ದಿಲ್ಲಿಯಿಂದ ಡೆಹ್ರಾಡೂನಿಗೆ…
ದಿಲ್ಲಿ ದಾಳಿಗೆ (೯-೫-೯೦) ಬೆಳಿಗ್ಗೆ ಆರಕ್ಕೆ ನಾಂದಿಯೇನೋ ಹಾಡಿದೆವು. ಆದರೆ ನನ್ನ ಚಕ್ರವೊಂದು ನಿಟ್ಟುಸಿರು ಬಿಟ್ಟು, ಒಂದು ಗಂಟೆ ತಡವಾಗಿ ಮುಂದುವರಿದೆವು. ಆ ದಾರಿ ಖ್ಯಾತ ಪ್ರವಾಸೀ ತ್ರಿಕೋನದ ಬಲ ಭುಜ, ವಾಸ್ತವದಲ್ಲೂ ಬಹುತೇಕ ಸರಳ ರೇಖೆಯಂತೇ ಇದೆ. ಗಗನಗಾಮೀ ನಕ್ಷಾ ನೋಟದಲ್ಲಿ ಮಾತ್ರ ಉದ್ದಕ್ಕೂ ಯಮುನಾ ನದಿ ದೀರ್ಘ ಬಳಕುಗಳ ಸಾಂಗತ್ಯ ಕೊಡುತ್ತದೆ. ಮಾರ್ಗದ ಕಠೋರ ತಪೋನಿಷ್ಠೆಯನ್ನು ಮುರಿಯ ಬಂದ ಅಪ್ಸರೆಯಂತೆ ನಲಿದಿದೆ. ದಾರಿಗೆ ಈ ಅಲೌಕಿಕ ದೃಶ್ಯ ಅಗೋಚರವಾದ್ದರಿಂದ ಸುಮಾರು ಇನ್ನೂರು ಕಿಮೀ ಉದ್ದದ್ದ ದಿಲ್ಲಿಯ ಜಪವನ್ನೇ ನಾವು ಮಾಡಿಕೊಂಡಿದ್ದೆವು. ಸುಮಾರು ಮಧ್ಯಂತರದಲ್ಲಿದ್ದ ಏಕೈಕ ಬದಲಾವಣೆ ಮಥುರಾ. ಪುರಾಣ, ಇತಿಹಾಸಗಳಿಗೆ ಇಂದೂ ಈ ನೆಲದಲ್ಲಿ ಸಾಕಷ್ಟು ಪುರಾವೆಗಳು ಇವೆ. ಅವನ್ನು ವೈಚಾರಿಕವಾಗಿ ಗುರುತಿಸಿಕೊಳ್ಳುವ ಸಂತೋಷವೇ ನಿಜ ಸಂಸ್ಕೃತಿ. ಅದು ಬಿಟ್ಟು, ಅವನ್ನು ಯಾವುದೋ ಒಂದು ಕಾಲಘಟ್ಟಕ್ಕೆ ಸೀಮಿತಗೊಳಿಸಿ, ಇತಿಹಾಸವನ್ನು ತಿದ್ದುವ ಪ್ರಯತ್ನ ಮಾಡುವುದು ವಿಕೃತಿ. ನಮ್ಮೀ ಬೈಕ್ ಯಾನದಲ್ಲಿ ಬಾದಾಮಿಯಿಂದ ಆಗ್ರಾದವರೆಗಿನ ಐತಿಹಾಸಿಕ ರಚನೆಗಳಲ್ಲಿ ಹೆಚ್ಚಾಗಿ ಮೆರೆಯುವುದು – ವಿವಿಧ ಕಾಲಗಳ ವೈಯಕ್ತಿಕ ಮಹತ್ವಾಕಾಂಕ್ಷೆ ಮಾತ್ರ. ಅವರಲ್ಲಿ ಹೆಚ್ಚಿನವರಿಗೆ ಖಾಯಂ ಯಾವ ಮತಧರ್ಮದ ಸೋಂಕೂ ಇಲ್ಲ, ಜನಾಂಗ ಭಾಷೆಗಳ ದುರಭಿಮಾನವೂ ಇಲ್ಲ. ಇವನ್ನು ಗ್ರಹಿಸುವಲ್ಲಿ ಎಲ್ಲ ಕಾಲದಲ್ಲೂ ಇದ್ದಂತೆ ದೊಡ್ಡ ಅಡ್ಡಿ ವಿಚಾರಹೀನ ಆರಾಧಕರು ಮತ್ತು ಅವರನ್ನು ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳುವ ರಾಜಕಾರಣಿಗಳು.
