ಸೈಕಲ್ ಕಾಣಿಸಿದ ಇನ್ನಷ್ಟು ಅಭಿವೃದ್ಧಿಯ ಕಥನಗಳು

ಸೈಕಲ್ ಕಾಣಿಸಿದ ಇನ್ನಷ್ಟು ಅಭಿವೃದ್ಧಿಯ ಕಥನಗಳು

ಅನ್ಯ ಕಾರ್ಯ ಒತ್ತಡಕ್ಕೆ ಸಿಕ್ಕಿ ತಳೆದಿದ್ದ ಐದು ದಿನಗಳ ಸೈಕಲ್ ಸನ್ಯಾಸ ಇಂದು ಸಂಜೆ ಮುರಿದೆ. ಬಂಟರ ಹಾಸ್ಟೆಲ್, ಮಲ್ಲಿಕಟ್ಟೆಗಾಗಿ ನಂತೂರು ಚಡಾವು ಹಿಡಿದೆ. ಅರ್ಧಾಂಶ ಕಾಂಕ್ರೀಟೀಕರಣ ಮುಗಿದಿದೆ. ಏಕಮುಖ ಸಂಚಾರದ ನಿರ್ಬಂಧ ಏರುವವರ ಪರವಾಗಿಯೇ ಇತ್ತು. ವೃತ್ತದಲ್ಲಿ ನೇರ ಸಾಗಿ, ಪದವು ಶಾಲೆ, ಯೆಯ್ಯಾಡಿ, ಬೊಂದೇಲ್, ಕಾವೂರು ವೃತ್ತ, ಮರಕಡ, ಫಲ್ಗುಣಿ ನದಿ ದಾಟಿ, ವಿಮಾನ ನಿಲ್ದಾಣದ ಹೊಸ ದಾರಿಯವರೆಗೂ ಓಟಕ್ಕೊಂದು ಚೂಪು ಇರಲಿಲ್ಲ. ಇಲ್ಲಿ ಹಳೆಯ ಆದ್ಯಪಾಡಿ ರಸ್ತೆಗೆ ಹೊಸ ಬಾಯಿ ಕೊಟ್ಟು, ಇಲಿ ಹಿಡಿಯಲೆಂದೇ ಭಾರೀ ಗುಡ್ಡ ಅಗೆದದ್ದರ ವರ್ತಮಾನ ನೋಡುವ ಉತ್ಸಾಹದಲ್ಲಿ ತಿರುಗಿದೆ. ಹೊಸದಾರಿ ಗಿಡ್ಡವಾದ್ದರಿಂದ ಏರುವ ಕೋನದಲ್ಲಿ ಏನೂ ವ್ಯತ್ಯಾಸವಾಗಿರಲಿಲ್ಲ. ಆದರೆ ಹರಹು, ತಿರುವಿನ ಬಳುಕು, ಸಂಧಿಸ್ಥಾನದ ಡಾಮರ್, ಮುಂದುವರಿದು ಕಾಂಕ್ರೀಟ್ ಹಾಸು ನಿರೀಕ್ಷೆಯಂತೆ ಅದ್ಭುತವಾಗಿಯೇ ಇದೆ.

read more

Category

Latest Comments

  1. ಧನ್ಯವಾದಗಳು. ಮುಂದಿನ ಕಂತು - ಜೈಪುರದ ಎರಡನೇ ದಿನದ ಕಥನ ಈಗ ಪ್ರಕಟಿಸಿದ್ದೇನೆ... ಅವಶ್ಯ ಓದಿ... ಆನಂದಿಸಿ.... ಪ್ರತಿಕ್ರಿಯಿಸಿ ನನ್ನನ್ನೂ ಆನಂದದಲ್ಲಿ ಪಾಲ್ಗೊಳ್ಳಿ 🙂

  2. ವಿಶೇಷ ಸೂಚನೆ: ಲೇಖನದ ಕೊನೆಯಲ್ಲಿರುವ ಎಂಟೂ ಸೇತುಗಳು (ಲಿಂಕ್ಸ್) ಕೆಲಸ ಮಾಡದಿದ್ದರೆ ದಯವಿಟ್ಟು ಈ ಸೇತು ಬಳಸಿ: https://youtube.com/playlist?list=PLYKOH-YtpDspXQKTGV3NY2B9IBdlCEzs7&si=JR143Wll9pTSfZIE

ಗೊಡ್ಡೆಮ್ಮೆ ಪುರಾಣ

ಗೊಡ್ಡೆಮ್ಮೆ ಪುರಾಣ

"೧೯೭೪ರಲ್ಲಿ ಅಂದರೆ ಸರೀ ನಲ್ವತ್ತು ವರ್ಷಗಳ ಹಿಂದೆ ನಾನೂ ಇಲ್ಲಿ ಈಗ ನಿಮ್ಮಂತೆಯೇ ಇದ್ದೆ ಎನ್ನುವ ಒಂದೇ ಯೋಗ್ಯತೆಯಿಂದ...

read more
ಮಾನಸಗಂಗೋತ್ರಿ ದಿನಗಳು

ಮಾನಸಗಂಗೋತ್ರಿ ದಿನಗಳು

(ಭಾಗ ಒಂದು) ಅಮ್ಮನ ಆರೈಕೆ ಎಂಬ ಪೀಠಿಕೆ ಪ್ರಾಕೃತಿಕವಾಗಿ ನನ್ನಮ್ಮ (ಲಕ್ಷಿ ನಾ. ರಾವ್ ೧೯೩೦-) ಸದೃಢವಂತೆ, ನಿರೋಗಿ....

read more