ಸೀಳೋಟದ ಕೊನೆಗೊಂದು ಸೀಳು ನೋಟ

ಸೀಳೋಟದ ಕೊನೆಗೊಂದು ಸೀಳು ನೋಟ

ಪ್ರಾಕೃತಿಕ ಭಾರತದ ಸೀಳೋಟ ಯೋಜನೆಯಲ್ಲಿ ಆರಂಭದ ೨೫-೪-೯೦ ಮತ್ತು ಕೊನೆಯ ೨೭-೫-೯೦ ದಿನಾಂಕಗಳನ್ನು ಖಚಿತವಾಗಿಯೇ ನಿಶ್ಚೈಸಿದ್ದೆ. ಕಾರಣ ಸರಳ – ಹುಬ್ಬಳ್ಳಿ, ಭೋಪಾಲ ಮುಂತಾದ ಸ್ಥಳಗಳಲ್ಲಿ ನಮ್ಮನ್ನು ಕಾದು ಕುಳಿತವರನ್ನು ನಿಗದಿತ ದಿನಕ್ಕೆ ಮುಟ್ಟದೇ ಅಗೌರವಿಸಬಾರದು. ಮತ್ತು ಮಂಗಳೂರಿಗೆ ಮರಳಲು ರೈಲ್ವೇ ಕಾಯ್ದಿರಿಸುವಿಕೆ ವ್ಯರ್ಥವಾಗಬಾರದು. ಹಾಗೆ ಲಭ್ಯ ಮೂವತ್ಮೂರು ದಿನಗಳಲ್ಲಿ, ಬೈಕ್ ಯಾನ ಮತ್ತು ಸ್ಥಳ ಸಂದರ್ಶನದ ದಿನಗಳು ಮೂವತ್ತು ಮಾತ್ರ. ಹೆಚ್ಚುವರಿ ಮೂರು ದಿನಗಳನ್ನು ಮಾರ್ಗಕ್ರಮಣದ ಆಕಸ್ಮಿಕಗಳ ಹೊಂದಾಣಿಕೆಗೂ ದಿಲ್ಲಿ ದರ್ಶನಕ್ಕೂ ಮೀಸಲಿರಿಸಿದ್ದೆವು. ೨೪ರ ಅಪರಾಹ್ನವೇ ದಿಲ್ಲಿ ಸೇರಿದ್ದ ನಮಗೆ ವಿನಿಯೋಗಕ್ಕೆ ಸ್ಪಷ್ಟ ಮೂರು ದಿನಗಳು ಉಳಿದಿದ್ದವು. ಹನ್ನೊಂದು ದಿನಗಳ ಹಿಂದೆ ಬಾರದ ಅನೇಕ ಹೃದ್ಯವಾಗುವಂತ ಪತ್ರಗಳ ಪಠಣ ಪ್ರಥಮಾದ್ಯತೆಯ ಖುಷಿ. ಅನಂತರ ತಂದೆಗೆ “ಎಲ್ಲ ಸೌಖ್ಯ. ಬಾಕಿ ಸಂಗ್ತಿ ಮೊಖ್ತಾ” ಎಂದಷ್ಟೇ ತಿಳಿಸುವ ನನ್ನೆಲ್ಲ ಒದ್ದಾಟಗಳನ್ನು ಎಸ್ಟೀಡೀ ಭೂತಗಳು ಯಶಸ್ವಿಗೊಳಿಸಲೇ ಇಲ್ಲ. ಕರ್ನಾಟಕ ಸಂಘದ ಅಟೆಂಡರ್ – ಗೌಡ, ತಲಾ ರೂ ಮೂವತ್ತೈದರಂತೆ ದಿಲ್ಲಿ ದರ್ಶನ ಮಾಡಿಸುತ್ತೇನೆಂದ. ಒಪ್ಪಿ ಬಸ್ಸೇರಿದೆವು.

read more

Category

Latest Comments

  1. ನಿಜ. ಶ್ರೀಕೃಷ್ಣನೇ ಇಂದ್ರ ಪೂಜೆಯನ್ನುಊರವರಿಂದ ಧಿಕ್ಕರಿಸಿ, ತಮ್ಮ ಹಸುಗಳಿಗೆ ಹಸಿರು, ನೀರು ಕೊಡುವ ಪರ್ವತವನ್ನೇ ಪೂಜಿಸಿ ಎಂದು ಸಾಧಿಸಿದ ದೃಷ್ಟಾಂತ ಮರೆಯಲುಂಟೇ...

  2. ಶಿವರಾಮ ಕಾರಂತರ ಎರಡನೇ ಅಣ್ಣ - ವಾಸುದೇವ ಕಾರಂತ, ನಿವೃತ್ತ ವಿದ್ಯುತ್ ಇಂಜಿನಿಯರ್, ಮನೆಯಲ್ಲಿ ದೇವರು, ದೇವರನ್ನು ನಂಬುವ, ಬ್ರಾಹ್ಮಣ್ಯದ ರಕ್ಷಣೆ, ಪುನರ್ಜನ್ಮ..... ಹೀಗೆ ಹಲವು ಪುಸ್ತಕಗಳನ್ನು…

  3. 2010 ರಲ್ಲಿ ನಾವು ಮನಾಲಿಗೆ ಹೋಗಿದ್ದು, ಹಿಡಿಂಬಾ ದೇವಾಲಯ ನೋಡಿದ್ದು ಚಂದದ ನೆನಪು. ಹಿಡಿಂಬಾ ದೇವಿ ಅಲ್ಲಿನ ಒಂದು ಬೃಹತ್ ಪೈನ್ ಮರ! ಹಾಗೇ ಘಟೋತ್ಕಜ ಮರ!…

  4. ಲೇಖನ ಓದಿದಮೇಲೆ ಅನ್ನಿಸಿದ್ದು: ನೀವು ದಯವಿಟ್ಟು ತೀರ್ಥಕ್ಷೇತ್ರಗಳಿಗೆ ಹೋಗದಿರುವುದೇ ಲೇಸು- ಆ ಕುರಿತು ನಿಮ್ಮ ವ್ಯಂಗ್ಯವೇ ಹೆಚ್ಚು- ಅಡಿಗರ ಮಾತಿನಲ್ಲಿ “ ಇದನ್ನು ಬಯಸಿರಲಿಲ್ಲ” ನಿಮ್ಮಿಂದ ವಿವರವೂ…

ಎನ್ = ನಾಮಾಂತರ?

ಎನ್ = ನಾಮಾಂತರ?

ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯ ಹೊಸ ಪುಸ್ತಕ (- ಗುಜರಾತಿನ ವ್ಯಂಗ್ಯ ಕಿರುಗತೆಗಳು - ಅನುವಾದಕ ಡಿ.ಎನ್ ಶ್ರೀನಾಥ್)...

read more
ಗುಂಡ್ಯಕ್ಕೆ ಗುಮ್ಮ ಬರುತಿದೆ, ಗಡಗಡೆನುತಿದೆ!

ಗುಂಡ್ಯಕ್ಕೆ ಗುಮ್ಮ ಬರುತಿದೆ, ಗಡಗಡೆನುತಿದೆ!

ಸರಕಾರದ ಬತ್ತಳಿಕೆಯಲ್ಲಿರುವ ಅಭಿವೃದ್ಧಿ ಎಂಬ ಅಸ್ತ್ರವೇಕೋ ಸಹಜ ಮತ್ತು ಪ್ರಾಕೃತಿಕ ಸತ್ಯಗಳಿಗೆ ವಿರೋಧಿಯಾಗಿ ಕಾಣುವುದು...

read more