ಎಲ್ಲೋರಾ ದೌಲತ ಗಿರಿ
ವಿಜಯಪುರ – ಹಲವು ಪಾಳೇಪಟ್ಟುಗಳ ಮಿಶ್ರಣದೊಡನೆಯೂ ಸುಮಾರು ಹನ್ನೊಂದನೇ ಶತಮಾನದಲ್ಲಿ, ಚಾಲುಕ್ಯರ ಆಡಳಿತದಲ್ಲಿ ಗಟ್ಟಿಯಾಗಿ ರೂಪು ಪಡೆದ ನಗರ. ಮುಘಲ್, ಬಹಮನೀ, ಆದಿಲ್ ಶಾಹೀ, ಹೈದರಾಬಾದ್ ನಿಜಾಂ, ಮರಾಠ, ಬ್ರಿಟಿಶ್…… ಆಡಳಿತಗಳ ಸುಳಿಗಳಲ್ಲಿ ಬೆಳೆದಿದೆ, ಬಳಲಿದೆ. ಅದರಲ್ಲಿ ಢಾಳಾಗಿ ಕಾಣುವ ಕೆಲವು ಸಾಕ್ಷಿಗಳನ್ನಾದರೂ ನೋಡಲು ನಾವು (೨೭-೪-೯೦ರ) ಬೆಳಗ್ಗೆ ಐದೂವರೆ ಗಂಟೆಗೇ ಹೊರಟೆವು. ಮುಂದೆ ಮೊಪೆಡ್ಡಿನಲ್ಲಿ ಜೋಶಿಯವರ ‘ಶಿಷ್ಯ’ ಸಿದ್ಧಣ್ಣ ಬಿರಾದಾರ್. ಹಿಂದೆ ಖಾಲೀ ಬೈಕುಗಳಲ್ಲಿ ನಾವಾರು. ಅಪೂರ್ಣಗೊಂಡ ಮಹಲ್ಲಿನ ಹನ್ನೆರಡು ಕಮಾನುಗಳು (ಬಾರಾ ಕಮಾನ್), ಒಂದು ಭಾರೀ ಬುರುಜು (ಉಪ್ಲಿ ಬುರ್ಜ್), ಕೋಟೆಯ ಹಲವು ಫಿರಂಗಿಗಳ ಸಾಂಗತ್ಯದಲ್ಲಿ ತೋಪುಗಳ ರಾಜ ಎಂದೇ ಖ್ಯಾತವಾದ ಮಾಲಿಕ್ ಎ ಮೈದಾನ್, ತಾಜ್ ಮಹಲ್ಲಿಗೆ ಪ್ರೇರಣೆಯಾದ ಇಬ್ರಾಹಿಂ ರೋಜಾ, ಜುಮ್ಮಾ ಮಸೀದಿ ಸುತ್ತಿದೆವು. ನೋಡದೇ ಬಿಟ್ಟರೆ ಬಿಜಾಪುರ ನೋಡಿದ್ದೇ ಸುಳ್ಳೆನ್ನುವ ಗೋಲ್ ಗುಂಬಜ್ಗಂತೂ ಅವಶ್ಯ ಹೋಗಿದ್ದೆವು. ಅಲ್ಲಿನ ಶಬ್ದ ಮಾಲಿನ್ಯಕ್ಕೆ ಮೌನವಾಗಿ ಕಿವಿಕೊಟ್ಟೆವು. ಎಡೆಯಲ್ಲೆಲ್ಲೋ ಹೋಟೆಲಿನಲ್ಲಿ ತಿಂಡಿ ಮಾಡಿಕೊಂಡೆವು. ವಿವಿಧ ರಾಜಾಡಳಿತಗಳ ಕಾಲದಲ್ಲಿ ನಿರ್ಮಾಣಗೊಂಡು ಬೇಸಗೆಯ ಉತ್ತುಂಗದಲ್ಲೂ ಭರ್ತಿ ನೀರಿದ್ದ ಭಾರೀ ಬಾವಿಗಳಿಗೆ ಪ್ರತಿನಿಧಿ ಎನ್ನುವಂತೆ ಒಂದನ್ನೂ (ತಾಸ್ ಬಾವಡೆ) ಕಂಡೆವು.
