ಮೆಟ್ರೋದಲ್ಲಿ ಕಾಣೆಯಾದ ಮೂವರು!
ಏಪ್ರಿಲ್ ೧೭, ೧೯೯೬ ಬುಧವಾರದ ಬೆಳಿಗ್ಗೆ ನಾವು ಸುಪ್ರಸನ್ನರಾಗಿಯೇ ಕಲ್ಕತ್ತ ರೈಲ್ವೇ ನಿಲ್ದಾಣವೇನೋ ತಲಪಿದ್ದೆವು. ಆದರೆ ಮತ್ತಿನ ಮೂರೂವರೆ ಗಂಟೆಗಳ ಅನಾವಶ್ಯಕ ಹೋರಾಟದಲ್ಲಿ ವಿಜಯಿಗಳಾದರೂ ಹಸಿ ಹೊಟ್ಟೆಯಲ್ಲಿ, ಕ್ರುದ್ಧ ಮನಸ್ಸಿನಲ್ಲಿ ಬೈಕುಗಳೊಡನೆ ಹೊರಬಿದ್ದೆವು. ಮೊದಲು ಬೈಕುಗಳ ಹೊಟ್ಟೆ, ಅನಂತರ ನಮ್ಮ ಹೊಟ್ಟೆ ತುಂಬಿಸಿಕೊಂಡೆವು. ಸೂರ್ಯ ಆಗಲೇ ಅಗ್ನಿವರ್ಷಕ್ಕೆ ತೊಡಗಿದ್ದ. (ಉಪಾಧ್ಯರ ವರದಿ -ಅಂದು ಮಧ್ಯಾಹ್ನದ ತಾಪಮಾನ ೪೩ ಡಿಗ್ರಿ) ಮೊದಲಲ್ಲೇ ಸರಳವಾಗಿ ಪೋಲಿಸರ ತಡೆ ಬಂತು. ಪ. ಬಂಗಾಳದಲ್ಲಿ ಆ ಕಾಲದಲ್ಲೇ ಸಹವಾರರಿಗೂ ಶಿರಸ್ತ್ರಾಣ ಕಡ್ಡಾಯವಿತ್ತು, ನಾವು ಒಯ್ದೇ ಇರಲಿಲ್ಲ. ನಮ್ಮ ಅಜ್ಞಾನವನ್ನು ಪೊಲಿಸರು ಮನ್ನಿಸಿದರು.ಮತ್ತೆ ನಿರ್ವಿಘ್ನವಾಗಿ…. ಗಂಗಾ ಬ್ರಹ್ಮಪುತ್ರ ನದಿಗಳ ಮುಖಜಭೂಮಿಯ ಸಾವಿರಾರು ಕುದುರುಗಳಲ್ಲಿ ವ್ಯಾಪಿಸಿರುವ ‘ಸುಂದರಬನ್ಸ್ ವ್ಯಾಘ್ರಧಾಮ’ದಂತದ್ದು ಜಗತ್ತಿನಲ್ಲೇ ಇನ್ನೊಂದಿಲ್ಲ. ಅದನ್ನು ನೋಡುವುದರಿಂದಲೇ ನಮ್ಮ ಎರಡನೇ ಭಾರತ ಸಾಹಸಯಾನವನ್ನು ಪ್ರಾರಂಭಿಸುವ ಯೋಜನೆ ನನ್ನದಿತ್ತು. ಅದಕ್ಕನುಕೂಲವಾಗುವಂತೆ ಕಲ್ಕತ್ತಾ ವಾಸ/ ದರ್ಶನವನ್ನು ಸ್ವಲ್ಪ ಹೆಚ್ಚೇ ಮಾಡಲು ನಮಗೆ ಒಳ್ಳೆಯ ಅವಕಾಶ ಒದಗಿಸಿದವರು ಸ್ವಾಮೀ ಜಗದಾತ್ಮಾನಂದ (೧೯೨೯-೨೦೧೮). ರಾಮಕೃಷ್ಣಾಶ್ರಮದ ಬಹು ಗೌರವಾನ್ವಿತ ಸಂನ್ಯಾಸಿಗಳಲ್ಲಿ ಜಗದಾತ್ಮಾನಂದರದು ದೊಡ್ಡ ಹೆಸರು. ಅಪ್ಪಟ ಕನ್ನಡಿಗರೇ ಆದ ಸ್ವಾಮೀಜೀ ತನ್ನ ಓದು, ಅಧ್ಯಯನ ಹಾಗೂ ಸಮಾಜಸೇವೆಗಳ ಅನುಭವಗಳನ್ನು ಕ್ರೋಢೀಕರಿಸಿ ಬರೆದ ‘ಬದುಕಲು ಕಲಿಯಿರಿ’ (೨ ಭಾಗಗಳು) ಪುಸ್ತಕವಂತೂ ಕನ್ನಡ ಪ್ರಕಾಶನರಂಗದಲ್ಲಿ ಅದ್ವಿತೀಯ ದಾಖಲೆಯನ್ನೇ ಮಾಡಿದೆ.
