ಟೆಹ್ರಿ ಅಣೆಕಟ್ಟು, ಕೇದಾರನಾಥ ವಿಜಯ!

ಟೆಹ್ರಿ ಅಣೆಕಟ್ಟು, ಕೇದಾರನಾಥ ವಿಜಯ!

ಭಾರತ ಸೀಳೋಟದ ಯೋಜನೆಯಲ್ಲಿ ನಾವು ಮಂಗಳೂರು ಬಿಡುವಂದು, ಅನ್ಯ ಮೂವರು ಗೆಳೆಯರು ದಿಲ್ಲಿಗೆ ನೇರ ಬಂದು, ತಂಡಕ್ಕೆ ಸೇರಿಕೊಳ್ಳುವುದಾಗಿ ಹೇಳಿದ್ದರು. ಅವರಿಗೆ ನಮ್ಮೊಡನೆ ಚತುರ್ಧಾಮವಾದರೂ ಅನುಭವಿಸುವ ಹುಚ್ಚು ಹತ್ತಿತ್ತು. ಆದರೆ ಆ ತ್ರಿಮೂರ್ತಿಗಳು ನನ್ನ ನಿರೀಕ್ಷೆಯಂತೆ ಭೋಪಾಲಕ್ಕೆ, ಕೊನೆಗೆ ದಿಲ್ಲಿಗೂ ಪತ್ರ ಖಾತ್ರಿ ಕೊಡಲೇ ಇಲ್ಲ. ನಾವು ದಿಲ್ಲಿ ಬಿಡುವವರೆಗೂ ದಿಲ್ಲಿಗೆ ಬಂದಂತೇ ಇರಲಿಲ್ಲ. ದಿಲ್ಲಿಗೆ ಬಂದಿದ್ದ ನನ್ನ ತಂದೆಯ ಪತ್ರದಲ್ಲಿ ಅವರ ಗೊಂದಲಗಳಷ್ಟೇ ತಿಳಿದಿತ್ತು.  ವಾಸ್ತವದಲ್ಲಿ, ನಾವು ದಿಲ್ಲಿ ಬಿಡುವ ದಿನ (೧೧-೫-೯೦), ಆ ಮೂವರು – ಕೆ. ಲಕ್ಷ್ಮೀನಾರಾಯಣ ರೆಡ್ಡಿ (ರೆಡ್ಡಿ) – ಪ್ರಾಧ್ಯಾಪಕ, ಮೋಹನ ಆಚಾರ್ಯ (ಮೋಹನ್) – ಕುಶಲ ಕರ್ಮಿ, ಮತ್ತು ಕಾವೂರು ಪ್ರಸನ್ನ – ಉದ್ಯಮಿ, ಮಂಗಳೂರಿನಲ್ಲಿ ರೈಲೇರಿದ್ದರು! ಆ ಕಾಲದಲ್ಲಿ ಕೊಂಕಣ ರೈಲ್ವೇ ಇರಲಿಲ್ಲ. ಇವರು ಗಾದೆಯ ‘ಕೊಂಕಣ (ಅರಕ್ಕೋಣಂಗಾಗಿ) ಸುತ್ತಿ ಮೈಲಾರಕ್ಕೆ (ದಿಲ್ಲಿಗೆ)’ ಬರುವಾಗ ೧೪-೫-೯೦ರ ರಾತ್ರಿ. ಪೂರ್ವ ಲೆಕ್ಕಾಚಾರದಂತೆ ಅವರಲ್ಲಿಬ್ಬರ ದಿಲ್ಲಿ ಗೆಳೆಯರು, ಮರು ಬೆಳಗ್ಗೆಯೇ (೧೫-೫-೯೦) ಇವರಿಗೆ ತಮ್ಮ ಬೈಕ್ ಒಪ್ಪಿಸಿದರು. ನನ್ನ ದಿನಚರಿಯ ನಕ್ಷೆಯ ಯಥಾ ಪ್ರತಿ ತ್ರಿಮೂರ್ತಿಗಳಲ್ಲಿತ್ತು. ಅದರ ಬಲದಲ್ಲಿ ನಮ್ಮನ್ನು ನೇರ ಗಂಗೋತ್ರಿಯಲ್ಲಿ ಹಿಡಿಯುವ ಉಮೇದಿನಲ್ಲಿ, ಹನ್ನೊಂದು ಗಂಟೆಗೆ ದಿಲ್ಲಿ ಬಿಟ್ಟರು. ಮೋಹನ್ ಒಂಟಿ, ಪ್ರಸನ್ನನ ಬೆಂಬಲಕ್ಕೆ ರೆಡ್ಡಿ.

