಹೇಳುವುದಾದರೆ “ಮೃದುಪಾಣಿಯಾದ ಜೋನಾಸ್ ಸ್ತಂಭದ ಬುಡ ತಲಪುವಾಗ ರಕ್ತಹಸ್ತನಾಗಿದ್ದರು.” ಇದು ಕೊಳ್ಳಕ್ಕೆ ಇಳಿಯುವಾಗ ಅನಿವಾರ್ಯತೆಯಲ್ಲಿ ಹುಲ್ಲು, ಕಲ್ಲು, ಮುಳ್ಳು ಸವರಿದ ಪರಿಣಾಮ. ಕೊನೆಯದಾಗಿ ಅವರಿಗೂ ಔನ್ನತ್ಯದ ಭೀತಿ ಕಾಡಿ, ಹಿಂದುಳಿದವರ ತಂಡಕ್ಕೆ ತಾನೇ ಮುಂದಾಳು ಎಂದರು!</p>
<p><a href="http://lh6.ggpht.com/_XLLsV3Btn2I/TDZ5Yp1h7dI/AAAAAAAAFcY/P1uvuRjeLCA/s720/Kodnad%202.jpg"><img class="alignleft" src="http://lh6.ggpht.com/_XLLsV3Btn2I/TDZ5Yp1h7dI/AAAAAAAAFcY/P1uvuRjeLCA/s720/Kodnad%202.jpg" alt="" width="343" height="229" /></a>ಉಪಾಧ್ಯರು ಬಂಡೆ, ಬೆಟ್ಟ ಕಡಿಮೆ ಕಂಡವರಲ್ಲ. ಕಂಡದ್ದೆಲ್ಲ ವಿರಾಮದಲ್ಲಿ ಹತ್ತಲು ಪ್ರಯತ್ನಿಸದೇ ಬಿಟ್ಟದ್ದೂ ಇಲ್ಲ. ಹಾಗೆ ಒಳ್ಳೆಯದು ಕಂಡದ್ದನ್ನು ಅಷ್ಟೇ ಒಳ್ಳೆ ಛಾಯಾಚಿತ್ರಗಳಲ್ಲಿ ಸಂಗ್ರಹಿಸಿ, ತನ್ನ ಸಂಪರ್ಕಕ್ಕೆ ಬಂದವರಿಗೆ ಪ್ರಕೃತಿಹುಚ್ಚು ಸಾಂಕ್ರಾಮಿಕವಾಗುವಂತೆ ಸಾಕಷ್ಟು ಕೆಲಸವನ್ನೂ ಮಾಡಿದ್ದಾರೆ. ಅವರು ನಮ್ಮ ಹಿಂದಿನ ಮೋಜಣಿ ಓಟಕ್ಕೂ (ಒಟ್ಟು ಊಟಿ ನೋಡಿ ಹೋಗುವ ಯಾತ್ರೆ) ಬಂದಿದ್ದರು. ಸ್ತಂಭದ ವರ್ಣ ಛಾಯೆಗಳು, ಪ್ರಾಕೃತಿಕ ಒಡಕು, ಉಬ್ಬು, ಹಸಿರು ಮೂಡಿಸುವ ವಿವಿಧ ಭಾವಗಳನ್ನು ಕಂಡು ಪರವಶರಾಗಿದ್ದರು. ಅಂದೇ ಅಲ್ಲೇ ‘ಇದನ್ನು ಮುಂದೊಂದು ದಿನ ಹತ್ತಲು ಬರಲೇಬೇಕು. ಆಗ ಆ, ಈ ಕೋನಗಳಿಂದ ಇಂತಿಂಥಾ ಮಸೂರ ಬಳಸಿ ಚಿತ್ರ ಹಿಡಿಯಬೇಕು’ ಎಂದು ಅಂದಾಜಿಸಿದ್ದರಂತೆ. ಮನೋಭಿತ್ತಿಗೆ ಹತ್ತಿಕೊಂಡ ಕಲ್ಪನೆ ಸಾಕಾರಗೊಳ್ಳುವ ಗಳಿಗೆ ಒದಗಿತ್ತು. ಆದರೆ ಈಚಿನ ಎರಡು ತಿಂಗಳು ಅವರನ್ನು ಸತತ ಕಾಡಿದ ಕೆಮ್ಮು ಹೋದ ರಾತ್ರಿಯೂ ಗೋಳುಹೊಯ್ದುಕೊಂಡಿತ್ತು. ಆದರೂ ಅವರಿವರನ್ನು ಅನುಸರಿಸಿ ಸ್ತಂಭದ ಪಾದ ಮುಟ್ಟಿದ್ದರು. ಅದೇ ಲಹರಿಯಲ್ಲಿ ಹಗ್ಗಕ್ಕೆ ನಾಲ್ಕನೆಯವರಾಗಿ ಪೋಣಿಸಿಕೊಂಡು ಏರಲೂ ತೊಡಗಿದರು. ಇವರಿಗೆ ಕೆಲವು ವರ್ಷಗಳ ಹಿಂದೆ ವಾಹನಾಪಘಾತಕ್ಕೆ ಸಿಕ್ಕಿ ತೀವ್ರ ಜರ್ಝರಿತಗೊಂಡ ಕಾಲೊಂದು ಸ್ವಲ್ಪ ದುರ್ಬಲವಾಗಿತ್ತು. ಹತ್ತಿಪ್ಪತ್ತಡಿ ಮೇಲೆ ಹೋಗುತ್ತಿದ್ದಂತೆ, ಅದು ಸ್ವಾತಂತ್ರ್ಯ ಬಯಸಿ ಹಿಂದೆಳೆಯತೊಡಗಿತು. ಕೆಳಗಿನಿಂದ ರಕ್ಷಣಾ ಹಗ್ಗ ಕಟ್ಟಿಬಿಟ್ಟ ಅಭಯ, ಮೇಲಿನಿಂದ ಹಗ್ಗ ಜಗ್ಗುತ್ತಿದ್ದ ದೇವು ಸುಲಭ ಜಾಡಿನ ಬಗ್ಗೆ ಧಾರಾಳ ಮಾಹಿತಿ ಕೊಡುತ್ತಲೇ ಇದ್ದರು. ಆದರೂ ಕಾಲು ನಡುಗಿತು, ಒಮ್ಮೆಗೇ ಸೊಂಟದ ಕೀಲೇ ಸೆಟೆದ ಅನುಭವವಾಗಿ ಉಪಾಯ್ದರು ಸ್ವರ್ಗ ಕೆಡೆದ ತ್ರಿಶಂಕುವಾದರು! “ಬಿಲೇ ಟೈಟ್. ಉಪಾದ್ರು ಜಾರಿದ್ರೂ” ಬೊಬ್ಬೆ ಭವಾನಿ ಕಣಿವೆ ತುಂಬಿತು. Belay ಅಂದರೆ ರಕ್ಷಣಾ ಹಗ್ಗ &#8211; ಬಿಗಿ ಮಾಡುವ ಸೂಚನೆ ಯಾರು ಕೊಡದಿದ್ದರೂ ಶಿಲಾರೋಹಣದ ತಂತ್ರಗಳನ್ನು ನಾವು ಸರಿಯಾಗಿಯೇ ರೂಢಿಸಿದ್ದರಿಂದ ಸಹಜವಾಗಿಯೇ ಬಿಗಿಯಿತ್ತು. ಮತ್ತಲ್ಲಿ ಗಾಬರಿಪಡುವಂತದ್ದೇನು ಆಗಲೂ ಇಲ್ಲ. ಆದರೆ ಒಂದು ದೃಢ ನೆಲೆ ತಪ್ಪಿ ಒಮ್ಮೆ ಹಗ್ಗದಲ್ಲಿ ನೇತಾಡಿದ್ದಕ್ಕೇ ಉಪಾಧ್ಯರ ಮನೋಬಲ ಕುಸಿದದ್ದಂತೂ ನಿಜ. ನಿಧಾನಕ್ಕೆ ಹಗ್ಗದ ಆಧಾರದೊಡನೆ ಹಿಂದಕ್ಕೆ ಜಾರಿ ಜಾರಿ ಇಳಿದು, ನಿರ್ಮಮವಾಗಿ ಉಳಿದವರಿಗೆ “ನೀವು ಮುಂದುವರಿಸಿ” ಹೇಳಿಯೇ ಬಿಟ್ಟರು. ಎಲ್ಲ ಮುಗಿದ ಮೇಲೆ ಉಪಾಧ್ಯರು ನಮ್ಮೊಡನೆ ದೊಡ್ಡದಾಗಿಯೇ ಯೋಚಿಸಿದ್ದಿದೆ, “ದೇವು, ಅಭಯ ಸರಿಯಾಗಿಯೇ ಉತ್ತೇಜನ ಕೊಟ್ಟರು. ಆದರೂ ನಾನು ಎದುರಿರಬೇಕಿತ್ತು. ಅಶೋಕರ ಹೆಚ್ಚಿನ ಅನುಭವದ ಬಲ ಸಿಕ್ಕಿದ್ದರೆ ಏರಿಯೇಬಿಡುತ್ತಿದ್ದೆನೇನೋ.” ಅಂತೂ ಅಂದು ಹಿಂದುಳಿದ ಸದಸ್ಯರ ತಂಡಕ್ಕೆ ಉಪಾಧ್ಯರು ಕೊನೆಯ ಸದಸ್ಯರು.</p>
<p><strong>(ಮುಂದುವರಿಯಲಿದೆ)</strong></p>
<blockquote><p>[ಅಂದ ಮಾತ್ರಕ್ಕೆ ‘ಅಶೋಕನಿಗೇ’ ಬರಹದ ಉನ್ನತ ಸ್ತರ ಸಂದರ್ಶನಕ್ಕೆ ಉತ್ತೇಜನದ ಮಾತುಗಳನ್ನು ಕೊಡುವಲ್ಲಿ ನೀವು ಯಾಕೆ ಹಿಂದುಳಿಯಬೇಕು? ವಿಮರ್ಶೆಯ ನುಡಿ-‘ಕಟ್ಟು’ಗಳನ್ನು ಬಿಗಿದು, ತತ್ಸಮಾನ ಅನುಭವಗಳ ಆಸರೆ ಕೊಟ್ಟು ನನ್ನನ್ನು ಏರಿಸಿಕೊಳ್ಳುವಲ್ಲಿ ಮುಂದಾಳುಗಳಾಗಿ. ನೀವು ಅಷ್ಟು ಮಾಡಿ ರಂಗನಾಥನ ಮಂಡೆಗೆ ಇನ್ನೆಷ್ಟು ದೂರಾಆಆಆಆ ಎನ್ನುವುದರೊಳಗೆ ಮುಂದಿನ ಗುರುವಾರ ಬಂದಿರುತ್ತದೆ, ನಾನಿನ್ನಷ್ಟು ಹಗ್ಗ ಬಿಚ್ಚಿಡುತ್ತೇನೆ!]</p></blockquote>
<br />  <a rel="nofollow" href="http://feeds.wordpress.com/1.0/gocomments/athree.wordpress.com/495/"><img alt="" border="0" src="http://feeds.wordpress.com/1.0/comments/athree.wordpress.com/495/" /></a> <a rel="nofollow" href="http://feeds.wordpress.com/1.0/godelicious/athree.wordpress.com/495/"><img alt="" border="0" src="http://feeds.wordpress.com/1.0/delicious/athree.wordpress.com/495/" /></a> <a rel="nofollow" href="http://feeds.wordpress.com/1.0/gofacebook/athree.wordpress.com/495/"><img alt="" border="0" src="http://feeds.wordpress.com/1.0/facebook/athree.wordpress.com/495/" /></a> <a rel="nofollow" href="http://feeds.wordpress.com/1.0/gotwitter/athree.wordpress.com/495/"><img alt="" border="0" src="http://feeds.wordpress.com/1.0/twitter/athree.wordpress.com/495/" /></a> <a rel="nofollow" href="http://feeds.wordpress.com/1.0/gostumble/athree.wordpress.com/495/"><img alt="" border="0" src="http://feeds.wordpress.com/1.0/stumble/athree.wordpress.com/495/" /></a> <a rel="nofollow" href="http://feeds.wordpress.com/1.0/godigg/athree.wordpress.com/495/"><img alt="" border="0" src="http://feeds.wordpress.com/1.0/digg/athree.wordpress.com/495/" /></a> <a rel="nofollow" href="http://feeds.wordpress.com/1.0/goreddit/athree.wordpress.com/495/"><img alt="" border="0" src="http://feeds.wordpress.com/1.0/reddit/athree.wordpress.com/495/" /></a> <img alt="" border="0" src="http://stats.wordpress.com/b.gif?host=athreebook.com&amp;blog=3999388&amp;post=495&amp;subd=athree&amp;ref=&amp;feed=1" width="1" height="1" />]]></content:encoded>
			<wfw:commentRss>http://athreebook.com/2010/07/09/%e0%b2%b0%e0%b2%82%e0%b2%97%e0%b2%a8%e0%b2%82%e0%b2%98%e0%b3%8d%e0%b2%b0%e0%b2%bf%e0%b2%97%e0%b3%86-%e0%b2%ae%e0%b2%a3%e0%b2%bf%e0%b2%a6%e0%b3%82/feed/</wfw:commentRss>
		<slash:comments>8</slash:comments>
	
