ಮೆಟ್ರೋದಲ್ಲಿ ಕಾಣೆಯಾದ ಮೂವರು!
ಏಪ್ರಿಲ್ ೧೭, ೧೯೯೬ ಬುಧವಾರದ ಬೆಳಿಗ್ಗೆ ನಾವು ಸುಪ್ರಸನ್ನರಾಗಿಯೇ ಕಲ್ಕತ್ತ ರೈಲ್ವೇ ನಿಲ್ದಾಣವೇನೋ ತಲಪಿದ್ದೆವು. ಆದರೆ ಮತ್ತಿನ ಮೂರೂವರೆ ಗಂಟೆಗಳ ಅನಾವಶ್ಯಕ ಹೋರಾಟದಲ್ಲಿ ವಿಜಯಿಗಳಾದರೂ ಹಸಿ ಹೊಟ್ಟೆಯಲ್ಲಿ, ಕ್ರುದ್ಧ ಮನಸ್ಸಿನಲ್ಲಿ ಬೈಕುಗಳೊಡನೆ ಹೊರಬಿದ್ದೆವು. ಮೊದಲು ಬೈಕುಗಳ ಹೊಟ್ಟೆ, ಅನಂತರ ನಮ್ಮ ಹೊಟ್ಟೆ ತುಂಬಿಸಿಕೊಂಡೆವು. ಸೂರ್ಯ ಆಗಲೇ ಅಗ್ನಿವರ್ಷಕ್ಕೆ ತೊಡಗಿದ್ದ. (ಉಪಾಧ್ಯರ ವರದಿ -ಅಂದು ಮಧ್ಯಾಹ್ನದ ತಾಪಮಾನ ೪೩ ಡಿಗ್ರಿ) ಮೊದಲಲ್ಲೇ ಸರಳವಾಗಿ ಪೋಲಿಸರ ತಡೆ ಬಂತು. ಪ. ಬಂಗಾಳದಲ್ಲಿ ಆ ಕಾಲದಲ್ಲೇ ಸಹವಾರರಿಗೂ ಶಿರಸ್ತ್ರಾಣ ಕಡ್ಡಾಯವಿತ್ತು, ನಾವು ಒಯ್ದೇ ಇರಲಿಲ್ಲ. ನಮ್ಮ ಅಜ್ಞಾನವನ್ನು ಪೊಲಿಸರು ಮನ್ನಿಸಿದರು.ಮತ್ತೆ ನಿರ್ವಿಘ್ನವಾಗಿ…. ಗಂಗಾ ಬ್ರಹ್ಮಪುತ್ರ ನದಿಗಳ ಮುಖಜಭೂಮಿಯ ಸಾವಿರಾರು ಕುದುರುಗಳಲ್ಲಿ ವ್ಯಾಪಿಸಿರುವ ‘ಸುಂದರಬನ್ಸ್ ವ್ಯಾಘ್ರಧಾಮ’ದಂತದ್ದು ಜಗತ್ತಿನಲ್ಲೇ ಇನ್ನೊಂದಿಲ್ಲ. ಅದನ್ನು ನೋಡುವುದರಿಂದಲೇ ನಮ್ಮ ಎರಡನೇ ಭಾರತ ಸಾಹಸಯಾನವನ್ನು ಪ್ರಾರಂಭಿಸುವ ಯೋಜನೆ ನನ್ನದಿತ್ತು. ಅದಕ್ಕನುಕೂಲವಾಗುವಂತೆ ಕಲ್ಕತ್ತಾ ವಾಸ/ ದರ್ಶನವನ್ನು ಸ್ವಲ್ಪ ಹೆಚ್ಚೇ ಮಾಡಲು ನಮಗೆ ಒಳ್ಳೆಯ ಅವಕಾಶ ಒದಗಿಸಿದವರು ಸ್ವಾಮೀ ಜಗದಾತ್ಮಾನಂದ (೧೯೨೯-೨೦೧೮). ರಾಮಕೃಷ್ಣಾಶ್ರಮದ ಬಹು ಗೌರವಾನ್ವಿತ ಸಂನ್ಯಾಸಿಗಳಲ್ಲಿ ಜಗದಾತ್ಮಾನಂದರದು ದೊಡ್ಡ ಹೆಸರು. ಅಪ್ಪಟ ಕನ್ನಡಿಗರೇ ಆದ ಸ್ವಾಮೀಜೀ ತನ್ನ ಓದು, ಅಧ್ಯಯನ ಹಾಗೂ ಸಮಾಜಸೇವೆಗಳ ಅನುಭವಗಳನ್ನು ಕ್ರೋಢೀಕರಿಸಿ ಬರೆದ ‘ಬದುಕಲು ಕಲಿಯಿರಿ’ (೨ ಭಾಗಗಳು) ಪುಸ್ತಕವಂತೂ ಕನ್ನಡ ಪ್ರಕಾಶನರಂಗದಲ್ಲಿ ಅದ್ವಿತೀಯ ದಾಖಲೆಯನ್ನೇ ಮಾಡಿದೆ.
