ಹಂಪಿ, ದುರ್ಗ, ಜಯ ಮಂಗಳಂ
ದೈವಿಕ ಸಂಗತಿಗಳಲ್ಲಿ ನನಗೆ ಎಳ್ಳಷ್ಟೂ ವಿಶ್ವಾಸ ಇಲ್ಲ. ಆದರೂ ಯಾವುದೇ ಆರಾಧನಾ ವಿಧಾನಗಳು, ಸ್ಥಳ, ಮೂರ್ತಿಶಿಲ್ಪ, ಸಂಬಂಧಿಸಿದ ಭವ್ಯ ಭವನಗಳನ್ನು ಒಮ್ಮೆಯಾದರೂ ನೋಡುವ ಅವಕಾಶ ಒದಗಿದಾಗ ತಪ್ಪಿಸಿಕೊಂಡದ್ದಿಲ್ಲ. ಅವನ್ನು ಅವಮಾನಿಸುವುದಾಗಲೀ ಪ್ರಾಮಾಣಿಕವಾಗಿ ನಂಬಿದವರನ್ನು ಪರಿವರ್ತಿಸುವ ಹಠವಾಗಲೀ ನನ್ನದಲ್ಲ. ಬದಲಿಗೆ ರಚನೆಗಳ ವೈಭವವನ್ನೂ ಅದರ ಸೃಷ್ಟಿಕರ್ತ ಮನುಷ್ಯನ ವರ್ತನೆಗಳನ್ನೂ ಕಂಡುಕೊಳ್ಳುವ ಕುತೂಹಲ ನನ್ನದು. ಹಾಗಾಗಿ ಈ ಯಾನದಲ್ಲಿ ಡಾರ್ಜಿಲಿಂಗ್, ಕಾನ್ಹಾಗಳಂತೆ ಕಾಶಿ, ಗಯಾಗಳನ್ನೂ ಪಟ್ಟಿ ಮಾಡಿ ನೋಡಿದ್ದೆ. ಅಲ್ಲಿ ದೇವ ಬಿಂಬದ ದರ್ಶನ, ಔಪಚಾರಿಕ ನಮನ, ತೀರ್ಥ ಪ್ರಸಾದಗಳಿಗೆ ನಾನು ಅಂಟಿಕೊಂಡದ್ದಿಲ್ಲ. ಉದಾಹರಣೆಗೆ, ತಿರುಮಲೆಯಲ್ಲಿ ಎರಡು ದಿನವಿದ್ದೂ ವೆಂಕಟ್ರಮಣನ ದರ್ಶನ ಮಾಡಲೇ ಇಲ್ಲ. ಆದರೆ ಎಲ್ಲೂ ಅವಾಗಿ ಒದಗಿದಾಗ ಭಾವ ತುಮುಲಗಳೇನೂ ಇಲ್ಲದೇ ತೀರ್ಥ, ಗಂಧ, ಹೂ, ತುಳಸಿ ಇತ್ಯಾದಿಗಳನ್ನು ವಸ್ತು ನಿಷ್ಠವಾಗಿ ಗ್ರಹಿಸುತ್ತ ಬಂದಿದ್ದೇನೆ. ತಿರುಪತಿಯ ಲಡ್ಡು, ಮಧೂರಿನ ಅಪ್ಪ, ಕಾಶ್ಮೀರದ ಖೀರು, ಅನ್ನಾವರಂನ ಸಪಾದಭಕ್ಷ್ಯ, ಕೃಷ್ಣಮಠದ ಮಡ್ಡಿ, ಶರವಿನ ಪಂಚಕಜ್ಜಾಯ, ಅನೇಕಾನೇಕ ದೇವಳಗಳ ಊಟ ಮುಂತಾದವನ್ನು ಮನಮೆಚ್ಚಿ ಸ್ವೀಕರಿಸಿದ್ದೇನೆ.
ಲಲಿತ ನಟನಾ ಶಿಲ್ಪ ಅಷ್ಟಪದಿ
(ಹವ್ಯಾಸೀ ಮರ ಕೆತ್ತುವ ಕಲೆ - ಭಾಗ ೨) ನನ್ನ ತೆಂಗಿನತುಂಡುಗಳ ಗುದ್ದಾಟಕ್ಕೂ ಎಷ್ಟೋ ಮೊದಲು, ಅಂದರೆ ಮಳೆ...
ಪುರಿ ಎಂಬ ಬೆರಗಿನಪುರ
ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ ಒಡಿಶಾದ ಒಡಲೊಳಗೆ ಅಧ್ಯಾಯ (೩) ಮಂಗಲ ಜೋಡಿಯಿಂದ ಹೊರಟ ನಾವು, ಅಂದು...
ಕಲ್ಪವೃಕ್ಷದಲ್ಲಿ ಚತುರ್ಮುಖಗಳು
ಹವ್ಯಾಸೀ ಮರ ಕೆತ್ತುವ ಕಲೆ - ಭಾಗ ೧ ಬನ್ನಿ, ನನ್ನ ಹೊಸ ಪರಿವಾರದ ಪರಿಚಯ ಮಾಡಿಕೊಳ್ಳಿ. ಚಿತ್ರದಲ್ಲಿ ಎಡದಿಂದ...
ಮಂಗಲ ಜೋಡಿ
ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ ಒಡಿಶಾದ ಒಡಲೊಳಗೆ ಅಧ್ಯಾಯ (೨) ನವೆಂಬರ ೨೨ ರ ಬೆಳಗ್ಗಿನಿಂದ ಆರಂಭವಾಗುವ...