		<media:content url="" medium="image">
			<media:title type="html">Abhaya</media:title>
		</media:content>

		<media:content url="http://lh5.ggpht.com/_XLLsV3Btn2I/TBrMnBR65eI/AAAAAAAAFVI/cxig5ysm5Lg/s720/3.jpg" medium="image" />

		<media:content url="http://lh4.ggpht.com/_XLLsV3Btn2I/TDZ5YRtQepI/AAAAAAAAFcQ/mke58yfb5tU/s640/Bowline.JPG" medium="image" />

		<media:content url="http://lh4.ggpht.com/_XLLsV3Btn2I/TBrMm7h6vDI/AAAAAAAAFVA/CPOGPRNjjKA/s720/1.jpg" medium="image" />

		<media:content url="http://lh6.ggpht.com/_XLLsV3Btn2I/TBrMnfJaJwI/AAAAAAAAFVQ/dCzswG9vDF4/s720/5.jpg" medium="image" />

		<media:content url="http://lh6.ggpht.com/_XLLsV3Btn2I/TDZ5Yp1h7dI/AAAAAAAAFcY/P1uvuRjeLCA/s720/Kodnad%202.jpg" medium="image" />
	</item>
		<item>
		<title>ಮಹಾಲಿಂಗ ಭಟ್ಟರ ಅಂಕಣದಿಂದ</title>
		<link>http://athreebook.com/2010/07/06/06july2010/</link>
		<comments>http://athreebook.com/2010/07/06/06july2010/#comments</comments>
		<pubDate>Tue, 06 Jul 2010 16:06:50 +0000</pubDate>
		<dc:creator>abhayaftii</dc:creator>
				<category><![CDATA[ಹೀಗೆ ಒಂದಿಷ್ಟು]]></category>

		<guid isPermaLink="false">http://athreebook.com/?p=487</guid>
		<description><![CDATA[ಪ್ರಜಾವಾಣಿಯ ಶನಿವಾರದ ಕರಾವಳಿ ಪುರವಣಿಯಲ್ಲಿ ಗೆಳೆಯ ಮಹಾಲಿಂಗ ಭಟ್ಟರು ಕೆಲವು ಸಮಯದಿಂದ ಒಂದು ಅಂಕಣ ನಡೆಸುತ್ತಾ ಇಲ್ಲ! ಬದಲು ಅವರ ಚಿತ್ರ ಮತ್ತು ಹೆಸರು ಹೊತ್ತು ಅವರ ಸಾಹಿತ್ಯ, ಸಂಸ್ಕೃತಿಗಳ ಬಹುಮುಖೀ ಆಸಕ್ತಿಗಳೇ ಸುಮಾರು ಕಾಲುಪುಟದ ಹರವಿನಲ್ಲಿ ಮಾತಾಡುತ್ತವೆ. ವಾಸ್ತವದಲ್ಲಿ ಈ ಅಂಕಣ ಸದಾ ಕರಾವಳಿ ಎಂಬ ಪ್ರಾದೇಶಿಕ ಮಿತಿಯನ್ನು ಮೀರಿ ಕನ್ನಡ ವಲಯದಲ್ಲೇ ಪ್ರಸಾರ &#8230; <a href="http://athreebook.com/2010/07/06/06july2010/">Continue reading <span class="meta-nav">&#8594;</span></a><img alt="" border="0" src="http://stats.wordpress.com/b.gif?host=athreebook.com&amp;blog=3999388&amp;post=487&amp;subd=athree&amp;ref=&amp;feed=1" width="1" height="1" />]]></description>
			<content:encoded><![CDATA[<p style="text-align:left;">ಪ್ರಜಾವಾಣಿಯ ಶನಿವಾರದ ಕರಾವಳಿ ಪುರವಣಿಯಲ್ಲಿ ಗೆಳೆಯ ಮಹಾಲಿಂಗ ಭಟ್ಟರು ಕೆಲವು ಸಮಯದಿಂದ ಒಂದು ಅಂಕಣ ನಡೆಸುತ್ತಾ ಇಲ್ಲ! ಬದಲು ಅವರ ಚಿತ್ರ ಮತ್ತು ಹೆಸರು ಹೊತ್ತು ಅವರ ಸಾಹಿತ್ಯ, ಸಂಸ್ಕೃತಿಗಳ ಬಹುಮುಖೀ ಆಸಕ್ತಿಗಳೇ ಸುಮಾರು ಕಾಲುಪುಟದ ಹರವಿನಲ್ಲಿ ಮಾತಾಡುತ್ತವೆ. ವಾಸ್ತವದಲ್ಲಿ ಈ ಅಂಕಣ ಸದಾ ಕರಾವಳಿ ಎಂಬ ಪ್ರಾದೇಶಿಕ ಮಿತಿಯನ್ನು ಮೀರಿ ಕನ್ನಡ ವಲಯದಲ್ಲೇ ಪ್ರಸಾರ ಕಾಣಬೇಕಾದ ಯೋಗ್ಯತೆಯವು ಎಂಬುದು ನನ್ನನ್ನು ಕಾಡುವ ಕೊರಗು. ನಿಮ್ಮದೇ ಒಂದು ಬ್ಲಾಗ್ ತೆರೆಯಿರಿ. ಅದರ ತಾಂತ್ರಿಕ ಕಿರಿಕಿರಿಗಳು ಬೇಡವೆಂದಾದರೆ ಕನಿಷ್ಠ ಅವಧಿ, ಕೆಂಡಸಂಪಿಗೆ, ಸಂಪದಗಳಂತ ಅಂತರ್ಜಾಲ ಪತ್ರಿಕೆಗಳಿಗಾದರೂ ದಾಟಿಸಿ ಪುಣ್ಯ ಕಟ್ಟಿಕೊಳ್ಳಿ ಎಂದದ್ದೂ ಇದೆ. ಇನ್ನೂ ಹೆಚ್ಚಿನ ನನ್ನ ಮಾತಿನ ಹೊರೆಯಲ್ಲಿ ನೀವು ಬಳಲುವ ಬದಲು ಮೊದಲು ಇದೇ ಶನಿವಾರ (೩-೭-೨೦೧೦) ಪ್ರಕಟವಾದ ಲೇಖನದ ಯಥಾ ಪ್ರತಿಯನ್ನು ನಿಮ್ಮ ಓದಿಗೆ ಪ್ರಸ್ತುತಪಡಿಸುತ್ತೇನೆ. ಈ ಪ್ರಕಟಣೆಗೆ ಸಂತೋಷದಿಂದ ಒಪ್ಪಿಗೆ ಕೊಟ್ಟ ಮಹಾಲಿಂಗ ಭಟ್ಟರಿಗೂ ಸಹಕರಿಸಿದ ಪ್ರಜಾವಾಣಿ ಬಳಗಕ್ಕೂ ಕೃತಜ್ಞತೆಗಳು.</p>
<p style="text-align:center;"><span id="more-487"></span><a href="http://lh4.ggpht.com/_XLLsV3Btn2I/TDNTutK2gaI/AAAAAAAAFbU/eQmpxKDM488/prajavani%20rangalahari2%20.jpg"><img class="aligncenter" src="http://lh4.ggpht.com/_XLLsV3Btn2I/TDNTutK2gaI/AAAAAAAAFbU/eQmpxKDM488/prajavani%20rangalahari2%20.jpg" alt="" width="440" height="884" /></a><br />
<strong>ದಾಖಲಾತಿ ವಿಚಾರದಲ್ಲಿ: </strong>೧. ಸುಮಾರು ಇಪ್ಪತ್ತೈದು ವರ್ಷದ ಹಿಂದೆ ಕುಶಿ ಹರಿದಾಸ ಭಟ್ಟರು, ಅವರ ಮತ್ತು ನನ್ನ ತಂದೆಯ ಸಹಪಾಠಿ, ಮಿತ್ರ, ಆಗ ವಿದೇಶದಲ್ಲಿ ಭಾರತದ ರಾಯಭಾರಿಯಾಗಿದ್ದವರು, ಖ್ಯಾತ ಕತೆಗಾರ ಬಾಗಲೋಡಿ ದೇವರಾಯರನ್ನು ನನ್ನಂಗಡಿಗೆ ಕರೆದುಕೊಂಡು ಬಂದಿದ್ದರು. ಕುಶಿಯವರು ಅವರದೇ ವರಸೆಯಲ್ಲಿ ನನ್ನ ಕಾಡುಬೆಟ್ಟ ಸುತ್ತುವ ಹುಚ್ಚನ್ನು ದೇವರಾಯರಿಗೆ ಪರಿಚಯಿಸಿದರು. ಕೂಡಲೇ ದೇವರಾಯರು ಹೇಳಿದ ಮಾತಿನ ಸಾರಾಂಶ &#8211; ‘ನಿನ್ನ ಅನುಭವವನ್ನು ಅದೆಷ್ಟೇ ಕಚ್ಚಾವಾದರೂ ಲೇಖನ ಟಿಪ್ಪಣಿಗಳಲ್ಲಿ, ಫೋಟೋಗಳಲ್ಲಿ ದಾಖಲಿಸು. ಅದು ನಿಜವಾದ ದೇಶಸೇವೆ. ವಿದೇಶಿಯರು (ಬ್ರಿಟಿಷರೋ ಮೇಲಿನ ಲೇಖನ ಪ್ರಸ್ತುತಪಡಿಸುವ ಜರ್ಮನ್ ಮಿಶನರಿಗಳೋ) ಯಾವುದೇ ಕಾರಣಕ್ಕೆ ಇದನ್ನು ಮಾಡಿರಲಿ, ಮಾಡಿದ್ದು ನಮಗಿಂದು ಅಪೂರ್ವ ಮತ್ತು ಅನುಪಮ. ನಾವದನ್ನು ಬೆಳೆಸುವುದಿರಲಿ, ಊರ್ಜಿತದಲ್ಲೂ ಇಡದೆ&#8230;’ ಮಹಾಲಿಂಗರು ಎತ್ತಿ ತೋರಿಸಿರುವ ಕೆಟಿಸಿಯ ಸಾಹಸವನ್ನು ವಿಚಾರವಂತರು, ಮುಖ್ಯವಾಗಿ ವಿದ್ಯೆಗೇ ಮೀಸಲೆನಿಸಿಕೊಳ್ಳುವ ವಿವಿನಿಲಯಾದಿ ಶಾಲೆ ಕಾಲೇಜುಗಳು, ಇನ್ನೂ ಮುಖ್ಯವಾಗಿ ದಿನ ಬೆಳಗಾದರೆ ಅಂಕಿಸಂಕಿಗಳ (ಹೆಚ್ಚಿನ ಸಮಯ ಸುಳ್ಳೇ) ಡೊಂಬರಾಟ ತೋರಿಸಿ ಸಂದ ಪ್ರಗತಿಪಥ ಬೆಳಗುವ ಅಥವಾ ಅಭಿವೃದ್ಧಿ ಆಶಯಗಳ ರೇಖೆ ಎಳೆಯುವ ಆಡಳಿತಗಾರರು (ಜನಪ್ರತಿನಿಧಿಗಳೂ ಅಧಿಕಾರಿಗಳೂ) ಗಮನಿಸಲೇಬೇಕು.</p>
<p style="text-align:left;"><a href="http://lh3.ggpht.com/_XLLsV3Btn2I/TDNVh-c4_5I/AAAAAAAAFbo/T5akvK1iya8/s512/DSC00875.JPG"><img class="alignleft" src="http://lh3.ggpht.com/_XLLsV3Btn2I/TDNVh-c4_5I/AAAAAAAAFbo/T5akvK1iya8/s512/DSC00875.JPG" alt="" width="288" height="384" /></a>೨. ಬೆನೆಟ್ ಅಮ್ಮನ್ನ &#8211; ವೃತ್ತಿ ಮತ್ತು ಹವ್ಯಾಸಗಳ ಸಮಪ್ರಮಾಣದ ಮಿಶ್ರಣದಲ್ಲಿ ಮೂಡಿದ ವ್ಯಕ್ತಿ. ಇವರ ಬಗ್ಗೆ ಮಹಾಲಿಂಗರ ಮಾತಿನ ಮುಂದೆ ನಾನು ಹೇಳುವುದೇನೂ ಉಳಿದಿಲ್ಲ.</p>
<br />  <a rel="nofollow" href="http://feeds.wordpress.com/1.0/gocomments/athree.wordpress.com/487/"><img alt="" border="0" src="http://feeds.wordpress.com/1.0/comments/athree.wordpress.com/487/" /></a> <a rel="nofollow" href="http://feeds.wordpress.com/1.0/godelicious/athree.wordpress.com/487/"><img alt="" border="0" src="http://feeds.wordpress.com/1.0/delicious/athree.wordpress.com/487/" /></a> <a rel="nofollow" href="http://feeds.wordpress.com/1.0/gofacebook/athree.wordpress.com/487/"><img alt="" border="0" src="http://feeds.wordpress.com/1.0/facebook/athree.wordpress.com/487/" /></a> <a rel="nofollow" href="http://feeds.wordpress.com/1.0/gotwitter/athree.wordpress.com/487/"><img alt="" border="0" src="http://feeds.wordpress.com/1.0/twitter/athree.wordpress.com/487/" /></a> <a rel="nofollow" href="http://feeds.wordpress.com/1.0/gostumble/athree.wordpress.com/487/"><img alt="" border="0" src="http://feeds.wordpress.com/1.0/stumble/athree.wordpress.com/487/" /></a> <a rel="nofollow" href="http://feeds.wordpress.com/1.0/godigg/athree.wordpress.com/487/"><img alt="" border="0" src="http://feeds.wordpress.com/1.0/digg/athree.wordpress.com/487/" /></a> <a rel="nofollow" href="http://feeds.wordpress.com/1.0/goreddit/athree.wordpress.com/487/"><img alt="" border="0" src="http://feeds.wordpress.com/1.0/reddit/athree.wordpress.com/487/" /></a> <img alt="" border="0" src="http://stats.wordpress.com/b.gif?host=athreebook.com&amp;blog=3999388&amp;post=487&amp;subd=athree&amp;ref=&amp;feed=1" width="1" height="1" />]]></content:encoded>
			<wfw:commentRss>http://athreebook.com/2010/07/06/06july2010/feed/</wfw:commentRss>
		<slash:comments>5</slash:comments>
	
