ಟೆಹ್ರಿ ಅಣೆಕಟ್ಟು, ಕೇದಾರನಾಥ ವಿಜಯ!
ಭಾರತ ಸೀಳೋಟದ ಯೋಜನೆಯಲ್ಲಿ ನಾವು ಮಂಗಳೂರು ಬಿಡುವಂದು, ಅನ್ಯ ಮೂವರು ಗೆಳೆಯರು ದಿಲ್ಲಿಗೆ ನೇರ ಬಂದು, ತಂಡಕ್ಕೆ ಸೇರಿಕೊಳ್ಳುವುದಾಗಿ ಹೇಳಿದ್ದರು. ಅವರಿಗೆ ನಮ್ಮೊಡನೆ ಚತುರ್ಧಾಮವಾದರೂ ಅನುಭವಿಸುವ ಹುಚ್ಚು ಹತ್ತಿತ್ತು. ಆದರೆ ಆ ತ್ರಿಮೂರ್ತಿಗಳು ನನ್ನ ನಿರೀಕ್ಷೆಯಂತೆ ಭೋಪಾಲಕ್ಕೆ, ಕೊನೆಗೆ ದಿಲ್ಲಿಗೂ ಪತ್ರ ಖಾತ್ರಿ ಕೊಡಲೇ ಇಲ್ಲ. ನಾವು ದಿಲ್ಲಿ ಬಿಡುವವರೆಗೂ ದಿಲ್ಲಿಗೆ ಬಂದಂತೇ ಇರಲಿಲ್ಲ. ದಿಲ್ಲಿಗೆ ಬಂದಿದ್ದ ನನ್ನ ತಂದೆಯ ಪತ್ರದಲ್ಲಿ ಅವರ ಗೊಂದಲಗಳಷ್ಟೇ ತಿಳಿದಿತ್ತು. ವಾಸ್ತವದಲ್ಲಿ, ನಾವು ದಿಲ್ಲಿ ಬಿಡುವ ದಿನ (೧೧-೫-೯೦), ಆ ಮೂವರು – ಕೆ. ಲಕ್ಷ್ಮೀನಾರಾಯಣ ರೆಡ್ಡಿ (ರೆಡ್ಡಿ) – ಪ್ರಾಧ್ಯಾಪಕ, ಮೋಹನ ಆಚಾರ್ಯ (ಮೋಹನ್) – ಕುಶಲ ಕರ್ಮಿ, ಮತ್ತು ಕಾವೂರು ಪ್ರಸನ್ನ – ಉದ್ಯಮಿ, ಮಂಗಳೂರಿನಲ್ಲಿ ರೈಲೇರಿದ್ದರು! ಆ ಕಾಲದಲ್ಲಿ ಕೊಂಕಣ ರೈಲ್ವೇ ಇರಲಿಲ್ಲ. ಇವರು ಗಾದೆಯ ‘ಕೊಂಕಣ (ಅರಕ್ಕೋಣಂಗಾಗಿ) ಸುತ್ತಿ ಮೈಲಾರಕ್ಕೆ (ದಿಲ್ಲಿಗೆ)’ ಬರುವಾಗ ೧೪-೫-೯೦ರ ರಾತ್ರಿ. ಪೂರ್ವ ಲೆಕ್ಕಾಚಾರದಂತೆ ಅವರಲ್ಲಿಬ್ಬರ ದಿಲ್ಲಿ ಗೆಳೆಯರು, ಮರು ಬೆಳಗ್ಗೆಯೇ (೧೫-೫-೯೦) ಇವರಿಗೆ ತಮ್ಮ ಬೈಕ್ ಒಪ್ಪಿಸಿದರು. ನನ್ನ ದಿನಚರಿಯ ನಕ್ಷೆಯ ಯಥಾ ಪ್ರತಿ ತ್ರಿಮೂರ್ತಿಗಳಲ್ಲಿತ್ತು. ಅದರ ಬಲದಲ್ಲಿ ನಮ್ಮನ್ನು ನೇರ ಗಂಗೋತ್ರಿಯಲ್ಲಿ ಹಿಡಿಯುವ ಉಮೇದಿನಲ್ಲಿ, ಹನ್ನೊಂದು ಗಂಟೆಗೆ ದಿಲ್ಲಿ ಬಿಟ್ಟರು. ಮೋಹನ್ ಒಂಟಿ, ಪ್ರಸನ್ನನ ಬೆಂಬಲಕ್ಕೆ ರೆಡ್ಡಿ.
