ಟೆಹ್ರಿ ಅಣೆಕಟ್ಟು, ಕೇದಾರನಾಥ ವಿಜಯ!
ಭಾರತ ಸೀಳೋಟದ ಯೋಜನೆಯಲ್ಲಿ ನಾವು ಮಂಗಳೂರು ಬಿಡುವಂದು, ಅನ್ಯ ಮೂವರು ಗೆಳೆಯರು ದಿಲ್ಲಿಗೆ ನೇರ ಬಂದು, ತಂಡಕ್ಕೆ ಸೇರಿಕೊಳ್ಳುವುದಾಗಿ ಹೇಳಿದ್ದರು. ಅವರಿಗೆ ನಮ್ಮೊಡನೆ ಚತುರ್ಧಾಮವಾದರೂ ಅನುಭವಿಸುವ ಹುಚ್ಚು ಹತ್ತಿತ್ತು. ಆದರೆ ಆ ತ್ರಿಮೂರ್ತಿಗಳು ನನ್ನ ನಿರೀಕ್ಷೆಯಂತೆ ಭೋಪಾಲಕ್ಕೆ, ಕೊನೆಗೆ ದಿಲ್ಲಿಗೂ ಪತ್ರ ಖಾತ್ರಿ ಕೊಡಲೇ ಇಲ್ಲ. ನಾವು ದಿಲ್ಲಿ ಬಿಡುವವರೆಗೂ ದಿಲ್ಲಿಗೆ ಬಂದಂತೇ ಇರಲಿಲ್ಲ. ದಿಲ್ಲಿಗೆ ಬಂದಿದ್ದ ನನ್ನ ತಂದೆಯ ಪತ್ರದಲ್ಲಿ ಅವರ ಗೊಂದಲಗಳಷ್ಟೇ ತಿಳಿದಿತ್ತು. ವಾಸ್ತವದಲ್ಲಿ, ನಾವು ದಿಲ್ಲಿ ಬಿಡುವ ದಿನ (೧೧-೫-೯೦), ಆ ಮೂವರು – ಕೆ. ಲಕ್ಷ್ಮೀನಾರಾಯಣ ರೆಡ್ಡಿ (ರೆಡ್ಡಿ) – ಪ್ರಾಧ್ಯಾಪಕ, ಮೋಹನ ಆಚಾರ್ಯ (ಮೋಹನ್) – ಕುಶಲ ಕರ್ಮಿ, ಮತ್ತು ಕಾವೂರು ಪ್ರಸನ್ನ – ಉದ್ಯಮಿ, ಮಂಗಳೂರಿನಲ್ಲಿ ರೈಲೇರಿದ್ದರು! ಆ ಕಾಲದಲ್ಲಿ ಕೊಂಕಣ ರೈಲ್ವೇ ಇರಲಿಲ್ಲ. ಇವರು ಗಾದೆಯ ‘ಕೊಂಕಣ (ಅರಕ್ಕೋಣಂಗಾಗಿ) ಸುತ್ತಿ ಮೈಲಾರಕ್ಕೆ (ದಿಲ್ಲಿಗೆ)’ ಬರುವಾಗ ೧೪-೫-೯೦ರ ರಾತ್ರಿ. ಪೂರ್ವ ಲೆಕ್ಕಾಚಾರದಂತೆ ಅವರಲ್ಲಿಬ್ಬರ ದಿಲ್ಲಿ ಗೆಳೆಯರು, ಮರು ಬೆಳಗ್ಗೆಯೇ (೧೫-೫-೯೦) ಇವರಿಗೆ ತಮ್ಮ ಬೈಕ್ ಒಪ್ಪಿಸಿದರು. ನನ್ನ ದಿನಚರಿಯ ನಕ್ಷೆಯ ಯಥಾ ಪ್ರತಿ ತ್ರಿಮೂರ್ತಿಗಳಲ್ಲಿತ್ತು. ಅದರ ಬಲದಲ್ಲಿ ನಮ್ಮನ್ನು ನೇರ ಗಂಗೋತ್ರಿಯಲ್ಲಿ ಹಿಡಿಯುವ ಉಮೇದಿನಲ್ಲಿ, ಹನ್ನೊಂದು ಗಂಟೆಗೆ ದಿಲ್ಲಿ ಬಿಟ್ಟರು. ಮೋಹನ್ ಒಂಟಿ, ಪ್ರಸನ್ನನ ಬೆಂಬಲಕ್ಕೆ ರೆಡ್ಡಿ.