		<media:content url="" medium="image">
			<media:title type="html">Abhaya</media:title>
		</media:content>

		<media:content url="http://lh4.ggpht.com/_XLLsV3Btn2I/TDNTutK2gaI/AAAAAAAAFbU/eQmpxKDM488/prajavani%20rangalahari2%20.jpg" medium="image" />

		<media:content url="http://lh3.ggpht.com/_XLLsV3Btn2I/TDNVh-c4_5I/AAAAAAAAFbo/T5akvK1iya8/s512/DSC00875.JPG" medium="image" />
	</item>
		<item>
		<title>ಇಷ್ಟಸಿದ್ಧಿ ಹೋಮಂ ಕರಿಷ್ಯೇ</title>
		<link>http://athreebook.com/2010/07/01/01july2010/</link>
		<comments>http://athreebook.com/2010/07/01/01july2010/#comments</comments>
		<pubDate>Thu, 01 Jul 2010 07:12:12 +0000</pubDate>
		<dc:creator>abhayaftii</dc:creator>
				<category><![CDATA[ಪ್ರವಾಸ ಕಥನ]]></category>
		<category><![CDATA[ವನ್ಯಲೋಕ]]></category>

		<guid isPermaLink="false">http://athreebook.com/?p=484</guid>
		<description><![CDATA[ರಂಗನಾಥ ಸ್ತಂಭ ವಿಜಯ ಭಾಗ ಮೂರು ಚಳಿಗೆ ಕಾಲವೂ ನಡುಗುವುದು: ಶ್ರೀರಂಗನಾಥ ಸ್ವಾಮಿಯು ಆದಿಶೇಷನ ಮೇಲೆ ಒರಗಿ, ಒಂದೆಸಳು ಶ್ರೀತುಳಸಿಗೋ ಬಿಂದು ಗಂಗೋದಕಕ್ಕೋ ಭಕ್ತಾಭೀಷ್ಟವರಪ್ರದಾಯಕನಾಗಿರುವುದನ್ನು ನಾನು ಶ್ರೀರಂಗಪಟ್ಟಣದಲ್ಲಿ ಕಂಡವನಿದ್ದೇನೆ. ಕಾಲಹತಿಯಲ್ಲಿ ಆರಾಧನೆ ಆರತಿ ತಟ್ಟೆಯ ಆದಾಯವನ್ನು ಆತುಕೊಂಡಾಗ, ಮೇಲ್ವಿಚಾರಣೆ ಮೇಲ್ಸಂಪಾದನೆಯ ಮೇಲೇ ಮಲೆತುಬಿದ್ದಾಗ, ‘ದೇವಾಲಯ ಶಿಥಿಲಗೊಂಡು ಬಿರುಕುಬಿಟ್ಟ’ ವಾರ್ತೆಯನ್ನೂ ಓದುತ್ತಲಿದ್ದೇನೆ. ದೇವಬಿಂಬ ದೂಳೀ ಸ್ನಾನಕ್ಕೂ ನಿರ್ಮಾಲ್ಯ &#8230; <a href="http://athreebook.com/2010/07/01/01july2010/">Continue reading <span class="meta-nav">&#8594;</span></a><img alt="" border="0" src="http://stats.wordpress.com/b.gif?host=athreebook.com&amp;blog=3999388&amp;post=484&amp;subd=athree&amp;ref=&amp;feed=1" width="1" height="1" />]]></description>
			<content:encoded><![CDATA[<p><strong><a href="http://lh3.ggpht.com/_XLLsV3Btn2I/TCw9KkWs1sI/AAAAAAAAFW0/Bu5EIkwckEE/s720/1.jpg"><img class="alignleft" src="http://lh3.ggpht.com/_XLLsV3Btn2I/TCw9KkWs1sI/AAAAAAAAFW0/Bu5EIkwckEE/s720/1.jpg" alt="" width="342" height="230" /></a>ರಂಗನಾಥ ಸ್ತಂಭ ವಿಜಯ ಭಾಗ ಮೂರು</strong></p>
<p><strong>ಚಳಿಗೆ ಕಾಲವೂ ನಡುಗುವುದು: </strong>ಶ್ರೀರಂಗನಾಥ ಸ್ವಾಮಿಯು ಆದಿಶೇಷನ ಮೇಲೆ ಒರಗಿ, ಒಂದೆಸಳು ಶ್ರೀತುಳಸಿಗೋ ಬಿಂದು ಗಂಗೋದಕಕ್ಕೋ ಭಕ್ತಾಭೀಷ್ಟವರಪ್ರದಾಯಕನಾಗಿರುವುದನ್ನು ನಾನು ಶ್ರೀರಂಗಪಟ್ಟಣದಲ್ಲಿ ಕಂಡವನಿದ್ದೇನೆ. ಕಾಲಹತಿಯಲ್ಲಿ ಆರಾಧನೆ ಆರತಿ ತಟ್ಟೆಯ ಆದಾಯವನ್ನು ಆತುಕೊಂಡಾಗ, ಮೇಲ್ವಿಚಾರಣೆ ಮೇಲ್ಸಂಪಾದನೆಯ ಮೇಲೇ ಮಲೆತುಬಿದ್ದಾಗ, ‘ದೇವಾಲಯ ಶಿಥಿಲಗೊಂಡು ಬಿರುಕುಬಿಟ್ಟ’ ವಾರ್ತೆಯನ್ನೂ ಓದುತ್ತಲಿದ್ದೇನೆ. ದೇವಬಿಂಬ ದೂಳೀ ಸ್ನಾನಕ್ಕೂ ನಿರ್ಮಾಲ್ಯ ಪೂಜನಕ್ಕೂ ಮೀಸಲಾದುದನ್ನೂ ಕಂಡವನಿದ್ದೇನೆ. ಆದರೆ ಭವಾನಿ ಕೊಳ್ಳದ ನಮ್ಮ ರಂಗನಾಥ ನಿಂತೇ ಇದ್ದರೂ ಪ್ರಕೃತಿಯ ಪೂಜೆ ಸ್ವೀಕರಿಸುತ್ತಾ ಸದಾ ಸುಖಿ, ಭಜಕರಿಗೆ ನಿತ್ಯ ನೂತನ. ಇವನಿಗೆ ಸಾಹಸವೇ ಸೇವೆ ಎಂದು ನಂಬಿದ ಕಿಂಕರರು ನಾವು. ಶಿಬಿರ ಹೂಡಿದ ಮೇಲಿನ ತಿರುಗಾಟದಲ್ಲಿ ನಾವು ಕಣ್ಣ ನೋಟಕ್ಕೆ ದಕ್ಕಿದಷ್ಟನ್ನು ಗರಿಕೆ ಸಮಿತ್ತುಗಳ ವಿವರದಲ್ಲಿ (ವೈದಿಕ ಸಂಭಾರದಂತೆ) ನೆನಪಿನ ಜೋಳಿಗೆಗೆ ಸೇರಿಸಿಕೊಂಡು ಮರಳಿದೆವು. ದೇವಾಲಯಗಳಲ್ಲಿ ದೇವಬಿಂಬಕ್ಕೆ ಖಾಸಾ ಸೇವೆಗೆ ಮುನ್ನ (ಎಷ್ಟೋ ಬಾರಿ ಜಿಡ್ಡುಹಿಡುಕಲು, ಕೊಳಕು) ತೆರೆಯೆಳೆಯುವುದನ್ನು ನೋಡಿದ್ದೇನೆ. ಆದರೆ ನಮ್ಮ ರಂಗನಾಥನಿಗೆ ದಿನಮಣಿಯೇ ಪರದೆಯವ. ಶಯನೋತ್ಸವಕ್ಕೆ ಕತ್ತಲಾವರಿಸಿತು.</p>
