ಟೆಹ್ರಿ ಅಣೆಕಟ್ಟು, ಕೇದಾರನಾಥ ವಿಜಯ!
ಭಾರತ ಸೀಳೋಟದ ಯೋಜನೆಯಲ್ಲಿ ನಾವು ಮಂಗಳೂರು ಬಿಡುವಂದು, ಅನ್ಯ ಮೂವರು ಗೆಳೆಯರು ದಿಲ್ಲಿಗೆ ನೇರ ಬಂದು, ತಂಡಕ್ಕೆ ಸೇರಿಕೊಳ್ಳುವುದಾಗಿ ಹೇಳಿದ್ದರು. ಅವರಿಗೆ ನಮ್ಮೊಡನೆ ಚತುರ್ಧಾಮವಾದರೂ ಅನುಭವಿಸುವ ಹುಚ್ಚು ಹತ್ತಿತ್ತು. ಆದರೆ ಆ ತ್ರಿಮೂರ್ತಿಗಳು ನನ್ನ ನಿರೀಕ್ಷೆಯಂತೆ ಭೋಪಾಲಕ್ಕೆ, ಕೊನೆಗೆ ದಿಲ್ಲಿಗೂ ಪತ್ರ ಖಾತ್ರಿ ಕೊಡಲೇ ಇಲ್ಲ. ನಾವು ದಿಲ್ಲಿ ಬಿಡುವವರೆಗೂ ದಿಲ್ಲಿಗೆ ಬಂದಂತೇ ಇರಲಿಲ್ಲ. ದಿಲ್ಲಿಗೆ ಬಂದಿದ್ದ ನನ್ನ ತಂದೆಯ ಪತ್ರದಲ್ಲಿ ಅವರ ಗೊಂದಲಗಳಷ್ಟೇ ತಿಳಿದಿತ್ತು. ವಾಸ್ತವದಲ್ಲಿ, ನಾವು ದಿಲ್ಲಿ ಬಿಡುವ ದಿನ (೧೧-೫-೯೦), ಆ ಮೂವರು – ಕೆ. ಲಕ್ಷ್ಮೀನಾರಾಯಣ ರೆಡ್ಡಿ (ರೆಡ್ಡಿ) – ಪ್ರಾಧ್ಯಾಪಕ, ಮೋಹನ ಆಚಾರ್ಯ (ಮೋಹನ್) – ಕುಶಲ ಕರ್ಮಿ, ಮತ್ತು ಕಾವೂರು ಪ್ರಸನ್ನ – ಉದ್ಯಮಿ, ಮಂಗಳೂರಿನಲ್ಲಿ ರೈಲೇರಿದ್ದರು! ಆ ಕಾಲದಲ್ಲಿ ಕೊಂಕಣ ರೈಲ್ವೇ ಇರಲಿಲ್ಲ. ಇವರು ಗಾದೆಯ ‘ಕೊಂಕಣ (ಅರಕ್ಕೋಣಂಗಾಗಿ) ಸುತ್ತಿ ಮೈಲಾರಕ್ಕೆ (ದಿಲ್ಲಿಗೆ)’ ಬರುವಾಗ ೧೪-೫-೯೦ರ ರಾತ್ರಿ. ಪೂರ್ವ ಲೆಕ್ಕಾಚಾರದಂತೆ ಅವರಲ್ಲಿಬ್ಬರ ದಿಲ್ಲಿ ಗೆಳೆಯರು, ಮರು ಬೆಳಗ್ಗೆಯೇ (೧೫-೫-೯೦) ಇವರಿಗೆ ತಮ್ಮ ಬೈಕ್ ಒಪ್ಪಿಸಿದರು. ನನ್ನ ದಿನಚರಿಯ ನಕ್ಷೆಯ ಯಥಾ ಪ್ರತಿ ತ್ರಿಮೂರ್ತಿಗಳಲ್ಲಿತ್ತು. ಅದರ ಬಲದಲ್ಲಿ ನಮ್ಮನ್ನು ನೇರ ಗಂಗೋತ್ರಿಯಲ್ಲಿ ಹಿಡಿಯುವ ಉಮೇದಿನಲ್ಲಿ, ಹನ್ನೊಂದು ಗಂಟೆಗೆ ದಿಲ್ಲಿ ಬಿಟ್ಟರು. ಮೋಹನ್ ಒಂಟಿ, ಪ್ರಸನ್ನನ ಬೆಂಬಲಕ್ಕೆ ರೆಡ್ಡಿ.