ಜಿಟಿನಾರಾಯಣ ರಾವ್ ಹಿನ್ನುಡಿ
ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಹತ್ತೊಂಬತ್ತನೇ ಅಧ್ಯಾಯ [ಅತ್ರಿ ಬುಕ್ ಸೆಂಟರಿನ ಪ್ರಕಾಶನ ವಿಭಾಗದೆಲ್ಲ...
ಒಂಟಿತನ ಶಾಪವಲ್ಲ
ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ ಅಧ್ಯಾಯ ೩೯ \ನಡೆದು ಬಂದ ದಾರಿಯ ಕಡೆಗೊಮ್ಮೆ ದೃಷ್ಟಿ...
ಪುಸ್ತಕೋದ್ಯಮದ ಸಾಮಯಿಕ ಟಿಪ್ಪಣಿಗಳು
ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಹದಿನೆಂಟನೇ ಅಧ್ಯಾಯ [ಮೂಲದಲ್ಲಿ ರಸಪ್ರಸಂಗಗಳಿಗೆ ಜತೆಗೊಟ್ಟ, ಪುಸ್ತಕ...
ಅಮ್ಮನೆಂಬೋ ಪ್ರೀತಿಯ ಕಡಲು
ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ ಅಧ್ಯಾಯ ೩೮ `ತಾಯೊಲವೆ ತಾಯೊಲವು ಈ ಲೋಕದೊಳಗೆ ಕಡಲಿಂಗೆ...
ಬರಗಾಲದಲ್ಲಿ ಮಸಾಲೆದೋಸೆ
ಕರ್ನೂಲಿನ ನನ್ನ ಹಿರಿಯ ಗೆಳೆಯ ಶ್ರೀ ಚಂದ್ರಶೇಖರ ಕಲ್ಕೂರರ ಸ್ಥಿರ, ಚರ ಸೊತ್ತುಗಳೆಲ್ಲ ಈಚೆಗೆ ಅವರ ಮಾತಿನಲ್ಲೇ...
ಭೀಮ ಬಿದ್ದಾ ಮತ್ತೆರಡು ತಿರುಗೂಳಿ ವೃತ್ತಾಂತ
ಇತಿಹಾಸದ ‘ಅಶೋಕ’ವನ್ನು ನನ್ನ ತಂದೆತಾಯಿಯರು ನನಗೆ ಕೊಟ್ಟದ್ದು ನಿಜ. ಆದರೆ ‘ಚಕ್ರವರ್ತಿ’ಯನ್ನೂ ಎಳೆದುಕೊಳ್ಳುವಂತಾದ್ದು...
ಕೀಪಿಟಪ್ ನರಸಿಂಹನ್
ಋತುಮಾನದ ಹಾರೈಕೆಗಳನ್ನು ಹೊತ್ತು ಮತ್ತೆ ಬಂದಿದೆ ಅಂಚೆ. ವನ್ಯ ಸಂದೇಶದ ಕಳಕಳಿಯೊಡನೆ ವರ್ತಮಾನದ ಸಾಮಾಜಿಕ ಸ್ವಾಸ್ಥ್ಯದ...
ಕಾಕರಾಜ! ನಿನ್ನ ಧ್ವನಿಯು ಎಷ್ಟು ಚಂದ!!
“ನಮಸ್ಕಾರಾ ಸಾರ್, ನಾನು ಮೈಸೂರಿಂದಾ, ಪುಸ್ತಕ ಸಂವಹನದಿಂದಾ. ನಾನು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯಾನೂ ಹೌದು....
