ಜೈಸಲ್ಮೇರ್ ಮತ್ತು ಮರಳಿನಲ್ಲಿ ಮರುಳುಗಟ್ಟುವುದು

ಜೈಸಲ್ಮೇರ್ ಮತ್ತು ಮರಳಿನಲ್ಲಿ ಮರುಳುಗಟ್ಟುವುದು

ಇನ್ನೋರ್ವ ಗೆಳೆಯ – ಪ್ರಸನ್ನ ಕಾವೂರು, ರಾಜಸ್ತಾನದಲ್ಲಿ ವ್ಯಾಪಕ ಪ್ರವಾಸ ನಡೆಸಿ, ಹೆಚ್ಚಿನ ರೋಚಕ ಕತೆಗಳನ್ನು ಹೇಳಿದ. ಅವನ್ನೆಲ್ಲ ನೋಡುವ ನನ್ನ ಉತ್ಸಾಹ ತಿಳಿದ ಪ್ರಸನ್ನ, ಆತನ ರಾಜಸ್ತಾನೀ ಗೆಳೆಯನ ಮೂಲಕ ನನಗೆ ಎಲ್ಲ ವ್ಯವಸ್ಥೆ ಮಾಡಿಕೊಡಲೂ ಮುಂದಾಗಿದ್ದ. ಆದರೆ ನಾನೇ ವೈಯಕ್ತಿಕ ಹಂಗು ಬೇಡವೆಂದು, ವೃತ್ತಿಪರ ಮಿತ್ರರಾದ ವಿಕ್ರಮ್ ಟ್ರಾವೆಲ್ಸ್ ಮತ್ತು ನಿರ್ಮಲಾ ಟ್ರಾವೆಲ್ಸ್ ಸಂಪರ್ಕಿಸಿ ನೋಡಿದೆ. ಅವರ ನಿಯತ ಪ್ಯಾಕೇಜುಗಳಲ್ಲಿ ರಾಜಸ್ತಾನವೇನೋ ಇತ್ತು. ಆದರೆ ಅವುಗಳ ‘ರೆಸ್ಟ್, ಮಾರ್ಕೆಟಿಂಗ್, ಪಿಲ್ಗ್ರಿಮೇಜ್’ಗಳೆಲ್ಲ ನನ್ನ ರುಚಿಯವಲ್ಲ. ಟ್ರಾವೆಲ್ಸಿನವರು “ಬಿಡಿ, ನಿಮ್ಮ ಆಯ್ಕೆಯ ಸ್ಥಳಗಳದ್ದೇ ಖಾಸಾ ಟೂರಿಗೆ ಕಾರು, ಹೋಟೆಲ್ ವ್ಯವಸ್ಥೆ ಮಾಡಿಕೊಡುತ್ತೇವೆ…” ಎಂದೂ ಹೇಳಿದ್ದಿತ್ತು. ಆದರೆ ವಿಶಿಷ್ಟಗಳನ್ನು ಕಾಣುವಲ್ಲಿ ಅವರ ಅನುಭವದ ಕೊರತೆ ನೋಡಿ ನಾನೇ ಹಿಂಜರಿದೆ. ಎರಡು ಮೂರು ದಶಕಗಳ ಹಿಂದಿನ ಕೆಲವು ದೀರ್ಘ ಪ್ರವಾಸಗಳನ್ನು ನಡೆಸಿದ ನನ್ನ ಅನುಭವಕ್ಕೆ ಇಂದಿನ ವಿದ್ಯುನ್ಮಾನ ಸವಲತ್ತುಗಳ ಜಾಲ ಒಗ್ಗುವಂತೆ ಕಾಣಲಿಲ್ಲ. ಈ ಕಾಲಕ್ಕೆ ತಕ್ಕ ಕೋಲ ಕಟ್ಟಲು ಮಗ ಅಭಯನಿಗೆ ನೀನೇ ಸಮರ್ಥ ಎಂದು ಬಿಟ್ಟೆ. ಆತ ಸೂತ್ರ ಕೈಗೆತ್ತಿಕೊಂಡದ್ದರಿಂದ ನಾನು ನಿಸೂರಾಗಿ ಪ್ರವಾಸಾನಂದವನ್ನಷ್ಟೇ ಅನುಭವಿಸುತ್ತಾ….

read more

Category

Latest Comments

  1. ನಿಜ. ಶ್ರೀಕೃಷ್ಣನೇ ಇಂದ್ರ ಪೂಜೆಯನ್ನುಊರವರಿಂದ ಧಿಕ್ಕರಿಸಿ, ತಮ್ಮ ಹಸುಗಳಿಗೆ ಹಸಿರು, ನೀರು ಕೊಡುವ ಪರ್ವತವನ್ನೇ ಪೂಜಿಸಿ ಎಂದು ಸಾಧಿಸಿದ ದೃಷ್ಟಾಂತ ಮರೆಯಲುಂಟೇ...

  2. ಶಿವರಾಮ ಕಾರಂತರ ಎರಡನೇ ಅಣ್ಣ - ವಾಸುದೇವ ಕಾರಂತ, ನಿವೃತ್ತ ವಿದ್ಯುತ್ ಇಂಜಿನಿಯರ್, ಮನೆಯಲ್ಲಿ ದೇವರು, ದೇವರನ್ನು ನಂಬುವ, ಬ್ರಾಹ್ಮಣ್ಯದ ರಕ್ಷಣೆ, ಪುನರ್ಜನ್ಮ..... ಹೀಗೆ ಹಲವು ಪುಸ್ತಕಗಳನ್ನು…

  3. 2010 ರಲ್ಲಿ ನಾವು ಮನಾಲಿಗೆ ಹೋಗಿದ್ದು, ಹಿಡಿಂಬಾ ದೇವಾಲಯ ನೋಡಿದ್ದು ಚಂದದ ನೆನಪು. ಹಿಡಿಂಬಾ ದೇವಿ ಅಲ್ಲಿನ ಒಂದು ಬೃಹತ್ ಪೈನ್ ಮರ! ಹಾಗೇ ಘಟೋತ್ಕಜ ಮರ!…

  4. ಲೇಖನ ಓದಿದಮೇಲೆ ಅನ್ನಿಸಿದ್ದು: ನೀವು ದಯವಿಟ್ಟು ತೀರ್ಥಕ್ಷೇತ್ರಗಳಿಗೆ ಹೋಗದಿರುವುದೇ ಲೇಸು- ಆ ಕುರಿತು ನಿಮ್ಮ ವ್ಯಂಗ್ಯವೇ ಹೆಚ್ಚು- ಅಡಿಗರ ಮಾತಿನಲ್ಲಿ “ ಇದನ್ನು ಬಯಸಿರಲಿಲ್ಲ” ನಿಮ್ಮಿಂದ ವಿವರವೂ…

  5. ಧನ್ಯವಾದಗಳು. ಮುಂದಿನ ಕಂತು - ಜೈಪುರದ ಎರಡನೇ ದಿನದ ಕಥನ ಈಗ ಪ್ರಕಟಿಸಿದ್ದೇನೆ... ಅವಶ್ಯ ಓದಿ... ಆನಂದಿಸಿ.... ಪ್ರತಿಕ್ರಿಯಿಸಿ ನನ್ನನ್ನೂ ಆನಂದದಲ್ಲಿ ಪಾಲ್ಗೊಳ್ಳಿ 🙂