<p><span id="more-484"></span><a href="http://lh4.ggpht.com/_XLLsV3Btn2I/TCw93wOoSMI/AAAAAAAAFXE/XR79uYuE0WI/s640/udakamandala.jpg"><img class="alignleft" src="http://lh4.ggpht.com/_XLLsV3Btn2I/TCw93wOoSMI/AAAAAAAAFXE/XR79uYuE0WI/s640/udakamandala.jpg" alt="" width="343" height="247" /></a>ಸಮುದ್ರ ಮಟ್ಟದಿಂದ ೫೮೦೦ ಅಡಿ ಎತ್ತರ, ಅದರಲ್ಲೂ ಜನವರಿ ತಿಂಗಳು &#8211; ಉಶ್, ಚಳಿಯಪ್ಪೋ ಚಳಿ. ಇದ್ದೆಲ್ಲಾ ತೊಡುಗೆ ಅವಚಿಕೊಂಡೆವು. ಸ್ವೆಟ್ಟರ್, ಮಂಗನಟೊಪ್ಪಿ, ಶಾಲು ಸಾಕಾಗಲಿಲ್ಲ. ಕೆಲವರು ಗುಟ್ಟಿನಲ್ಲಿ ಎರಡು ಪ್ಯಾಂಟ್ ಕೂಡಾ ಏರಿಸಿದ್ದರು! ಅಡುಗೆ ಒಲೆಯನ್ನೇ ದೊಡ್ಡ ಮಾಡಿ ಸುತ್ತ ಮುಕುರಿಕೊಂಡೆವು. ಚಪಾತಿಯೇನೋ ಕಟ್ಟಿ ತಂದದ್ದಿತ್ತು. ಆದರೆ ಹೋಟೆಲಿನ ಅರೆಬೆಂದ ಚಪಾತಿ ಚಳಿಗೆ ನಾಯಿ ಚಕ್ಕಳ; ಹರಿದರು ಇಲ್ಲ, ಜಗಿಯಲು ಸಲ್ಲ. ಅದೃಷ್ಟಕ್ಕೆ ಕೂಟಕ &#8211; ಬಟಾಟೆ ಪಲ್ಯ, ಉಪಾಧ್ಯರ ಮಾಯಾಪಾತ್ರೆಯದ್ದು. ಸ್ವಲ್ಪ ಸ್ವಲ್ಪವೇ ನೆನೆಸಿ, ಹದಬರಿಸಿ, ಬಾಯಿಗೆ ರುಚಿತರಿಸಿ ಹೊಟ್ಟೆಗಿಳಿಸಿದೆವು. ಆದರೂ ಮತ್ತಷ್ಟು ಚಪಾತಿ ಉಳಿದೇ ಇತ್ತು. ಮಧ್ಯಾಹ್ನ ಹೋಟೆಲಿನಲ್ಲಿ ಕಟ್ಟಿಸುವಾಗ “ನಂಗ್ನಾಕು, ನಂಗೈದು” ಎಂದು ದೊಡ್ಡ ಬಟ್ಟಲು ಹಿಡಿದವರೆಲ್ಲ ಈಗ ನಿರ್ವಿಣ್ಣರು. ಕೈ ತೊಳೆಯುವ ಶಾಸ್ತ್ರಕ್ಕೆ ಒಲೆಯ ಮೇಲೆ ಬಿಸಿ ನೀರೇನೋ ಮಾಡಿಕೊಂಡಿದ್ದೆವು. ಆದರೆ ತೊಳೆದ ಮರುಕ್ಷಣಕ್ಕೆ ಬೆರಳುಗಳು ನೀರಪಸೆಗೆ ಕೋಟಗಟ್ಟುವ ಪರಿ ನೋಡಿ ಎಂಜಲು, ಮಡಿ ಎಲ್ಲಾ ನಾಗರಿಕತೆಯ ಭ್ರಮೆಗಳು ಎಂದು ಘೋಷಿಸಿಬಿಟ್ಟೆವು. ಮೂಲವಾದಿಗಳು “ಊಟಕ್ಕೆ ಮೊದಲೇ ಕೈತೊಳೆಯಲಿಲ್ವಂತೆ, ಇನ್ಯಾಕೆ” ಎಂದು ಪ್ಯಾಂಟಿಗೆ ಕೈ ಒರೆಸಿ ಶುದ್ಧರಾದರು. ಹಿಂದಿನ ರಾತ್ರಿಯಿಂದ ತೊಡಗಿದಂತೆ ಅನುಭವಿಸಿದ ಪ್ರಯಾಣ ಮತ್ತು ಶ್ರಮಗಳ ಲೆಕ್ಕ ಹಿಡಿದು ಬಳಸಿದ ತಟ್ಟೆ ಲೋಟಗಳನ್ನು ತೊಳೆಯುವುದು ಬಿಡಿ, ದಂತಧಾವನ, ಮುಖಮಾರ್ಜನದಂತ ಅನಿವಾರ್ಯಗಳನ್ನೂ ಆಪದ್ಧರ್ಮ ಎಂದು ತಳ್ಳಿ ಹಾಕಿದೆವು. ಇದನ್ನು ಕೇಳಿ, ‘ಅತಿಚಳಿಯಲ್ಲಿ ಪ್ಯಾಂಟಿಗೆ ಆಲುಗೆಡ್ಡೆ ಪಲ್ಯದ ಉಳಿಕೆಗಳನ್ನು ಸವರುವುದರಿಂದ ಆಗುವ ಪರಿಣಾಮ’ಗಳ ಬಗ್ಗೆ ಧೋಬೀಶಾಟ್ ವಿಶ್ವವಿದ್ಯಾನಿಲಯದ ರಜಕ ಸಂಶೋಧನಾಗಾರ ಉನ್ನತ ಮಟ್ಟದ (ಸ.ಮದಿಂದ ೫೮೦೦ ಅಡಿ!) ಅಧ್ಯಯನ ನಡೆಸಲು ಐವತ್ತು ಲಕ್ಷದ ಪ್ರಾಜೆಕ್ಟ್ ರಿಪೋರ್ಟ್ ಹಾಕಿದೆಯಂತೆ. ಮತ್ತು ಇಲ್ಲಿ ಹೀಗೆ ಹೆಚ್ಚುವರಿಯಾಗುವ ನೀರನ್ನು ಪರಿಸರ ಸ್ನೇಹೀ ಗಾರ್ಲ್ಯಾಂಡ್ ಕೆನಾಲ್‌ಗಳ ಮೂಲಕ ಬರಪೀಡಿತ ಸ್ಥಳಗಳಿಗೆ ತಿರುಗಿಸಲು ಕರ್ನಾಟಕದ ನಿವೃತ್ತ ಇಂಜಿನಿಯರ್ ಒಬ್ಬರು ಹೊಸದೇ ಕಡತವನ್ನು ಹೊಸೆಯುತ್ತಿದ್ದಾರಂತೆ!</p>
<p><a href="http://lh4.ggpht.com/_XLLsV3Btn2I/TCw-KCNDj_I/AAAAAAAAFXI/eszl1Dfq_-k/s720/4.jpg"><img class="alignleft" src="http://lh4.ggpht.com/_XLLsV3Btn2I/TCw-KCNDj_I/AAAAAAAAFXI/eszl1Dfq_-k/s720/4.jpg" alt="" width="343" height="232" /></a>ಚಳಿ ತಡೆಯಲು ಒಲೆಯ ಬೆಂಕಿ ಸಾಕಾಗದೆ ಶಿಬಿರಾಗ್ನಿ ಎಬ್ಬಿಸಿಯೇ ಬಿಟ್ಟೆವು. ಸುತ್ತ ದಟ್ಟವಾಗಿ ಬೆಳೆದ ನಿಂಬೆ ಪರಿಮಳದ ಹುಲ್ಲು ಕಾಣಲು ಹಸಿರಿದ್ದರೂ ಬೆಂಕಿಗೆ ಒಳ್ಳೆಯ ಗ್ರಾಸ (grassಆ?). ನಾಲ್ಕು ಮುಷ್ಠಿ ಹುಲ್ಲು, ಎರಡು ತುಂಡು ಕಡ್ಡಿಯನ್ನು ದುರ್ಬಲ ಕೆಂಡಕ್ಕೆ ಒಡ್ಡಿದರೂ ಸಾಕು. ನಾವು ಯೋಚಿಸುವ ಮುನ್ನ, ಮರುಕ್ಷಣಕ್ಕೆ ಬೀಸುಗಾಳಿ ಬರ್ರೆಂದು ಕಿಚ್ಚೆಬ್ಬಿಸಿಬಿಡುತ್ತಿತ್ತು. ಬಹುಶಃ ಆ ಬಂಡೆ ಪರಿಸರಕ್ಕೆ ಸರಿಯಾಗಿ ಹೊಂದಿಕೊಂಡ ಹುಲ್ಲು ಗಿಡ ಮರಗಳಲ್ಲಿ ನೀರಪಸೆಯೇ ಕಡಿಮೆಯೋ ಏನೋ. ನಾವು ಬೆಂಕಿಗೊಡ್ಡಿದ ಭಾರೀ ಒಣಕುಂಟೆಗಳೂ ಸಂಭ್ರಮದಲ್ಲೋ ಎಂಬಂತೆ ಕ್ಷಣಾರ್ಧದಲ್ಲಿ ಉರಿದು ಬೂದಿಯಾಗುವ ಪರಿ ನಮ್ಮನ್ನು ಜಾಗೃತಗೊಳಿಸಿತು. ಬಂಡೆ ಹಾಸಿನ ಮೇಲಿದ್ದ ನಮ್ಮ ಶಿಬಿರಾಗ್ನಿ ಅಂಚುಗಟ್ಟಿದ ಹುಲ್ಲಿಗೆ ತಪ್ಪಿಯೂ ದಾಟದ ಎಚ್ಚರವಹಿಸಿದೆವು. ಬೆಂಕಿ ಅತ್ತ ಸೋಂಕಿದ್ದೇ ಆದರೆ ನಮ್ಮ ಗುಡಾರಗಳೂ ಸೇರಿದಂತೆ ಪರಿಸರವೆಲ್ಲ ಖಾಂಡವವನವಾಗುವುದು ಖಾತ್ರಿ! ಬಹುಶಃ ಈ ಕಾಳ್ಗಿಚ್ಚಿನ ಭಯದಲ್ಲೇ ನಮಗೆ ಮಾರ್ಗದರ್ಶಿಯಾಗಿ ಒದಗಿದ್ದ ಅರಣ್ಯ ರಕ್ಷಕ ನಮ್ಮಲ್ಲಿ ಹಲವು ಬಾರಿ “ತೀ ಪೋಡ ಕೂಡಾದು” (ಬೆಂಕಿ ಹಾಕಬಾರದು) ಎಂದು ಬಡಬಡಿಸಿದ್ದ. ಸಾಲದೆಂಬಂತೆ ನಮ್ಮ ಚಾ ಮಾಡುವವರೆಗಿನ ಚಟುವಟಿಕೆಗಳನ್ನು ಗಮನಿಸಿ, ತೃಪ್ತಿಪಟ್ಟು ಮತ್ತೆ ವಿದಾಯ ಹೇಳಿದ್ದಿರಬೇಕು.</p>
<p>ಚಂದ್ರನ ಮಂದ್ರದಲ್ಲಿ ಹಲವು ಗುನುಗುಗಳು ತೇಲಿದವು. ಚಡಪಡಿಸುವ ಬೆಂಕಿಯೊಡನೆ ಹಲವು ವಿಚಾರಗಳೂ ಸ್ಫೋಟಿಸಿದವು. ದೂರದ ಚಾ ತೋಟದ ಒಕ್ಕಲು ಸಾಲು ಈಗ ಮಿಣಿಮಿಣಿ ಮಾಲೆ. ಅಷ್ಟೇ ಅಲ್ಲ ಎಂಬಂತೆ ಸುತ್ತೂ ಸುದೂರಗಳಲ್ಲಿ ಹಂಚಿಹೋದಂತೆ ಹಲವು ಮಿಣುಕುಗಳು ಮನುಷ್ಯ ವಾಸ್ತವ್ಯದ ಹರಹು ತೋರುತ್ತಿತ್ತು. ಆಗೊಮ್ಮೆ ಈಗೊಮ್ಮೆ ಚಲಿಸುವ ದೀಪಗಳು ವಾಹನ ಸಂಚಾರದ, ದಾರಿಯ ಸುಳಿವುಗಳನ್ನು ಬಿಚ್ಚುತ್ತಿತ್ತು. ಚಳಿ ಒತ್ತುತ್ತಿದ್ದಂತೆ ಎಲ್ಲರಿಗೂ ಗುಡಾರಗಳು ದೂರಾದವು. ಹೆಚ್ಚೇನು, ಸಮಯವೂ ನಿಧಾನಿಸಿತು! ಹಾಡಿನ ಸುರುಳಿ ಮುಗಿಯಿತೆಂದಲ್ಲ, ಕತೆಗಳಾ ಕಂತೆ ಮಡಚಿದ್ದೂ ಇಲ್ಲ. ಗಾಳಿಗೆ ಜೊತೆಗೊಟ್ಟ ಜ್ವಾಲೆಯ ನಲಿಕೆಯೊಡನೆ ನಮಗೆ ಹಿಂದೆ ಮುಂದೆ ಓಲಾಡಿ ಸಾಕಾಯಿತು. ಬೆಂಕಿಯ ಬಿಸಿಗೆ ಕೆಳಗಿನ ಬಂಡೆ ಸಶಬ್ದ ಬಿರಿಯತೊಡಗಿ ನಮ್ಮನ್ನು ಬೆದರಿಸಿತು. ತಿಂಗಳನ ಮಂದ ಬೆಳಕಿನಲ್ಲಿ ರಂಗನಾಥನೇ ಗುರುಗುಟ್ಟಿದಂತೆ, ದುರುಗುಟ್ಟಿದಂತೆ ಮತ್ತಷ್ಟು ಗಹನವಾದಂತೆಲ್ಲ ಅನ್ನಿಸಿ ಕಸಿವಿಸಿಯಾಯ್ತು. ಮರುದಿನದ ಸವಾಲೆದುರಿಸಲು ನಮಗೆ ನಿದ್ರೆ ಎಂಬ ವಿಶ್ರಾಂತಿ ತೀರಾ ಅವಶ್ಯವಿತ್ತು. ಅವೆಲ್ಲವನ್ನೂ ಒಟ್ಟುಗೂಡಿಸಿ, ಮೈಮುದ್ದೆ ಮಾಡಿಕೊಂಡೇ ಗುಡಾರ ಸೇರಿದೆವು.</p>
