ವಿಜಯಪುರಕ್ಕೆ ಬಿಜಯಂಗೈದೆವು

ವಿಜಯಪುರಕ್ಕೆ ಬಿಜಯಂಗೈದೆವು

ಸಾಹಸಯಾನದುದ್ದಕ್ಕೂ ಬೆಳಗ್ಗೆ ಹೊರಡುವಲ್ಲಿ ಹಿಂದಿನದ ಸುಸ್ತು ಅಥವಾ ನಿದ್ರೆ ಬಾಕಿ ನಮ್ಮನ್ನು ಕಾಡದಂತೆ ನೋಡಿಕೊಂಡೆವು. ನಾಲ್ಕೈದು ಗಂಟೆಗೇ ಎದ್ದು ಪ್ರಾತಃ ಕರ್ಮಗಳನ್ನು ಮುಗಿಸಿ, ಉಷಃ ಕಾಲದಲ್ಲೇ ಬೈಕ್‍ಗಳು ಗುಡುಗುಡಿಸುವುದನ್ನು ರೂಢಿಸಿಕೊಂಡೆವು. ಇದಕ್ಕೆ ಹುಬ್ಬಳ್ಳಿಯ ಮುಂಜಾವೇ ಸಾಕ್ಷಿ. ಹುಬ್ಬಳ್ಳಿಯ ವಾಸದ ನೆಲೆಯೇನೋ ಸೌಕರ್ಯಪೂರ್ಣ ದೃಢ ಹಾಗೂ ಸುಂದರವಾಗಿಯೇ ಇತ್ತು. ಆದರೆ ಅದರ ಹೆಸರಿನಲ್ಲಿದ್ದ (ಮಧುಕುಂಜ) ಸಿಹಿಗೆ, ಗೆಳೆಯರು ಕೊಟ್ಟ ಪೇಢೆಯ ಪರಿಮಳ ಸೇರಿತೋ ಎನ್ನುವಂತೆ, ಅದೆಲ್ಲಿಂದಲೋ ಕಚ್ಚುವ ಇರುವೆಗಳ ಸಾಲು ಬಂದು, ನಮ್ಮ ಹಾಸೆಲ್ಲ ವ್ಯಾಪಿಸಿ “ನಿದ್ರಿಸದಿರು ವೀರಾ…” ಎಂದು ತುಂಬ ಸತಾಯಿಸಿತು. ಅವನ್ನು ಸುಧಾರಿಸಿ ನಿಶ್ಚಿಂತರಾಗುವುದರೊಳಗೆ ಊರ ಸೊಳ್ಳೆಗಳ ಕವಾಯತು ಶುರು. ರಾತ್ರಿಯುದ್ದಕ್ಕೆ “ಉತ್ತಿಷ್ಠ ಉತ್ತಿಷ್ಠ” ಎಂಬ ಜಾಗೃತಿಯ ಕರೆ!

read more

Category

Latest Comments

  1. ಮಾನವತೆಯ ದೀಪ ಹಚ್ಚು ಅಂಧಕಾರವು ತೊಲಗಲಿ ಎಂದು ಬರೆದು ನಮ್ಮ ಭಾವ ಬೆಳಗಿದ ಜಿ.ಯಸ್ಸೆಸ್ ಅವರ ಕವಿತೆಯೇ ಜಯದೇವರ ರೂಪದಲ್ಲಿ ಕೃತಿಯಾಗಿ ಬೆಳಗುತ್ತಿರುವಂತೆ ಕಂಡಿತು.❤️

  2. ಜಯದೇವ ಸರ್ ಅವರದು ನಿಜಕ್ಕೂ ಅದ್ಭುತ ಸಾಧನೆ.. 2007ರಿಂದ2010ರ ವರೆಗೆ ನಾನು ಚಾಮರಾಜನಗರ ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕನಾಗಿದ್ದಾಗ, ನಬಾರ್ಡ್ ಎಜಿಎಂ ವಿನಯ್ ಅವರ ಜೊತೆ ಆಗಾಗ…

  3. 1990ರ ಆಸುಪಾಸಿನಲ್ಲಿ ನಾನು ಹೈಸ್ಕೂಲ್ ಓದುತ್ತಿದ್ದೆ. ಆಗ ಗೆಳೆಯನೊಬ್ಬನಿಂದಾಗಿ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಪರಿಚಯ ಆಯಿತು. ಇಲ್ಲಿಗೆ ಬಂದು ಶಾಲಾ ಮಕ್ಕಳ ಡಾರ್ಮಿಟರಿ ಯಲ್ಲಿ ಒಂದೆರಡು…

ಕಾನನದೊಳಗಿಂದೆದ್ದು ಬಂದವನಾವನಿವಂ?

ಕಾನನದೊಳಗಿಂದೆದ್ದು ಬಂದವನಾವನಿವಂ?

ಘಟ್ಟ ಇಳಿಯುವವರಿಗೆ ಬಿಸಿಲೆ ಒಂದು ಸುಂದರ ಅನುಭವ. ಅದರಲ್ಲೂ ಮುಖ್ಯವಾಗಿ ಬಿಸಿಲೆ ಹಳ್ಳಿಯಿಂದ ಕುಳ್ಕುಂದ ಗೇಟಿನವರೆಗೆ...

read more