ಲಕ್ಷದ್ವೀಪದತ್ತ ಒಂದು ಲಕ್ಷ್ಯ

ಲಕ್ಷದ್ವೀಪದತ್ತ ಒಂದು ಲಕ್ಷ್ಯ

ಮುಮ್ಮಾತು: ಸಾವಿರ ಕೊಟ್ಟು ಲಕ್ಷ ಗಳಿಸುವ ಯೋಗ ೨೦೧೦ ರ ನನ್ನ ಆರು ಭಾಗಗಳ ಲಕ್ಷದ್ವೀಪ ಪ್ರವಾಸ ಕಥನ ನೀವೆಲ್ಲ ಓದಿದ್ದೀರಿ ಎಂದು ಭಾವಿಸುತ್ತೇನೆ. ಅನಂತರದ ದಿನಗಳಲ್ಲಿ ಗೆಳೆಯ ಅಬ್ದುಲ್ ರಶೀದ್ ಕವರತ್ತಿಯಲ್ಲಿರುವ ಆಕಾಶವಾಣಿಯ ಶಾಖೆಗೆ ವರ್ಗಾವಣೆಗೊಂಡರು. ಅವರ ಚಿತ್ರಗಳು, ಚಲಚಿತ್ರಗಳು ಎಲ್ಲಕ್ಕೂ ಮಿಗಿಲಾಗಿ ಲಕ್ಷದ್ವೀಪ ಡೈರಿಯ ಮುಗಿಯದ ಪುಟಗಳು, ನಮಗೆ ಎಂದೂ ಹಳತಾಗದ, ಕಡಲಲೆಗಳಂತೇ ಹೊಸ ವಿಚಾರಗಳನ್ನು ಮಗುಚುತ್ತಲೇ ಇವೆ. ನನಗೆ ಸಿಕ್ಕ ಈ ಆಪ್ತ ಸರಣಿಯಲ್ಲಿ ಮೂರನೇ ಕಣ್ಣು ತೆರೆಯುತ್ತಿರುವವರು – ಇನ್ನೊಬ್ಬ ಗೆಳೆಯ, ಗಿರೀಶ್. ಇವರದು ಉರಿಗಣ್ಣಲ್ಲ, ಲಕ್ಷದ್ವೀಪಗಳನ್ನಾವರಿಸಿದ ಅರಬೀ ಸಮುದ್ರದ್ದೇ ಇನ್ನೊಂದು (ಪೂರ್ವ) ಮಗ್ಗುಲಿನ ಕರಾವಳಿಯಲ್ಲೇ ಹದಗೊಂಡ ದೃಷ್ಟಿ. ವೃತ್ತಿಯಲ್ಲಿ ಅಗ್ನಿಶಾಮಕರಾಗಿದ್ದು ಮಂಗಳೂರು ವಿಮಾನ ನಿಲ್ದಾಣದಲ್ಲಿದ್ದ ಗಿರೀಶ್ ಈಗ ಲಕ್ಷದ್ವೀಪಕ್ಕೆ ವರ್ಗಾವಣೆಗೊಂಡಿದ್ದಾರೆ. ಇವರು ನನ್ನ ಜಾಲತಾಣದ ಓದುಗರಿಗೆ ಹೊಸಬರೇನಲ್ಲ (ನೋಡಿ: ಡಾರ್ಜಿಲಿಂಗ್ ಜೋಡುಕಥನ ). ಗಿರೀಶ್ ಬಜ್ಪೆಯ ‘ಟೇಬಲ್ ಟಾಪ್’ ನಿಂದ ಅಗಾತ್ತಿಯ ‘ಲಂಬಿಸಿದ ಮೀನಬಾಲ’ಕ್ಕೆ ತನ್ನ ವಿಶಿಷ್ಟ ನೋಟವನ್ನು ಅಳವಡಿಸಿದ್ದಾರೆ.

read more

Category

Latest Comments

  1. ಮಾನ್ಯ ಜಯಂತರ ಬಗ್ಗೆ ಓದಿ ಬಹಳ ಸಂತೋಷವಾಯಿತು. ಬಹಳ ಸಜ್ಜನರಾಗಿದ್ದವರು. ಸಂಗೀತದಲ್ಲಿ ಬಹಳ ಪ್ರೀತಿಯಿದ್ದವರು. ಅವರ ತಂಗಿ ಶ್ಯಾಮಲಾ ನನ್ನ ಮಾವನವರ ಶಿಷ್ಯೆಯಾಗಿದ್ದವರು. ಈ ರೀತಿಯಾಗಿ ಅವರ…

  2. ಕ್ಷಮಿಸಿ, ನಾನು ನನ್ನದೇ ಜಾಲತಾಣಕ್ಕೆ ಹೊಸ ಲೇಖನಗಳನ್ನು ಹಾಕುವುದು ನಿಲ್ಲಿಸಿ ಹಲವು ಕಾಲವಾದ್ದರಿಂದ ಪ್ರತಿಕ್ರಿಯೆಗಳೇನಾದರೂ ಬಂದಿವೆಯೇ ಎಂದು ಇಣುಕಿ ನೋಡುವುದನ್ನೂ ಕಡಿಮೆ ಮಾಡಿ, ನಿಮ್ಮ ಇಷ್ಟು ವಿವರವಾದ…