<p><strong><a href="http://lh4.ggpht.com/_XLLsV3Btn2I/TCw-dZ9a5AI/AAAAAAAAFXM/TY1_7oFL23I/s720/5.jpg"><img class="alignleft" src="http://lh4.ggpht.com/_XLLsV3Btn2I/TCw-dZ9a5AI/AAAAAAAAFXM/TY1_7oFL23I/s720/5.jpg" alt="" width="344" height="223" /></a>ನಿದ್ರೆ ಎಂದರೇನು?:</strong> ದೇವು ಮತ್ತು ಪ್ರಸನ್ನ ಅವರೇ ಹೇಳಿಕೊಳ್ಳುವಂತೆ ನಿದ್ರೆಗಾಗಿಯೇ ಹುಟ್ಟಿದವರು. ಉಪಾಧ್ಯರಿಗೆ ಕೆಮ್ಮ, ಜೊನಾಸರಿಗೆ ಪ್ರಸನ್ನ ಗೊರಕೆಯ ಗುಮ್ಮ! ಬೀಸುಗಾಳಿಯಲ್ಲಿ ಸಡಗರಿಸುವ ಹುಲ್ಲು, ಬರಬರಿಸುವ ಗುಡಾರ ಮತ್ತು ಬದಲಾದ ಪರಿಸರದಿಂದ ಹೆಚ್ಚಿನವರಿಗೆ ನಿದ್ರೆಯ ಲೇಪ ಹತ್ತಲೇ ಇಲ್ಲ. ಹಲವರಿಗೆ ವನ್ಯ ಮೃಗಗಳ ಕುರಿತು ಸಂಶಯ, ಭಯಗಳೂ ಮರ್ಯಾದೆಯ ಕಟ್ಟಿನಲ್ಲಿ ಚಡಪಡಿಸುತ್ತಿದ್ದವು! ಆದರೆ ಎಳೆಯ ಅಭಯ, ಅಪರಾತ್ರಿಯಲ್ಲಿ ಒಮ್ಮೆಗೆ ಸಹಜವಾಗಿ ಬಡಬಡಿಸಿದ “ಅಪ್ಪಾ ಅಪ್ಪಾ! ಇಲ್ಲಿ ಹೊರಗೇನೋ ಮೇಯುತ್ತಿತ್ತು. ನಾನು ಒಳಗಿನಿಂದಲೇ ಟಾರ್ಚು ಬೆಳಗಿದಾಗ ಓಡಿ ಹೋಯ್ತು.” ಆತ ಪಕ್ಕದ ಗುಡಾರದಲ್ಲಿದ್ದ. ಅವನನ್ನು ಸಂತೈಸುವ ನೆಪದಲ್ಲಿ ನಾನು ಎರಡೆರಡು ಬಾರಿ ಮನಸ್ಸಿಲ್ಲದ ಮನಸ್ಸಿನಿಂದ ಗುಡಾರ ಬಿಟ್ಟು ತನಿಖೆ ನಡೆಸಿದೆ. ಎಲ್ಲ ಗಾಳಿಗೂಳಿಯ ಕಾರುಭಾರು. ಕಾಟಿಯೂ ಇಲ್ಲ ಲಾಟಿಯೂ ಇಲ್ಲ. ಉರುವಲು ಕೊಡುವವರಿಲ್ಲದೆ, ಮತ್ತೆ ಮತ್ತೆ ಶಿಬಿರಾಗ್ನಿ ತಣ್ಣಗಾಗುತ್ತಿತ್ತು. ಅಂದಿನ ವಾತಾವರಣದಲ್ಲಿ ಎಷ್ಟು ಸೌದೆ ತುಂಬಿದರೂ ಕಾಲರ್ಧ ಗಂಟೆಯೊಳಗೆ ಜ್ವಾಲೆ ದಿಂಗಣಿಸಿ, ಬೂದಿ ಹಾರಿಸಿ, ರಂಗದಿಂದ ನಿಷ್ಕ್ರಮಿಸಿಬಿದುತ್ತಿತ್ತು. ಮತ್ತೆ ಮತ್ತೆ ಕಿಚ್ಚೆಬ್ಬಿಸುವುದು, ಮಲಗಲು ಪ್ರಯತ್ನಿಸುವುದು ನಡೆಸಿಯೇ ರಾತ್ರಿ ಕಳೆದೆವು. ಕೊನೆಯ ಜಾಮದಲ್ಲಿ ಉಪಾಧ್ಯರು ಗಟ್ಟಿ ಚಾ ಕಾಯಿಸಿ ಕುಡಿದು ನಿರ್ವಿಘ್ನ ನಿದ್ರೆಗೆ ಶರಣಾದದ್ದು, ಅವರ ಗುಡಾರಮೇಟ್ ಗಣಪತಿ ಭಟ್ ಚಾ ಕುಡಿಯದೇ ನಿದ್ರೆ ಉಳಿಸಿಕೊಂಡದ್ದು, ಜೊನಾಸ್ ಅಖಂಡ ನಿದ್ರೆಗೆ ಒಂದು ಪುಟ್ಟ ಮಧ್ಯಂತರ ಬಿಡುವು ಕೊಟ್ಟರೂ ನಿದ್ರೆಯೇ ಬರಲಿಲ್ಲ ಎಂದು ದೂರಿದ್ದು ನಂಬಲಾಗದ ಸತ್ಯಗಳು!</p>
<p>ನಾನು ತಿಳಿದಂತೆ ದೇವು ವಾಸ್ತವದಲ್ಲಿ ಗುಂಡುಕಲ್ಲೇನೂ ಅಲ್ಲ ಎಂಬುದಕ್ಕೆ ಅವರು ರಾತ್ರಿ ಕಳೆದ ಕಥೆಯನ್ನು ಅವರ ಮಾತಿನಲ್ಲೇ ಕೇಳಿ. “ಉಪಾಧ್ಯರ ಮೀಟರ್ ೧೩ ಡಿಗ್ರಿ ಸೆಲ್ಶಿಯಸ್ ತೋರಿಸುತ್ತಿದ್ದರೂ ಬೀಸುತ್ತಿದ್ದ ಕುಳಿರ್ಗಾಳಿ ಅದು ೫-೬ಕ್ಕಿಂತ ಕೆಳಗಿರಬೇಕೆಂದೇ ಭ್ರಮೆ ಹುಟ್ಟಿಸುತ್ತಿತ್ತು. ತಣ್ಣೀರು ಮುಟ್ತಿದೆ, ಕೈ ಮರಗಟ್ಟಿ ಹೋಯ್ತು. ಶಿಬಿರಾಗ್ನಿಗೆ ತಾಗಿ ಕುಳಿತೆ. ಬೆಂಕಿ ಗುಡಿಯ ಹೊರಗಿತ್ತು. ಆದರೂ ಅದರ ಕಾವಿಗೆ ಗುಡಿಯೊಳಗಿನ ತ್ರಿಶೂಲಗಳು ಕರಗಿಯೇ ಹೋಗಿರಬೇಕು, ಕಾಲ ಕೆಳಗಿನ ಪಾದೆಯಂತೂ ನಿಜಕ್ಕೂ ಚಿಟಿಚಿಟಿಲೆಂದು ಬಿರಿಯುತ್ತಿತ್ತು. ಆದರೂ ನಮ್ಮ ಚಳಿ ಬಿಡಲಿಲ್ಲ. ಅನಿವಾರ್ಯವಾಗಿ ನೀರು ಮುಟ್ಟಿದರೆ ಕೈಯನ್ನೇ ಹೋಮಕ್ಕೊಡ್ಡಿ ಅವರವರಂಗೀಜೇಬರಾಗಿಬಿಡುತ್ತಿದ್ದೆವು. ಅಸಾಧ್ಯ ಚಳಿಯಲ್ಲಿ ಇನ್ನೇನು ಸತ್ತೇಹೋದೇನು ಎಂಬ ಭಯ ಕಾಡಿದರೂ ಉಪಾಧ್ಯರ ಸಾವಿರದ ಒಂದನೆಯ ಸಂಶೋಧನೆಯಾದ ಗೋಲಾಕಾರದ ಗುಡಾರ ಸೇರಿ ಮಲಗಿಬಿಟ್ಟೆ. ರಾತ್ರಿಯುದ್ದಕ್ಕೆ ಒಬ್ಬಿಬ್ಬರು ಆಗೀಗ ಎದ್ದು ಹೋಮದ ಬೊಣ್ಯವನ್ನು ಅರ್ಥಾತ್ ಪುಣ್ಯವನ್ನು ಕೈಮೈಗೆ ಹತ್ತಿಸಿಕೊಂಡು ಗುಡಾರ ಸೇರಿ ಮುರುಟುವುದು ತಿಳಿದರೂ ನಾನೇಳಲಿಲ್ಲ. ಆನೆಹುಲ್ಲು, ಮಜ್ಜಿಗೆ ಹುಲ್ಲುಗಳ ಸಂದಿಯಲ್ಲಿ ಗಾಳಿ ರುಮುರುಮು ಬೀಸುವಾಗ ಏನೇನೋ ಭ್ರಮೆಗಳು. ಆದರೂ ನಿದ್ರೆಗೇನೂ ಕೊರತೆಯಾಗದ್ದು ನಾನು ಪಡೆದು ಬಂದ ಭಾಗ್ಯವೇ ಇರಬೇಕು.”</p>
<p>[ಹಿಂದೆ ಆನಂದನ ತಂಡವೂ ಇಲ್ಲೆ ಶಿಬಿರ ಹೂಡಿತ್ತು. ಅವನದೇ ಭಾಷೆಯಲ್ಲಿ ಎರಡು ಮಾತು. “ನಮಗೋ ಯೌವನದ ಮದ. ನಮ್ಮ ಡೇರೆ ಎಂದರೆ ಒಂದು ಕಪ್ಪು ಜಮಖಾನ, ತಾಳಿಕೊಳ್ಳಲು ಎರಡು ಕೋಲು. ಆದರೇನು, ಬಚ್ಚುವಿಕೆ, ಮೃಷ್ಟಾನ್ನ ಭೋಜನದ ಅಮಲು ಒಳ್ಳೆ ನಿದ್ರೆಗೆ ಕಾರಣವಾಯ್ತು.”]<br />
<strong><br />
<a href="http://lh4.ggpht.com/_XLLsV3Btn2I/TCw-ngcZJtI/AAAAAAAAFXQ/ybsgtXjYatc/s512/6.jpg"><img class="alignleft" src="http://lh4.ggpht.com/_XLLsV3Btn2I/TCw-ngcZJtI/AAAAAAAAFXQ/ybsgtXjYatc/s512/6.jpg" alt="" width="345" height="538" /></a>ನಾಂದಿ:</strong> ಒಟ್ಟಾರೆ ತಂಡಕ್ಕೆ ನಿದ್ರೆ ಅಲ್ಪಾಯು. “ಇನ್ನು ಚಳಿ ಗಿಳೀಂತ ಮಂಜು ಮಸಕೂಂತ ಬೆಳಿಗ್ಗೆ ಹತ್ತು ಗಂಟೆಯವರೆಗೆ ಹೋಯ್ಕಾತಿಲ್ಲೆ” ಉಪಾಧ್ಯರು ಘೋಷಿಸಿಯೇಬಿಟ್ಟರು. ಆದರೆ ನಾನು ಆರು ಗಂಟೆಗೇ ಸಂಗ್ರಹದ ಎಲ್ಲ ಸೌದೆ ಬೆಂಕಿಗೊಡ್ಡಿ &#8211; ಪೂರ್ಣಾಹುತಿ ಎಂದೇ ಘೋಷಿಸಿದೆ. ರಾತ್ರಿಯ ಅಂತ್ಯವನ್ನು ವಿಧಿವತ್ತುಗೊಳಿಸುವಂತೆ ಸುಪ್ರಭಾತ ಆಲಾಪಿಸಿದೆ (ಕುಹಕಿಗಳು ಅದು ‘ವಿಲಪಿಸಿದೆ’ ಎಂದಾಗಬೇಕು ಅನ್ನುವುದನ್ನು ನೀವು ನಂಬಬೇಡಿ!). ಹುಚ್ಚ ಸ್ಥಾಯಿಯ ನನ್ನ ಉದಯರೋಗವನ್ನು (ಲಬೊಲಬೋ?) ಆಕಾಶವಾಣಿಯ ದೇವು ಸಹಜವಾಗಿ ತೆಗೆದುಕೊಂಡು (with