ಲೈಂಗಿಕ ಕಾರ್ಯಕರ್ತೆಯರ ನೋವಿಗೆ ಕಿವಿಯಾಗಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ - ಅಧ್ಯಾಯ ಮೂವತ್ತ ಐದು ಕೆಲವು ವಿಷಯಗಳ ಬಗ್ಗೆ ನಾವು...
ದಟ್ಟಡವಿ, ಸಾಧಾರಣ ಮನೆ!
"ದಟ್ಟಡವಿ, ಸಾಧಾರಣ ಮನೆ!" ಇದು ಮೊನ್ನೆ ನಮ್ಮಗ – ಅಭಯಸಿಂಹ, ಬೆಂಗಳೂರಿನಿಂದ ಬಂದವನು ಜಪಿಸುತ್ತಿದ್ದ ಮಂತ್ರ!...
ಮಾಸ್ತಿಯನ್ನರಸುತ್ತಾ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ - ಅಧ್ಯಾಯ ಮೂವತ್ತ ನಾಲ್ಕು ಕ್ರಿಯಾತ್ಮಕವಾಗಿ...
ಹವ್ಯಾಸಿ ಪ್ರಕಾಶಕರಿಗೆ ಸಲಹೆ
ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಹದಿನಾಲ್ಕನೇ ಅಧ್ಯಾಯ [ಜಿಟಿ ನಾರಾಯಣ ರಾಯರಿಂದ ಸಂಪಾದಕೀಯ ಟಿಪ್ಪಣಿ:...
ಸಂಶೋಧನಾ ಪ್ರಜ್ಞೆ ಮತ್ತು ಪದವಿ
[ವಿಜಯ ಕರ್ನಾಟಕ ಪತ್ರಿಕೆ ಡಾಕ್ಟರೇಟ್ಗಳ ಬಗ್ಗೆ ವಿಶೇಷ ಸರಣಿ ಸುರು ಮಾಡಿದಾಗ ನಾನು ಸ್ವಲ್ಪ ತಡವಾಗಿ ನಾಲ್ಕು ನನ್ನ...
ಅಂಡಮಾನ್ ಎರಡನೇ ಭಾಗ
ಪ್ರಿಯಾನಂದಾ, ಬಂಗಾಳಕೊಲ್ಲಿಯ ಕಡೆದಿಟ್ಟ ನವನೀತ 'ಅಂಡಮಾನ್' ಒಂದು ಆಪ್ತ ಪತ್ರ-ಪ್ರವಾಸ ಕಥನ ಎರಡನೇ ಭಾಗ...
ಸಲಾಮು ತೆಕ್ಕೋ ಕೆರೆಮನೆ ಜೀಯಾ
ನನ್ನ ಬಾಲ್ಯದ ಮಡಿಕೇರಿ ಮತ್ತೆ ಬಳ್ಳಾರಿ ಮುಂದುವರಿದು ಬೆಂಗಳೂರು (೧೯೬೯ರ ಆಸುಪಾಸಿನಲ್ಲಿ) ಯಕ್ಷಗಾನ ಸಮೃದ್ಧ...
ಬಂಗಾಳಕೊಲ್ಲಿಯ ಕಡೆದಿಟ್ಟ ನವನೀತ ಅಂಡಮಾನ್
ಪ್ರಿಯಾನಂದಾ ನಿಂಗೆ ಬೇಕೋ ಬೇಡವೋ ಎಂಬ ಪ್ರಶ್ನೆ ಇಲ್ಲ, ನನಗೆ ಪುರ್ಸೊತ್ತಾಗಿದೆ, ಅಂಡಮಾನ್ ಪ್ರವಾಸದ ಅನುಭವ (೨೦೦೭...