ಹವ್ಯಾಸಿ ಪ್ರಕಾಶಕರಿಗೆ ಸಲಹೆ
ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಹದಿನಾಲ್ಕನೇ ಅಧ್ಯಾಯ [ಜಿಟಿ ನಾರಾಯಣ ರಾಯರಿಂದ ಸಂಪಾದಕೀಯ ಟಿಪ್ಪಣಿ:...
ವಿಳಾಸಹೀನರ ಹುಡುಕಾಟದಲ್ಲಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ - ಅಧ್ಯಾಯ ಮೂವತ್ತಮೂರು ಸುಮಾರು ಮೂರು ವರ್ಷಗಳ ಕಾಲ...
ಪುಸ್ತಕೋದ್ಯಮದ ನೆಲಕ್ಕೆ ಮೌಲ್ಯ ಕಚ್ಚಿಸುವ ಹನಿಗಳು
ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಹದಿಮೂರನೇ ಅಧ್ಯಾಯ ೧. ಮನೆಗೊಂದು ಗ್ರಂಥಾಲಯಕ್ಕೆ ಒಂದು ದಿಕ್ಸೂಚೀ ತಿದ್ದುಪಡಿ...
ಚಿಂತನೆಗಳು ಸೂಕ್ಷ್ಮಗೊಂಡದ್ದು
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ - ಅಧ್ಯಾಯ ಮೂವತ್ತೆರಡು ೨೦೦೨ರಲ್ಲಿ ಇರಬೇಕು. ಅಲೋಶಿಯಸ್...
ಪುಸ್ತಕ ಚೋರನೂ ಅಶೋಕನೆಂಬ ರಿಸಿಯೂ…
ಅದೊಂದು ಬೆಳಿಗ್ಗೆ ನನ್ನ ಪುಸ್ತಕ ಮಳಿಗೆಯಲ್ಲಿ ಒಮ್ಮೆಲೆ ನಾಲ್ಕೈದು ಜನ, ಅದರಲ್ಲೂ ಕೆಲವು ಎರಡು ಮೂರು ಜನರ ಗುಂಪುಗಳು...
ಗುಂಡ್ಯಕ್ಕೆ ಗುಮ್ಮ ಬರುತಿದೆ, ಗಡಗಡೆನುತಿದೆ!
ಸರಕಾರದ ಬತ್ತಳಿಕೆಯಲ್ಲಿರುವ ಅಭಿವೃದ್ಧಿ ಎಂಬ ಅಸ್ತ್ರವೇಕೋ ಸಹಜ ಮತ್ತು ಪ್ರಾಕೃತಿಕ ಸತ್ಯಗಳಿಗೆ ವಿರೋಧಿಯಾಗಿ ಕಾಣುವುದು...
ಗ್ರಂಥಾಲಯದ ಆರೋಗ್ಯಕ್ಕೊಂದಿಷ್ಟು ಕಷಾಯ
ಪೀಠಿಕೆ : ಹಾಡಿದ್ದೇ ಹಾಡು ಕನ್ನಡ ಪುಸ್ತಕೋದ್ಯಮದ ಸರಕಾರೀಕರಣವನ್ನು ಸದಾ ಕಟುವಾಗಿ ಟೀಕಿಸುತ್ತಾ ಬಂದವನು ನಾನು....
ಅನ್ಯತ್ರ ಮೋಸಹೋಗಬೇಡಿ, ನಮ್ಮಲ್ಲಿಗೆ ಬನ್ನಿ!
ಬುದ್ಧಿವಂತ ಕೇಳಿದ "ಕಲ್ಪಿಸಿಕೋ - ಅತ್ತ ದರಿ, ಇತ್ತ ಕಮರಿ, ಬೆನ್ನಟ್ಟುತ್ತಿದೆ ಕರಿ, ಎದುರಿಗೊಂದು ಹರಿ! ಪಾರಾಗುವ...








ತುಂಬ ಉಪಯುಕ್ತ ಮಾಹಿತಿ.