no comments!) ಹೊರಬಿದ್ದಾಗ ಒಮ್ಮೆಗೆ ಆಶ್ಚರ್ಯವಾಯ್ತು. ಆದರೆ ಅಷ್ಟೇ ಚುರುಕಾಗಿ ಅಸಾಮಿ ಚೊಂಬು ಹಿಡಿದು ಬಯಲಾದಾಗ ತಿಳಿಯಿತು, ಇದು ಹಿಂಬಾಲಿಸುವ ‘ಚಿಂತನ’ ತಪ್ಪಿಸಿಕೊಳ್ಳುವ ತರಾತುರಿ! ಸೂರ್ಯನ ಬಳಗದವರ ಕಚಿಪಿಚಿ ನಡೆದಿತ್ತು. ಸ್ವತಃ ಆತನೇ ಪೂರ್ವದ ಬಾಗಿಲು ತೆರೆಯುವ ಮುನ್ನ ನಾವು ನಿತ್ಯಕರ್ಮಗಳನ್ನು ಮುಗಿಸಿ, ಉದರಾಗ್ನಿಗೆ ಬ್ರೆಡ್ ಜ್ಯಾಂ ಮಾಡಿ, ಮೇಲಷ್ಟು ಚಾ ಹೊಯ್ದುಕೊಂಡೆವು. ಗುಡಾರ ಮಡಚಿ, ಶಿಬಿರ ಗುಡಿಸಿಟ್ಟೆವು. ನಿರಂತರ ಬೀಸುಗಾಳಿಯಿಂದ ಇಬ್ಬನಿ, ಮಂಜುಗಳ ಶೀತ ಮುಸುಕು ಇರಲಿಲ್ಲ. ಹಾಗಾಗಿ ವಿಳಂಬಿಸದೆ, ಶಿಲಾರೋಹಣದ ಕನಿಷ್ಠ ಆವಶ್ಯಕತೆಗಳನ್ನು ಮಾತ್ರ ಹಿಡಿದುಕೊಂಡು, ಉಳಿದೆಲ್ಲ ಸಾಮಾನುಗಳನ್ನು ಗುಡಿಗೋಡೆಗೆ ತಗುಲಿಸಿಟ್ಟು ಲಕ್ಷ್ಯಾನುಸಂಧಾನ ನಡೆಸಿದೆವು.</p>
<p>ಏಳುಮುಕ್ಕಾಲಕ್ಕೆ ಗುಡಿಗೆ ವಿದಾಯ. ದೇವು ಅಂದಾಜಿಸಿದಂತೆ “ಶಿಬಿರ ಸ್ಥಾನಕ್ಕೂ ಶಿಖರ ತುದಿಗೂ ಹಕ್ಕಿಯ ಬೀಸುರೆಕ್ಕೆಯ ದಾರಿಯಲ್ಲಿ ಅಂತರ ಕೇವಲ ನೂರಿನ್ನೂರು ಮೀಟರ್. ಆದರೆ ನಡುವೆ ಮಹಾ ಕಂದರ, ಇಳಿಯಲಾಗದ ಕಡಿದು.” ಆ ಪ್ರಪಾತದಂಚನ್ನು ನಿವಾರಿಸುವಂತೆ ಪೂರ್ವ ದಿಕ್ಕಿನ ‘ಮಂಗಕಲ್ಲಿನತ್ತ’ ಇಳಿಯತೊಡಗಿದೆವು. ಭಟ್ಟರಿಗೆ ಯುದ್ಧೋತ್ಸಾಹ, “ಹೊಡೆವವರು ಬನ್ನಿರೋ ತಡೆವವರು ಬನ್ನಿರೋ! ‘ಅಶೋಕ’ ನಮ್ಮ ಮುಂದಾಳು. ಹುಲ್ಲು, ಮುಳ್ಳು, ಉರುಳುಗಲ್ಲು ನಮ್ಮ ಹೆಜ್ಜೆಹೆಜ್ಜೆಯ ಧನ್ಯತೆ. ಹರಿವ ಬೆವರು, ತರಚುಗಾಯ ವೀರ ಸ್ಮರಣಿಕೆಗಳು.” ದೇವು ಭಾವ ತದ್ವಿರುದ್ಧ. “ಆಶ್ಚರ್ಯವೆಂದರೆ ಹಿಂದಿನ ಸಂಜೆ ರಂಗನಾಥನ ಎದುರು ನಿಂತಾಗ ಉಂಟಾದ ಅಧೈರ್ಯ, ಬೆಳಿಗ್ಗೆ ಆರೋಹಣಕ್ಕೆ ಹೊರಟಾಗ ಇರಲಿಲ್ಲ. ರಂಗನಾಥನ ಮೇಲೆ ಯುದ್ಧಕ್ಕೆ ಬಂದವರಲ್ಲ ನಾವು. ಸಾಧನೆಯ ಆನಂದಕ್ಕಾಗಿ ಮುಂದುವರಿದಿದ್ದೆವು, ಅಹಂಕಾರದ ಸ್ಥಾಪನೆಗಲ್ಲ. ಕೇವಲ ಖುಷಿ ಎಂದರೆ ಅದನ್ನೇರಿ ಪಡೆಯಬಹುದಾದಷ್ಟೇ ಮಟ್ಟದಲ್ಲಿ ಕೆಳಗೆ ನಿಂತು ಬರಿದೇ ದೃಷ್ಟಿಸಿಯೂ ಪಡೆಯಬಹುದಿತ್ತು. ಪರ್ವತಾರೋಹಣದಲ್ಲಿ ಮುಗಿದ ಒಂದು ಹಂತ ಸದಾ ಮುಂದಿನ ಹಂತಕ್ಕೆ ನಮಗೆ ತಿಳಿಯದಂತೇ ತಳಹದಿ ಕಲ್ಪಿಸುತ್ತದೆ, ಭರವಸೆ ನೀಡುತ್ತದೆ, ಭೀತಿಯಳಿಸಿ ಕುತೂಹಲ ಉಳಿಸುತ್ತದೆ.”</p>
<p>ಆಳೆತ್ತರದ ದಟ್ಟ ಹುಲ್ಲು ಎಲ್ಲ ಮುಚ್ಚಿದ್ದರೂ ನಮಗೆ ಅನುಕೂಲ ಜಾಡಿನ ಹೊಳಹು ಕೊಡುತ್ತಿತ್ತು. (ಹುಲ್ಲೇ ಇಲ್ಲದಲ್ಲಿ ಪ್ರಪಾತ ನಿಶ್ಚಿತ) ನಿಧಾನಕ್ಕೆ ಅದರ ನಡುವೆ ಜಾಡು ಮೂಡಿಸುತ್ತಾ ಅವನ್ನೇ ಆಧಾರಕ್ಕೂ ಜಗ್ಗಿ ಹಿಡಿಯುತ್ತಾ ಓರೆಯಲ್ಲಿ ಇಳಿದೆವು. ಸಣ್ಣ ಕಲ್ಲುಗುಂಡು, ಕೊರಕಲು, ಅಪರೂಪದ ಮುಳ್ಳ ಕಂಟಿ ನಮ್ಮನ್ನು ಪ್ರತ್ಯೇಕ ಪ್ರತ್ಯೇಕವಾಗಿ ಪರೀಕ್ಷಿಸಿ ಬಿಡುತ್ತಿದ್ದವು. ಹಿಂದಿನವನ ಪಾದಮೂಲದಲ್ಲಿ ಎದುರಿನವನ ತಲೆಯಿರುವಷ್ಟು ತೀವ್ರ ಇಳುಕಲು. ಆದರೆ ನೇರ ಕೊಳ್ಳದ ದೃಶ್ಯ ನಮ್ಮನ್ನು ಹೆದರಿಸದಂತೆ ಹುಲ್ಲು ಪರದೆಯ ಕೆಲಸವನ್ನೂ ಮಾಡಿತ್ತು. ‘ಮಂಗ’ ತಡವಿ, ಕೊನೆಯ ಬಾರಿಗೆ ಎಂಬಂತೆ ಉದಯರವಿ ಕಿರಣದಲ್ಲಿ ಪೂರ್ಣ ತೊಳಗುತ್ತಿದ್ದ ರಂಗನಾಥನನ್ನು ಕಣ್ಣು ತುಂಬಿಕೊಂಡೆವು. ಜೊತೆಗೆ ಆರೋಹಣಾರಂಭದ ಸ್ಥಳ ಹಾಗೂ ಬಂಡೆಯ ಮೇಲೇರಿದಂತೆ ಅನುಸರಿಸಬೇಕಾಗಬಹುದಾದ ಜಾಡನ್ನು ಮತ್ತಷ್ಟು ಸ್ಪಷ್ಟಪಡಿಸಿಕೊಂಡೆವು.</p>
<p>ಮಂಗಬಂಡೆ ಸಮೂಹವನ್ನು ಅದರ ಬುಡದಲ್ಲೇ ಬಳಸಿ, ಪಶ್ಚಿಮದ ಪೊದರ ಕೋಟೆಗೆ ಕನ್ನ ಹಾಕಿದೆವು. ಮೇಲಿನಿಂದ ಜರಿದ, ಜಾರಿದ ಕಲ್ಲು ಮಣ್ಣು ತರಗೆಲೆ ರಾಶಿಯ ಆಖಾಡದಲ್ಲಿ ಮುಳ್ಳಮಲ್ಲರು ಭಾರೀ ವ್ಯೂಹರಚನೆ ಮಾಡಿದ್ದರು. ದೇವು ಅನುಭವದಲ್ಲಿ, “ಅಷ್ಟು ಅಭದ್ರವಾದ debris zoneಅನ್ನು ನಾನು ಬೇರೆಲ್ಲೂ ಕಂಡಿಲ್ಲ. ಪ್ರತಿ ಹೆಜ್ಜೆಯನ್ನು ಇಡುವಲ್ಲೂ ಎತ್ತುವಲ್ಲೂ ಬಹು ಜಾಗ್ರತೆ ಬೇಕಿತ್ತು. ಕಾಲು ಮುಟ್ಟಿಸಿಕೊಂಡ ಪುಡಿಗಲ್ಲುಗಳು ಉರುಳಿ ಧುಮುಕುತ್ತಿದ್ದುದರಿಂದ ಮುಂದಿನವರು ಹಿಂದಿನವರ ಭಯದ ನೆರಳಿನಲ್ಲಿಯೇ ಸಾಗಬೇಕಿತ್ತು.” ನಾವು ಕತ್ತಿ ಹಿಡಿದವರಲ್ಲ. ಅತ್ತಿತ್ತ ಹಣುಕಿ, ದುರ್ಬಲ ಸಂದಿನ ಒಂದೆರಡು ಬಲ್ಲೆಗೈಗಳನ್ನು ಸರಿಸಿ, ಎತ್ತಿ, ತೀರಾ ಅನಿವಾರ್ಯವಾದಲ್ಲಿ ಬೂಟುಗಾಲಿನಲ್ಲಿ ತುಳಿದು ಮುರಿದು ಒಳ ನುಗ್ಗಿಯೇ ಬಿಟ್ಟೆವು. ಗೀರು ಗಾಯಗಳು, ಸಣ್ಣ ಪುಟ್ಟ ಬಟ್ಟೆ ಹರಿದುಕೊಳ್ಳುವುದು, ಹಾಯ್ ಹೂಯ್ ಉದ್ಗಾರಗಳು ನಡೆದೇ ಇತ್ತು. ಇನ್ನೊಬ್ಬರ ಬಟ್ಟೆಯಿಂದ ಕೊಕ್ಕೆ ಮುಳ್ಳು ಬಿಡಿಸಹೋಗಿ ತಮ್ಮ ಕೈಗೆ ಚುಚ್ಚಿಸಿಕೊಂಡವರು, ಹೆಜ್ಜೆ ಅನುಸರಣೆಯ ನಿಷ್ಠೆಯಲ್ಲಿ ಒಬ್ಬ ದಡಬಡಿಸಿದ ಜಾಗದಲ್ಲೇ ಮತ್ತೊಬ್ಬ ಕುಸಿದು ಕೂರುವುದು, ಮುಂದಿನವನು ಸರಿಸಿಬಿಟ್ಟ ಗೆಲ್ಲಿನ ಪೆಟ್ಟು ಹಿಂದಿನವ ತಿನ್ನುವುದು ಎಲ್ಲ ಮಾಮೂಲೀ ಸಂಗತಿಗಳು.</p>
