ಚಿತ್ತೋರ್ ಘಡ್ ಮತ್ತು ಉದಯಪುರ

ಚಿತ್ತೋರ್ ಘಡ್ ಮತ್ತು ಉದಯಪುರ

ಜಗ್ ಅರಾವಳಿಯಲ್ಲಿ ಮಲಗುವ ಮುನ್ನ, ಗೂಗಲ್ ನಕ್ಷೆ ನೋಡಿ, ಮರು ದಿನದ ಕಲಾಪ ಅಂದಾಜಿಸಿದೆವು. ಬೆಳಿಗ್ಗೆ ಬೇಗನೆ ಹೊರಟು ಮೊದಲು ಚಿತ್ತೋರ್ ಘಡ್ (೧೧೦ ಕಿಮೀ) ದರ್ಶನ. ತ್ರಿಕೋನದ ಎರಡನೇ ಭುಜದಂತೆ, ಅಲ್ಲಿಂದಲೇ ಕುಂಬಳಘಡಕ್ಕೆ (೧೬೨ ಕಿಮೀ) ಪಯಣ ಮತ್ತು ದರ್ಶನ. ಅಲ್ಲಿ ಸಂಜೆಯ ಧ್ವನಿ ಬೆಳಕಿನ ಪ್ರದರ್ಶನವನ್ನೂ ಅನುಭವಿಸಬೇಕು. ಕತ್ತಲಲ್ಲಿ ತ್ರಿಕೋನಪೂರ್ಣಗೊಳ್ಳುವಂತೆ ಉದಯಪುರಕ್ಕೆ (೮೪ ಕಿಮೀ) ಮರಳಬೇಕು. ಯೋಜನೆಯನ್ನು ಕಾರು ಚಾಲಕನಿಗೆ ಹೇಳಿ, ಏಳು ಗಂಟೆಗೆ ಹೊರಡಲು ಆದೇಶ ಕೊಟ್ಟೆವು. ಆದರೆ ಆತ ನಮ ಅಜ್ಞಾನವನ್ನು ನಗದು ಮಾಡಿಕೊಂಡು “ಹತ್ತು ಗಂಟೆಯಲ್ಲದೇ ಚಿತ್ತೋರ್ ಘಡ್ ಪ್ರವೇಶ ಚೀಟಿ ಸಿಗೋಲ್ಲಾ. ನಾವು ಎಂಟು ಗಂಟೆಗೆ ಹೊರಟರೆ ಧಾರಾಳವಾಯ್ತು…” ಜೈಪುರದ ನಹರ್ ಘಡ್ ಅನುಭವ ಬಲದಲ್ಲಿ ಇರಬಹುದೇನೋ ಎಂದು ಒಪ್ಪಿದೆವು. ಹಾಗಾಗಿ ನಾನು, ದೇವಕಿ ನಿತ್ಯ ರೂಢಿಯಂತೆ…

read more

Category

Latest Comments

  1. ನಿಜ. ಶ್ರೀಕೃಷ್ಣನೇ ಇಂದ್ರ ಪೂಜೆಯನ್ನುಊರವರಿಂದ ಧಿಕ್ಕರಿಸಿ, ತಮ್ಮ ಹಸುಗಳಿಗೆ ಹಸಿರು, ನೀರು ಕೊಡುವ ಪರ್ವತವನ್ನೇ ಪೂಜಿಸಿ ಎಂದು ಸಾಧಿಸಿದ ದೃಷ್ಟಾಂತ ಮರೆಯಲುಂಟೇ...

  2. ಶಿವರಾಮ ಕಾರಂತರ ಎರಡನೇ ಅಣ್ಣ - ವಾಸುದೇವ ಕಾರಂತ, ನಿವೃತ್ತ ವಿದ್ಯುತ್ ಇಂಜಿನಿಯರ್, ಮನೆಯಲ್ಲಿ ದೇವರು, ದೇವರನ್ನು ನಂಬುವ, ಬ್ರಾಹ್ಮಣ್ಯದ ರಕ್ಷಣೆ, ಪುನರ್ಜನ್ಮ..... ಹೀಗೆ ಹಲವು ಪುಸ್ತಕಗಳನ್ನು…

  3. 2010 ರಲ್ಲಿ ನಾವು ಮನಾಲಿಗೆ ಹೋಗಿದ್ದು, ಹಿಡಿಂಬಾ ದೇವಾಲಯ ನೋಡಿದ್ದು ಚಂದದ ನೆನಪು. ಹಿಡಿಂಬಾ ದೇವಿ ಅಲ್ಲಿನ ಒಂದು ಬೃಹತ್ ಪೈನ್ ಮರ! ಹಾಗೇ ಘಟೋತ್ಕಜ ಮರ!…

  4. ಲೇಖನ ಓದಿದಮೇಲೆ ಅನ್ನಿಸಿದ್ದು: ನೀವು ದಯವಿಟ್ಟು ತೀರ್ಥಕ್ಷೇತ್ರಗಳಿಗೆ ಹೋಗದಿರುವುದೇ ಲೇಸು- ಆ ಕುರಿತು ನಿಮ್ಮ ವ್ಯಂಗ್ಯವೇ ಹೆಚ್ಚು- ಅಡಿಗರ ಮಾತಿನಲ್ಲಿ “ ಇದನ್ನು ಬಯಸಿರಲಿಲ್ಲ” ನಿಮ್ಮಿಂದ ವಿವರವೂ…

  5. ಧನ್ಯವಾದಗಳು. ಮುಂದಿನ ಕಂತು - ಜೈಪುರದ ಎರಡನೇ ದಿನದ ಕಥನ ಈಗ ಪ್ರಕಟಿಸಿದ್ದೇನೆ... ಅವಶ್ಯ ಓದಿ... ಆನಂದಿಸಿ.... ಪ್ರತಿಕ್ರಿಯಿಸಿ ನನ್ನನ್ನೂ ಆನಂದದಲ್ಲಿ ಪಾಲ್ಗೊಳ್ಳಿ 🙂