ಜಿಟಿ ನಾರಾಯಣರಾಯರಿಗೊಂದು ನುಡಿನಮನ
ಜಿಟಿನಾ ನನ್ನ ತಂದೆ. ಈಚಿನ ವರ್ಷಗಳಲ್ಲಿ ಅವರ ಮಾತಿನಲ್ಲಿ ಆಗಾಗ ನಮಗೆ (+ನನ್ನ ಹೆಂಡತಿ) ಆಪ್ತವಾಗಿ ಕೇಳುತ್ತಿದ್ದ...
ಪುಸ್ತಕೋದ್ಯಮ ಭಯಂಕರ ಆಕ್ರೋಶವರ್ಜನಕೃತ ಅಶೋಕ ಪುರಾಣಾಂತರ್ಗತ ಶ್ಮಶ್ರುಕೂರ್ಚಾಖ್ಯಾನ
ವಿಶೇಷ ಸೂಚನೆ: ಇದು ಹೆಂಗಸರಿಗಲ್ಲ! ಮೀಸೆ ಬರುವ ಮೊದಲು ಹೆಚ್ಚಿನ ಹುಡುಗರು ಕದ್ದುಮುಚ್ಚಿ ಅಪ್ಪನ ರೇಜರ್ ಮುಖದ...
ಗೋವಾ ಚಿತ್ರೋತ್ಸವ ಭಾಗ – ೩
ಇನಾಕ್ಸ್ ಪ್ರವೇಶಿಸುವಲ್ಲಿನ ತನಿಖೆ ಮುಗಿದಮೇಲೆ ಒಳಗೆ ಹತ್ತೆಂಟು ಕಾರ್ಯಕರ್ತರು ಔಪಚಾರಿಕ ಅಗತ್ಯಗಳಿಗೆ ಒದಗುವವರಂತೆ...
ಗೋವಾ ಚಿತ್ರೋತ್ಸವ ಭಾಗ – ೨
ಉಡ್ಲ್ಯಾಂಡ್ಸ್ನಲ್ಲಿ ಪುತ್ತಪ್ಪ ಬ್ಯಾರಿ! ನಮ್ಮ ಅನುಕೂಲಕ್ಕೆ ಹೊರಟರೂ ಕಾದಿದ್ದ ಹವಾನಿಯಂತ್ರಿತ ವ್ಯಾನ್ ಕೂಡಲೇ ನಮ್ಮ...
ಗೋವಾ ಚಿತ್ರೋತ್ಸವ ಭಾಗ – ೧
ಮೂಡಿತು ಗರಿ ಗುಬ್ಬಚ್ಚಿಗಳು ದೀರ್ಘ ಹಾರಾಟದ ಹಕ್ಕಿಗಳಲ್ಲ. ಸಹಜವಾಗಿ ಅಭಯನ ಚೊಚ್ಚಲ (ನಿರ್ದೇಶನದ ಸಿನಿಮಾ)...
ಯಕ್ಷೋಪಾಸನೆ
(ಸೂರಿಕುಮೇರು ಗೋವಿಂದ ಭಟ್ಟರ ಆತ್ಮಕಥೆಗೊಂದು ಅರೆಖಾಸಗಿ ಅನಿಸಿಕೆ) ಪ್ರಿಯ ಗೋವಿಂದ ಭಟ್ಟರೇ ನಾನು ವ್ಯಾಪಾರೀ...
ರಾಧಾಪ್ರಿಯ ಕೃಷ್ಣನಲ್ಲಿ ಲೀನ!
ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಮಾತು. ಕನ್ನಡ ಜನಪ್ರಿಯ ಕಾದಂಬರಿಗಳನ್ನು ಸಾಯಿಸುತೆ, ಎಚ್.ಜಿ.ರಾಧಾದೇವಿ, ಉಷಾ...
ಬಿಳಿಹುಲಿಗೊಂದು ಬಾಲ
ಇಂಗ್ಲಿಷ್ ಮಾಧ್ಯಮ ಶಾಲೆಯೊಂದರ ಇಬ್ಬರು ಟೀಚರಮ್ಮಂದಿರು ಆರಿಸಿಟ್ಟ ಪುಸ್ತಕಗಳನ್ನು ನಾನು ಬಿಲ್ಲು ಮಾಡುತ್ತಿದ್ದೆ. ಅವರು...
















Hi, I'm interested in learning more about your service. Please send details. (ref:dnh7hghrxvzui44q)