ಆರೋಹಣ, ಪರ್ವತಾರೋಹಣ ವಗೈರೆ
(ಪರ್ವತಾರೋಹಣ ಸಪ್ತಾಹದ ಐದನೇ ಅಧ್ಯಾಯ) ಸಪ್ತಾಹದ ಚತುರ್ಥ ನಡೆ ಅವಿಭಜಿತ ದಕ ಜಿಲ್ಲೆಯ ದಕ್ಷಿಣ ಭಾಗದ...
ಚಂಪಕ ವಿಲಾಸ
ಶ್ಯಾಮಲಾ ಮಾಧವ ಅವರ ನಾಳೆ ಇನ್ನೂ ಕಾದಿದೆ ಅಧ್ಯಾಯ - ೧೧ ಬೆಂದೂರ್ ಇಗರ್ಜಿ ಮತ್ತು ಸೇಂಟ್ ಆಗ್ನಿಸ್ ಕಾಲೇಜ್ನ...
ಪುತ್ತೂರಿಗಾದ ಸಪ್ತಾಹದನುಭವ
(ಪರ್ವತಾರೋಹಣ ಸಪ್ತಾಹದ ನಾಲ್ಕನೇ ಭಾಗ) ಪುತ್ತೂರು ನನ್ನ ಅಜ್ಜನ ಊರು. ಅಲ್ಲಿನ ವಿವೇಕಾನಂದ ಕಾಲೇಜು, ಅದರಲ್ಲೂ...
ಗಂಗಾ ನಿವಾಸದ ದಿನಗಳು
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ ಅಧ್ಯಾಯ – ೧೦ ಬೆಂದೂರ್ ವೆಲ್ ವೃತ್ತದಿಂದ...
ಮಾತಾಡು ಇಂಡಿಯಾ ಮಾತಾಡು
[ತೆರೆ ಸರಿಯುತ್ತಿರುವಂತೆ ಖಾಲೀ ಮುಖ ಹೊತ್ತ ತರುಣನೊಬ್ಬ ಪುಸ್ತಕ ವ್ಯಾಪಾರಿಯೊಬ್ಬನ ಗಲ್ಲಾದ ಎದುರು ಬಂದು...
ಭಾವನಾತ್ಮಕ ಸಂಬಂಧಗಳ ಜಿಡುಕು
[ರಕ್ತ ಸಂಬಂಧ ಅಥವಾ ಇನ್ನೂ ನಿಖರವಾಗಿ ಹೇಳುವುದಾದರೆ ಜೀನುಗಳ ಬಂಧ ಹೇಳುವ ಸತ್ಯ ಏನೇ ಇದ್ದರೂ ಸಾಮಾಜಿಕ ಮನ್ನಣೆ...
ಪುಣ್ಯದ ಹೊಳೆಯಲ್ಲಿ ಕೊನೆಯ ಮುಳುಗು
ಮೂರನೇ ಬೆಳಿಗ್ಗೆಯ ಉದಯರಾಗ - ಜಲಸಂರಕ್ಷಣೆ ಮತ್ತು ಮರುಪೂರಣದ ಪ್ರಾತ್ಯಕ್ಷಿಕೆ. ಇದಕ್ಕೆ ನಾಯಕತ್ವ ಎಡೆಂಬಳೆಯ...
ಪವಾಡ ಸುಳ್ಳು, ಇರುವುದೆಲ್ಲ ಯಕ್ಷಿಣಿ!
[ವರ್ತಮಾನಕ್ಕೆ ಪ್ರಸ್ತುತವಾದ ಸಾಂವಿಧಾನಿಕ ಪ್ರಮಾಣವನ್ನು ಅಣಕಿಸುವಂತೆ ಯಃಕಶ್ಚಿತ್ ‘ಭಕ್ತಿ-ಉದ್ಯಮದ’ ಕೇಂದ್ರಗಳು...
ಏಳಿ ಎದ್ದೇಳಿ
ವೈಜ್ಞಾನಿಕ ತಳಹದಿಯ ವ್ಯಕ್ತಿತ್ವ ವಿಕಸನ ಶಿಬಿರ (ವನ್ಯಪುನರುತ್ಥಾನದಲ್ಲೊಂದು ಸಣ್ಣ ಪ್ರಯೋಗ ಭಾಗ ೩) “ಸ್ವಾಮೀ ತುಂಬಾ...
