ಪ್ರವಾಸೋದ್ದಿಮೆಯ ಸಣ್ಣ ವಂಚನೆಗೆ ಬಲಿಯಾದ ದಿನ!

ಪ್ರವಾಸೋದ್ದಿಮೆಯ ಸಣ್ಣ ವಂಚನೆಗೆ ಬಲಿಯಾದ ದಿನ!

೨೦೧೮ರಲ್ಲಿ ಸೈಕಲ್ ಮಿತ್ರ ಹರಿಪ್ರಸಾದ್ ಶೇವಿರೆ ರಾಜಸ್ತಾನದ ಹೊಸದೇ ಸವಾಲೊಡಿದ್ದರು. ನಾನೊಪ್ಪಿಕೊಂಡೆ, ಜತೆಗೆ ಇನ್ನೋರ್ವ ಸೈಕಲ್ ಗೆಳೆಯ ಅನಿಲ್ ಶಾಸ್ತ್ರಿ ಕೂಡಾ ಸೇರಿಕೊಂಡರು. ಅದು ರಾಜಸ್ತಾನ ಅರಣ್ಯ ಇಲಾಖೆಯದ್ದೇ ವ್ಯವಸ್ಥೆ – ಪೆಡಲ್ ಟು ಜಂಗಲ್. ಅದರಲ್ಲಿ ಉದಯ್ ಪುರದಿಂದ ತೊಡಗಿದಂತೆ ಮೂರು ದಿನಗಳ ಕಾಲ, ಮೂರು ವನಧಾಮ – ಭಾಗ್ಡೋರಾ, ಜೈಸಮಂಡ್ ಮತ್ತು ಸೀತಾಮಾತಾಗಳನ್ನು ಹೊಕ್ಕು ಹೊರಟಿದ್ದೆವು. ಅಲ್ಲಿ ಕಚ್ಚಾ ದಾರಿಗಳೂ ಸೇರಿದಂತೆ, ಒಟ್ಟಾರೆ ಸೈಕಲ್ ಮೆಟ್ಟಿದ ಅಂತರ ಸುಮಾರು ನೂರೆಂಬತ್ತು ಕಿಮೀ. ಅದು ಪೂರ್ತಿ ರಣಗುಡುವ ಬಿಸಿಲಿನಲ್ಲೇ ಇತ್ತು. ಅದರ ನೆನಪಿನಲ್ಲಿ, ಈ ವರ್ಷವೂ ಸಮಶೀತೋಷ್ಣದ ಮಾಸ, ಅಂದರೆ ಸೆಪ್ಟೆಂಬರ್, ಅಕ್ಟೋಬರ್ ಕಳೆಯಿತೆಂಬ ಸಣ್ಣ ನಿರಾಶೆಯಲ್ಲಿದ್ದಾಗ….

read more

Category

Latest Comments

  1. ಧನ್ಯವಾದಗಳು. ಮುಂದಿನ ಕಂತು - ಜೈಪುರದ ಎರಡನೇ ದಿನದ ಕಥನ ಈಗ ಪ್ರಕಟಿಸಿದ್ದೇನೆ... ಅವಶ್ಯ ಓದಿ... ಆನಂದಿಸಿ.... ಪ್ರತಿಕ್ರಿಯಿಸಿ ನನ್ನನ್ನೂ ಆನಂದದಲ್ಲಿ ಪಾಲ್ಗೊಳ್ಳಿ 🙂

  2. ವಿಶೇಷ ಸೂಚನೆ: ಲೇಖನದ ಕೊನೆಯಲ್ಲಿರುವ ಎಂಟೂ ಸೇತುಗಳು (ಲಿಂಕ್ಸ್) ಕೆಲಸ ಮಾಡದಿದ್ದರೆ ದಯವಿಟ್ಟು ಈ ಸೇತು ಬಳಸಿ: https://youtube.com/playlist?list=PLYKOH-YtpDspXQKTGV3NY2B9IBdlCEzs7&si=JR143Wll9pTSfZIE