ಸರ್ವ ಧರ್ಮ ಏಕ್ ಸಮಾನ್
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೩೬ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ...
ಟ್ರಿನ್ ಟ್ರಿನ್ – ಮೈಸೂರನ್ನು ಆವರಿಸಿದ ಸೈಕಲ್ಲು
(ಚಕ್ರೇಶ್ವರ ಪರೀಕ್ಷಿತ ೧೩) [ನನ್ನಮ್ಮ ಗಂಟುವಾತಕ್ಕೆ ಸೇರಿಬಂದ ವೃದ್ಧಾಪ್ಯದಿಂದ (೮೭ವರ್ಷ) ಬಹಳ ಬಳಲುತ್ತಲೇ ಇದ್ದಾಳೆ....
ಕೆರೆಯ ನೀರನು ಕೆರೆಗೆ ಚೆಲ್ಲಿ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ - ೩೫ ಪ್ರವಾಸ ಹಾಗೂ ಪ್ರೇಕ್ಷಣೀಯ ಸ್ಥಳಗಳ...
ಲೇಖನಿಯಿಂದ ಲ್ಯಾಪ್ಟಾಪ್ಗೆ
ಶ್ಯಾಮಲಾ ಮಾಧವ ಇವರ ಆಥ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ - ೩೪ ಒಲಿಂಪಿಯನ್ ಗೋಲ್ಕೀಪರ್ ಸಂಜೀವ...
ಶಾಲೆ ತೊಡಿಸಿದ ಕಡಿವಾಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು - ಮೂರು ಅಧ್ಯಾಯ ನಾಲ್ಕು ಮೋಡದಂತೆ ತೇಲಿ, ಹಕ್ಕಿಯಂತೆ ಹಾರಿ,...
ಕ್ಷಣಕ್ಷಣವೂ ರೋಮಾಂಚನ: ಮೋಟಾರ್ ರ್ಯಾಲಿ
(ಚಕ್ರವರ್ತಿಗಳು - ಹತ್ತನೇ ಸುತ್ತು) [ಚಾಲಕ-ವಾಹನ-ಮಾರ್ಗ ಅಥವಾ ವ್ಯಕ್ತಿ-ಯಂತ್ರ-ಪರಿಸರ ಸಮನ್ವಯದ ಪರಾಕಾಷ್ಠೆಗೊಂದು...
ಚಂದ್ರಬೊಂಬೆಯಲ್ಲಿಗೆ ನೆಗೆಯಬೇಕಾದರೆ
ಮಾನವ, ಚಂದ್ರನ ಮೇಲೆ ಲೇಖಕ: ಜಿ.ಟಿ. ನಾರಾಯಣ ರಾವ್ (ಕಂತು ಮೂರು) ಬುದ್ಧಿ ಬಂದಾಗ ಮೊದಲ ಆಕರ್ಷಣೆ ಆಕಾಶ. ‘ಮನುಷ್ಯನಿಗೆ...
ಮಂಗಳೂರು ವೈಲ್ಡ್ ಲೈಫ್ ಟ್ರಸ್ಟ್
(ಶರತ್ ಕಥನದಲ್ಲಿ ಎರಡನೇ ಮತ್ತು ಅಂತಿಮ ಭಾಗ) - ಬಿ.ಕೆ. ಶರತ್ ಬ್ರ| ಓಡ್ರಿಕ್ ದೇವಾನಂದರಿಗೊಬ್ಬ ಬಾಡಿಗೆ ಕಾರಿನ...