ಶ್ವೇತಾಂಬರಿಯ ಸೆರಗಿನಲ್ಲಿ ಸೆಣಸಾಟ
ನನ್ನೊಡನೆ ಅಂಡಮಾನ್ ಪ್ರವಾಸಕ್ಕೆ ಬಂದ ಓದುಗರಿಗೆ ಅಮೆರಿಕಾದಲ್ಲಿರುವ ನನ್ನ ತಮ್ಮ ಆನಂದವರ್ಧನ ಏನೂ ಹೊಸಬನಲ್ಲ....
ಸವಾಲಿನ ಬೆಂಬತ್ತಿ ಕೌಂಡಿಕಾನ
“ಹೌದಯ್ಯಾ ನೀವು ಆ ಕಾಡಿಗೆ ಹೋಗುವುದೇ ಆದರೆ ಈ ರೇಸಿಗೆ ಹೋಗುವ ಬೈಕಿನವರು ಹಾಕಿಕೊಳ್ಳುವ, ಸರೀ ಕಿವಿ ಮುಚ್ಚುವ...
“ನಂಬಿಕೆಗಳನ್ನು ಕೆಣಕಬೇಡಿ!”
ಪ್ರೊ| ಎಂ ರಾಮಚಂದ್ರ ಕಾರ್ಕಳ, ಹಲವು ಖ್ಯಾತ ವಿದ್ವಾಂಸರುಗಳ ಪ್ರಿಯ ಶಿಷ್ಯ, ನನ್ನ ತಂದೆಯನ್ನು ಪರೋಕ್ಷವಾಗಿ ತನ್ನ...
ಗುಹಾವಿವಾದಕ್ಕೆ ಮಂಗಳ ?
ಪತ್ರಿಕೆಯ ಬರಹಗಳ ಬಗ್ಗೆ (ನೇರ ಲೇಖಕನಿಗೂ) ಪ್ರತಿಕ್ರಿಯಿಸುವವರೇ ಕಡಿಮೆ. ಹಾಗೆ ಬರೆದದ್ದೆಲ್ಲ ಸ್ವೀಕಾರವಾಗುವುದು,...
ಸಾಹಸೀ ಸುಂದರ ಅನುಭವ
ನೆಲ್ಲಿತಟ್ಟುತೀರ್ಥ ಘಟ್ಟ ಕೊರೆಯುವ ಆವೇಶ ಕಳಚಿದ pious-ವಿನಿ ಇಲ್ಲಿ ಆದೂರು ವಲಯದ ದಟ್ಟಾರಣ್ಯ ಪೊರೆವ ಮಂದಗಾಮಿನಿ....
ಜಾಂಬ್ರಿ – ಕೆದಕಿದ ಕಣಜದ ಗೂಡು
ಎಪ್ಪತ್ತನೇ ದಶಕದ ಕೊನೆಯ ಭಾಗ ಹೀಗೇ ಒಂದು ದಿನ ಮುಚ್ಚೂರು ಬಳಿಯ ನೆಲ್ಲಿತೀರ್ಥ ಗುಹೆ ನೋಡಲು ನಾಲ್ಕು ಮಿತ್ರರು...
ಗಡಾನ್ ಹತ್ರೀ ಗಡಾಯಿ ಕಲ್ಲು
(ಕುದ್ರೆಯ ನೆರಳಲ್ಲೊರಗಿದ ಕರಿರಾಯ ಭಾಗ 3) ಕಳೆದ ಶತಮಾನದ ಅಪರ ಭಾಗದ ಕಥೆಯಿದು. ಅಂದರೆ ಸನ್ ಸಾವಿರದೊಂಬೈನೂರಾ...
ಬಿರುಮಳೆಗೆ ಜಗ್ಗದ ಕರಿರಾಯ
(ಕುದುರೆಯ ನೆರಳಲ್ಲೊರಗಿದ ಆನೆ ೨) ಬೆಳ್ತಂಗಡಿಯ ದಿಗಂತದಲ್ಲಿ, ಬಂಗಾಡಿ - ಕಿಲ್ಲೂರು ಕೊಳ್ಳದ ಬಾಗಿಲಲ್ಲಿ ನಿಂತ ಏಕಶಿಲಾ...
















Hi, I'm interested in learning more about your service. Please send details. (ref:dnh7hghrxvzui44q)