ತಿರು ಶ್ರೀಧರ್ ಸ್ಮರಿಸಿದ ಜಿಟಿ ನಾರಾಯಣ ರಾವ್

ತಿರು ಶ್ರೀಧರ್ ಸ್ಮರಿಸಿದ ಜಿಟಿ ನಾರಾಯಣ ರಾವ್

ಇಂದು ನನ್ನಪ್ಪ (ಜಿಟಿ ನಾರಾಯಣ ರಾವ್) ಹುಟ್ಟಿದ ದಿನ. ಅವರು ನಮಗೆ ಹಾಕಿಕೊಟ್ಟ ಆದರ್ಶ – ವ್ಯಕ್ತಿ ನಿಮಿತ್ತ, ಕೃತಿ ಶಾಶ್ವತ. ಅವರು ವಿಜ್ಞಾನ ಸಾಹಿತ್ಯ ನಿರ್ಮಾಣದ ಅಂಗವಾಗಿ ಆಲ್ಬರ್ಟ್ ಐನ್ಸ್ಟೈನ್, ಸಿವಿ ರಾಮನ್, ಸುಬ್ರಹ್ಮಣ್ಯನ್ ಚಂದ್ರಶೇಖರ್ ಮುಂತಾದವರ ಕುರಿತು ಬರೆದಾಗಲೂ ಈ ನಿಲುವನ್ನು ಸ್ಪಷ್ಟಪಡಿಸಿದರು. ವಾಗಾಡಂಬರದ ಜೀವನ ಕಥನ ಮಾಡಲಿಲ್ಲ, ವೈಜ್ಞಾನಿಕ ಜೀವನ ಕಥನವನ್ನೇ ಕೊಟ್ಟರು. ಒಂದು ಹಂತದಲ್ಲಿ ತಂದೆ ನಮ್ಮೆಲ್ಲರ ಒತ್ತಾಯಕ್ಕೆ ಮಣಿದು, ಆತ್ಮಕಥೆ (ಮುಗಿಯದ ಪಯಣ) ಬರೆದರು. ಆಗಲೂ ಆತ್ಮರತಿಯ ಭಾವಲಹರಿಯಲ್ಲಿ ಕಳೆದುಹೋಗದೇ (ಮುಂದೆ ಯಾರಾದರೂ ಓದಿದರೆ!!) ಆದರ್ಶ ಅಥವಾ ಅನುಸರಣಾರ್ಹ ಮೌಲ್ಯವಾಗಬಹುದಾದ ಅಂಶಗಳನ್ನಷ್ಟೇ ದಾಖಲಿಸಿದರು. ಈ ನಿಟ್ಟಿನಲ್ಲಿ ತಿರು ಶ್ರೀಧರ್ ತಮ್ಮ www.sallapa.com ಜಾಲತಾಣದಲ್ಲಿ ಇಂದು ಜಿಟಿನಾ ಅವರನ್ನು ಸ್ಮರಿಸಿದ್ದು ಅಷ್ಟೇ ಔಚಿತ್ಯಪೂರ್ಣವಾಗಿತ್ತು. ಶ್ರೀಧರ್ ಅವರ ಬರಹ ನನ್ನ ಜಾಲತಾಣದ ಸಂಗ್ರಹಕ್ಕೆ ಬೇಕೆಂದು ಕೋರಿದಾಗ, ಅವರು ತುಂಬ ಉದಾರವಾಗಿ ಅನುಮತಿಸಿದ್ದಾರೆ. ಮುಂದೆ ಓದಿ

read more

Category

Latest Comments

  1. ಕಾರ್ಯಕ್ರಮದ ಸವಿವರ ಮಾಹಿತಿ, ಸಫಾರಿಯಲ್ಲಿ ಕಂಡ ದೃಶ್ಯಗಳ ವಿವರಣೆ, ಸಂಬಂಧಿಸಿದ ತಮ್ಮ ಅಭಿಪ್ರಾಯ, ವಿಶ್ಲೇಷಣೆಗಳು ಎಲ್ಲವೂ ಉತ್ತಮ ನಿರೂಪಣೆಯೊಂದಿಗಿದೆ. ಆನೆಗಳು ಆಹಾರಕ್ಕಾಗಿ ಪರದಾಡುವುದೂ, ವನ್ಯದಲ್ಲಿ ಅನ್ಯ ಸಸ್ಯ…

ಶಿರಿಯಾ ಹೊಳೆಗಾಗಿ ಅರಿಕ್ಕಾಡಿ ಕೋಟೆ….

ಶಿರಿಯಾ ಹೊಳೆಗಾಗಿ ಅರಿಕ್ಕಾಡಿ ಕೋಟೆ….

ಅದೊಂದು ಶುಕ್ರವಾರ "ಆದಿತ್ಯವಾರ ಎಲ್ಲಿಗಾದ್ರೂ ಕಯಾಕಿಂಗ್ ಹೋಗುವನಾ ಸಾರ್" ಎಂದು ಸೈಕಲ್ ಗೆಳೆಯ ಅನಿಲ್ ಶೇಟ್...

read more
ಆನೆ ದಾರಿಯಲ್ಲಿ ಅಲ್ಲೋಲ ಕಲ್ಲೋಲ

ಆನೆ ದಾರಿಯಲ್ಲಿ ಅಲ್ಲೋಲ ಕಲ್ಲೋಲ

‘ಆನೆದಾರಿಯಲ್ಲಿ ಅಲ್ಲೋಲ ಕಲ್ಲೋಲ’ ಪ್ರಸಾದ್ ರಕ್ಷಿದಿಯವರ ನಾಟಕ, ರಕ್ಷಿದಿಯಲ್ಲೇ ಪ್ರಥಮ ಪ್ರದರ್ಶನ ಎಂದು ತಿಳಿದದ್ದೇ...

read more