<p><a href="http://lh3.ggpht.com/_XLLsV3Btn2I/TCw9tfRpRXI/AAAAAAAAFW8/8oR8U8CY5ns/s720/3.jpg"><img class="alignleft" src="http://lh3.ggpht.com/_XLLsV3Btn2I/TCw9tfRpRXI/AAAAAAAAFW8/8oR8U8CY5ns/s720/3.jpg" alt="" width="343" height="233" /></a>ನಾನು ಮೊದಲಾಳು. ಪ್ರಸನ್ನ, ದೇವಕಿ, ಭಟ್, ಅಭಯ, ಉಪಾಧ್ಯ, ಜೋನಾಸ್ ಮತ್ತು ದೇವು ಕ್ರಮದಲ್ಲಿ ಹಿಂಬಾಲಿಸಿದರು. ವಿಶೇಷವೇನೂ ಇಲ್ಲ ಎಂದುಕೊಳ್ಳುತ್ತಿದ್ದಂತೇ ಅಭಯ ಅರಿವಿಲ್ಲದೆ ದೊಡ್ಡ ಬಂಡೆಯೊಂದನ್ನು ಒಮ್ಮೆಗೆ ಅಡಿ ತಪ್ಪಿಸಿ “ಹ್ಹೋ” ಎಂದು ಬೊಬ್ಬಿಟ್ಟ. ಭಟ್ಟರು ಮಿಂಚಿನಂತೆ ಬದಿಗೆ ಸರಿದರು. ಅವರು ಅದುವರೆಗೆ ಆಧರಿಸಿಕೊಂಡಿದ್ದ ಗಟ್ಟಿ ಗಿಡವೊಂಡಕ್ಕೆ ಬಂಡೆ ಢೀ ಹೊಡೆದು, ನಿಧಾನವಾಗಿ ಹೊರಳಿ ಕೆಳಗಿನ ಕೊರಕಲಿಗೆ ಧುಮುಕಿತು. ದೇವಕಿ ಬಲಮೂಲೆಯಲ್ಲಿ ಮುಳ್ಳಕೈ ಒಂದನ್ನು ಸುಧಾರಿಸುವುದರಲ್ಲಿದ್ದಳು. ಪ್ರಸನ್ನ ಎಡಕ್ಕೆ ಸರಿಯುತ್ತಿದ್ದ. ಭೀಮ-ಬಂಡೆಯ ಬೀಳಿನ ನೇರ ಕೊಳ್ಳದಲ್ಲಿ ಇದ್ದವ ನಾನೊಬ್ಬನೇ! ಬೆದರಿ ಮರಗಟ್ಟಿದ ದೇವು ಲೆಕ್ಕದಲ್ಲಿ ಕನಿಷ್ಠ ಎರಡು ಜೀವ ಮುಕ್ತಿ ಪಥದಲ್ಲಿದ್ದವು. ದೇವಕಿಯ ‘ಅಶೋಕ್’ ಗಂಟಲಲ್ಲೇ ಹುಗಿದು ಹೋಗಿತ್ತು. ಪ್ರಸನ್ನನಿಗೆ ದೂಳು ಕಸದ ಸ್ನಾನದಲ್ಲಿ ಕಣ್ಣು ಕತ್ತಲಿಟ್ಟಿತ್ತು. ಕ್ಷಣಮೊದಲು ತನ್ನ ಕೈ ಆಧರಿಸಿದ್ದ ಗಿಡಕ್ಕಾದ ಜಜ್ಜು ಗಾಯದ ಭೀಕರತೆಯಿಂದ ಭಟ್ಟರು ಇನ್ನೂ ಹೊರಗೆ ಬಂದಿರಲಿಲ್ಲ. ಬಂಡೆ, ಜೊತೆಗೊಟ್ಟ ಕುಂಬು ಮರ, ಮಣ್ಣು, ಕಸ ಸೇರಿ ಭಾರೀ ಸದ್ದಿನೊಡನೆ ಬಿತ್ತೋ ಬಿತ್ತು!</p>
<blockquote><p>[ನಾನು ಸಾಯಲಿಲ್ಲ ನಿಶ್ಚಯ. ಆದರೆ ಬಂಡೆಯ ಪರಿಣಾಮ? ಕಥೆ ದೈನಿಕವಿರಲಿ, ಸಾಪ್ತಾಹಿಕವಿರಲಿ ಕುತೂಹಲದ ಕಟ್ಟೆ ಕಟ್ಟುವವರು ಕೃಷಿಯ ಹಾಗೆ ಅಕಾಲದಲ್ಲೂ ಒಳ್ಳೆಯ ಬೆಳೆ ತೆಗೆಯುತ್ತಾರಂತೆ. ಮೂವತ್ತು ವರ್ಷಗಳ ಹಿಂದೆ, ರಂಗನಾಥಸ್ತಂಭ ಆರೋಹಣದ ಯಶಸ್ಸು ತಮ್ಮನಿಗೆ ಒಲಿದಾಗ, ‘ಅದೃಷ್ಟ’ ನನ್ನತ್ತ ದೃಷ್ಟಿಯೂ ಹರಿಸಿರಲಿಲ್ಲ. ಎಷ್ಟೋ ವರ್ಷ ಕಳೆದು, ಸ್ವಯಾರ್ಜಿತ ಪ್ರಥಮ ಪ್ರಯತ್ನ ನಡೆಸಿದೆ. ಅರವಿಂದ ಬಾಲಕೃಷ್ಣರಿಗೊಲಿದ ‘ಅದೃಷ್ಟ’ ನನಗಷ್ಟೇ ಕೈಕೊಟ್ಟಿತ್ತು. ಮೂರನೇ ಪ್ರಯತ್ನವಾದರೋ ಸಂಕಲ್ಪದಲ್ಲೇ ಆಸೆಕಂಗಳ ನೋಟಕ್ಕೇ ಮೀಸಲಾಗಿತ್ತು. ಇದು ಹಾಗಲ್ಲ ಎಂದೇ ಹೊರಟಿದ್ದರೂ ನಾಲ್ಕನೆಯದು ಐದನೆಯದಕ್ಕೆ ಮೆಟ್ಟುಗಲ್ಲೇ? ಅದೃಷ್ಟದಾಟದ ಹೊಸ್ತಿಲಲ್ಲಿ ಈ ಬಾರಿ ನಾನೇ ಎಡವಿದೆನೇ? ತಿಳಿಯಲು ಮುಂದಿನವಾರದವರೆಗೆ ನನ್ನ ದಾರಿ ಕಾಯ್ತೀರಲ್ಲಾ? ಬ್ಲಾಗಿನ ಪ್ರಧಾನ ಅರ್ಚಕ ನಾನೇ ಇರಬಹುದು. ಆದರೆ ಮರೆಯಬೇಡಿ, ನಿಮ್ಮ ಕುಶಿ, ಅಸಹನೆಗಳ ಮಂತ್ರ, ಸಮಿತ್ತುಗಳಿಂದಲೇ ಈ ಯಜ್ಞ ಸಂಪನ್ನವಾಗುತ್ತದೆ. ಮುಕ್ತವಾಗಿ ಮನಸ್ಸಿಗೆ ಕಂಡದ್ದು ಕೆಳಗೆ ತುಂಬಿ ಹೇಳ್ತೀರಾ “ಸ್ವಾಹಾ”?]<br />
(ಮುಂದುವರಿಯುತ್ತದೆ)</p></blockquote>
<br />  <a rel="nofollow" href="http://feeds.wordpress.com/1.0/gocomments/athree.wordpress.com/484/"><img alt="" border="0" src="http://feeds.wordpress.com/1.0/comments/athree.wordpress.com/484/" /></a> <a rel="nofollow" href="http://feeds.wordpress.com/1.0/godelicious/athree.wordpress.com/484/"><img alt="" border="0" src="http://feeds.wordpress.com/1.0/delicious/athree.wordpress.com/484/" /></a> <a rel="nofollow" href="http://feeds.wordpress.com/1.0/gofacebook/athree.wordpress.com/484/"><img alt="" border="0" src="http://feeds.wordpress.com/1.0/facebook/athree.wordpress.com/484/" /></a> <a rel="nofollow" href="http://feeds.wordpress.com/1.0/gotwitter/athree.wordpress.com/484/"><img alt="" border="0" src="http://feeds.wordpress.com/1.0/twitter/athree.wordpress.com/484/" /></a> <a rel="nofollow" href="http://feeds.wordpress.com/1.0/gostumble/athree.wordpress.com/484/"><img alt="" border="0" src="http://feeds.wordpress.com/1.0/stumble/athree.wordpress.com/484/" /></a> <a rel="nofollow" href="http://feeds.wordpress.com/1.0/godigg/athree.wordpress.com/484/"><img alt="" border="0" src="http://feeds.wordpress.com/1.0/digg/athree.wordpress.com/484/" /></a> <a rel="nofollow" href="http://feeds.wordpress.com/1.0/goreddit/athree.wordpress.com/484/"><img alt="" border="0" src="http://feeds.wordpress.com/1.0/reddit/athree.wordpress.com/484/" /></a> <img alt="" border="0" src="http://stats.wordpress.com/b.gif?host=athreebook.com&amp;blog=3999388&amp;post=484&amp;subd=athree&amp;ref=&amp;feed=1" width="1" height="1" />]]></content:encoded>
			<wfw:commentRss>http://athreebook.com/2010/07/01/01july2010/feed/</wfw:commentRss>
		<slash:comments>16</slash:comments>
	
