ನವ ಭಾರತಾಹವಕ್ಕೆ ಅನ್ಯೋದ್ಯೋಗ ಪರ್ವ!

ನವ ಭಾರತಾಹವಕ್ಕೆ ಅನ್ಯೋದ್ಯೋಗ ಪರ್ವ!

(ಭಾರತ ಅ-ಪೂರ್ವ ಕರಾವಳಿಯೋಟ – ೧) ೧೯೯೦ರ ಪ್ರಾಕೃತಿಕ ಭಾರತ ಸೀಳೋಟ ಎರಡು ವರ್ಷ ಹಳತಾಗುತ್ತಿದ್ದಂತೆ ತಲೆಯೊಳಗೆ ಇನ್ನೊಂದೇ ಸಾಹಸಯಾನ ಮೊಳಕೆಯೊಡೆದಿತ್ತು. ಹಿಂದಿನಂತೆ ವ್ಯಾಪಾರ ಕಡಿಮೆಯಿರುವ ಬೇಸಗೆ ಕಾಲ, ಮತ್ತೆ ತಿಂಗಳ ಕಾಲ ಅಂಗಡಿ, ಮನೆ ಮತ್ತು ಮಗನ ನಿರ್ವಹಣೆಗೆ ತಂದೆ ತಾಯಿಯರಲ್ಲಿ ಬೇಡಿಕೆ ಇಡುವವನಿದ್ದೆ. ಅಷ್ಟರಲ್ಲಿ ನನ್ನ ಅಮೆರಿಕನ್ನಡಿಗ ತಮ್ಮ – ಆನಂದನಿಂದ, ಅವರಿಬ್ಬರಿಗೆ ಮಾಮೂಲೀ ಕರೆ – “ನಮ್ಮಲ್ಲಿಗೆ ಒಮ್ಮೆಯಾದರೂ ಬನ್ನಿ” ಹೊಸ ಭಾರೀ ಆಮಿಷದೊಡನೆ ಬಂದಿತ್ತು. “ಪ್ರಯಾಣ ನನ್ನ ಎರಡನೇ ವೈರಿ (ದೇವರು ಮೊದಲನೇ ವೈರಿ)” ಎಂದೇ ಸಾರುತ್ತಿದ್ದ ತಂದೆಗೆ ನಿರಾಕರಿಸಲಾಗದ ಆಮಿಷ – ಎಸ್. ಚಂದ್ರಶೇಖರ್ ಭೇಟಿ. ಭಾರತೀಯ ಮೂಲದ, ಶಿಕಾಗೋದಲ್ಲಿದ್ದ, ನೊಬೆಲ್ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯನ್ ಚಂದ್ರಶೇಖರ್ ಏನೂ ತೋರಿಕೆಯಿಲ್ಲದ ಅಪ್ಪಟ ಖ-ಭೌತ ವಿಜ್ಞಾನಿ.

read more
ಆರೋಹಣದ ಹುಟ್ಟು ಮತ್ತು ಪರ್ವತಾರೋಹಣ ಸಪ್ತಾಹ

ಆರೋಹಣದ ಹುಟ್ಟು ಮತ್ತು ಪರ್ವತಾರೋಹಣ ಸಪ್ತಾಹ

(ಧಾರಾವಾಹಿಯ ಮೊದಲ ಭಾಗ) ಮೂವತ್ತಾರು ವರ್ಷಗಳ ಹಿಂದೆ, ದಕ ಜಿಲ್ಲೆ ಮಿತಿಯೊಳಗೆ ಹೀಗೊಂದು ಕಲಾಪ ನಡೆಸಿದ್ದೆವು ಗೊತ್ತೇ?...

read more

Category

Latest Comments

  1. ನಿಜ. ಶ್ರೀಕೃಷ್ಣನೇ ಇಂದ್ರ ಪೂಜೆಯನ್ನುಊರವರಿಂದ ಧಿಕ್ಕರಿಸಿ, ತಮ್ಮ ಹಸುಗಳಿಗೆ ಹಸಿರು, ನೀರು ಕೊಡುವ ಪರ್ವತವನ್ನೇ ಪೂಜಿಸಿ ಎಂದು ಸಾಧಿಸಿದ ದೃಷ್ಟಾಂತ ಮರೆಯಲುಂಟೇ...

  2. ಶಿವರಾಮ ಕಾರಂತರ ಎರಡನೇ ಅಣ್ಣ - ವಾಸುದೇವ ಕಾರಂತ, ನಿವೃತ್ತ ವಿದ್ಯುತ್ ಇಂಜಿನಿಯರ್, ಮನೆಯಲ್ಲಿ ದೇವರು, ದೇವರನ್ನು ನಂಬುವ, ಬ್ರಾಹ್ಮಣ್ಯದ ರಕ್ಷಣೆ, ಪುನರ್ಜನ್ಮ..... ಹೀಗೆ ಹಲವು ಪುಸ್ತಕಗಳನ್ನು…

  3. 2010 ರಲ್ಲಿ ನಾವು ಮನಾಲಿಗೆ ಹೋಗಿದ್ದು, ಹಿಡಿಂಬಾ ದೇವಾಲಯ ನೋಡಿದ್ದು ಚಂದದ ನೆನಪು. ಹಿಡಿಂಬಾ ದೇವಿ ಅಲ್ಲಿನ ಒಂದು ಬೃಹತ್ ಪೈನ್ ಮರ! ಹಾಗೇ ಘಟೋತ್ಕಜ ಮರ!…

  4. ಲೇಖನ ಓದಿದಮೇಲೆ ಅನ್ನಿಸಿದ್ದು: ನೀವು ದಯವಿಟ್ಟು ತೀರ್ಥಕ್ಷೇತ್ರಗಳಿಗೆ ಹೋಗದಿರುವುದೇ ಲೇಸು- ಆ ಕುರಿತು ನಿಮ್ಮ ವ್ಯಂಗ್ಯವೇ ಹೆಚ್ಚು- ಅಡಿಗರ ಮಾತಿನಲ್ಲಿ “ ಇದನ್ನು ಬಯಸಿರಲಿಲ್ಲ” ನಿಮ್ಮಿಂದ ವಿವರವೂ…