ತಿರು ಶ್ರೀಧರ್ ಸ್ಮರಿಸಿದ ಜಿಟಿ ನಾರಾಯಣ ರಾವ್

ತಿರು ಶ್ರೀಧರ್ ಸ್ಮರಿಸಿದ ಜಿಟಿ ನಾರಾಯಣ ರಾವ್

ಇಂದು ನನ್ನಪ್ಪ (ಜಿಟಿ ನಾರಾಯಣ ರಾವ್) ಹುಟ್ಟಿದ ದಿನ. ಅವರು ನಮಗೆ ಹಾಕಿಕೊಟ್ಟ ಆದರ್ಶ – ವ್ಯಕ್ತಿ ನಿಮಿತ್ತ, ಕೃತಿ ಶಾಶ್ವತ. ಅವರು ವಿಜ್ಞಾನ ಸಾಹಿತ್ಯ ನಿರ್ಮಾಣದ ಅಂಗವಾಗಿ ಆಲ್ಬರ್ಟ್ ಐನ್ಸ್ಟೈನ್, ಸಿವಿ ರಾಮನ್, ಸುಬ್ರಹ್ಮಣ್ಯನ್ ಚಂದ್ರಶೇಖರ್ ಮುಂತಾದವರ ಕುರಿತು ಬರೆದಾಗಲೂ ಈ ನಿಲುವನ್ನು ಸ್ಪಷ್ಟಪಡಿಸಿದರು. ವಾಗಾಡಂಬರದ ಜೀವನ ಕಥನ ಮಾಡಲಿಲ್ಲ, ವೈಜ್ಞಾನಿಕ ಜೀವನ ಕಥನವನ್ನೇ ಕೊಟ್ಟರು. ಒಂದು ಹಂತದಲ್ಲಿ ತಂದೆ ನಮ್ಮೆಲ್ಲರ ಒತ್ತಾಯಕ್ಕೆ ಮಣಿದು, ಆತ್ಮಕಥೆ (ಮುಗಿಯದ ಪಯಣ) ಬರೆದರು. ಆಗಲೂ ಆತ್ಮರತಿಯ ಭಾವಲಹರಿಯಲ್ಲಿ ಕಳೆದುಹೋಗದೇ (ಮುಂದೆ ಯಾರಾದರೂ ಓದಿದರೆ!!) ಆದರ್ಶ ಅಥವಾ ಅನುಸರಣಾರ್ಹ ಮೌಲ್ಯವಾಗಬಹುದಾದ ಅಂಶಗಳನ್ನಷ್ಟೇ ದಾಖಲಿಸಿದರು. ಈ ನಿಟ್ಟಿನಲ್ಲಿ ತಿರು ಶ್ರೀಧರ್ ತಮ್ಮ www.sallapa.com ಜಾಲತಾಣದಲ್ಲಿ ಇಂದು ಜಿಟಿನಾ ಅವರನ್ನು ಸ್ಮರಿಸಿದ್ದು ಅಷ್ಟೇ ಔಚಿತ್ಯಪೂರ್ಣವಾಗಿತ್ತು. ಶ್ರೀಧರ್ ಅವರ ಬರಹ ನನ್ನ ಜಾಲತಾಣದ ಸಂಗ್ರಹಕ್ಕೆ ಬೇಕೆಂದು ಕೋರಿದಾಗ, ಅವರು ತುಂಬ ಉದಾರವಾಗಿ ಅನುಮತಿಸಿದ್ದಾರೆ. ಮುಂದೆ ಓದಿ

read more

Category

Latest Comments

  1. ನೀವು ಎತ್ತಿರುವ ಪ್ರಶ್ನೆ ಬಹಳ ಗಹನವಾದುದು. ಅಭಿವೃದ್ಧಿ ಮತ್ತು ಬೆಳವಣಿಗೆಗಳ ನಡುವಣ ಸಂಬಂಧ ಸಂಕೀರ್ಣವಾದುದು ಮತ್ತು ಅದಕ್ಕೆ ಇದುವರೆಗೆ ಸರಿಯಾದ ಉತ್ತರ ದೊರಕಿಲ್ಲ. ಜಪಾನ್‌ ಸುಮಾರು ೪೦%…

  2. ನಾನು ಅಂಥ ಮಾತು ಎಲ್ಲೂ ಹೇಳಿಲ್ಲ. ಮೇಲೆ ಹೆಸರಿಸಿರುವ ಹೇವಳ, ಶೀರ್ಲು, ಸಿಂಗ್ಸರ.... ಇಲ್ಲೆಲ್ಲ ಮರುವಸತಿ ಕಂಡಿರುವವರು ಯಾರೂ ನೀವು ಹೇಳಿದಂತೆ ಹತ್ತು ಲಕ್ಷಕ್ಕೆ ಹೋದವರೂ ಅಲ್ಲ.…

  3. (ಬಹುತೇಕ ಕಾಡುಗಳನ್ನು ಸುತ್ತಿ, ಶಿಖರಗಳನ್ನು ಏರಿ, ಶಿಬಿರ ವಾಸ ಮಾಡಿ ಆಪ್ತವಾಗಿ ಅನುಭವಿಸಿದ್ದೇನೆ) ವಾದ ಮಾತ್ರ ಸೂಪರ್. ಕಾಡಲ್ಲಿ ಉಳಿದು ಆಪ್ತವಾಗಿ ಅನುಭವಿಸಲು ನಿಮಗೆ ಖುಷಿ ಕೊಡುತ್ತದೆ…

  4. ಹ ಹ ಹ ಉಸಿರು ಬಿಗಿ ಹಿಡಿದು ಓದಿದೆ!! ರೋಮಾಂಚನಕಾರಿಯಾಗಿತ್ತು ನಮ್ಮ ಸಾಹಸ. ಅಪ್ಪು ನಮ್ಮದು ರೋಪ್ ಕ್ಲೈಂಬಿಂಗ್ ಅಲ್ಲ, ರೋಕ್ ಕ್ಲೈಂಬಿಂಗ್!! ಪಂಡಿತಾರಾಧ್ಯರು ಹೇಳಿದಾಗೆ ನೆನೆಪಿನ…