ಅನನುಭವ ಎಡವಿತು, ಛಲ ಸಾಧಿಸಿತು!
(ಪರ್ವತಾರೋಹಣ ಸಪ್ತಾಹದ ಆರನೇ ಅಧ್ಯಾಯ) ದ.ಕ ಜಿಲ್ಲೆಯಲ್ಲಿ ಎರಡು ಮಹಾಬಂಡೆ ಗುಡ್ಡೆಗಳಿವೆ. ಅತ್ಯುನ್ನತಿ ಮತ್ತು...
ಕರಂಗಲ್ಪಾಡಿಯ ದಿನಗಳು.
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ ಅಧ್ಯಾಯ – ೧೨ ಭಾರತ - ಚೀನಾ ಯುದ್ಧದ...
ಆರೋಹಣ, ಪರ್ವತಾರೋಹಣ ವಗೈರೆ
(ಪರ್ವತಾರೋಹಣ ಸಪ್ತಾಹದ ಐದನೇ ಅಧ್ಯಾಯ) ಸಪ್ತಾಹದ ಚತುರ್ಥ ನಡೆ ಅವಿಭಜಿತ ದಕ ಜಿಲ್ಲೆಯ ದಕ್ಷಿಣ ಭಾಗದ...
ಚಂಪಕ ವಿಲಾಸ
ಶ್ಯಾಮಲಾ ಮಾಧವ ಅವರ ನಾಳೆ ಇನ್ನೂ ಕಾದಿದೆ ಅಧ್ಯಾಯ - ೧೧ ಬೆಂದೂರ್ ಇಗರ್ಜಿ ಮತ್ತು ಸೇಂಟ್ ಆಗ್ನಿಸ್ ಕಾಲೇಜ್ನ...
ಯಾಣ ಅಂದ್ರೆ ಏನ?
(ಜಲಪಾತಗಳ ದಾರಿಯಲ್ಲಿ ಭಾಗ ಎರಡು) ‘ರೊಕ್ಕಿದ್ದವಗೆ ಗೋಕರ್ಣ, ಸೊಕ್ಕಿದ್ದವಗೆ ಯಾಣ’ ಎಂಬ ಜಾಣ್ಣುಡಿ ನಾನು ಕೇಳಿದ್ದೆ....
ಗೋಕರ್ಣ
(ಜಲಪಾತಗಳ ದಾರಿಯಲ್ಲಿ ಭಾಗ ಒಂದು) ಮೂರು ಕಂತಿನಲ್ಲಿ ಬಂಡೆಗೆ ಮಂಡೆ ಕೊಟ್ಟು ಬಿಸಿಯಾದ್ದಕ್ಕೆ ಬನ್ನಿ, ಜಲಪಾತಗಳ ಸಣ್ಣ...
ಮಧು ಚುಂಬನ
[ಕೊಡಂಜೆಕಲ್ಲಿನ ಕಥಾಜಾಲ ಭಾಗ ಮೂರು] ೧೯೭೫ರಲ್ಲಿ ಮಂಗಳೂರಿನಲ್ಲಿ ನಾನು ಅಂಗಡಿ ತೆರೆದಂದಿನಿಂದ ಪರ್ವತಾರೋಹಣ ಮತ್ತು...
ಚಿಮಣಿಯಿಂದಾಚೆ ಇಣುಕಿದಾಗ…
(ಕೊಡಂಜೆ ಕಲ್ಲಿನ ಕಥಾಜಾಲ - ೨) ಕೊಡಂಜೆ ಕಲ್ಲನ್ನು ಕತ್ತೆಕಿವಿ ಎಂದು ಗುರುತಿಸಿದವರು ಐತಿಹಾಸಿಕ ನಾವಿಕರು. ನಾನು...
127 ಗಂಟೆಗಳು!
ಪರ್ವತಾರೋಹಿ ಸಾಹಸಿಯೊಬ್ಬ ಏಕಾಂಗಿಯಾಗಿ ವಿರಳ ಜನಸಂಚಾರ ವಲಯದ ಭಾರೀ ಪ್ರಾಕೃತಿಕ ಕೊರಕಲುಗಳ ಶೋಧಕ್ಕೆ ಹೋಗುತ್ತಾನೆ....
