ಕಲ್ಕತ್ತಾ ದರ್ಶನ

ಕಲ್ಕತ್ತಾ ದರ್ಶನ

ಈಶ್ವರಚಂದ್ರ ವಿದ್ಯಾ ಸಾಗರ ಸೇತುವೆ ಅಥವಾ ವಿದ್ಯಾಸಾಗರ್ ಸೇತು, ಹದಿಮೂರು ವರ್ಷಗಳ ನಿರ್ಮಾಣ ಸಮಯ ನುಂಗಿ ೧೯೯೨ರಲ್ಲಿ ಲೋಕಾರ್ಪಣೆಗೊಂಡಿತು. ಆದರೆ ಅದರ ಉತ್ತರೋತ್ತರ ಕೆಲಸಗಳು ನಾವು ಕಲ್ಕತ್ತಾಕ್ಕೆ ಹೋದಂದೂ ಪೂರ್ಣಗೊಂಡಿರಲಿಲ್ಲ. ಅಂದರೆ, ಎರಡೂ ದಂಡೆಗಳ ವಿವಿಧ ದಾರಿಗಳನ್ನು ತಡೆರಹಿತವಾಗಿ ಸೇರಿಕೊಳ್ಳುವ ಮೇಲು ಸೇತುವೆಗಳ ಜಾಲ ಮತ್ತು ವಾಹನ ಸಂಚಾರದ ಪ್ರಮುಖಧಾರೆಯನ್ನು ಇತ್ತ ಹರಿಬಿಡುವ ಕೆಲಸಗಳು ಕುಂಟುಗತಿಯಲ್ಲೇ ಇದ್ದವು. ಆದರೇನು, ಐವತ್ತು ವರ್ಷಕ್ಕೂ ಹಳೆಯ ಹೌರಾ ಸೇತುವೆಗೆ ಹೆಚ್ಚಿನ ಸಾಮರ್ಥ್ಯದ ಜತೆಗಾರ, ಭಾರತದ ತೂಗು ಸೇತುವೆಗಳ ಅಗ್ರಣಿ (೨೭೦೦ ಅಡಿ) ಎಂಬ ಖ್ಯಾತಿಗಳೇ ನಮಗೆ ಸಾಕಿತ್ತು. ನಮ್ಮ ಹೊಸ ಹಗಲ (೧೯-೪-೧೯೯೬) ಸಂದರ್ಶನ ಪಟ್ಟಿಯಲ್ಲಿ ಮೊದಲ ಸ್ಥಾನ ಅದಕ್ಕಿತ್ತು. ‘ಉಡುಪಿ ಲಂಚ್ ಹೋಂ’ ಪತ್ತೆ ಹಚ್ಚಿದ ಸಂತೋಷಕ್ಕೆ ರೂಢಿ ರುಚಿಯ ಚಪಲವನ್ನು ಭರ್ಜರಿಯಾಗಿಯೇ ತೀರಿಸಿಕೊಂಡಿದ್ದೆವು.

read more

Category

Latest Comments

  1. ಧನ್ಯವಾದಗಳು. ಮುಂದಿನ ಕಂತು - ಜೈಪುರದ ಎರಡನೇ ದಿನದ ಕಥನ ಈಗ ಪ್ರಕಟಿಸಿದ್ದೇನೆ... ಅವಶ್ಯ ಓದಿ... ಆನಂದಿಸಿ.... ಪ್ರತಿಕ್ರಿಯಿಸಿ ನನ್ನನ್ನೂ ಆನಂದದಲ್ಲಿ ಪಾಲ್ಗೊಳ್ಳಿ 🙂

  2. ವಿಶೇಷ ಸೂಚನೆ: ಲೇಖನದ ಕೊನೆಯಲ್ಲಿರುವ ಎಂಟೂ ಸೇತುಗಳು (ಲಿಂಕ್ಸ್) ಕೆಲಸ ಮಾಡದಿದ್ದರೆ ದಯವಿಟ್ಟು ಈ ಸೇತು ಬಳಸಿ: https://youtube.com/playlist?list=PLYKOH-YtpDspXQKTGV3NY2B9IBdlCEzs7&si=JR143Wll9pTSfZIE

ದ್ವೀಪ ಕಥನದಿಂದ ಕಾದಂ-ಸಂಗೀತದವರೆಗೆ

ದ್ವೀಪ ಕಥನದಿಂದ ಕಾದಂ-ಸಂಗೀತದವರೆಗೆ

ಭೌತಿಕವಾಗಿ ಅಂಗಡಿಯನ್ನು ಕಟ್ಟಿದಷ್ಟೇ ಕಳಚಿಕೊಳ್ಳುವಲ್ಲೂ ಕಟ್ಟುಪಾಡುಗಳಿವೆ! ಆ ಅನಿವಾರ್ಯತೆಯಲ್ಲಿ ನಾನು ತೊಡಗಿದ್ದಂತೆ...

read more