ಮಾಸ್ತಿಯನ್ನರಸುತ್ತಾ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ - ಅಧ್ಯಾಯ ಮೂವತ್ತ ನಾಲ್ಕು ಕ್ರಿಯಾತ್ಮಕವಾಗಿ...
ಹವ್ಯಾಸಿ ಪ್ರಕಾಶಕರಿಗೆ ಸಲಹೆ
ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಹದಿನಾಲ್ಕನೇ ಅಧ್ಯಾಯ [ಜಿಟಿ ನಾರಾಯಣ ರಾಯರಿಂದ ಸಂಪಾದಕೀಯ ಟಿಪ್ಪಣಿ:...
ವಿಳಾಸಹೀನರ ಹುಡುಕಾಟದಲ್ಲಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ - ಅಧ್ಯಾಯ ಮೂವತ್ತಮೂರು ಸುಮಾರು ಮೂರು ವರ್ಷಗಳ ಕಾಲ...
ಪುಸ್ತಕೋದ್ಯಮದ ನೆಲಕ್ಕೆ ಮೌಲ್ಯ ಕಚ್ಚಿಸುವ ಹನಿಗಳು
ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಹದಿಮೂರನೇ ಅಧ್ಯಾಯ ೧. ಮನೆಗೊಂದು ಗ್ರಂಥಾಲಯಕ್ಕೆ ಒಂದು ದಿಕ್ಸೂಚೀ ತಿದ್ದುಪಡಿ...
ಮೆಕ್ಸಿಕೋಕ್ಕೆ ಬನ್ನಿ ಅಂಡಮಾನ್ ಇರಲಿ
ದಾರಿ ತಪ್ಪಿದ ಪತ್ರ-ಪ್ರವಾಸ ಕಥನ (ಅಂಡಮಾನ್ ಆರನೇ ಭಾಗ?) ನನ್ನೊಬ್ಬ ತಮ್ಮ ಆನಂದವರ್ಧನ, ನನಗಿಂತ ಐದುವರ್ಷ ಕಿರಿಯ,...
ಅಂಡಮಾನ್ ಕಥನ ಐದನೇ ಭಾಗ
[ಅಮೆರಿಕಾದಲ್ಲಿರುವ ನನ್ನೊಬ್ಬ ತಮ್ಮ ಆನಂದವರ್ಧನ (ಐದು ವರ್ಷ ಕಿರಿಯನಾದರೂ) ನನ್ನ ‘ಬಹುಹುಚ್ಚುಗಳ ನಿಕಟ ಅನುಯಾಯಿ....
ಒತ್ತಿನಣೆ ಮತ್ತು ಚಾಪ್ಲಿನ್ನ ಅಂಡು
ಪ್ರಿಯರೇ, ಈ ಕ್ಷಣದಲ್ಲಿ ಅಲ್ಲದಿದ್ದರೂ ಇಂದೇ ಓದಬೇಕಾದ ಲೇಖನ ಇಕೋ ಇದು ಉಡುಪಿ ಕುಂದಾಪುರಗಳಿಂದಲೂ ಉತ್ತರಕ್ಕೆ...
ಎರಡು ಯಕ್ಷ ಅನೌಚಿತ್ಯ, ಬೆಳಗಿದ ಕಥಕ್ಕಳಿ
[ಅನಂತ ಮೈಸೂರಿನಲ್ಲಿರುವ ನನ್ನ ಎರಡನೇ ತಮ್ಮ. ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್. ಹವ್ಯಾಸದಲ್ಲಿ ಯಕ್ಷಗಾನ...
ಅಂಡಮಾನ್ – ನಾಲ್ಕನೇ ಭಾಗ
ಅಮೆರಿಕಾದಲ್ಲಿರುವ ನನ್ನೊಬ್ಬ ತಮ್ಮ ಆನಂದವರ್ಧನ (ಐದು ವರ್ಷ ಕಿರಿಯನಾದರೂ) ನನ್ನ `ಬಹುಹುಚ್ಚುಗಳ’ ನಿಕಟ ಅನುಯಾಯಿ....
