ಹನುಮಾನ್ ಚಟ್ಟಿಯ ದುಂಧುಭಿ ವಧ!!

ಹನುಮಾನ್ ಚಟ್ಟಿಯ ದುಂಧುಭಿ ವಧ!!

ಕಾಗೆ ಹಾರಿದಂತೆ ಡೆಹ್ರಾಡೂನ್ – ಮಸ್ಸೂರಿ ಅಂತರ ಸುಮಾರು ಐದೂವರೆ ಕಿಮೀಯಾದರೂ ದಾರಿ ಮೂವತ್ತೈದು ಕಿಮೀ, ಗಳಿಸುವ ಔನ್ನತ್ಯ ಅಸಾಧಾರಣ ೫೭೩೦ ಅಡಿ. ಅದರಲ್ಲೂ ಸುಮಾರು ಅರ್ಧ ಅಂತರದ – ರಾಜಾಪುರಕ್ಕೆ (ಔ. ಸುಮಾರು ೩೫೭೦) ತಲಪುವಾಗ ೨೧೦೦ ಅಡಿಯನ್ನಷ್ಟೇ ಗಳಿಸಿದ್ದೆವು. ಮುಂದಿನದು ಇನ್ನೂ ಕಡಿದು ಎಂದು ತಿಳಿದು, ಅಲ್ಲೇ ಊಟ ಮುಗಿಸಿಕೊಂಡೆವು. ಅಪರಾಹ್ನದ ದಾರಿ ಬಲು ಸುರುಳಿ ಚಕ್ಕುಲಿಯಂತೆ ಸುತ್ತುತ್ತಿದ್ದಂತೆ, ಕ್ಷಣ ಕ್ಷಣಕ್ಕೂ ವಾತಾವರಣದಲ್ಲೂ ತಂಪು ಏರುತ್ತಿತ್ತು. ದಾರಿಯ ಈ ಭಾಗವನ್ನೇ ಹೀರೊಂಡಾ ಕಂಪೆನಿ ತನ್ನ ಜಾಹೀರಾತುಗಳೆಲ್ಲ ‘ಒಂದು ಲೀಟರ್ ಪೆಟ್ರೋಲ್ ದಾರಿ’ ಎಂದೇ ಮೆರೆಸುತ್ತಿದ್ದದ್ದು ನೆನಪಾಗಿತ್ತು. ಎರಡೂ ಮುಕ್ಕಾಲು ಗಂಟೆಗೆ ನಾವು ಮಸ್ಸೂರಿ ಮುಟ್ಟುತ್ತಿದ್ದಂತೆ ಆಕಾಶವೇ ಹರಿದು ಬಿದ್ದಂತೆ ಭಾರೀ ಮಳೆ ಬಂತು. ನಮ್ಮ ಅದೃಷ್ಟಕ್ಕೆ ಅಲ್ಲೊಂದು ಮುದ್ರಣಾಲಯದ ಶೆಡ್ಡು ಖಾಲಿಯಾಗಿ ತೆರೆದುಕೊಂಡಿತ್ತು! ಸಕಾಲಕ್ಕೆ ಒಳ ಸೇರಿದ್ದಕ್ಕೆ ಉರಿ ಬಿಸಿಲ ನಾಡಿನ ವ್ಯವಸ್ಥೆಯಲ್ಲೇ ಇದ್ದ ನಾವೂ ನಮ್ಮ ಗಂಟು ಮೂಟೆಗಳೂ ಬಚಾವಾದವು.

read more
ಆರೋಹಣದ ಹುಟ್ಟು ಮತ್ತು ಪರ್ವತಾರೋಹಣ ಸಪ್ತಾಹ

ಆರೋಹಣದ ಹುಟ್ಟು ಮತ್ತು ಪರ್ವತಾರೋಹಣ ಸಪ್ತಾಹ

(ಧಾರಾವಾಹಿಯ ಮೊದಲ ಭಾಗ) ಮೂವತ್ತಾರು ವರ್ಷಗಳ ಹಿಂದೆ, ದಕ ಜಿಲ್ಲೆ ಮಿತಿಯೊಳಗೆ ಹೀಗೊಂದು ಕಲಾಪ ನಡೆಸಿದ್ದೆವು ಗೊತ್ತೇ?...

read more

Category

Latest Comments

  1. ಮಾನವತೆಯ ದೀಪ ಹಚ್ಚು ಅಂಧಕಾರವು ತೊಲಗಲಿ ಎಂದು ಬರೆದು ನಮ್ಮ ಭಾವ ಬೆಳಗಿದ ಜಿ.ಯಸ್ಸೆಸ್ ಅವರ ಕವಿತೆಯೇ ಜಯದೇವರ ರೂಪದಲ್ಲಿ ಕೃತಿಯಾಗಿ ಬೆಳಗುತ್ತಿರುವಂತೆ ಕಂಡಿತು.❤️

  2. ಜಯದೇವ ಸರ್ ಅವರದು ನಿಜಕ್ಕೂ ಅದ್ಭುತ ಸಾಧನೆ.. 2007ರಿಂದ2010ರ ವರೆಗೆ ನಾನು ಚಾಮರಾಜನಗರ ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕನಾಗಿದ್ದಾಗ, ನಬಾರ್ಡ್ ಎಜಿಎಂ ವಿನಯ್ ಅವರ ಜೊತೆ ಆಗಾಗ…

  3. 1990ರ ಆಸುಪಾಸಿನಲ್ಲಿ ನಾನು ಹೈಸ್ಕೂಲ್ ಓದುತ್ತಿದ್ದೆ. ಆಗ ಗೆಳೆಯನೊಬ್ಬನಿಂದಾಗಿ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಪರಿಚಯ ಆಯಿತು. ಇಲ್ಲಿಗೆ ಬಂದು ಶಾಲಾ ಮಕ್ಕಳ ಡಾರ್ಮಿಟರಿ ಯಲ್ಲಿ ಒಂದೆರಡು…

ಇಲಾಖೆ ಊರಿಗೆಳೆದರೆ ಸನ್ಯಾಸಿ ಕಾಡಿಗೆಳೆದರು!

ಇಲಾಖೆ ಊರಿಗೆಳೆದರೆ ಸನ್ಯಾಸಿ ಕಾಡಿಗೆಳೆದರು!

(ತೀರ್ಥಯಾತ್ರೆ ಭಾಗ ಮೂರು) [ನಾನೊಂದು ಎಣಿಸಿದರೆ ಗಣಕವಿನ್ನೊಂದೇ ಫಿತೂರಿಸಿತು! ಕಳೆದ ಆದಿತ್ಯವಾರ ಸಂಜೆ ಇನ್ನೇನು...

read more