read more
ಪುಸ್ತಕೋದ್ಯಮದ ನೆಲಕ್ಕೆ ಮೌಲ್ಯ ಕಚ್ಚಿಸುವ ಹನಿಗಳು

ಪುಸ್ತಕೋದ್ಯಮದ ನೆಲಕ್ಕೆ ಮೌಲ್ಯ ಕಚ್ಚಿಸುವ ಹನಿಗಳು

ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಹದಿಮೂರನೇ ಅಧ್ಯಾಯ ೧. ಮನೆಗೊಂದು ಗ್ರಂಥಾಲಯಕ್ಕೆ ಒಂದು ದಿಕ್ಸೂಚೀ ತಿದ್ದುಪಡಿ...

read more

Category

Latest Comments

  1. ನಿಜ. ಶ್ರೀಕೃಷ್ಣನೇ ಇಂದ್ರ ಪೂಜೆಯನ್ನುಊರವರಿಂದ ಧಿಕ್ಕರಿಸಿ, ತಮ್ಮ ಹಸುಗಳಿಗೆ ಹಸಿರು, ನೀರು ಕೊಡುವ ಪರ್ವತವನ್ನೇ ಪೂಜಿಸಿ ಎಂದು ಸಾಧಿಸಿದ ದೃಷ್ಟಾಂತ ಮರೆಯಲುಂಟೇ...

  2. ಶಿವರಾಮ ಕಾರಂತರ ಎರಡನೇ ಅಣ್ಣ - ವಾಸುದೇವ ಕಾರಂತ, ನಿವೃತ್ತ ವಿದ್ಯುತ್ ಇಂಜಿನಿಯರ್, ಮನೆಯಲ್ಲಿ ದೇವರು, ದೇವರನ್ನು ನಂಬುವ, ಬ್ರಾಹ್ಮಣ್ಯದ ರಕ್ಷಣೆ, ಪುನರ್ಜನ್ಮ..... ಹೀಗೆ ಹಲವು ಪುಸ್ತಕಗಳನ್ನು…

  3. 2010 ರಲ್ಲಿ ನಾವು ಮನಾಲಿಗೆ ಹೋಗಿದ್ದು, ಹಿಡಿಂಬಾ ದೇವಾಲಯ ನೋಡಿದ್ದು ಚಂದದ ನೆನಪು. ಹಿಡಿಂಬಾ ದೇವಿ ಅಲ್ಲಿನ ಒಂದು ಬೃಹತ್ ಪೈನ್ ಮರ! ಹಾಗೇ ಘಟೋತ್ಕಜ ಮರ!…

  4. ಲೇಖನ ಓದಿದಮೇಲೆ ಅನ್ನಿಸಿದ್ದು: ನೀವು ದಯವಿಟ್ಟು ತೀರ್ಥಕ್ಷೇತ್ರಗಳಿಗೆ ಹೋಗದಿರುವುದೇ ಲೇಸು- ಆ ಕುರಿತು ನಿಮ್ಮ ವ್ಯಂಗ್ಯವೇ ಹೆಚ್ಚು- ಅಡಿಗರ ಮಾತಿನಲ್ಲಿ “ ಇದನ್ನು ಬಯಸಿರಲಿಲ್ಲ” ನಿಮ್ಮಿಂದ ವಿವರವೂ…

ಗುಂಡ್ಯಕ್ಕೆ ಗುಮ್ಮ ಬರುತಿದೆ, ಗಡಗಡೆನುತಿದೆ!

ಗುಂಡ್ಯಕ್ಕೆ ಗುಮ್ಮ ಬರುತಿದೆ, ಗಡಗಡೆನುತಿದೆ!

ಸರಕಾರದ ಬತ್ತಳಿಕೆಯಲ್ಲಿರುವ ಅಭಿವೃದ್ಧಿ ಎಂಬ ಅಸ್ತ್ರವೇಕೋ ಸಹಜ ಮತ್ತು ಪ್ರಾಕೃತಿಕ ಸತ್ಯಗಳಿಗೆ ವಿರೋಧಿಯಾಗಿ ಕಾಣುವುದು...

read more