		<media:content url="" medium="image">
			<media:title type="html">Abhaya</media:title>
		</media:content>

		<media:content url="http://lh3.ggpht.com/_XLLsV3Btn2I/TCw9KkWs1sI/AAAAAAAAFW0/Bu5EIkwckEE/s720/1.jpg" medium="image" />

		<media:content url="http://lh4.ggpht.com/_XLLsV3Btn2I/TCw93wOoSMI/AAAAAAAAFXE/XR79uYuE0WI/s640/udakamandala.jpg" medium="image" />

		<media:content url="http://lh4.ggpht.com/_XLLsV3Btn2I/TCw-KCNDj_I/AAAAAAAAFXI/eszl1Dfq_-k/s720/4.jpg" medium="image" />

		<media:content url="http://lh4.ggpht.com/_XLLsV3Btn2I/TCw-dZ9a5AI/AAAAAAAAFXM/TY1_7oFL23I/s720/5.jpg" medium="image" />

		<media:content url="http://lh4.ggpht.com/_XLLsV3Btn2I/TCw-ngcZJtI/AAAAAAAAFXQ/ybsgtXjYatc/s512/6.jpg" medium="image" />

		<media:content url="http://lh3.ggpht.com/_XLLsV3Btn2I/TCw9tfRpRXI/AAAAAAAAFW8/8oR8U8CY5ns/s720/3.jpg" medium="image" />
	</item>
	</channel>
</rss>