ಉರಗೋದ್ಯಾನ – ಕುದುರೆಯ ಬಾಯಿಯಿಂದ!
[‘ಮಂಗಳೂರಿನ ಆದಿ ಉರಗೋದ್ಯಾನ’- ನನ್ನ ನೆನಪಿನ ಅಪರಿಪೂರ್ಣ ಚಿತ್ರ ಓದಿದಾಗ ಕಾರ್ಕೋಟಕ ಕಚ್ಚಿದ ನಳಮಹಾರಾಜನಂತೆ (ಬಾಹುಕ)...
ಇಂದಿನ ಕಣ್ಣು ಅಂದಿನ ಮಣ್ಣು
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು - ಎರಡು ಅಧ್ಯಾಯ ಒಂದು ಎಂಬತ್ತರ ಹಿರಿ ಎತ್ತರದಿಂದ ನಡೆದು ಬಂದ...
ತಾಯಿ ಮತ್ತು ಮಗಳು
ಮಾನವ, ಚಂದ್ರನ ಮೇಲೆ ಲೇಖಕ: ಜಿ.ಟಿ. ನಾರಾಯಣ ರಾವ್ (ಕಂತು ಎರಡು) ಮೇಲಿನ ಮಿಲಿಟೆರಿ ಕವಾಯಿತಿನಲ್ಲಿ ಭೂಮಿಯಿಂದ ವಿವಿಧ...
ಮಳೆಬಿಲ್ಲು ೨೦೧೨ ಮಕ್ಕಳ ನಾಟಕೋತ್ಸವ ೮
ರಾಷ್ಟ್ರೀಯ ನಾಟಕ ಶಾಲೆ, ದಿಲ್ಲಿಯ ಬೆಂಗಳೂರಿನ ಪ್ರಾದೇಶಿಕ ಸಂಪನ್ಮೂಲ ಕೇಂದ್ರ ರಾಜ್ಯದೊಳಗೆ ವರ್ಷಕ್ಕೊಂದೆಡೆ ನೀಡುವ -...
ಮುಗಿಯದ ಪಯಣ
ಮುಗಿಯದ ಪಯಣ (ಜಿ.ಟಿ ನಾರಾಯಣರಾಯರ ಆತ್ಮಕಥೆ ವಿ-ಧಾರಾವಾಹಿಯಾಗಿ ಕಂತು ಒಂದು) [ಮುಗಿಯದ ಪಯಣ, ಜಿ.ಟಿ ನಾರಾಯಣ ರಾವ್...
ಪ್ರಕೃತಿ ಸಂಸ್ಕೃತಿ
(ಚಕ್ರವರ್ತಿಗಳು - ಒಂಬತ್ತನೆಯ ಸುತ್ತು) ಜೀವನ ವ್ಯಾಪಾರದಲ್ಲಿ ನಾವು ಪ್ರಕೃತಿ - ಸಹಜ ಪರಿಸರವನ್ನು ಜೀವಿ ಪರಿಸರಕ್ಕೆ...
ಮಾನವ, ಚಂದ್ರನ ಮೇಲೆ
ಮಾನವ, ಚಂದ್ರನ ಮೇಲೆ ಲೇಖಕ: ಜಿ.ಟಿ. ನಾರಾಯಣ ರಾವ್ (ಕಂತು ಒಂದು) [ಕರ್ನಾಟಕ ಸಹಕಾರೀ ಪ್ರಕಾಶನ ಮಂದಿರ, ನಿಯಮಿತ,...
ಕೂಚಿಪುಡಿ ಯಕ್ಷಗಾನ!
ತಿಂಗಳ ಹಿಂದೆ ಜಾಲ-ಸಂವಾದಕ್ಕೆ (ಚಾಟ್) ಸಿಕ್ಕಾಗ (ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರೂ ಬಹುಮುಖೀ...
















ವಾಹ್! ಅಪರೂಪಂ ಚೋರ, ಅಲ್ಲಲ್ಲ ಮಿತ್ರ ದರ್ಶನಂ 🙂