ಕ್ಷೇತ್ರ ದರ್ಶನದಲ್ಲೊಂದು ಸುತ್ತು
ಭಾಗ ಒಂದು - ತಮಿಳರ ಲೋಕದಲ್ಲಿ ಯಾರದೇ ಮನೆಗೆ ಔಪಚಾರಿಕ ಹಾಜರಿ ಹಾಕುವಲ್ಲಿ ನನಗೆ ಯಾವತ್ತೂ ವಿಶೇಷ ಆಸಕ್ತಿಯಿಲ್ಲ....
ಗಣಿತ ಭೌತವಿಜ್ಞಾನಗಳ (ಸ-)ರಸಲೋಕದಲ್ಲಿ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು - ಆರು ಅಧ್ಯಾಯ ಹನ್ನೆರಡು ನಮ್ಮ ಗಣಿತಗುರುಗಳು...
ಜಂಟಿ ಸೈಕಲ್ ಬೆನ್ನೇರಿ
(ಕಳೆದ ವಾರದ ‘ನಡೆದು ನೋಡು ಮಂಗಳೂರು ನರಕ’ದ ಜಾಡಿನಲ್ಲಿ ಎರಡನೇ ಭಾಗ) ಮಂಗಳೂರ ದಾರಿಗಳ ನವೀಕರಣದಲ್ಲಿ ಸುಖಕರ ಸವಾರಿಗೆ...
ಆರ್ಮ್ಸ್ಟ್ರಾಂಗ್ ಸಂಗಡಿಗರು
(ಮಾನವ, ಚಂದ್ರನ ಮೇಲೆ - ಆರನೇ ಕಂತು) ನೀಲ್ ಎ. ಆರ್ಮ್ಸ್ಟ್ರಾಂಗ್ (೩೮) ಅಪೊಲೊ ೧೧ರ ನಾಯಕ. ಮೈಕಲ್ ಕಾಲಿನ್ಸ್ (೩೪)...
ನಡೆದು ನೋಡಿ ಮಂಗಳೂರು ನರಕ!
ಅತ್ರಿ ಬುಕ್ ಸೆಂಟರ್ ಇದ್ದ ಕಾಲದಲ್ಲಿ, ದಿನವಿಡೀ ಕೂತು ಕಾಲು, ದೇಹ ಜಡವೇರುತ್ತಿದ್ದಂತೆ ಸಂಜೆ ದೇವಕಿ ಬರುವುದನ್ನು...
ನಾವು ಮಾಡಿದ ಪ್ರಯೋಗಗಳು
(ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು - ಐದು) ಅಧ್ಯಾಯ ಒಂಬತ್ತು ಜಿಎಸ್ಕೆ ಮೇಷ್ಟ್ರು...
‘ಬೋರೇಗೌಡ’ನ ಇನ್ನಷ್ಟು ನೆನಪುಗಳು!
(ನಂದಿ ಹೋಗಲಿರುವ ನಂದಿಯ ಮೂರನೇ ಮತ್ತು ಅಂತಿಮ ಭಾಗ) ಗಾಳಿಪಟ, ಬುಗುರಿ ಮತ್ತು ರೌಡಿ ರುದ್ರ! ಬಾಲ್ಯದಲ್ಲಿ ನಾನು ಭಾರೀ...
ತವರೂರ ದಾರಿಯಲಿ
ಮಾನವ, ಚಂದ್ರನ ಮೇಲೆ ಲೇಖಕ: ಜಿ.ಟಿ. ನಾರಾಯಣ ರಾವ್ (ಕಂತು ಐದು) “ಎಲ್ಲ ವ್ಯವಸ್ಥೆಗಳು ಸಮರ್ಪಕವಾಗಿವೆ. ಹೊರಡಿ” ನೆಲ....
ಮರುಭೂಮಿಯಲ್ಲೊಂದು ಓಯಸಿಸ್!
ಟೆಕ್ಕಿ ಗೆಳೆಯ ಸಂದೀಪ್ ಮಹಾರಾಷ್ಟ್ರದ ಯಾವುದೋ ಅನಾಮಧೇಯ ಹಳ್ಳಿಗಳಲ್ಲಿ ಸಂಶೋಧಕರೊಬ್ಬರಿಗೆ ಮೂಲ ಮಾಹಿತಿ ಸಂಗ್ರಾಹಕನಾಗಿ...
ಗಾಂಧೀ ದರ್ಶನ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು - ನಾಲ್ಕು ಅಧ್ಯಾಯ ಆರು ನಾನಿನ್ನೂ ಮಾಧ್ಯಮಿಕ...
ಬೋರೇಗೌಡ ಬೆಂಗಳೂರಿಗ್ಬಂದ
(ನಂದಿಹೋಗಲಿರುವ ನಂದಿಯ ಎರಡನೇ ಭಾಗ) ಈ ಸಲದ ನಮ್ಮ ಬೆಂಗಳೂರು ಪ್ರವಾಸದ ಮುಖ್ಯ ಕಲಾಪ ಹಿಂದಿನ ಲೇಖನದಲ್ಲಿ ಹೇಳಿದಂತೆ -...
ರಾಕೆಟ್ ಮಾರಕಾಸ್ತ್ರ
ಮಾನವ, ಚಂದ್ರನ ಮೇಲೆ ಲೇಖಕ: ಜಿ.ಟಿ. ನಾರಾಯಣ ರಾವ್ (ಕಂತು ನಾಲ್ಕು) ಗೊಡ್ಡಾರ್ಡನ ಕನಸನ್ನು ತಮ್ಮ ಕನಸೇ ಎಂದು...
















ತುಂಬ ಉಪಯುಕ್ತ ಮಾಹಿತಿ.