ಅಂಡಮಾನ್ ಮೂರನೇ ಭಾಗ
ಪ್ರಿಯಾನಂದಾ, `ಛಲಬಿಡದ ರಾಜಾ ತ್ರಿವಿಕ್ರಮನು ಮತ್ತೆ ಮರದ ಬಳಿಗೆ ಹೋಗಿ, ಬೇತಾಳನನ್ನು ಇಳಿಸಿ, ಹೆಗಲ ಮೇಲೆ ಹಾಕಿಕೊಂಡು...
ಸಂಶೋಧನಾ ಪ್ರಜ್ಞೆ ಮತ್ತು ಪದವಿ
[ವಿಜಯ ಕರ್ನಾಟಕ ಪತ್ರಿಕೆ ಡಾಕ್ಟರೇಟ್ಗಳ ಬಗ್ಗೆ ವಿಶೇಷ ಸರಣಿ ಸುರು ಮಾಡಿದಾಗ ನಾನು ಸ್ವಲ್ಪ ತಡವಾಗಿ ನಾಲ್ಕು ನನ್ನ...
ಅಂಡಮಾನ್ ಎರಡನೇ ಭಾಗ
ಪ್ರಿಯಾನಂದಾ, ಬಂಗಾಳಕೊಲ್ಲಿಯ ಕಡೆದಿಟ್ಟ ನವನೀತ 'ಅಂಡಮಾನ್' ಒಂದು ಆಪ್ತ ಪತ್ರ-ಪ್ರವಾಸ ಕಥನ ಎರಡನೇ ಭಾಗ...
ಸಲಾಮು ತೆಕ್ಕೋ ಕೆರೆಮನೆ ಜೀಯಾ
ನನ್ನ ಬಾಲ್ಯದ ಮಡಿಕೇರಿ ಮತ್ತೆ ಬಳ್ಳಾರಿ ಮುಂದುವರಿದು ಬೆಂಗಳೂರು (೧೯೬೯ರ ಆಸುಪಾಸಿನಲ್ಲಿ) ಯಕ್ಷಗಾನ ಸಮೃದ್ಧ...
ಬಂಗಾಳಕೊಲ್ಲಿಯ ಕಡೆದಿಟ್ಟ ನವನೀತ ಅಂಡಮಾನ್
ಪ್ರಿಯಾನಂದಾ ನಿಂಗೆ ಬೇಕೋ ಬೇಡವೋ ಎಂಬ ಪ್ರಶ್ನೆ ಇಲ್ಲ, ನನಗೆ ಪುರ್ಸೊತ್ತಾಗಿದೆ, ಅಂಡಮಾನ್ ಪ್ರವಾಸದ ಅನುಭವ (೨೦೦೭...
ಜಿಟಿ ನಾರಾಯಣರಾಯರಿಗೊಂದು ನುಡಿನಮನ
ಜಿಟಿನಾ ನನ್ನ ತಂದೆ. ಈಚಿನ ವರ್ಷಗಳಲ್ಲಿ ಅವರ ಮಾತಿನಲ್ಲಿ ಆಗಾಗ ನಮಗೆ (+ನನ್ನ ಹೆಂಡತಿ) ಆಪ್ತವಾಗಿ ಕೇಳುತ್ತಿದ್ದ...
ಪುಸ್ತಕೋದ್ಯಮ ಭಯಂಕರ ಆಕ್ರೋಶವರ್ಜನಕೃತ ಅಶೋಕ ಪುರಾಣಾಂತರ್ಗತ ಶ್ಮಶ್ರುಕೂರ್ಚಾಖ್ಯಾನ
ವಿಶೇಷ ಸೂಚನೆ: ಇದು ಹೆಂಗಸರಿಗಲ್ಲ! ಮೀಸೆ ಬರುವ ಮೊದಲು ಹೆಚ್ಚಿನ ಹುಡುಗರು ಕದ್ದುಮುಚ್ಚಿ ಅಪ್ಪನ ರೇಜರ್ ಮುಖದ...
















ವಾಹ್! ಅಪರೂಪಂ ಚೋರ, ಅಲ್ಲಲ್ಲ ಮಿತ್ರ ದರ್ಶನಂ 🙂