ಕೋಟೆ ರೂಪವತಿಯ ಘುಂಗಟ್ ಸರಿಸಿ

ಕೋಟೆ ರೂಪವತಿಯ ಘುಂಗಟ್ ಸರಿಸಿ

ಅಂಗಡಿಯಲ್ಲಿ ಹಲವು ನಕ್ಷಾಪುಸ್ತಕಗಳಿಂದ ನಮ್ಮ ಸ್ವಾರ್ಥಾನುಕೂಲಿಯಾದ ಗೀಟುಗಳನ್ನು ಹೆಕ್ಕಿದ ಮಿಶ್ರಣವೇ ನನ್ನ ನಕಾಶೆ. ಆ ಲೆಕ್ಕದಲ್ಲಿ ನಮ್ಮ ಹೊಸದಿನದ (೧-೫-೯೦) ಲಕ್ಷ್ಯ – ರಾಣೀ ರೂಪಮತಿಯ ಅಮರ ಪ್ರೇಮ ಕತೆಗೂ ಸಾಕ್ಷಿಯಾದ ಮಾಂಡವಘಡ್ ಅಥವಾ ಮಾಂಡು. ಹಕ್ಕಿ ಹಾರಿದಂತೆ ಇದು ಮೇಲ್ಘಾಟಿನಿಂದ ಪಡುಬಡಗು ಅಥವಾ ವಾಯವ್ಯಕ್ಕಿತ್ತು. ನನ್ನ ದಾರಿಯ ಅಂದಾಜಿನಂತೆ ನಾನೂರು ಕಿಮೀಯ ಓಟ. ಸಾಲದ್ದಕ್ಕೆ ಮಾಂಡು ಕೋಟೆಯಲ್ಲಿನ ಊಟ, ವಾಸ್ತವ್ಯದ ಅನುಕೂಲಗಳೂ ಅಸ್ಪಷ್ಟವಿದ್ದವು. ಮೇಲ್ಘಾಟಿನ ಪರ್ವತ ಪ್ರದೇಶದ ದಾರಿಗಳಲ್ಲಿ ಹೆಚ್ಚು ಆಯ್ಕೆಗಳಿಲ್ಲ. ಇದ್ದವಕ್ಕೂ ಸಮರ್ಥ ಮಾಹಿತಿದಾರರು ನಮಗೆ ವನಧಾಮದಲ್ಲಿ ಸಿಗಲಿಲ್ಲ. ನಾವು ವಿಚಾರಿಸಿದ ಒಂದಿಬ್ಬರು ಸರಳವಾಗಿ “ಅಸಾಧ್ಯ” ಎಂದುಬಿಟ್ಟರು. ಮತ್ತು ನೇರ ಉತ್ತರಕ್ಕೆ ಹೋಗುವ ಸುಮಾರು ಐವತ್ತರವತ್ತು ಕಿಮೀ ಬಳಸು ದಾರಿಯನ್ನೇ ಹೇಳಿದರು. ಕಾರಣ ಸರಳ – ನಾನು ಕಂಡುಕೊಂಡ ದಿಕ್ಕಿನಲ್ಲಿ ಇದ್ದರೂ ತೀರಾ ಕಚ್ಚಾದಾರಿಯಂತೆ. ಮತ್ತೆ ಹಾಗೆ ಹೋದರೂ ಅಡ್ಡಲಾಗುವ ಮೊದಲು ತಪತೀ, ಅ`ನಂತರ ನರ್ಮದಾ ನದಿಗಳನ್ನು ದಾಟಲು ಸೇತುವೆಗಳೇ ಇಲ್ಲವೆಂದರು. ನಮಗೋ ದಾರಿಯ ಉಳಿತಾಯದಂತೆ, ಬಳಸಂಬಟ್ಟೆ ಹಿಡಿದರೆ ಬೈಕುಗಳಿಗೆ ಪೆಟ್ರೋಲ್ ಕೊರತೆಯಾದೀತು ಎಂಬ ಹೆದರಿಕೆಯೂ ಇತ್ತು.

read more
ದಕ್ಷಿಣಕನ್ನಡ ಮಹಿಳಾ ಹೋರಾಟದ ದಾಖಲೀಕರಣ

ದಕ್ಷಿಣಕನ್ನಡ ಮಹಿಳಾ ಹೋರಾಟದ ದಾಖಲೀಕರಣ

ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ ಅಧ್ಯಾಯ ೩೭ ದಕ್ಷಿಣಕನ್ನಡದವರ ಬಗ್ಗೆ ಸಾಮಾನ್ಯವಾಗಿ ಹೇಳುವ...

read more

Category

Latest Comments

  1. ಮಾನವತೆಯ ದೀಪ ಹಚ್ಚು ಅಂಧಕಾರವು ತೊಲಗಲಿ ಎಂದು ಬರೆದು ನಮ್ಮ ಭಾವ ಬೆಳಗಿದ ಜಿ.ಯಸ್ಸೆಸ್ ಅವರ ಕವಿತೆಯೇ ಜಯದೇವರ ರೂಪದಲ್ಲಿ ಕೃತಿಯಾಗಿ ಬೆಳಗುತ್ತಿರುವಂತೆ ಕಂಡಿತು.❤️

  2. ಜಯದೇವ ಸರ್ ಅವರದು ನಿಜಕ್ಕೂ ಅದ್ಭುತ ಸಾಧನೆ.. 2007ರಿಂದ2010ರ ವರೆಗೆ ನಾನು ಚಾಮರಾಜನಗರ ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕನಾಗಿದ್ದಾಗ, ನಬಾರ್ಡ್ ಎಜಿಎಂ ವಿನಯ್ ಅವರ ಜೊತೆ ಆಗಾಗ…

  3. 1990ರ ಆಸುಪಾಸಿನಲ್ಲಿ ನಾನು ಹೈಸ್ಕೂಲ್ ಓದುತ್ತಿದ್ದೆ. ಆಗ ಗೆಳೆಯನೊಬ್ಬನಿಂದಾಗಿ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಪರಿಚಯ ಆಯಿತು. ಇಲ್ಲಿಗೆ ಬಂದು ಶಾಲಾ ಮಕ್ಕಳ ಡಾರ್ಮಿಟರಿ ಯಲ್ಲಿ ಒಂದೆರಡು…

ಪರಿಸರ ಚಳವಳಿಯ ಸಾಂಸ್ಕೃತಿಕ ಮುಖ

ಪರಿಸರ ಚಳವಳಿಯ ಸಾಂಸ್ಕೃತಿಕ ಮುಖ

“ಪರ್ವತಾರೋಹಣ ವನ್ಯಸಂರಕ್ಷಣೆಗಳ ಬಗ್ಗೆ ಮಾತಾಡಿದ ತೀವ್ರತೆಯಲ್ಲಿ ನೀವು ಯಕ್ಷಗಾನವೋ ಇನ್ನೊಂದು ಕಲಾಪ್ರಕಾರದ ಬಗ್ಗೆಯೋ...

read more