ಔರಂಗಾಬಾದ್, ಅಜಂತಾ, ಮೇಲ್ಘಾಟ್

ಔರಂಗಾಬಾದ್, ಅಜಂತಾ, ಮೇಲ್ಘಾಟ್

ಪ್ರವಾಸ ಕಥನವೆಂದರೆ ತಿರುಗಾಡೀ ದಿನಚರಿಯ ಪುಟವಲ್ಲ, ಭೇಟಿ ಕೊಟ್ಟ ಸ್ಥಳಗಳ ಪುರಾಣವಲ್ಲ, ಓಡಿದ ದಾರಿಯಲ್ಲ, ಕಂಡ ಚಿತ್ರವಲ್ಲ, ತಿನಿಸುಗಳ ಪಟ್ಟಿಯಲ್ಲ, ….ಅಲ್ಲ, ಅಲ್ಲ! ಅಷ್ಟನ್ನೇ ಕೊಟ್ಟರೆ ಒಳ್ಳೆಯ ಮಾಹಿತಿ, ವರದಿ ಆಗಬಹುದು. ಒಂದು ಕಾಲಕ್ಕೆ ಅಂಥವು ಅವಶ್ಯವಿದ್ದದ್ದೂ ಸರಿಯೇ (ಹ್ಯೂಯೆನ್‍ತ್ಸಾಂಗ್). ಆದರೆ ಇಂದು ಅಂತರ್ಜಾಲದಲ್ಲಿ ಮಾಹಿತಿಗಳ ಮಹಾಪೂರವೇ ಇದೆ, ವಿದ್ಯುನ್ಮಾನದ ಸಾಧ್ಯತೆಯಲ್ಲಿ ನಿಜಧ್ವನಿ, ಯಥಾವತ್ತು ಚಲಚಿತ್ರಗಳೇ ಧಾರಾಳ ಲಭ್ಯವಿದೆ. ಹಾಗಾಗಿ ಪ್ರಾಸಂಗಿಕವಾಗಿ ನಾನು ಅಲ್ಲಗಳೆದವನ್ನೆಲ್ಲ ಸೇರಿಸಿಕೊಂಡರೂ ಇನ್ನು ಹೆಚ್ಚಿನ ಲಕ್ಷ್ಯವನ್ನು ಸಾಧಿಸಬೇಕೆನ್ನುವುದು ನನ್ನ ಪ್ರವಾಸ ಕಥನಗಳ ತುಡಿತ. ಅಂದರೆ ನಿಷ್ಪಕ್ಷ ವರದಿಗಿಂತ, ಪ್ರವಾಸಿಯ ಪ್ರಾಮಾಣಿಕ ಪ್ರತಿಕ್ರಿಯೆ, ಅದಕ್ಕೆ ಯುಕ್ತ ಅಭಿವ್ಯಕ್ತಿ ಮೂಡಿಸುವುದರಲ್ಲಿ ನಾನು ಹೆಚ್ಚು ಆಸಕ್ತ. ಅಂಥಾ ಒಂದು ದೊಡ್ಡ ಹೆಸರಿನ ಉದಾಹರಣೆ ಕೊಡುವುದಾದಲ್ಲಿ – ಕಾಳಿದಾಸನ ಮೇಘದೂತ. ಪ್ರಸ್ತುತ ಭಾರತ ಸೀಳೋಟದಲ್ಲಿ ನನಗೆ ಮೂವತ್ತು ವರ್ಷಗಳ ಮರವೆಯಿರುವುದರಿಂದ ಬೇಕೆಂದರೂ ಪಟ್ಟಿ ಕೊಡಲಾರೆ. ಆದರೆ ಕಾಲ ಸಂದರೂ ಅಚ್ಚಳಿಯದುಳಿಸಿದ ಭಾವನೆಗಳನ್ನು ಹಂಚಿಕೊಳ್ಳಲು ಈ ಪರದಾಟ ನಡೆಸಿದ್ದೇನೆ. ಕಥನದ ಮಿತಿಯನ್ನು ಮೀರಿದ ನಿಮ್ಮ ನಿರೀಕ್ಷೆಗಳೇನಿದ್ದರೂ ದಯವಿಟ್ಟು (ಗೂಗಲ್, ಯೂಟ್ಯೂಬ್, ವಿಕಿಪೀಡಿಯಾ..) ಅಂತರ್ಜಾಲಿಗರಾಗಿ!

read more
ಕನ್ನಡ ಕಾದಂಬರಿ ನೂರು ವರ್ಷ – ಉದ್ಯಮದ ದೃಷ್ಟಿಯಲ್ಲಿ

ಕನ್ನಡ ಕಾದಂಬರಿ ನೂರು ವರ್ಷ – ಉದ್ಯಮದ ದೃಷ್ಟಿಯಲ್ಲಿ

ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಹದಿನೈದನೇ ಅಧ್ಯಾಯ [ಭಂಡಾರ್ಕರ್ಸ್ ಕಾಲೇಜು ಕುಂದಾಪುರ ಏರ್ಪಪಡಿಸಿದ್ದ ಕನ್ನಡ...

read more

Category

Latest Comments

  1. ಮಾನವತೆಯ ದೀಪ ಹಚ್ಚು ಅಂಧಕಾರವು ತೊಲಗಲಿ ಎಂದು ಬರೆದು ನಮ್ಮ ಭಾವ ಬೆಳಗಿದ ಜಿ.ಯಸ್ಸೆಸ್ ಅವರ ಕವಿತೆಯೇ ಜಯದೇವರ ರೂಪದಲ್ಲಿ ಕೃತಿಯಾಗಿ ಬೆಳಗುತ್ತಿರುವಂತೆ ಕಂಡಿತು.❤️

  2. ಜಯದೇವ ಸರ್ ಅವರದು ನಿಜಕ್ಕೂ ಅದ್ಭುತ ಸಾಧನೆ.. 2007ರಿಂದ2010ರ ವರೆಗೆ ನಾನು ಚಾಮರಾಜನಗರ ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕನಾಗಿದ್ದಾಗ, ನಬಾರ್ಡ್ ಎಜಿಎಂ ವಿನಯ್ ಅವರ ಜೊತೆ ಆಗಾಗ…

  3. 1990ರ ಆಸುಪಾಸಿನಲ್ಲಿ ನಾನು ಹೈಸ್ಕೂಲ್ ಓದುತ್ತಿದ್ದೆ. ಆಗ ಗೆಳೆಯನೊಬ್ಬನಿಂದಾಗಿ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಪರಿಚಯ ಆಯಿತು. ಇಲ್ಲಿಗೆ ಬಂದು ಶಾಲಾ ಮಕ್ಕಳ ಡಾರ್ಮಿಟರಿ ಯಲ್ಲಿ ಒಂದೆರಡು…

ಕರ್ನಾಟಕದ ಶಿಕ್ಷಣ ಸಚಿವ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೊಂದು ಬಹಿರಂಗ ಪತ್ರ

ಕರ್ನಾಟಕದ ಶಿಕ್ಷಣ ಸಚಿವ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೊಂದು ಬಹಿರಂಗ ಪತ್ರ

ಮಾನ್ಯರೇ ನಾನು ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸ್ನಾತಕೋತ್ತರ ಪದವೀಧರನಾಗಿ ಹೊರಬಂದರೂ (೧೯೭೪)...

read more