ಯಮುನೋತ್ರಿ, ಗಂಗೋತ್ರಿ, ಗೋಮುಖ

ಯಮುನೋತ್ರಿ, ಗಂಗೋತ್ರಿ, ಗೋಮುಖ

ಯಮುನೋತ್ರಿಯಲ್ಲಿ ನಾವಿದ್ದ ದಿನಗಳಲ್ಲಿ ನಿಜ ಸೂರ್ಯ ದರ್ಶನಕ್ಕೆ ಮಂಜು, ಮೋಡ ಮತ್ತು ಒತ್ತಿನ ದೈತ್ಯ ಶಿಖರ ಶ್ರೇಣಿಗಳ ಪ್ರಭಾವ ಇದ್ದರೂ ಹಗಲಿನ ಪ್ರಕಾಶ ಬೆಳಿಗ್ಗೆ ಐದು ಗಂಟೆಗೇ ಸಿಗುತ್ತಿತ್ತು. ಆದರೆ ಜನ, ಕುದುರೆ, ಹೇಸರಗತ್ತೆ, ಕಾವಡಿ-ಬುಟ್ಟಿ ಹೊರುವವರು ಎಂಬ ವಿಪರೀತ ಸಂದಣಿ ಆರು ಗಂಟೆಗಷ್ಟೇ ತೊಡಗುವುದು ಎಂದು ತಿಳಿದಿದ್ದೆವು. ಹಾಗಾಗಿ ಸಮಯದ ಉಳಿತಾಯವನ್ನು ಲಕ್ಷಿಸಿ, (೧೪-೫-೯೦) ಚಾರಣದ ಆವಶ್ಯಕತೆಗಳನ್ನಷ್ಟೇ ಬೆನ್ನಿಗೇರಿಸಿ, ಐದೂಕಾಲಕ್ಕೇ ನಡಿಗೆಗಿಳಿದಿದ್ದೆವು. ಸಾಮಾನ್ಯ ಯಾತ್ರಿಗಳು ಈ ಚಾರಣದ ಅಂಶವನ್ನು (ಒಟ್ಟು ಸುಮಾರು ೨೬ ಕಿಮೀ) ಎರಡು ದಿನಗಳಲ್ಲಿ ಪೂರೈಸುತ್ತಾರೆಂದು ಕೇಳಿದ್ದೆವು. ಆದರೆ ನಮ್ಮ ಯೋಜನೆ ಒಂದೇ ದಿನದ್ದು. ಹಿಂದಿನದಂತೇ ಯಮುನೆಯ ದಂಡೆಯಲ್ಲೇ ಉತ್ತರಮುಖಿಗಳಾಗಿ, ಕಾಣುತ್ತಿದ್ದ ಕಾಡಿನತ್ತ ಸಾಗಿದೆವು. ಕಾಲ್ದಾರಿ ಬಹಳ ಸ್ಪಷ್ಟವಿದ್ದುದರಿಂದ ಮಾರ್ಗದರ್ಶಿ ಅಥವಾ ನಕ್ಷೆಯ ಗೋಜಿಗೆ ಹೋಗಲಿಲ್ಲ. ನನ್ನ ನೆನಪಿನಂತೆ, ಆ ಕಾಲದಲ್ಲಿ ಕಾಲ್ದಾರಿ ಉದ್ದಕ್ಕೂ ಯಮುನೆಯನ್ನು ಎಡಕ್ಕೇ ಇಟ್ಟುಕೊಂಡಿತ್ತು. ಇಂದು ಗೂಗಲ್ಲಿನಲ್ಲಿ, ವಾಹನಯೋಗ್ಯ ಮಾರ್ಗ ಅತ್ತ ಹರಿದಿರುವುದರಿಂದ ಹೊಸ ಜಾಡುಗಳನ್ನೂ ಅಡ್ಡ ಸೇತುವೆಗಳನ್ನೂ ಕಾಣಬಹುದು.

read more
ದಕ್ಷಿಣಕನ್ನಡ ಮಹಿಳಾ ಹೋರಾಟದ ದಾಖಲೀಕರಣ

ದಕ್ಷಿಣಕನ್ನಡ ಮಹಿಳಾ ಹೋರಾಟದ ದಾಖಲೀಕರಣ

ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ ಅಧ್ಯಾಯ ೩೭ ದಕ್ಷಿಣಕನ್ನಡದವರ ಬಗ್ಗೆ ಸಾಮಾನ್ಯವಾಗಿ ಹೇಳುವ...

read more

Category

Latest Comments

  1. ಧನ್ಯವಾದಗಳು. ಮುಂದಿನ ಕಂತು - ಜೈಪುರದ ಎರಡನೇ ದಿನದ ಕಥನ ಈಗ ಪ್ರಕಟಿಸಿದ್ದೇನೆ... ಅವಶ್ಯ ಓದಿ... ಆನಂದಿಸಿ.... ಪ್ರತಿಕ್ರಿಯಿಸಿ ನನ್ನನ್ನೂ ಆನಂದದಲ್ಲಿ ಪಾಲ್ಗೊಳ್ಳಿ 🙂

  2. ವಿಶೇಷ ಸೂಚನೆ: ಲೇಖನದ ಕೊನೆಯಲ್ಲಿರುವ ಎಂಟೂ ಸೇತುಗಳು (ಲಿಂಕ್ಸ್) ಕೆಲಸ ಮಾಡದಿದ್ದರೆ ದಯವಿಟ್ಟು ಈ ಸೇತು ಬಳಸಿ: https://youtube.com/playlist?list=PLYKOH-YtpDspXQKTGV3NY2B9IBdlCEzs7&si=JR143Wll9pTSfZIE

ಕರ್ನಾಟಕದ ಶಿಕ್ಷಣ ಸಚಿವ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೊಂದು ಬಹಿರಂಗ ಪತ್ರ

ಕರ್ನಾಟಕದ ಶಿಕ್ಷಣ ಸಚಿವ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೊಂದು ಬಹಿರಂಗ ಪತ್ರ

ಮಾನ್ಯರೇ ನಾನು ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸ್ನಾತಕೋತ್ತರ ಪದವೀಧರನಾಗಿ ಹೊರಬಂದರೂ (೧೯೭೪)...

read more