ಮಂಜು ನೆನಪುಗಳು
(ವನ್ಯಪುನರುತ್ಥಾನದಲ್ಲೊಂದು ಸಣ್ಣ ಪ್ರಯೋಗ ಭಾಗ ೨) “ಮಂಜೂ, ಗುಂಡುಕಟ್ಟೆ ಬಂತು” ಕಂಡಕ್ಟರ್ ಬಿಗಿಲು ಹೊಡೆದು ಹೇಳಿದ....
ವನ್ಯಪುನರುತ್ಥಾನದಲ್ಲೊಂದು ಸಣ್ಣ ಪ್ರಯೋಗ
ಭಾಗ ೧. ಅಭಯಾರಣ್ಯ ನಾನು ಪುಸ್ತಕ ವ್ಯಾಪಾರೀತನದ ಬಿಡುವಿನಲ್ಲಿ ಕಾಡುಬೆಟ್ಟ ಸುತ್ತಿದ್ದು ನಿಮಗೆಲ್ಲಾ ತಿಳಿದೇ ಇದೆ....
ರಾಷ್ಟ್ರೀಕೃತ ಬ್ಯಾಂಕ್ ಹೀಗೂ ಇರಬಹುದೇ? ಅಥವಾ ಕಾಣೆಯಾದ ಪಾವತಿಯ ಪತ್ತೇದಾರಿ ಕತ್ತೆ!
ಆರ್ಥಿಕ ವರ್ಷದ ಕೊನೆಯ ತರಾತುರಿಯಲ್ಲಿ ೨೩-೩-೧೧ರಂದು ಮೂಲ್ಕಿ ಕಾಲೇಜಿನ ಅಧ್ಯಾಪಕ ವೃಂದ ಕೆಲವು ಪುಸ್ತಕಗಳನ್ನು ಆಯ್ದು,...
ಸಾಗರದಾಚಿನ ಭಗೀರಥ
(ಜಲಪಾತಗಳ ದಾರಿಯಲ್ಲಿ ಅಂತಿಮ ಮತ್ತು ಆರನೇ ಭಾಗ) [ಭಗೀರಥನ ಧ್ಯಾನದೊಡನೆ ಒಂದೇ ವಾರದಲ್ಲಿ ಬಂದು ಈ ಸರಣಿಯನ್ನು...
ಪುಸ್ತಕ ಮಾರಾಟಗಾರನ ತಲ್ಲಣಗಳು
ಪ್ರಿಯ ವಿವೇಕ್ (ಶಾನಭಾಗ್) ಮತ್ತು (ಕೆ.ವಿ) ಅಕ್ಷರಾ, ದೇಶಕಾಲದ ಏಪ್ರಿಲ್ ಸಂಚಿಕೆಯ (೨೫ನೇದು) ಸಮಯಪರೀಕ್ಷೆ -...
ಮಾಗೋಡು, ಕವಡಿ ಕೆರೆ
(ಜಲಪಾತಗಳ ದಾರಿಯಲ್ಲಿ ಭಾಗ ಐದು) ಕೆಂಜಳಿಲಿಗೆ ಕಿವಿಯಾಗುವಂತೆ ಮಾಡಿ, ಜಗತ್ತಿನ ಅತಿ ಎತ್ತರದ ಜಲಪಾತ...
ತಾಮ್ರ ಧ್ವಜ ಕಾಳಗ ಸಂಕ್ಷಿಪ್ತ ‘ಪೂರ್ವರಂಗದೊಡನೆ’
ಶಿವರಾಮ ಕಾರಂತರು ದೂರದ ಪುತ್ತೂರಿನಲ್ಲಿ ನೆಲೆಸಿದ್ದರೂ ತನ್ನ (ಹತ್ತುಮುಖಗಳಲ್ಲಿ) ಯಕ್ಷಮುಖದ ಉಬ್ಬರಗಳಿಗೆ ಬಹುತೇಕ...
















ವಾಹ್! ಅಪರೂಪಂ ಚೋರ, ಅಲ್ಲಲ್ಲ ಮಿತ್ರ ದರ್ಶನಂ 🙂