ತಿರು ಶ್ರೀಧರ್ ಸ್ಮರಿಸಿದ ಜಿಟಿ ನಾರಾಯಣ ರಾವ್

ತಿರು ಶ್ರೀಧರ್ ಸ್ಮರಿಸಿದ ಜಿಟಿ ನಾರಾಯಣ ರಾವ್

ಇಂದು ನನ್ನಪ್ಪ (ಜಿಟಿ ನಾರಾಯಣ ರಾವ್) ಹುಟ್ಟಿದ ದಿನ. ಅವರು ನಮಗೆ ಹಾಕಿಕೊಟ್ಟ ಆದರ್ಶ – ವ್ಯಕ್ತಿ ನಿಮಿತ್ತ, ಕೃತಿ ಶಾಶ್ವತ. ಅವರು ವಿಜ್ಞಾನ ಸಾಹಿತ್ಯ ನಿರ್ಮಾಣದ ಅಂಗವಾಗಿ ಆಲ್ಬರ್ಟ್ ಐನ್ಸ್ಟೈನ್, ಸಿವಿ ರಾಮನ್, ಸುಬ್ರಹ್ಮಣ್ಯನ್ ಚಂದ್ರಶೇಖರ್ ಮುಂತಾದವರ ಕುರಿತು ಬರೆದಾಗಲೂ ಈ ನಿಲುವನ್ನು ಸ್ಪಷ್ಟಪಡಿಸಿದರು. ವಾಗಾಡಂಬರದ ಜೀವನ ಕಥನ ಮಾಡಲಿಲ್ಲ, ವೈಜ್ಞಾನಿಕ ಜೀವನ ಕಥನವನ್ನೇ ಕೊಟ್ಟರು. ಒಂದು ಹಂತದಲ್ಲಿ ತಂದೆ ನಮ್ಮೆಲ್ಲರ ಒತ್ತಾಯಕ್ಕೆ ಮಣಿದು, ಆತ್ಮಕಥೆ (ಮುಗಿಯದ ಪಯಣ) ಬರೆದರು. ಆಗಲೂ ಆತ್ಮರತಿಯ ಭಾವಲಹರಿಯಲ್ಲಿ ಕಳೆದುಹೋಗದೇ (ಮುಂದೆ ಯಾರಾದರೂ ಓದಿದರೆ!!) ಆದರ್ಶ ಅಥವಾ ಅನುಸರಣಾರ್ಹ ಮೌಲ್ಯವಾಗಬಹುದಾದ ಅಂಶಗಳನ್ನಷ್ಟೇ ದಾಖಲಿಸಿದರು. ಈ ನಿಟ್ಟಿನಲ್ಲಿ ತಿರು ಶ್ರೀಧರ್ ತಮ್ಮ www.sallapa.com ಜಾಲತಾಣದಲ್ಲಿ ಇಂದು ಜಿಟಿನಾ ಅವರನ್ನು ಸ್ಮರಿಸಿದ್ದು ಅಷ್ಟೇ ಔಚಿತ್ಯಪೂರ್ಣವಾಗಿತ್ತು. ಶ್ರೀಧರ್ ಅವರ ಬರಹ ನನ್ನ ಜಾಲತಾಣದ ಸಂಗ್ರಹಕ್ಕೆ ಬೇಕೆಂದು ಕೋರಿದಾಗ, ಅವರು ತುಂಬ ಉದಾರವಾಗಿ ಅನುಮತಿಸಿದ್ದಾರೆ. ಮುಂದೆ ಓದಿ

read more

Category

Latest Comments

  1. ಧನ್ಯವಾದಗಳು. ಮುಂದಿನ ಕಂತು - ಜೈಪುರದ ಎರಡನೇ ದಿನದ ಕಥನ ಈಗ ಪ್ರಕಟಿಸಿದ್ದೇನೆ... ಅವಶ್ಯ ಓದಿ... ಆನಂದಿಸಿ.... ಪ್ರತಿಕ್ರಿಯಿಸಿ ನನ್ನನ್ನೂ ಆನಂದದಲ್ಲಿ ಪಾಲ್ಗೊಳ್ಳಿ 🙂

  2. ವಿಶೇಷ ಸೂಚನೆ: ಲೇಖನದ ಕೊನೆಯಲ್ಲಿರುವ ಎಂಟೂ ಸೇತುಗಳು (ಲಿಂಕ್ಸ್) ಕೆಲಸ ಮಾಡದಿದ್ದರೆ ದಯವಿಟ್ಟು ಈ ಸೇತು ಬಳಸಿ: https://youtube.com/playlist?list=PLYKOH-YtpDspXQKTGV3NY2B9IBdlCEzs7&si=JR143Wll9pTSfZIE

ಟ್ರಿನ್ ಟ್ರಿನ್ – ಮೈಸೂರನ್ನು ಆವರಿಸಿದ ಸೈಕಲ್ಲು

ಟ್ರಿನ್ ಟ್ರಿನ್ – ಮೈಸೂರನ್ನು ಆವರಿಸಿದ ಸೈಕಲ್ಲು

(ಚಕ್ರೇಶ್ವರ ಪರೀಕ್ಷಿತ ೧೩) [ನನ್ನಮ್ಮ ಗಂಟುವಾತಕ್ಕೆ ಸೇರಿಬಂದ ವೃದ್ಧಾಪ್ಯದಿಂದ (೮೭ವರ್ಷ) ಬಹಳ ಬಳಲುತ್ತಲೇ ಇದ್ದಾಳೆ....

read more