ಸುಲಭದ ತುತ್ತಲ್ಲ ಕತ್ತೆಕಿವಿ
ಕೊಡಂಜೆ ಕಲ್ಲಿನ ಕಥಾಜಾಲ - ಭಾಗ ೧ ನನ್ನ ಈ ವಲಯದ ಬೆಟ್ಟಗಾಡು ಸುತ್ತಾಟಕ್ಕೆ ಪ್ರಾಯ ಮೂವತ್ತೈದು ಕಳೆಯಿತು. ನನ್ನಜ್ಜ...
ಬೇಟೆಽಽಽ ಆಡುತಾ ಬಂದರಾಗ!
‘ವನೋತ್ಪತ್ತಿ’ ಎನ್ನುವುದಿಂದು ಭಾರೀ ದಾರಿ ತಪ್ಪಿಸುವ ವಿಷಯವಾಗಿದೆ. ಮೋಪು, ಬೆತ್ತ, ವಿವಿಧ ಹಕ್ಕಿ ಪ್ರಾಣಿ ವೈವಿಧ್ಯಗಳ...
ಕುಮಾರಧಾರೆಯ ವೀರಪ್ಪನ್ಗಳೊಡನೆ
(ಕುಮಾರಪರ್ವತದ ಆಸುಪಾಸು ಭಾಗ ಐದು) “ನೀವು ಕಾಡಿಗೆ ಯಾಕ್ ಬಂದ್ರಿ?” ಕತ್ತು ಮುಚ್ಚುವ ಸ್ವೆಟ್ಟರ್ ಹಾಕಿದ್ದ ಡ್ರೈವರ್...
ಘಾಟಿಯೊಂದರ ಸಾಚಾ ವೃತ್ತಾಂತ – ಬಿಸಿಲೆ
(ಕುಮಾರಪರ್ವತದ ಆಸುಪಾಸು ಭಾಗ ನಾಲ್ಕು) ಜಿಟಿಜಿಟಿ ಮಳೆ, ಕಾಲೇರುವ ಜಿಗಣೆ, ಎಲ್ಲವನ್ನು ಅಮರಿಸುವಂಥ ದಟ್ಟ ಕಾಡು....
ಜಲಪಾತದ ಬೆನ್ನೇರಿ…
ಕುಮಾರ ಪರ್ವತದ ಸುತ್ತ ಮುತ್ತ (ಭಾಗ ೩) ಅವಿಭಜಿತ ದಕ ಜಿಲ್ಲೆಯ ಪಾದ ತೊಳೆಯಲು ಅರಬೀ ಸಮುದ್ರವಿದ್ದರೆ ನೆತ್ತಿಯ ಹಸುರಿನ...
ನೆರೆಪರಿಹಾರದ ವರ್ಷಾಂತಿಕ
[ಉಂಡಬತ್ತಿ ಕೆರೆಯ ಸಾಮೂಹಿಕ ಕೊಲೆಯ ಬೊಜ್ಜದೂಟ ಮುಗಿಸಿದ ಮುಖ್ಯ ಮಂತ್ರಿಗಳ ಬಡಬಡಿಕೆಯ ಮುನ್ನೆಲೆಯಲ್ಲಿ ವರ್ಷದ ಹಿಂದೆ...
ನನ್ನೊಳಗಿನ ಸೈಕಲ್ ಸವಾರ
[ಎರಡು ವಾರದ ಹಿಂದೆ ಏರಿಸಿದ ಲೇಖನಕ್ಕೆ ‘ಏನ್ ಸೈಕಲ್ ಸಾ ಏನ್ ಸೈಕಲ್ಲ್’ಗೆ ಪೂರಕ ಬರಹ] ಬಳ್ಳಾರಿಯಲ್ಲಿ ನಾನು ಆರನೇ...
















ನಿಜ. ಶ್ರೀಕೃಷ್ಣನೇ ಇಂದ್ರ ಪೂಜೆಯನ್ನುಊರವರಿಂದ ಧಿಕ್ಕರಿಸಿ, ತಮ್ಮ ಹಸುಗಳಿಗೆ ಹಸಿರು, ನೀರು ಕೊಡುವ ಪರ್ವತವನ್ನೇ ಪೂಜಿಸಿ ಎಂದು ಸಾಧಿಸಿದ ದೃಷ್ಟಾಂತ ಮರೆಯಲುಂಟೇ...